ಲಾಡೆನ್ ಹೆಸರಿಗೊಂದು ಆಧಾರ್ ಮಾಡಿಸಲು ಹೋಗಿ, ಸಿಕ್ಕಿಬಿದ್ದ
ದಾಖಲೆಯನ್ನು ಪರಿಶೀಲಿಸಿದ ಯುಐಡಿಎಐನ ಕೇಂದ್ರೀಯ ಸಿಬ್ಬಂದಿ, ಇದರಲ್ಲಿನ ಲೋಪ ದೋಷಗಳನ್ನು ಪತ್ತೆ ಹಚ್ಚಿ ಅದರ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಿದಾಗ ಅದು ಬಿನ್ ಲಾಡೆನ್ ಹೆಸರಿನಲ್ಲಿ ಆಧಾರ್ ಪಡೆಯಲು ಮಾಡಿದ ಪ್ರಯತ್ನವೆಂದು ಗೊತ್ತಾಗಿದೆ.
ಭಿಲ್ವಾರಾ (ರಾಜಸ್ತಾನ), ಮೇ 16: ಇಲ್ಲಿನ ಮಂಡಲ್ ಪ್ರಾಂತ್ಯದಲ್ಲಿ ಆಧಾರ್ ಕಾರ್ಡ್ ನೀಡುವ ಆಪರೇಟರ್ ಆಗಿ ಸೇವೆ ನೀಡುತ್ತಿದ್ದ ಸದ್ದಾಂ ಮನ್ಸೂರಿ (35) ಎಂಬ ವ್ಯಕ್ತಿ ಕುಖ್ಯಾತ ಭಯೋತ್ಪಾದಕ ಬಿನ್ ಲಾಡೆನ್ ಅವರ ಹೆಸರಿನಲ್ಲಿ ಆಧಾರ್ ಕಾರ್ಡ್ ಒಂದನ್ನು ತಯಾರಿಸಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಹೇಳಿ ಕೇಳಿ ತಾನೇ ಆಧಾರ್ ಕಾರ್ಡ್ ನೀಡುವ ಕೇಂದ್ರ ಹೊಂದಿದ್ದ ಸದ್ದಾಂಗೆ ಇಂಥ ಐಡಿಯಾ ಅದೇಕೆ ಬಂತೊ ಗೊತ್ತಿಲ್ಲ. ತಕ್ಷಣವೇ ಈ ಬಗ್ಗೆ ಕಾರ್ಯೋನ್ಮುಖರಾದ ಆತ, ಕೆಲವಾರು ತಂತ್ರಗಳನ್ನ ಉಪಯೋಗಿಸಿ ಆಧಾರ್ ಕಾರ್ಡಿಗಾಗಿ ಪ್ರಯತ್ನಿಸಿದ್ದಾನೆ.

ಮೊದಲಿಗೆ ಡೇಟಾ ಬೇಸ್ ನಲ್ಲಿ ವ್ಯಕ್ತಿಯ ಹೆಸರನ್ನು ದಾಖಲಿಸುವಾಗ, ಹೆಸರನ್ನು ಒಸಾಮಾ ಬಿನ್ ಲಾಡೆನ್ ಅಂತಲೇ ನಮೂದಿಸಿದ್ದಾನೆ. ಆನಂತರ, ಆತನ ವಿಳಾಸವನ್ನು ಅಬ್ಬೊಟ್ಟಾಬಾದ್, ಭಿಲ್ವಾರಾ ಜಿಲ್ಲೆ ಎಂದು ಕೊಟ್ಟಿದ್ದಾನೆ. ಇನ್ನು, ಭಾವ ಚಿತ್ರ ಹಾಕುವ ಕಡೆ ಬಿನ್ ಲಾಡೆನ್ ನ ಮಬ್ಬುಗೊಂಡ (ಬ್ಲರ್) ಫೋಟೋವನ್ನು ಹಾಕಿದ್ದಾನೆ.
ಇಷ್ಟು ಹಾಕಿ ಆ ಮಾಹಿತಿಯನ್ನು ಕೇಂದ್ರ ಯೂನಿಕ್ ಐಡೆಂಟಿಪಿಕೇಷನ್ ಅಥಾರಿಟಿ ಆಫ್ ಇಂಡಿಯಾದ (ಯುಐಡಿಎಐ) ಕೇಂದ್ರೀಯ ಡೇಟಾ ವಿಭಾಗಕ್ಕೆ ಸಬ್ ಮಿಟ್ ಮಾಡಿದ್ದಾನೆ. ಇಷ್ಟೆಲ್ಲಾ ಮಾಡಿರುವ ಆತ, ಫಿಂಗರ್ ಪ್ರಿಂಟ್ ಹಾಗೂ ಐಡಿ ಪ್ರೂಫ್ ಗಳನ್ನು ಕೊಟ್ಟಿರಲಿಲ್ಲ.
ಈ ದಾಖಲೆಯನ್ನು ಪರಿಶೀಲಿಸಿದ ಯುಐಡಿಎಐನ ಕೇಂದ್ರೀಯ ಸಿಬ್ಬಂದಿ, ಇದರಲ್ಲಿನ ಲೋಪ ದೋಷಗಳನ್ನು ಪತ್ತೆ ಹಚ್ಚಿ ಅದರ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಿದಾಗ ಅದು ಬಿನ್ ಲಾಡೆನ್ ಹೆಸರಿನಲ್ಲಿ ಆಧಾರ್ ಪಡೆಯಲು ಮಾಡಿದ ಪ್ರಯತ್ನವೆಂದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಯುಐಡಿಎಐನ ಕೇಂದ್ರೀಯ ಸಿಬ್ಬಂದಿ ಸದ್ದಾಂ ವಿರುದ್ಧ ದೂರು ನೀಡಿದ್ದಾರೆ. ಇದರ ಜಾಡು ಹಿಡಿದು ಬಂದ ಪೊಲೀಸರು ಸದ್ದಾಂನನ್ನು ಬಂಧಿಸಿ ಕರೆದೊಯ್ದಿದ್ದಾರೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications