ಗುದ್ದೋಡು ತೀರ್ಪು: ನ್ಯಾಯಾಲಯದ ಒಳಗೆ ಏನಾಯಿತು?
ನವದೆಹಲಿ, ಮೇ. 6: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ನ್ಯಾಯಾಲಯ 5 ವರ್ಷಗಳ ಶಿಕ್ಷೆ ವಿಧಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಇದೀಗ ಬಾಂಬೆ ಹೈ ಕೋರ್ಟ್ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿದೆ.
ತೀರ್ಪು ನೀಡುವ ವೇಳೆ ನಡೆದ ಘಟನಾವಳಿಗಳೇನು? ಸಲ್ಮಾನ್ ಅವರ ಮೇಲೆ ದಾಖಲಾಗಿದ್ದ ಸೆಕ್ಷನ್ ಗಳು ಯಾವವು? ಒಟ್ಟು ಎಷ್ಟು ವರ್ಷ ಶಿಕ್ಷೆ ನೀಡಬಹುದಿತ್ತು? ಎಂಬುದೆಲ್ಲದಕ್ಕೆ ಇಲ್ಲಿದೆ ಉತ್ತರ.[ಸಲ್ಮಾನ್ ಗೆ ರಕ್ಷೆ ನೀಡಿದ 'ಬೀಯಿಂಗ್ ಹ್ಯೂಮನ್']
13 ವರ್ಷಗಳ ಕಾಲ ನಡೆದ ಪ್ರಕರಣದ ಅಂತಿಮ ತೀರ್ಪು ಬುಧವಾರ ಹೊರಬಿದ್ದಿತು. ಪ್ರಕರಣದಲ್ಲಿ ಬಾಲಿವುಡ್ ನಟ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತು. ಒಟ್ಟಿನಲ್ಲಿ ಸಂಜಯ್ ದತ್ ನಂತರ ಮತ್ತೊಬ್ಬ ನಾಯಕ ನಟ ಜೈಲು ಸೇರುವಂತಾಗಿದೆ. ಸದ್ಯ ಎರಡು ದಿನ ಮಾತ್ರ ಸಲ್ಮಾನ್ ಖಾನ್ ನಿರಾಳ. ತೀರ್ಪು ನೀಡಿರುವ ಕೆಳ ನ್ಯಾಯಾಲಯ ಅದಕ್ಕೆ ಸ್ಪಷ್ಟ ಕಾರಣಗಳನ್ನು ತಿಳಿಸಿಲ್ಲ ಎಂಬ ಆಧಾರದ ಮೇಲೆ ಖಾನ್ ಗೆ ಜಾಮೀನು ಸಿಕ್ಕಿದ್ದು ಇನ್ನೆರಡು ದಿನದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಲಿದೆ. ಶುಕ್ರವಾರ ಬಾಂಬೆ ಹೈ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಲಿದೆ. (ಪಿಟಿಐ ಚಿತ್ರಗಳು)

ಶಾಂತಚಿತ್ತನಾಗಿದ್ದ ಬಾಲಿವುಡ್ ನಾಯಕ
ನ್ಯಾಯಾಲಯ ಶಿಕ್ಷೆ ತೀರ್ಪು ಪ್ರಕಟ ಮಾಡುವ ವೇಳೆ ಸಲ್ಮಾನ್ ಖಾನ್ ಶಾಂತಚಿತ್ತರಾಗಿ ನಿಂತಿದ್ದರು. ತೀರ್ಪು ಘೋಷಣೆ ಯಾಗುತ್ತಿದ್ದಾಗಲೂ ಸಲ್ಮಾನ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.[ನಮಗೆ ಪರಿಹಾರ ಸಿಕ್ಕರೆ ಸಾಕು]

ನ್ಯಾಯಾಧೀಶರು ಏನು ಉಲ್ಲೇಖ ಮಾಡಿದರು?
ಅಪಘಾತ ಸಂಭವಿಸುವ ವೇಳೆ ಸಲ್ಮಾನ್ ಖಾನ್ ವಾಹನ ಚಲಾಯಿಸುತ್ತಿದ್ದರು ಎಂದು ನ್ಯಾಯಾಧೀಶರು ಉಲ್ಲೇಖ ಮಾಡಿದ್ದರು. ಬಾಲಿವುಡ್ ಸ್ಟಾರ್ ಬಳಿ ಚಾಲನಾ ಪರವಾನಗಿ ಇರಲಿಲ್ಲ. ಅಲ್ಲದೇ ಸಲ್ಮಾನ್ ಕುಡಿದು ವಾಹನ ಚಲಾಯಿಸುತ್ತಿದ್ದರು ಎಂದು ನ್ಯಾಯಾಧೀಶರು ತಿಳಿಸಿದರು.[ಮಧ್ಯಂತರ ಜಾಮೀನು ಮಂಜೂರು]

' ಇಲ್ಲ' ಎಂದ ಸಲ್ಮಾನ್ ಖಾನ್
ನ್ಯಾಯಾಲಯ ನಿಮ್ಮನ್ನು ತಪ್ಪಿತಸ್ಥ ಎಂದು ಭಾವಿಸುತ್ತದೆ ಎಂದಾಗ ಸಲ್ಮಾನ್ 'ಇಲ್ಲ' ಎಂದು ಹೇಳಿದರು. ಅಲ್ಲದೇ ನನ್ನ ಮೇಲಿನ ಆರೋಪಗಳು ಸುಳ್ಳು. ನಾನು ವಾಹನ ಚಾಲನೆ ಮಾಡುತ್ತ ಇರಲಿಲ್ಲ ಎಂದು ಖಾನ್ ಹೇಳಿದರು.[ರೇಷ್ಮಾ ಶೆಟ್ಟಿ , ಶೇರಾ ಕಂಡರೆ ಸಲ್ಮಾನ್ ಗೇಕೆ ಭಯ ಭಕ್ತಿ]

ಹಳೆ ಪ್ರಕರಣಗಳ ಉಲ್ಲೇಖ
ನ್ಯಾಯಾಲಯ ಅಂತಿಮ ನಿರ್ಧಾರ ನೀಡುವ ವೇಳೆ ಅಲಿಸ್ಟೇರ್ ಪೆರೇರಾ ಮತ್ತು ನಿಖಿಲ್ ನಂದಾ ಪ್ರಕರಣದ ತೀರ್ಪನ್ನು ಉಲ್ಲೇಖ ಮಾಡಿತು. ತೀರ್ಪು ಹೊರಬೀಳುತ್ತಿದ್ದಂತೆ ಸಲ್ಮಾನ್ ಖಾನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಯಿತು.[ಸಲ್ಮಾನ್ ಗೆ ರಕ್ಷೆ ನೀಡಿದ 'ಬೀಯಿಂಗ್ ಹ್ಯೂಮನ್']

ಸರ್ಕಾರಿ ವಕೀಲರ ಅಂತಿಮ ವಾದ
ಸಲ್ಮಾನ್ ಖಾನ್ ಕಾರು ಚಾಲಕ ಅಶೋಕ್ ಸಿಂಗ್ ಮೇಲೆ ಸುಳ್ಳು ಸಾಕ್ಷಿ ಮೊಕದ್ದಮೆ ದಾಖಲಿಸುವಂತೆ, ಜತೆಗೆ ನಟನಿಗೆ ಅತಿ ಹೆಚ್ಚು ಪ್ರಮಾಣದ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಿ ವಕೀಲರು ಕೇಳಿಕೊಂಡರು.

ಅಂತಿಮ ತೀರ್ಪಿತ್ತ ನ್ಯಾಯಾಲಯ
ಸಲ್ಮಾನ್ ಒಬ್ಬ ಜನಪ್ರಿಯ ವ್ಯಕ್ತಿ. ಜತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ಹಾಗಾಗಿ ಕನಿಷ್ಠ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿತು.[ಎಲುಬಿಲ್ಲದ ನಾಲಿಗೆಯ ಅಭಿಜಿತ್ಗೆ ಟ್ವಿಟ್ಟಿಗರ ತಿರುಗುಬಾಣ]

ಅಡ್ಡಾದಿಡ್ಡಿ ವಾಹನ ಚಲಾವಣೆ
* ಭಾರತೀಯ ದಂಡಸಂಹಿತೆಯ 304 ರ ಭಾಗ 2 (ಮಾನವ ಕೊಲೆ, ಆದರೆ ಉದ್ದೇಶ ಪೂರ್ವಕ ಅಲ್ಲ) ಇದು 10 ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗಬಹುದಿತ್ತು. *ಸೆಕ್ಷನ್ 279: ನಿರ್ಲಕ್ಷ್ಯ ತನ ಮತ್ತು ಅಡ್ಡಾದಿಡ್ಡಿ ವಾಹನ ಚಲಾವಣೆ(ಆರು ತಿಂಗಳು ಜೈಲು)[ಸಲ್ಮಾನ್ ಶಿಕ್ಷೆ ಟ್ವಿಟ್ಟರ್ ನಲ್ಲಿ ಜನತೆ ಕೊಟ್ಟ ತೀರ್ಪೇನು?]

ಸಾರ್ವಜನಿಕ ಆಸ್ತಿಗೆ ಧಕ್ಕೆ
* ಸೆಕ್ಷನ್ 337 ಮತ್ತು 338 (ಸಾರ್ವಜನಿಕ ಆಸ್ತಿ ಪಾಸ್ತಿ ಮತ್ತು ಜೀವಕ್ಕೆ ಹಾನಿ ಮಾಡುವುದು) ಎರಡು ವರ್ಷ ಶಿಕ್ಷೆ ಸಾಧ್ಯತೆ. * ಸೆಕ್ಷನ್ 427 ಇದು ಸಹ ಸಾರ್ವಜನಿಕ ಆಸ್ತಿ ಹಾನಿಗೆ ಸಂಬಂಧಿಸಿದೆ. * ಮೋಟಾರು ವಾಹನ ಕಾಯ್ದೆ ಅನ್ವಯ ಖಾನ್ ಮೇಲೆ ಪರವಾನಗಿ ರಹಿತ ಚಾಲನೆ, ವಿಪರೀತ ವೇಗ ಸೆಕ್ಷನ್ ಗಳು ದಾಖಲಾಗಿದ್ದವು.[ಸಲ್ಮಾನ್ ರನ್ನು ಜೈಲಿಗೆ ಕಳಿಸಿದ ಹೀರೋ ಈ ಬಾಡಿಗಾರ್ಡ್]
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications