ಚಿತ್ರಗಳಲ್ಲಿ: ನೆಲಕಚ್ಚಿದ ಕಾಂಗ್ರೆಸ್, ಅರಳಿದ ಕಮಲ
ಬೆಂಗಳೂರು, ಅ.19: ಭಾರಿ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಫಲಿತಾಂಶ ಹೊರ ಹಾಕಿದೆ. ಪ್ರಧಾನಮಂತ್ರಿ ನರೇಂದ್ರಮೋದಿಯವರ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎಂದೇ ಹೇಳಲಾಗಿದ್ದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವ ಮೂಲಕ ಉಭಯ ರಾಜ್ಯಗಳಲ್ಲೂ ಕಾಂಗ್ರೆಸ್ ನೆಲಕಚ್ಚುವಂತೆ ಮಾಡಿದೆ.
ಹರಿಯಾಣದಲ್ಲಿ ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚನೆಗೆ ಮುಂದಾಗಿದೆ. ಮಹಾರಾಷ್ಟ್ರದಲ್ಲಿ ಮೈತ್ರಿ ಸಾಧಿಸಿ ಸರ್ಕಾರ ರಚಿಸುವುದು ಖಚಿತವಾಗಿದೆ. ಈ ನಡುವೆ ಉಭಯ ರಾಜ್ಯಗಳಲ್ಲಿ ಕಮಲ ಅರಳುತ್ತಿರುವ ಸುದ್ದಿ ತಿಳಿದು ಇಡೀ ದೇಶದ ಬಿಜೆಪಿ ಘಟಕದಲ್ಲಿ ಅವಧಿಗೆ ಮುನ್ನ ದೀಪಾವಳಿ ಹಬ್ಬದಾಚರಣೆ ಸಂಭ್ರಮ ಮನೆ ಮಾಡಿದೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಬ್ಯಾಂಡ್ ಸೆಟ್ ನೊಂದಿಗೆ ತಯಾರಾಗಿದ್ದ ತಂಡ ಹಾಡುಗಳನ್ನು ಊದುತ್ತಾ ಕಾರ್ಯಕರ್ತರ ಕುಣಿತಕ್ಕೆ ಕಾರಣರಾದರು.[ಹರ್ಯಾಣದಲ್ಲಿ ಬಿಜೆಪಿಗೆ ಜಯ ಮಹಾರಾಷ್ಟ್ರ ಅತಂತ್ರ ]
ಲೋಕಸಭೆ ಚುನಾವಣೆಯಲ್ಲಿ ಭಾರೀ ಸೋಲನುಭವಿಸಿದ್ದ ಕಾಂಗ್ರೆಸ್ ಪಕ್ಷ ಸುಮಾರು 15 ವರ್ಷಗಳ ನಂತರ ಮಹಾರಾಷ್ಟ್ರವನ್ನು ಕಳೆದುಕೊಂಡಿದೆ. ಹರಿಯಾಣದಲ್ಲಿ ಇದೇ ಮೊದಲ ಬಾರಿಗೆ ಕೇಸರಿ ಧ್ವಜ ರಾರಾಜಿಸುತ್ತಿದೆ. ಬಿಜೆಪಿ ಸಂಭ್ರಮ, ಕಾಂಗ್ರೆಸ್ ಕಚೇರಿಯಲ್ಲಿನ ನೀರವ ಮೌನ ಚಿತ್ರಗಳಲ್ಲಿ ಸೆರೆ ಹಿಡಿಯಲಾಗಿದೆ.. ಈ ಸುದ್ದಿ ಅಪ್ ಲೋಡ್ ಮಾಡುವ ಹೊತ್ತಿಗೆ ಮಹಾರಾಷ್ಟ್ರ(288)ದಲ್ಲಿ ಬಿಜೆಪಿ 123(ಮುನ್ನಡೆ) ಸ್ಥಾನದಲ್ಲಿ 82 ಗೆದ್ದಿದೆ, ಹರ್ಯಾಣದಲ್ಲಿ 49ರಲ್ಲಿ 45 ಸ್ಥಾನ ಭದ್ರವಾಗಿದೆ. ಸದ್ಯಕ್ಕೆ ಸೆಲೆಬ್ರೇಷನ್ ನೋಡಿ

ಫಲಿತಾಂಶ ಹೊರಬೀಳುವುದಕ್ಕೂ ಮುನ್ನ
ಫಲಿತಾಂಶ ಹೊರಬೀಳುವುದಕ್ಕೂ ಮುನ್ನ ಮುಂಬೈನ ನಾರಿಮನ್ ಪಾಯಿಂಟ್ ನ ಬಳಿ ಇರುವ ಬಿಜೆಪಿ ಕಚೇರಿಯಲ್ಲಿ ಕಂಡು ಬಂದ ದೃಶ್ಯ

ದೇವೇಂದ್ರ ಫಡ್ನಾವೀಸ್ ಅಭಿಮಾನಿಗಳು
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಗೆಲುವಿನ ಕ್ರೆಡಿಟ್ ಕೊಟ್ಟ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನಾವೀಸ್.

ದೀಪಾವಳಿ ಸಂಭ್ರಮಾಚರಣೆ
ಬಿಜೆಪಿ ಕಚೇರಿಗಳಲ್ಲಿ ಅವಧಿಗೂ ಮುನ್ನ ದೀಪಾವಳಿ ಸಂಭ್ರಮಾಚರಣೆ ಕಂಡು ಬಂದಿತು.

ಸಂಭ್ರಮಾಚರಣೆ ವ್ಯಾಪಕವಾಗಿ ಹಬ್ಬಿತು
ಉಭಯ ರಾಜ್ಯಗಳು ಬಿಜೆಪಿ ಟಾಪ್ ಟ್ರೆಂಡಿಂಗ್ ನಲ್ಲಿರುವಾಗಲೇ ಇಡೀ ದೇಶದ ಬಿಜೆಪಿ ಕಚೇರಿಗಳಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಲಾಯಿತು.

ಮೋದಿ ಅಲೆಯಿಂದ ವಿಜಯ
ಮೋದಿ ಅಲೆಯಿಂದ ವಿಜಯ ಎಂದು ಬಿಜೆಪಿ ಕಾರ್ಯಕರ್ತರು ಮೋದಿ ಅವರ ಚಿತ್ರಕ್ಕೆ ಸಿಹಿ ತಿನ್ನಿಸುತ್ತಿದ್ದಾರೆ.

ಹರ್ಯಾಣದಲ್ಲಿ ಬಿಜೆಪಿ ಜಯ
ಹರ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ವಿಜ್ ವಿಜಯೋತ್ಸವ

ಹೋಳಿ, ದೀಪಾವಳಿ ಎರಡೂ ಇಂದೇ
ಬಿಜೆಪಿ ಕಾರ್ಯಕರ್ತರು ಹೋಳಿ, ದೀಪಾವಳಿ ಎರಡೂ ಇಂದೇ ಆಚರಿಸುತ್ತಿದ್ದಾರೆ

ಬಿಜೆಪಿ ನಾಯಕರ ವಿಜಯೋತ್ಸವ
ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಫಡ್ನಾವೀಸ್ ವಿಜಯೋತ್ಸವ ಸಂಭ್ರಮ

ಬಿಕೋ ಎನ್ನುತ್ತಿರುವ ದೆಹಲಿ ಕಾಂಗ್ರೆಸ್ ಕಚೇರಿ
ಉಭಯ ರಾಜ್ಯಗಳಲ್ಲೂ ಸೋಲಿನ ಕಹಿ ಉಂಡಿರುವ ಕಾಂಗ್ರೆಸ್. ಬಿಕೋ ಎನ್ನುತ್ತಿರುವ ದೆಹಲಿ ಕಾಂಗ್ರೆಸ್ ಕಚೇರಿ
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications