ಇದು ಯೋಗಿ ಕಾಲ! ಮಥುರಾದ ಗೋಡೆಗಳಲ್ಲಿ ರಾರಾಜಿಸುತ್ತಿದೆ ಕೇಸರಿ..!
ಮಥುರಾ, ಫೆಬ್ರವರಿ 23: ಹೋಳಿ ಹಬ್ಬಕ್ಕೂ ಮುನ್ನ ಉತ್ತರ ಭಾರತದ ಕೆಲವೆಡೆ ಆಚರಣೆಗೊಳ್ಳುವ ಲತ್ಮಾರ್ ಹೋಳಿಗೆ ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದೆ. ಉತ್ತರ ಪ್ರದೇಶದ ಮಥುರಾದಲ್ಲಿ ಸಂಭ್ರಮದಿಂದ ಆಚರಣೆಗೊಳ್ಳುವ ಈ ಹಬ್ಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದು, ತನ್ನಿಮಿತ್ತ ಇಲ್ಲಿನ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯಲಾಗುತ್ತಿದೆ!
ಲಕ್ನೋ ಮಸೀದಿಗೆ ಕೇಸರಿ ಬಣ್ಣ: ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಿಪಕ್ಷ ಕಿಡಿ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದಾಗಿಂದ ಎಲ್ಲೆಲ್ಲೂ ಕೇಸರಿ ಬಣ್ಣ ರಾರಾಜಿಸುತ್ತಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದುತ್ವವನ್ನು ಎಲ್ಲರ ಮೇಲೂ ಒತ್ತಾಯ ಪೂರ್ವಕವಾಗಿ ಹೇರಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇತ್ತೀಚೆಗಷ್ಟೆ ಲಕ್ನೋದ ಮಸೀದಿಯ ಹೊರಾಂಗಣ ಗೋಡೆಗಳಿಗೂ ಕೇಸರಿ ಬಣ್ಣ ಬಳಿಯಲಾಗಿತ್ತು.
ಇದೀಗ ಮಥುರಾದ ಗೋಡೆಗಳಿಗೂ ಕೇಸರಿ ಬಣ್ಣ ಬಳಿಯಲಾಗುತ್ತಿರುವುದು ಮತ್ತೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಬಣ್ಣ ಬಳಿಯುವಂತೆ ಯೋಗಿ ಆದಿತ್ಯನಾಥ್ ಯಾರಿಗೂ ಸೂಚಿಸಿಲ್ಲ. ಆಯಾ ನಗರ ಪಂಚಾಯಿತಿಗಳೇ ಈ ನಿರ್ಧಾರ ತೆಗೆದುಕೊಂದಿವೆ ಎಂಬುದು ಆದಿತ್ಯನಾಥ್ ಆಪ್ತವಲಯದ ಸ್ಪಷ್ಟನೆ.