ಸೌರಶಕ್ತಿ ಮೂಲಕ ಮನೆಯ ದೀಪ ಬೆಳಗಿಸಿ, ಹಣದೊಂದಿಗೆ ಪರಿಸರ ಉಳಿಸಿ
ದಿನದಿನಕ್ಕೂ ಮಾಲಿನ್ಯ ಪ್ರಮಾಣ ಏರುತ್ತಿದೆ. ಇಂಧನದ ಸ್ವಾಭಾವಿಕ ಮೂಲಗಳೇ ಕಡಿಮೆ ಆಗುತ್ತಿದ್ದು. ಹಸಿರು ಹಾಗೂ ಸ್ಥಿರವಾದ ಇಂಧನ ಮೂಲಗಳು ಈ ಕ್ಷಣದ ಅಗತ್ಯವಾಗಿದೆ. ಮನೆಗಳಿಗೆ ಕೂಡ ಸೌರಶಕ್ತಿ ಬಳಕೆ ಮಾಡುವುದನ್ನು ಜನಪ್ರಿಯಗೊಳಿಸಿದ ಮೊದಲ ಕಂಪೆನಿಗಳಲ್ಲಿ ವರ್ಚಸ್ವ ಕೂಡ ಒಂದು.
ಜಗತ್ತಿನಲ್ಲೇ ಅತಿ ಹೆಚ್ಚು ಪ್ರಮಾಣದ ವಿದ್ಯುತ್ ಬಳಕೆ ಮಾಡುವ ರಾಷ್ಟ್ರಗಳ ಪೈಕಿ ಭಾರತಕ್ಕೆ ನಾಲ್ಕನೇ ಸ್ಥಾನ. ವಿದ್ಯುತ್ ಶಕ್ತಿಗೆ ದಿನದಿನಕ್ಕೂ ಬೇಡಿಕೆ ಹೆಚ್ಚುತ್ತಿದೆ. ಸ್ವಾಭಾವಿಕ ಶಕ್ತಿ ಮೂಲಗಳಿಂದ ಈ ಬೇಡಿಕೆಯನ್ನು ಪೂರೈಸುವುದು ಕಷ್ಟ. ಹೀಗೇ ಮುಂದುವರಿದರೆ ವಿದ್ಯುತ್ ಕೊರತೆ ಎದುರಾಗುತ್ತದೆ. ಆದ್ದರಿಂದಲೇ ಸೌರಶಕ್ತಿ ಎಂಬುದು ನಮ್ಮ ದೇಶಕ್ಕೆ ಬಹಳ ಮುಖ್ಯವಾದದ್ದು.

ಸೋಲಾರ್ ಇಪಿಸಿ ಸೇವೆ, ಮನೆಯ ಮೇಲೆ ಹಾಕುವ ರೂಫ್ ಟಾಪ್ ಸಲ್ಯೂಷನ್, ಕಾರ್ಯ ಚಟುವಟಿಕೆ ಹಾಗೂ ನಿರ್ವಹಣೆಯನ್ನು 'ವರ್ಚಸ್ವ'ದಿಂದ ಮಾಡುತ್ತಿದ್ದು, ವಿವಿಧ ಸೌರಶಕ್ತಿಯ ಪರಿಹಾರ ಹಾಗೂ ಸೇವೆಗಳನ್ನು ಒದಗಿಸಲಾಗುತ್ತದೆ. 2011ರಲ್ಲಿ ಅರಂಭವಾದ ಈ ಕಂಪೆನಿಯು ಸೌರಶಕ್ತಿ ಹಾಗೂ ವಿದ್ಯುತ್ ಕ್ಷೇತ್ರದಲ್ಲಿ ಉತ್ತಮವಾದ ಕೆಲಸ ಮಾಡುತ್ತಿದೆ.
ವರ್ಚಸ್ವ ಕಂಪೆನಿಯಲ್ಲಿ ಅನುಭವಿಗಳ ಉತ್ತಮ ತಂಡವಿದೆ. ಇಲ್ಲಿಯವರೆಗೆ 100 ಮೆಗಾ ವಾಟ್ ಗಿಂತ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯ ಸೌರ ಉಪಕರಣಗಳನ್ನು ಅಳವಡಿಸಿದ ಅನುಭವ ಈ ತಂಡಕ್ಕೆ ಇದೆ. ಇದರಿಂದ ಬರೀ ಉಪಕರಣ ಅಳವಡಿಸುವುದಷ್ಟೇ ಅಲ್ಲ, ಯಾವ ಗ್ರಾಹಕರಿಗೆ ಏನು ಅಗತ್ಯ ಪೂರೈಸಬೇಕು ಎಂಬ ಬಗ್ಗೆ ಕೂಡ ಚೆನ್ನಾಗಿ ಯೋಜನೆ ರೂಪಿಸಬಲ್ಲವರಾಗಿದ್ದಾರೆ.

ಈ ತಂಡವು ಹಲವು ಸೌರ ಯೋಜನೆಗಳನ್ನು ಸಾಕಾರಗೊಳಿಸಿದೆ. ಅವುಗಳಲ್ಲಿ ರೂಫ್ ಟಾಪ್ ಮತ್ತು ನೆಲದ ಮೇಲೆ ಅಳವಡಿಸುವ ಎಸ್ ಪಿವಿಗಳು ಕೂಡ ಸೇರಿವೆ. 80 ಕಿಲೋ ವಾಟ್ ನಿಂದ 10 ಮೆಗಾ ವಾಟ್ ವರೆಗೆ ಹಲವು ಯೋಜನೆಗಳನ್ನು ವರ್ಚಸ್ವ ಕಂಪೆನಿ ತುಂಬ ಯಶಸ್ವಿಯಾಗಿ ಮಾಡಿಕೊಟ್ಟಿದೆ.
ಭಾರತದ ವಿವಿಧ ರಾಜ್ಯಗಳಾದ ರಾಜಸ್ತಾನ, ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಅವುಗಳನ್ನು ನೋಡಬಹುದು. ವಿವಿಧ ಹೋತೆಲ್ ಗಳು, ಗೋದಾಮುಗಳು ಹಾಗೂ ಲಾಜಿಸ್ಟಿಕ್ಸ್ ಕಂಪೆನಿಗಳಿಗಾಗಿ ವರ್ಚಸ್ವದಿಂದ ಸೇವೆ ಒದಗಿಸಲಾಗುತ್ತಿದೆ.

ಈ ರೀತಿ ಸೌರ ವಿದ್ಯುತ್ ಘಟಕಗಳ ಯೋಜನೆಗಳು ಮಾತ್ರವಲ್ಲ, ಇದರ ಹೊರತಾಗಿ ವರ್ಚಸ್ವ ಕಂಪೆನಿಯು ಸೌರ ಶಕ್ತಿ ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದೆ ಮತ್ತು ನವೀಕೃತ ಶಕ್ತಿ ಮೂಲಗಳ ಬಗ್ಗೆ ತಿಳಿವಳಿಕೆ ನೀಡುತ್ತಿದೆ.
ಸೌರ ಶಕ್ತಿ ಬಳಕೆಗೆ ಭಾರತದಲ್ಲಿ ಅಗಾಧವಾದ ಅವಕಾಶಗಳಿವೆ. ಏಕೆಂದರೆ, ದೇಶದ ಬಹುತೇಕ ಭಾಗದಲ್ಲಿ, ವರ್ಷದ ಬಹು ಸಮಯ ಸೂರ್ಯನ ಪ್ರಖರತೆ ಹೆಚ್ಚು. ಇಂಥ ಸೌರಶಕ್ತಿಯನ್ನು ಬಳಸುವುದರಿಂದ ಯಾವುದೇ ಕಾರ್ಬನ್ ಪ್ರಮಾಣ ವಾತಾವರಣಕ್ಕೆ ಬಿಡುಗಡೆಯಾಗುವುದಿಲ್ಲ. ಆದ್ದರಿಂದಲೇ ಸೌರಶಕ್ತಿಯು ಭಾರತದಲ್ಲಿ ಪ್ರಮುಖ ನವೀಕೃತ ಇಂಧನ ಮೂಲವಾಗಿದೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications