ಫೆ 1ರಿಂದ ಮೋದಿ ಚಹಾ ಸಂವಾದ; ಉದ್ಯಮ ಫುಲ್ ಖುಷ್
ನವದೆಹಲಿ, ಜ.31- ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಯುವಕರಾಗಿದ್ದಾಗ ಹೊಟ್ಟೆಪಾಡಿಗೆಂದು ಚಹಾ ಮಾರಾಟ ಮಾಡುತ್ತಿದ್ದುದ್ದೇ ಈಗ ಅವರ ಕೈಹಿಡಿದಿದೆ. ಆದರೆ ಇದು ಕಾಂಗ್ರೆಸ್ 'ಕೈ'ಕಚ್ಚಿದೆ.
ಸ್ವಯಂಕೃತಾಪರಾಧವೆಂಬಂತೆ ವಿರೋಧ ಪಕ್ಷಗಳು ಮೋದಿ ಚಹಾ ಮಾರಾಟ ಮಾಡುತ್ತಿದ್ದನ್ನು ಲೇವಡಿ ಮಾಡಿಕೊಂಡಿದ್ದು ಬಿಜೆಪಿ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಚಹಾವನ್ನೇ ಬಂಡವಾಳ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.
ಚಹಾ ಉದ್ಯಮಕ್ಕೆ ಕುದುರಿತು ಲಕ್ಕು!

ರಾಜಕೀಯ ಪಕ್ಷಗಳ ಪರಸ್ಪರ ನಿಂದನೆ/ ಆರೋಪಗಳಿಂದ ಚಹಾ ಉದ್ಯಮಕ್ಕೆ ಲಕ್ಕು ಖುಲಾಯಿಸಿದೆ! ನೆಲಕಚ್ಚಿದ್ದ ಚಹಾ ಉದ್ಯಮ ದಿಢೀರ್ ಬೆಳವಣಿಗೆಯಿಂದ ಸಂತಸಗೊಂಡಿದೆ. 2013ನೇ ಸಾಲಿನಲ್ಲಿ ತುಸು ಹೆಚ್ಚೇ ಅನ್ನಿಸುವಷ್ಟು 1,180 ಲಕ್ಷ ಕೆಜಿ ಚಹಾ ಉತ್ಪಾದನೆಯಾಗಿದೆ. ಚುನಾವಣೆ ಮುಗಿಯುವವರೆಗೂ ವಾರಕ್ಕೊಮ್ಮೆ ಇಂತಹ ಮೋದಿ ಚಹಾ ಸಂವಾದಗಳು ನಡೆಯಲಿದ್ದು, ಚಹಾ ಮಾರಾಟ ಮತ್ತಷ್ಟು ಸುಧಾರಿಸಲಿದೆ ಎಂದು ಉದ್ಯಮ ಸಂತಸದಲ್ಲಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ರಾಜ್ಯಸಭೆ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಚತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಮೋದಿ ಚಹಾ ಸಂವಾದದಲ್ಲಿ ಮೋದಿಗೆ ಸಾಥ್ ನೀಡಲಿದ್ದಾರೆ.
ಮೋದಿ ಚಹಾ ಸಂವಾದ
ನಾಳೆ ಫೆ. 1ರಂದು ಗಾಂಧಿನಗರದಲ್ಲಿ 'ಮೋದಿ ಚಹಾ ಚರ್ಚೆ' ಹವಾ ಎಬ್ಬಿಸುವ ಮೋದಿ, 300 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,000 ಚಹಾ ಅಂಗಡಿಗಳ ಬಳಿ ಜಮಾಯಿಸುವ ಜನರ ಜತೆ ನೇರವಾಗಿ ಮಾತನಾಡಲಿದ್ದಾರೆ. ಇದಕ್ಕಾಗಿ ಇಂಟರ್ನೆಟ್ ಮತ್ತು ಡಿಟಿಎಚ್ ತಂತ್ರಜ್ಞಾನ ಬಳಕೆಯಾಗಲಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿಯ ಪ್ರಚಾರ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಮೋದಿ ಅವರು 5 ಚಾಯ್ (nukkad) ಅಡ್ಡಾಗಳಲ್ಲಿ Chai pe charcha with NaMo ಅಂದರೆ 'ಚಹಾ ಮಾರಾಟಗಾರರ ಜತೆ ಸಂವಾದವನ್ನು ನಡೆಸಲಿದ್ದಾರೆ.
ಬೆಂಗಳೂರಿನಲ್ಲೂ NaMo tea stall ಕಾರ್ಯಾರಂಭಿಸಲಿವೆ. ಬಿಜೆಪಿ ಕಾರ್ಯಕರ್ತರು ಬೆಂಗಳೂರಿನಲ್ಲಿ 200 Narendra Modi Chai Pointಗಳನ್ನು ತೆರೆದು 1 ರೂಪಾಯಿಗೆ ಒಂದು ಕಪ್ ಚಹಾ ಮಾರಲಿದ್ದಾರೆ. ಇದು ಇತರೆ ಜಿಲ್ಲಾ ಕೇಂದ್ರಗಳಲ್ಲೂ ನಡೆಯಲಿದೆ.
ಅಂದಹಾಗೆ, ಕಾಂಗ್ರೆಸ್ಸಿನ ರಾಜ್ಯಸಭೆ ಸದಸ್ಯ ಮಣಿಶಂಕರ್ ಅಯ್ಯರ್ AICC ಸಮಾವೇಶದಲ್ಲಿ 'ಮೋದಿ ಕಾಂಗ್ರೆಸ್ ಕಚೇರಿಯಲ್ಲಿ ಚಹಾ ಮಾರೋಕ್ಕೆ ಲಾಯಕ್ಕು' ಎಂದು ಜರಿದಿದ್ದೇ ಬಿಜೆಪಿ ಪಕ್ಷದ ಈ ವಿನೂತನ ಪ್ರಚಾರಕ್ಕೆ ಹೇತುವಾಗಿದೆ!
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video












Click it and Unblock the Notifications