ಸೌರಶಕ್ತಿ ಮೂಲಕ ಮನೆಯ ದೀಪ ಬೆಳಗಿಸಿ, ಹಣದೊಂದಿಗೆ ಪರಿಸರ ಉಳಿಸಿ
ದಿನದಿನಕ್ಕೂ ಮಾಲಿನ್ಯ ಪ್ರಮಾಣ ಏರುತ್ತಿದೆ. ಇಂಧನದ ಸ್ವಾಭಾವಿಕ ಮೂಲಗಳೇ ಕಡಿಮೆ ಆಗುತ್ತಿದ್ದು. ಹಸಿರು ಹಾಗೂ ಸ್ಥಿರವಾದ ಇಂಧನ ಮೂಲಗಳು ಈ ಕ್ಷಣದ ಅಗತ್ಯವಾಗಿದೆ. ಮನೆಗಳಿಗೆ ಕೂಡ ಸೌರಶಕ್ತಿ ಬಳಕೆ ಮಾಡುವುದನ್ನು ಜನಪ್ರಿಯಗೊಳಿಸಿದ ಮೊದಲ ಕಂಪೆನಿಗಳಲ್ಲಿ ವರ್ಚಸ್ವ ಕೂಡ ಒಂದು.
ಜಗತ್ತಿನಲ್ಲೇ ಅತಿ ಹೆಚ್ಚು ಪ್ರಮಾಣದ ವಿದ್ಯುತ್ ಬಳಕೆ ಮಾಡುವ ರಾಷ್ಟ್ರಗಳ ಪೈಕಿ ಭಾರತಕ್ಕೆ ನಾಲ್ಕನೇ ಸ್ಥಾನ. ವಿದ್ಯುತ್ ಶಕ್ತಿಗೆ ದಿನದಿನಕ್ಕೂ ಬೇಡಿಕೆ ಹೆಚ್ಚುತ್ತಿದೆ. ಸ್ವಾಭಾವಿಕ ಶಕ್ತಿ ಮೂಲಗಳಿಂದ ಈ ಬೇಡಿಕೆಯನ್ನು ಪೂರೈಸುವುದು ಕಷ್ಟ. ಹೀಗೇ ಮುಂದುವರಿದರೆ ವಿದ್ಯುತ್ ಕೊರತೆ ಎದುರಾಗುತ್ತದೆ. ಆದ್ದರಿಂದಲೇ ಸೌರಶಕ್ತಿ ಎಂಬುದು ನಮ್ಮ ದೇಶಕ್ಕೆ ಬಹಳ ಮುಖ್ಯವಾದದ್ದು.

ಸೋಲಾರ್ ಇಪಿಸಿ ಸೇವೆ, ಮನೆಯ ಮೇಲೆ ಹಾಕುವ ರೂಫ್ ಟಾಪ್ ಸಲ್ಯೂಷನ್, ಕಾರ್ಯ ಚಟುವಟಿಕೆ ಹಾಗೂ ನಿರ್ವಹಣೆಯನ್ನು 'ವರ್ಚಸ್ವ'ದಿಂದ ಮಾಡುತ್ತಿದ್ದು, ವಿವಿಧ ಸೌರಶಕ್ತಿಯ ಪರಿಹಾರ ಹಾಗೂ ಸೇವೆಗಳನ್ನು ಒದಗಿಸಲಾಗುತ್ತದೆ. 2011ರಲ್ಲಿ ಅರಂಭವಾದ ಈ ಕಂಪೆನಿಯು ಸೌರಶಕ್ತಿ ಹಾಗೂ ವಿದ್ಯುತ್ ಕ್ಷೇತ್ರದಲ್ಲಿ ಉತ್ತಮವಾದ ಕೆಲಸ ಮಾಡುತ್ತಿದೆ.
ವರ್ಚಸ್ವ ಕಂಪೆನಿಯಲ್ಲಿ ಅನುಭವಿಗಳ ಉತ್ತಮ ತಂಡವಿದೆ. ಇಲ್ಲಿಯವರೆಗೆ 100 ಮೆಗಾ ವಾಟ್ ಗಿಂತ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯ ಸೌರ ಉಪಕರಣಗಳನ್ನು ಅಳವಡಿಸಿದ ಅನುಭವ ಈ ತಂಡಕ್ಕೆ ಇದೆ. ಇದರಿಂದ ಬರೀ ಉಪಕರಣ ಅಳವಡಿಸುವುದಷ್ಟೇ ಅಲ್ಲ, ಯಾವ ಗ್ರಾಹಕರಿಗೆ ಏನು ಅಗತ್ಯ ಪೂರೈಸಬೇಕು ಎಂಬ ಬಗ್ಗೆ ಕೂಡ ಚೆನ್ನಾಗಿ ಯೋಜನೆ ರೂಪಿಸಬಲ್ಲವರಾಗಿದ್ದಾರೆ.

