ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮದರಸಾಗಳು ಕಣ್ಮರೆಯಾಗಬೇಕು, ಮುಸ್ಲಿಮರು ಮೂಲತಃ ಹಿಂದೂಗಳು’- ಅಸ್ಸಾಂ ಸಿಎಂ ಹಿಮಂತ

|
Google Oneindia Kannada News

ನವದೆಹಲಿ ಮೇ 23: 'ಮದರಸಾಗಳು ಕಣ್ಮರೆಯಾಗಬೇಕು, ಮುಸ್ಲಿಮರು ಮೂಲತಃ ಹಿಂದೂಗಳು' ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿರುವ ಮಾತು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದೆಹಲಿಯಲ್ಲಿ ಮೇ 22 ರಂದು ಆಯೋಜಿಸಿದ್ದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮದರಸಾಗಳು ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ್ದಾರೆ. ಜೊತೆಗೆ "ಮದರಸಾ ಎಂಬ ಪದ ಕಣ್ಮರೆಯಾಗಬೇಕು. ನೀವು ಮನೆಯಲ್ಲಿ ಖುರಾನ್ ಕಲಿಸಿ. ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತವನ್ನು ಕಲಿಸಬೇಕು. ನಾವು [ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ, ಒಂದು ನಿರ್ದಿಷ್ಟ ಧರ್ಮದ ಧಾರ್ಮಿಕ ಶಿಕ್ಷಣವನ್ನು ನೀಡಲು ರಾಜ್ಯದ ಹಣವನ್ನು ಖರ್ಚು ಮಾಡಬಾರದು ಎಂದು ಭಾವಿಸಿದ್ದೇವೆ" ಎಂದು ಅಸ್ಸಾಂನಲ್ಲಿ ರಾಜ್ಯ ಅನುದಾನಿತ ಮದರಸಾಗಳನ್ನು ರದ್ದುಗೊಳಿಸುವ ಕಾನೂನಿನ ಬಗ್ಗೆ ಮಾತನಾಡುತ್ತಾ ಅವರು ಹೇಳಿದರು.

ಅಸ್ಸಾಂನ ಪ್ರವಾಹ; ವಾಯುಪಡೆಯಿಂದ ಜನರ ಏರ್‌ಲಿಫ್ಟ್‌ಅಸ್ಸಾಂನ ಪ್ರವಾಹ; ವಾಯುಪಡೆಯಿಂದ ಜನರ ಏರ್‌ಲಿಫ್ಟ್‌

ಶರ್ಮಾ ಅವರು ರಾಜ್ಯದ ಮುಸ್ಲಿಂ ಜನಸಂಖ್ಯೆ, ಕಾಂಗ್ರೆಸ್‌ನಲ್ಲಿನ ಅವರ ಅವಧಿ ಮತ್ತು ಅಸ್ಸಾಂನಲ್ಲಿ ಅವರ ಇತ್ತೀಚಿನ ಬುಲ್ಡೋಜರ್ ಡ್ರೈವ್‌ಗಳ ಬಗ್ಗೆ ಮಾತನಾಡಿದರು. ರಾಜ್ಯದಲ್ಲಿ 5,000-6,000 ಹೆಕ್ಟೇರ್‌ಗಳನ್ನು ಅತಿಕ್ರಮಣದಿಂದ ಯಶಸ್ವಿಯಾಗಿ ಮುಕ್ತಗೊಳಿಸಲಾಗಿದೆ ಎಂದರು.

'ಗಾಂಧಿ ಕುಟುಂಬವನ್ನು ಮೀರಿದ ಪಕ್ಷವಿಲ್ಲ' ಬಿಸ್ವಾ

'ಗಾಂಧಿ ಕುಟುಂಬವನ್ನು ಮೀರಿದ ಪಕ್ಷವಿಲ್ಲ' ಬಿಸ್ವಾ

ಇತ್ತೀಚಿಗೆ ಯುಕೆ ಕಾರ್ಯಕ್ರಮವೊಂದರಲ್ಲಿ ಭಾರತವು ರಾಜ್ಯಗಳ ಒಕ್ಕೂಟ ಎಂದು ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ 'ರಾಷ್ಟ್ರದ ಕಲ್ಪನೆ' ಹೇಳಿಕೆಯ ವಿರುದ್ಧ ಶರ್ಮಾ ವಾಗ್ದಾಳಿ ಮಾಡಿದರು. "5,000 ವರ್ಷಗಳ ಹಿಂದಿನ ಸಂಸ್ಕೃತಿಯ ಬಗ್ಗೆ ಅವರಿಗೆ ಗೌರವವಿಲ್ಲವೇ? ರಾಮಾಯಣ, ಮಹಾಭಾರತ, ರಾಮ, ಕೃಷ್ಣ, ಚಾಣಕ್ಯ, ಶಿವಾಜಿ ಬಗ್ಗೆ ಇವರ ಅಭಿಪ್ರಾಯ ಏನು? ಅವರು ಏನೇ ಹೇಳಿದರೂ ನಾನು ಅವನನ್ನು ದೂಷಿಸುವುದಿಲ್ಲ. ಯಾಕೆಂದರೆ ಅವರಿಗೆ ಈ ವಿಷಯಗಳನ್ನು ಕಲಿಸಿಲ್ಲ. ಬದಲಿಗೆ ಅವರಿಗೆ(ಜೆಎನ್‌ಯು ವಿದ್ಯಾರ್ಥಿ) ಕಲಿಸಲಾಗಿದೆ' ಎಂದು ಅಸ್ಸಾಂ ಸಿಎಂ ಕಾಂಗ್ರೆಸ್ ವಿರುದ್ಧದ ಕಟುವಾದ ದಾಳಿ ಮಾಡಿದರು. ಗಾಂಧಿ ಕುಟುಂಬಕ್ಕೆ ಅವಿಧೇಯರಾದರೆ ನಿಮ್ಮ ಕೆಲಸ ಅಪಾಯದಲ್ಲಿದೆ" ಎಂದು ಅವರು ಹೇಳಿದರು. ಜೊತೆಗೆ "ಗಾಂಧಿ ಕುಟುಂಬವನ್ನು ಮೀರಿದ ಪಕ್ಷವಿಲ್ಲ. ನೀವು ಒಬ್ಬ ವ್ಯಕ್ತಿ ಅಥವಾ ಕುಟುಂಬವನ್ನು ಒಪ್ಪದಿದ್ದರೆ, ನೀವು ರಾಷ್ಟ್ರಕ್ಕೆ ಅವಿಧೇಯರಾಗಿದ್ದೀರಿ ಎಂದರ್ಥವಲ್ಲ" ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಸ್ತೆ ಮೇಲೆ ನಮಾಜ್‌ ನಿಲ್ಲಿಸಿದ್ದೇವೆ: ಯೋಗಿಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಸ್ತೆ ಮೇಲೆ ನಮಾಜ್‌ ನಿಲ್ಲಿಸಿದ್ದೇವೆ: ಯೋಗಿ

'ಅಸ್ಸಾಂನ ಸಂಸ್ಕೃತಿ ವಿರೂಪಗೊಳಿಸಿದವರು'

'ಅಸ್ಸಾಂನ ಸಂಸ್ಕೃತಿ ವಿರೂಪಗೊಳಿಸಿದವರು'

ಶರ್ಮಾ ಅವರ ಪ್ರಕಾರ, ರಾಜ್ಯದ 36 ಪ್ರತಿಶತದಷ್ಟು ಮುಸ್ಲಿಂ ಜನಸಂಖ್ಯೆಯನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು. "ಮತಾಂತರಗೊಂಡ ಅಥವಾ ದೇಸಿ ಮುಸ್ಲಿಮರು ಮತ್ತು ಹೊರಗಿನಿಂದ ವಲಸೆ ಬಂದ ಸ್ಥಳೀಯ ಮುಸ್ಲಿಮರು ಒಂದೇ ರೀತಿಯ ಸಂಸ್ಕೃತಿ ಮತ್ತು ಭಾಷೆಯನ್ನು ಹಂಚಿಕೊಳ್ಳುತ್ತಾರೆ. ಅವರು ಕೆಲವೊಮ್ಮೆ ತಮ್ಮ ಭಾಷೆ ಮಿಯಾನ್ ಎಂದು ಹೇಳುತ್ತಾರೆ. ಮಿಯಾನ್ ಮುಸ್ಲಿಮರು "ಅತ್ಯಂತ ಕೋಮುವಾದಿಗಳು" ಮತ್ತು ಇವರು ಅಸ್ಸಾಂನ ಸಂಸ್ಕೃತಿಯನ್ನು ವಿರೂಪಗೊಳಿಸಲು ಕಾರಣ ಎಂದು ಈ ಹಿಂದೆ ಹೇಳಲಾಗಿತ್ತು. ಈಗ ಮಿಯಾನ್‌ಗಳನ್ನು ಆ ಹೆಸರಿನಿಂದ ಏಕೆ ಉಲ್ಲೇಖಿಸಬಾರದು ಎಂದು ಪ್ರಶ್ನಿಸಿದ್ದಾರೆ.

ಭಾರತಕ್ಕೆ ಮೊದಲ ಸ್ಥಾನ ನೀಡಿ

ಭಾರತಕ್ಕೆ ಮೊದಲ ಸ್ಥಾನ ನೀಡಿ

ಅವರ ಪ್ರಕಾರ, ಒಬ್ಬ ಮುಸ್ಲಿಂ ಮೂಲತಃ ಹಿಂದೂ ಆಗಿದ್ದು, 'ಘರ್ ವಾಪ್ಸಿ' ಅಥವಾ "ಮರುಮತಾಂತರ" ಗೊಂಡಿದ್ದಾರೆ. "ಆದರೆ ಇದರರ್ಥ ಒಬ್ಬರು ದೇವಸ್ಥಾನಕ್ಕೆ ಹೋಗಬೇಕು ಅಥವಾ ದೇವರನ್ನು ಪೂಜಿಸಬೇಕು ಎಂದಲ್ಲ. ವ್ಯಕ್ತಿ ಭಾರತಕ್ಕೆ ಮೊದಲ ಸ್ಥಾನ ನೀಡಬೇಕು ಮತ್ತು ಭಾರತದ ಹಿತಾಸಕ್ತಿಗಳ ಬಗ್ಗೆ ಯೋಚಿಸಬೇಕು" ಎಂದು ಅವರು ಹೇಳಿದರು.

ಕಮಾಂಡರ್ ಲಚಿತ್ ಬೋರ್ಫುಕೋನ್

ಕಮಾಂಡರ್ ಲಚಿತ್ ಬೋರ್ಫುಕೋನ್

ಅವರ ಭಾಷಣದ ಸಮಯದಲ್ಲಿ, ಅವರು ಐತಿಹಾಸಿಕ ಅಸ್ಸಾಮಿ ವೀರರನ್ನು ಹೊಗಳಿದರು. ಇಂದಿನ ಅಸ್ಸಾಂನಲ್ಲಿರುವ ಹಿಂದಿನ ಅಹೋಮ್ ಸಾಮ್ರಾಜ್ಯದ ಕಮಾಂಡರ್ ಲಚಿತ್ ಬೋರ್ಫುಕೋನ್ ಅವರನ್ನು ಶ್ಲಾಘಿಸಿದರು. "ಲಚಿತ್ ಬೋರ್ಫುಕೋನ್ ಅವರಂತಹ ವೀರರ ಶೌರ್ಯದಿಂದಾಗಿ ಅಸ್ಸಾಂ ಇಸ್ಲಾಮಿಕ್ ಆಕ್ರಮಣಕಾರರನ್ನು ಈ ಪ್ರದೇಶಕ್ಕೆ ಪ್ರವೇಶಿಸಲು ಬಿಡಲಿಲ್ಲ. ಆಗ್ನೇಯ ಏಷ್ಯಾ ಪ್ರದೇಶವು ಇಸ್ಲಾಮಿಕ್ ನಾಗರಿಕತೆಗಳಿಂದ ಅಸ್ಪೃಶ್ಯವಾಗಿ ಉಳಿದಿದ್ದರೆ, ಅದರ ಶ್ರೇಯ ಅಸ್ಸಾಂಗೆ ಸಲ್ಲಬೇಕು" ಎಂದು ಅವರು ಹೇಳಿದರು.

English summary
Assam CM Himanta Biswa Sarma says ‘Madrasas should disappear, Muslims originally Hindus’ at RSS event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X