Condom in Samosa: ಸಮೋಸಾ ಪ್ರಿಯರೇ ಎಚ್ಚರ! ಸಮೋಸಾದಲ್ಲಿ ಕಾಂಡೋಮ್, ಕಲ್ಲು, ತಂಬಾಕು, ಗುಟ್ಕಾ ಪತ್ತೆ!
ಪುಣೆ ಏಪ್ರಿಲ್ 9: ಮಹಾರಾಷ್ಟ್ರದ ಪುಣೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಪಿಂಪ್ರಿ-ಚಿಂಚ್ವಾಡ್ನಲ್ಲಿರುವ (Pimpri Chinchwad) ಪ್ರತಿಷ್ಠಿತ ಆಟೋಮೊಬೈಲ್ ಕಂಪನಿಯ ಕ್ಯಾಂಟೀನ್ನಲ್ಲಿ ನೀಡಲಾದ ಸಮೋಸಾಗಳಲ್ಲಿ ಕಾಂಡೋಮ್, ಕಲ್ಲು, ತಂಬಾಕು, ಗುಟ್ಕಾ ಇತ್ಯಾದಿಗಳು ಕಂಡುಬಂದಿವೆ.
ಕಂಪನಿಯೊಂದರ ಉದ್ಯೋಗಿಗಳು ಸಮೋಸಾವನ್ನು ಸೇವಿಸುವಾಗ ಈ ವಸ್ತುಗಳು ಕಂಡು ಬಂದಿವೆ. ತಕ್ಷಣ ಪೊಲೀಸ್ರಿಗೆ ಈ ಬಗ್ಗೆ ದೂರು ನೀಡಲಾಗಿದ್ದು ವಿಚಾರಣೆ ವೇಳೆ ಭಯಾನಕ ಸತ್ಯ ಬಯಲಾಗಿದೆ. ಘಟನೆ ಬಳಿಕ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಹೊಸ ಗುತ್ತಿಗೆದಾರರಿಂದ ಅಡುಗೆ ಗುತ್ತಿಗೆ ಪಡೆಯುವುದನ್ನು ತಪ್ಪಿಸಲು ಉದ್ಯಮಿಯೊಬ್ಬರು ಈ ಭೀಕರ ಕೃತ್ಯಕ್ಕೆ ಯೋಜನೆ ರೂಪಿಸಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಸೇಡಿಗಾಗಿ ಸಮೋಸಾದಲ್ಲಿ ಕಾಂಡೋಮ್ ಹಾಕಿದ ಪಾಪಿಗಳು:-
ಕ್ಯಾಂಟೀನ್ ಗುತ್ತಿಗೆ ರದ್ದುಪಡಿಸಿದ್ದರಿಂದ ಆರೋಪಿ ರಹೀಮ್ ಶೇಖ್ ಕೋಪಗೊಂಡಿದ್ದ ಎನ್ನಲಾಗಿದೆ. ಕ್ಯಾಟಲಿಸ್ಟ್ ಸರ್ವಿಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಆಟೋಮೊಬೈಲ್ ಸಂಸ್ಥೆಯ ಪ್ರಕಾರ, ಸಮೋಸಾದ ಗುತ್ತಿಗೆಯನ್ನು ಎಸ್ಆರ್ಎಸ್ ಎಂಟರ್ಪ್ರೈಸಸ್ ಎಂಬ ಕಂಪನಿಗೆ ನೀಡಲಾಯಿತು. ಈ ಕಂಪನಿ ಸಮೋಸಾಗಳನ್ನು ಪೂರೈಸಿದಾಗ ಒಂದು ದಿನ ಬ್ಯಾಂಡೇಜ್ ಅದರಲ್ಲಿ ಪತ್ತೆಯಾಗಿತ್ತು. ಇದರ ನಂತರ ಈ ಕಂಪನಿಯೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಲಾಯಿತು.
ಏನಿದು ಘಟನೆ?
ಇದಾದ ನಂತರ ಮತ್ತೊಂದು ಕಂಪನಿ ಮನೋಹರ್ ಎಂಟರ್ ಪ್ರೈಸಸ್ ಗೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆಯನ್ನು ಬೇರೆ ಕಂಪನಿಗೆ ನೀಡಿರುವುದರಿಂದ ಕುಪಿತಗೊಂಡ ರಹೀಮ್ ಶೇಖ್, ಕಂಪನಿಯ ಮಾಲೀಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದರು. ರಹೀಮ್ ಶೇಖ್ ತನ್ನ ಇಬ್ಬರು ಉದ್ಯೋಗಿಗಳನ್ನು ಮನೋಹರ್ ಎಂಟರ್ಪ್ರೈಸಸ್ನ ಕ್ಯಾಂಟೀನ್ಗೆ ಸೇರಿಸಿದರು.

ಈ ಉದ್ಯೋಗಿಗಳಾದ ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಖ್ ಅವರು ಕಾಂಡೋಮ್, ತಂಬಾಕು ಮತ್ತು ಕಲ್ಲುಗಳನ್ನು ಒಳಗೊಂಡಿರುವ ಸಮೋಸಾಗಳನ್ನು ಸಿದ್ಧಪಡಿಸಿದ್ದಾರೆ. ಸಮೋಸಾಗಳನ್ನು ತಿನ್ನುವಾಗ ಅದರಲ್ಲಿ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿವೆ. ಇದಾದ ಬಳಿಕ ದೂರು ದಾಖಲಾಗಿದೆ.
ಪೊಲೀಸ್ ಹೇಳಿಕೆ-
ನಾವು ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 328 (ವಿಷದಿಂದ ಆಹಾರ ತಯಾರಿಕೆ) ಮತ್ತು 120 ಬಿ (ಅಪರಾಧ ಸಂಚು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಚಿಖ್ಲಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ. ಆರೋಪಿಗಳಿಬ್ಬರೂ ತಾವು ಎಸ್ಆರ್ಎಸ್ ಎಂಟರ್ಪ್ರೈಸಸ್ನ ಉದ್ಯೋಗಿಗಳಾಗಿದ್ದು, ಅವರ ಮಾಲೀಕರು ಮನೋಹರ್ ಎಂಟರ್ಪ್ರೈಸಸ್ ಪೂರೈಸುವ ಆಹಾರದಲ್ಲಿ ಕಲಬೆರಕೆ ಮಾಡಲು ನಮ್ಮನ್ನು ಕಳುಹಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಘಟನೆಯಲ್ಲಿ ರಹೀಮ್ ಶೇಖ್, ಅಜರ್ ಶೇಖ್ ಮತ್ತು ಮಝರ್ ಶೇಖ್ ಆರೋಪಿಗಳು ಎಂದು ಗುರುತಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯಲ್ಲಿ ತೊಡಗಿದ್ದಾರೆ.
ಇಂತಹದ್ದೇ ಘಟನೆ-
ಈ ಘಟನೆಯು ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದ ದಂಕೌರ್ನಲ್ಲಿರುವ ದ್ರೋಣಾಚಾರ್ಯ ಪದವಿ ಕಾಲೇಜಿನ ಸುಮಾರು 20 ಶಿಕ್ಷಕರು ಹೊಸ ವರ್ಷದ ಮುನ್ನಾದಿನದ ಆಚರಣೆಯ ಸಂದರ್ಭದಲ್ಲಿ ಸ್ಥಳೀಯ ಸಿಹಿತಿಂಡಿಯೊಂದಿಗೆ ಸಮೋಸವನ್ನು ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾದ ಇದೇ ರೀತಿಯ ಆತಂಕಕಾರಿ ಘಟನೆಯನ್ನು ನೆನಪಿಸುತ್ತದೆ. ನಂತರದ ತನಿಖೆಯಲ್ಲಿ ಸಮೋಸಾಗಳು ಹಳಸಿದವುಗಳಲ್ಲದೆ ವಿಷಕಾರಿ ಹುಳುಗಳನ್ನು ಒಳಗೊಂಡಿದ್ದವು ಎಂದು ತಿಳಿದುಬಂದಿದೆ.
-
ಏಷ್ಯಾದ ಬೃಹತ್ ಆಹಾರ ಮೇಳ 2026: ಜಾಗತಿಕ ಮಾರುಕಟ್ಟೆಗೆ ಉದ್ಯಮ ಲಗ್ಗೆ -
AAHAR 2026: ದೆಹಲಿಯಲ್ಲಿ ಬೃಹತ್ ಆಹಾರ ಮೇಳ 2026, ಆಹಾರೋದ್ಯಮಿಗಳಿಗೆ ಸಾಕಷ್ಟು ಪ್ರಯೋಜನ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್












Click it and Unblock the Notifications