ಈ ತಂಡವು ಹಲವು ಸೌರ ಯೋಜನೆಗಳನ್ನು ಸಾಕಾರಗೊಳಿಸಿದೆ. ಅವುಗಳಲ್ಲಿ ರೂಫ್ ಟಾಪ್ ಮತ್ತು ನೆಲದ ಮೇಲೆ ಅಳವಡಿಸುವ ಎಸ್ ಪಿವಿಗಳು ಕೂಡ ಸೇರಿವೆ. 80 ಕಿಲೋ ವಾಟ್ ನಿಂದ 10 ಮೆಗಾ ವಾಟ್ ವರೆಗೆ ಹಲವು ಯೋಜನೆಗಳನ್ನು ವರ್ಚಸ್ವ ಕಂಪೆನಿ ತುಂಬ ಯಶಸ್ವಿಯಾಗಿ ಮಾಡಿಕೊಟ್ಟಿದೆ.
ಭಾರತದ ವಿವಿಧ ರಾಜ್ಯಗಳಾದ ರಾಜಸ್ತಾನ, ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಅವುಗಳನ್ನು ನೋಡಬಹುದು. ವಿವಿಧ ಹೋತೆಲ್ ಗಳು, ಗೋದಾಮುಗಳು ಹಾಗೂ ಲಾಜಿಸ್ಟಿಕ್ಸ್ ಕಂಪೆನಿಗಳಿಗಾಗಿ ವರ್ಚಸ್ವದಿಂದ ಸೇವೆ ಒದಗಿಸಲಾಗುತ್ತಿದೆ.

ಈ ರೀತಿ ಸೌರ ವಿದ್ಯುತ್ ಘಟಕಗಳ ಯೋಜನೆಗಳು ಮಾತ್ರವಲ್ಲ, ಇದರ ಹೊರತಾಗಿ ವರ್ಚಸ್ವ ಕಂಪೆನಿಯು ಸೌರ ಶಕ್ತಿ ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದೆ ಮತ್ತು ನವೀಕೃತ ಶಕ್ತಿ ಮೂಲಗಳ ಬಗ್ಗೆ ತಿಳಿವಳಿಕೆ ನೀಡುತ್ತಿದೆ.
ಸೌರ ಶಕ್ತಿ ಬಳಕೆಗೆ ಭಾರತದಲ್ಲಿ ಅಗಾಧವಾದ ಅವಕಾಶಗಳಿವೆ. ಏಕೆಂದರೆ, ದೇಶದ ಬಹುತೇಕ ಭಾಗದಲ್ಲಿ, ವರ್ಷದ ಬಹು ಸಮಯ ಸೂರ್ಯನ ಪ್ರಖರತೆ ಹೆಚ್ಚು. ಇಂಥ ಸೌರಶಕ್ತಿಯನ್ನು ಬಳಸುವುದರಿಂದ ಯಾವುದೇ ಕಾರ್ಬನ್ ಪ್ರಮಾಣ ವಾತಾವರಣಕ್ಕೆ ಬಿಡುಗಡೆಯಾಗುವುದಿಲ್ಲ. ಆದ್ದರಿಂದಲೇ ಸೌರಶಕ್ತಿಯು ಭಾರತದಲ್ಲಿ ಪ್ರಮುಖ ನವೀಕೃತ ಇಂಧನ ಮೂಲವಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications