ಕ್ರಿಸ್ಮಸ್, ಹೊಸ ವರ್ಷಕ್ಕೆ ಬೆಂಗಳೂರಿನಿಂದ ಕೆಎಸ್ಆರ್ಟಿಸಿ ವಿಶೇಷ ಬಸ್ ಸೇವೆ
ತಿರುವನಂತಪುರಂ, ನವೆಂಬರ್ 20: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಮುಂಬರುವ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಅವಧಿಯಲ್ಲಿ ಕೇರಳದ ವಿವಿಧ ಡಿಪೋಗಳಿಂದ ಬೆಂಗಳೂರು, ಮೈಸೂರು ಮತ್ತು ಚೆನ್ನೈಗೆ ಹೆಚ್ಚುವರಿ ಬಸ್ ಸೇವೆಗಳನ್ನು ಘೋಷಿಸಿದೆ.
ಕೇರಳ ಬಸ್ ಸಾರಿಗೆ ಸಂಸ್ಥೆ ಡಿಸೆಂಬರ್ 20ರಿಂದ 25ರವರೆಗೆ ಹೊರಡುವ ಬಸ್ ಹಾಗೂ ಮಾರ್ಗಗಳು ಇಂತಿವೆ. ಬೆಂಗಳೂರಿಂದ ಮೈಸೂರು, ಸುಲ್ತಾನ್ ಬತ್ತೇರಿ ಮೂಲಕ ಕೋಯಿಕೋಡ್ ತಲುಪುತ್ತದೆ. ಬೆಂಗಳೂರು ಕುಟ್ಟ, ಮಾನಂತವಾಡಿ ಜೊತೆಗೆ ಕೋಯಿಕೋಡ್ ತಲುಪುತ್ತವೆ. ಬೆಂಗಳೂರಿಂದ ತ್ರಿಶೂರ್ಗೆ ಸೇಲಂ, ಕೊಯಮತ್ತೂರು ಮೂಲಕ ಹೊರಡುತ್ತದೆ. ಬೆಂಗಳೂರಿಂದ ಎರ್ನಾಕುಲಂಗೆ ಸೇಲಂ ಕೊಯಮತ್ತೂರು-ಪಾಲಕ್ಕಾಡ್ ಮಾರ್ಗದಲ್ಲಿ ಹೊರಡುತ್ತದೆ.
ಬೆಂಗಳೂರಿಂದ ಕೊಟ್ಟಾಯಂಗೆ ಸೇಲಂ, ಕೊಯಮತ್ತೂರು ಮತ್ತು ಪಾಲಕ್ಕಾಡ್ ಮೂಲಕ ಹೊರಡುತ್ತದೆ. ಬೆಂಗಳೂರಿಂದ ಕಣ್ಣೂರಿಗೆ ಇರಿಟ್ಟಿ ಮೂಲಕ ಬಸ್ ಸೇವೆ ಇರಲಿದೆ. ಬೆಂಗಳೂರಿಂದ ಪಯ್ಯನೂರಿಗೆ ಚೆರುಪುಳ ಮೂಲಕ ಬಸ್ ಸೇವೆ ಇರಲಿದೆ. ಅಲ್ಲದೆ ಬೆಂಗಳೂನಿಂದ ತಿರುವನಂತಪುರಕ್ಕೆ ನಾಗರಕೋಯಿಲ್ ಮಾರ್ಗದಲ್ಲಿ ಬಸ್ ಹೊರಡುತ್ತದೆ. ಇನ್ನು ಚೆನ್ನೈನಿಂದ ತಿರುವನಂತಪುರಂಕ್ಕೆ ನಾಗರಕೋಯಿಲ್ ಮೂಲಕ ಬಸ್ ಸೇವೆ ಇರಲಿದೆ.

ಇನ್ನೂ ಡಿಸೆಂಬರ್ 26, 28 ಮತ್ತು 31, 2022 ಮತ್ತು ಜನವರಿ 1 ಮತ್ತು 2, 2023 ರಂದು ಬೆಂಗಳೂರಿನಿಂದ ಕೋಯಿಕೋಡ್ಗೆ ಮೈಸೂರು, ಬತ್ತೇರಿ ಮೂರ್ಗದಲ್ಲಿ ಬಸ್ ಸೇವೆ ಇರಲಿದೆ. ಬೆಂಗಳೂರಿಂದ ಕೋಜಿಕೋಡ್ಗೆ ಕುಟ್ಟ, ಮಾನಂತವಾಡಿ ಮಾರ್ಗದಲ್ಲಿ ಬಸ್ ಸೇವೆ ಇರಲಿದೆ. ಬೆಂಗಳೂರಿನಿಂದ ತ್ರಿಶೂರ್ಗೆ ಬಸ್ ಸೇಲಂ, ಕೊಯಮತ್ತೂರು ಮತ್ತು ಪಾಲಕ್ಕಾಡ್ ಮೂಲಕ ಹೊರಡಲಿದೆ. ಬೆಂಗಳೂರಿಂದ ಎರ್ನಾಕುಲಂಗೆ ಬಸ್ ಸೇಲಂ ಕೊಯಮತ್ತೂರು ಪಾಲಕ್ಕಾಡ್ ಮೂಲಕ ಹೊರಡುತ್ತದೆ.

ಬೆಂಗಳೂರಿಂದ ಕಣ್ಣೂರುಗೆ ಬಸ್ ಇರಿಟ್ಟಿ ಮೂಲಕ ಹೊರಡುತ್ತದೆ. ಬೆಂಗಳೂರಿನಿಂದ ಪಯ್ಯನೂರಿಗೆ ಚೆರುಪುಳ ಮೂಲಕ ಬಸ್ ಸೇವೆ ಇರಲಿದೆ. ಬೆಂಗಳೂರಿನಿಂದ ತಿರುವನಂತಪುರಂಗೆ ನಾಗರಕೋಯಿಲ್ ಮಾರ್ಗದಲ್ಲಿ ಬಸ್ ಹೊರಡಲಿದೆ. ಚೆನ್ನೈನಿಂದ ತಿರುವನಂತಪುರಂಗೆ ನಾಗರಕೋಯಿಲ್ ಮೂಲಕ ಬಸ್ ಸೇವೆ ಇರಲಿದೆ.












Click it and Unblock the Notifications