ಘರ್ ವಾಪಸಿ, ಲವ್ ಜಿಹಾದ್, ಕರೀನಾ ಕಪೂರ್ ಚಿತ್ರ :ಸೈಫ್ ಗರಂ
ನವದೆಹಲಿ, ಜ.8: ಲವ್ ಜಿಹಾದ್, ಘರ್ ವಾಪಸಿ ಕಾರ್ಯಕ್ರಮಗಳು ಮೋದಿ ಸರ್ಕಾರವನ್ನು ಬಿಡದಂತೆ ಕಾಡುತ್ತಿವೆ. ಮುಖಂಡರ ವಿವಾದಾತ್ಮಕ ಹೇಳಿಕೆಗಳು ಒಂದೆಡೆಯಾದರೆ, ವಿಎಚ್ ಪಿ ಮಾಡಿರುವ ಪ್ರಮಾದ ಈಗ ಭಾರಿ ಚರ್ಚೆಗೆ ಗುರಿಯಾಗಿದೆ.
ವಿಶ್ವ ಹಿಂದೂ ಪರಿಷತ್ ನ ದುರ್ಗಾವಾಹಿನಿ ಘಟಕ ಹೊರಡಿಸುವ 'ಹಿಮಾಲಯ ಧ್ವನಿ' ಪತ್ರಿಕೆಯಲ್ಲಿ ಲವ್ ಜಿಹಾದ್ ಹಾಗೂ ಘರ್ ವಾಪಸಿ ಬಗ್ಗೆ ಲೇಖನ ಬರೆಯಲಾಗಿದೆ. ಪತ್ರಿಕೆಯ ಮುಖಪಟದಲ್ಲಿ ನಟಿ ಕರೀನಾ ಕಪೂರ್ ಚಿತ್ರ ಬಳಸಲಾಗಿದೆ. ಕರೀನಾ ಅವರ ಅರ್ಧ ಮುಖ ಕಾಣಿಸುತ್ತಿದ್ದು, ಇನ್ನರ್ಧ ಮುಖವನ್ನು ನಕಾಬ್(ಬುರ್ಖಾದಿಂದ) ಮುಚ್ಚಲಾಗಿದೆ. ಧರ್ಮಾಂತರವೇ ರಾಷ್ಟ್ರಾಂತರ ಎಂಬ ಅಡಿ ಬರಹ ನೀಡಲಾಗಿದೆ.

ಪತ್ರಿಕೆಯಲ್ಲಿ ಬಂದಿರುವ ಲೇಖನದಲ್ಲಿ ಲವ್ ಜಿಹಾದ್ ಬಗ್ಗೆ ಉಲ್ಲೇಖ ಮಾಡಲಾಗಿದೆ. ಲವ್ ಜಿಹಾದ್ ಹೆಸರಲ್ಲಿ ಮುಸ್ಲೀಮರನ್ನು ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಹಿಂದೂ ಯುವತಿಯರನ್ನು ಮರು ಮಂತಾಂತರದ ಮೂಲಕ ಹಿಂದೂ ಧರ್ಮಕ್ಕೆ ವಾಪಸ್ ಕರೆತರಲಾಗುತ್ತಿದೆ ಎಂದು ಬರೆಯಲಾಗಿದೆ. ಈ ಬಗ್ಗೆ ತಿಳಿದು ಕೊಂಡ ಕರೀನಾ ಕಪೂರ್ ಪತಿ ನಟ ಸೈಫ್ ಅಲಿಖಾನ್ ಅವರು ವಿಎಚ್ಪಿಯ ಪತ್ರಿಕೆಯ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕೆಯಲ್ಲಿ ಹಿಂದೂಪರ ಸಂಘಟನೆಗಳು ಆಯೋಜಿಸಿರುವ 'ಘರ್ ವಾಪಸಿ' ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವರದಿ ಪ್ರಕಟಿಸಲಾಗಿದೆ.ಬಾಲಿವುಡ್ ನಟಿ ಕರೀನಾ ಕಪೂರ್ ಕೂಡ ನಟ ಸೈಫ್ ಅಲಿಖಾನ್ ರನ್ನು ಮದುವೆಯಾಗಿದ್ದಾರೆ. ಆದರೂ ಇಬ್ಬರು ಪರಸ್ಪರ ತಮ್ಮ ಧರ್ಮಗಳನ್ನು ಗೌರವಿಸುತ್ತಿದ್ದು, ಇಬ್ಬರು ತಮ್ಮ-ತಮ್ಮ ಧರ್ಮಗಳನ್ನು ಪಾಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಆದರೆ ಇದನ್ನು ಯಾರೂ ಪಾಲನೆ ಮಾಡುತ್ತಿಲ್ಲ ಎನ್ನುವ ಅರ್ಥದಲ್ಲಿ ಕರೀನಾ ಅವರ ಭಾವಚಿತ್ರವನ್ನು ಬಳಸಲಾಗಿದೆ ಎಂದು ವಿಎಚ್ಪಿ ಸಮರ್ಥನೆ ನೀಡಿದೆ.
A morphed picture of Kareena Kapoor’s face half covered by a niqab on cover page of a VHP magazine stirs controversy pic.twitter.com/dvAVWNK3BD
— TIMES NOW (@timesnow) January 8, 2015 ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಪಾದಕೀಯ ಮಂಡಳಿಯ ರಜನಿ ತುಕ್ರಾಲ್, ಲವ್ ಜಿಹಾದ್ ಬಗ್ಗೆ ಅನೇಕ ಚರ್ಚೆಗಳಾಗಿವೆ. ಪಾಕಿಸ್ತಾನ ಹಾಗೂ ಭಾರತ ಇಬ್ಭಾಗವಾಗಲು ಮತಾಂತರವೂ ಕಾರಣ. ಓರ್ವ ಹೆಣ್ಣು ಲವ್ ಜಿಹಾದ್ ಮೂಲಕ ಮುಸ್ಲಿಂ ಯುವಕನನ್ನು ವರಿಸಿ ಇಸ್ಲಾಂ ಧರ್ಮ ಅನುಸರಿಸಬಹುದಾದರೆ, ತನ್ನ ಮೂಲ ಧರ್ಮ ಚಿಂತನೆಗೆ ಬೆಲೆ ಕೊಟ್ಟು ಮರು ಮತಾಂತರ ಏಕೆ ಆಗಬಾರದು. ಆಕೆಯ ಹಕ್ಕನ್ನು ಏಕೆ ಕಸಿದುಕೊಳ್ಳಲಾಗುತ್ತಿದೆ. ಜಾತ್ಯಾತೀತ ಪಕ್ಷಗಳು ಈ ಬಗ್ಗೆ ಏಕೆ ಪ್ರಶ್ನಿಸುತ್ತಿಲ್ಲ ಎಂದು ಪತ್ರಿಕೆಯ ಮುಖಪುಟ ಹಾಗೂ ಲೇಖನವನ್ನು ಸಮರ್ಥಿಸಿಕೊಂಡಿದ್ದಾರೆ.
ಐದಾರು ವರ್ಷಗಳ ಕಾಲ ಲಿವ್ ಇನ್ ಸಂಬಂಧದಲ್ಲಿದ್ದ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಅವರು 2012ರಲ್ಲಿ ಮದುವೆಯಾಗಿದ್ದರು. ಈಗ ವಿಎಚ್ ಪಿ ಪತ್ರಿಕೆಯಲ್ಲಿ ಕರೀನಾ ಅವರ ಚಿತ್ರ ಬಳಕೆ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications