Kerala Lottery: ಪೌರ ಕಾರ್ಮಿಕ ಮಹಿಳೆಯರಿಗೆ ಒಲಿದ ಅದೃಷ್ಟ ಲಕ್ಷ್ಮಿ : 10 ಕೋಟಿ ಗೆದ್ದ 11 ಮಹಿಳೆಯರು
ಅದೃಷ್ಟ ಯಾರಿಗೆ ಯಾವಾಗ ಒಲಿದು ಬರುತ್ತದೆ ಎಂದು ಹೇಳಲು ಆಗದು, ಕೆಲವೊಮ್ಮೆ ಜೀವನಪೂರ್ತಿ ಲಾಟರಿ ಟಿಕೆಟ್ ಖರೀದಿ ಮಾಡಿದರೂ ವಿಜೇತರಾಗುವುದು ಕಷ್ಟ, ಅದೃಷ್ಟವಿದ್ದರೆ ಕುತೂಹಲಕ್ಕೆ ಲಾಟರಿ ಖರೀದಿಸಿ ಕೋಟ್ಯಧಿಪತಿಗಳಾದವರು ಇದ್ದಾರೆ.
ಈ ಬಾರಿ ಕೇರಳದಲ್ಲಿ ಕೂಡ ಹಾಗೆ ಆಗಿದೆ. 11 ಪೌರ ಕಾರ್ಮಿಕ ಮಹಿಳೆಯರು ಸೇರಿ ಒಂದು ಲಾಟರಿ ಟಿಕೆಟ್ ಖರೀದಿ ಮಾಡಿದ್ದು ಅದೃಷ್ಟ ಒಲಿದು ಬಂದಿದೆ. ಹೌದು, ಈ ಮಹಿಳೆಯರು ಖರೀದಿ ಮಾಡಿದ 10 ಕೋಟಿ ರೂಪಾಯಿ ಬಹುಮಾನ ಬಂದಿದ್ದು, ಮಹಿಳೆಯರ ಬದುಕೇ ಬದಲಾಗಲಿದೆ.

ಕೇರಳ ಮಾನ್ಸೂನ್ ಬಂಪರ್ ನಲ್ಲಿ ಮೊದಲ ಬಹುಮಾನ 10 ಕೋಟಿ ರೂಪಾಯಿ ಪಾಲಕ್ಕಾಡ್ನ ಪರಪ್ಪನಂಗಡಿ ಪುರಸಭಾ ವ್ಯಾಪ್ತಿಯ ಹಸಿರು ಸೇನೆಯ ಹರಿತ ಕರ್ಮ ಸೇನೆಯ 11 ಮಂದಿಗೆ ಸಿಕ್ಕಿದೆ. ಅವರು ಪಾಲಕ್ಕಾಡ್ನಲ್ಲಿರುವ ಎ ಕಾಜಾ ಹುಸೇನ್ ಎಂಬ ಏಜೆಂಟ್ನಿಂದ ಟಿಕೆಟ್ ಖರೀದಿ ಮಾಡಿದ್ದರು.
11 ಜನ ಸೇರಿ ಒಂದು ಟಿಕೆಟ್ ಖರೀದಿ
ಈ ಟಿಕೆಟ್ ಬೆಲೆ 250 ರೂಪಾಯಿ ಇದ್ದು, 9 ಜನ ಸೇರಿ ಟಿಕೆಟ್ ಖರೀದಿ ಮಾಡಲು ಬಯಸಿದ್ದರು, ಆದರೆ ಇಬ್ಬರಲ್ಲಿ ಹಣ ಇಲ್ಲದ ಕಾರಣ, ಇನ್ನೂ ಇಬ್ಬರನ್ನು ಸೇರಿಸಿಕೊಂಡು, ಒಟ್ಟು 11 ಜನ ಸೇರಿ ಟಿಕೆಟ್ ಖರೀದಿ ಮಾಡಿದ್ದರು
ಕೇವಲ 21 ದಿನಗಳಲ್ಲಿ ಮಲೆಮಾದಪ್ಪನಿಗೆ ಹರಿದು ಬಂತು 1.56 ಕೋಟಿ ರೂಪಾಯಿ ಕಾಣಿಕೆ.
ಪಿಟಿಐಗೆ ಮಾತನಾಡಿದ ಮಹಿಳೆಯೊಬ್ಬರ, "ಟಿಕೆಟ್ ಡ್ರಾಗಾಗಿ ಕುತೂಹಲದಿಂದ ಕಾಯುತ್ತಿದ್ದೆವು ಆದರೆ ನೆರೆಯ ಪಾಲಕ್ಕಾಡ್ನಲ್ಲಿ ಮಾರಾಟವಾದ ಟಿಕೆಟ್ ಮೊದಲ ಬಹುಮಾನವನ್ನು ಗೆದ್ದಿದೆ ಎಂದು ಯಾರೋ ಹೇಳಿದ ನಂತರ ಬೇಸರವಾಯಿತು" ಎಂದು ಹೇಳಿದರು.
"ಕೊನೆಗೆ ನಮಗೆ ಜಾಕ್ಪಾಟ್ ಹೊಡೆದಿದೆ ಎಂದು ತಿಳಿದಾಗ ನಮ್ಮ ಸಂತೋಷಕ್ಕೆ ಮಿತಿಯಿಲ್ಲ, ನಾವೆಲ್ಲರೂ ಜೀವನದಲ್ಲಿ ಸಾಕಷ್ಟು ಕಷ್ಟ ಪಡುತ್ತಿದ್ದೇವೆ ಮತ್ತು ಈ ಲಾಟರಿ ಹಣದಿಂದ ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗುತ್ತದೆ" ಎಂದು ಅವರು ಹೇಳಿದರು.
ಹರಿತ ಕರ್ಮ ಸೇನೆಯಲ್ಲಿ ಕೆಲಸ ಮಾಡುವ ಮಹಿಳೆಯರು ತಮಗೆ ಬರುವ ಕಡಿಮೆ ಸಂಬಳದ ಕಾರಣದಿಂದ ತಮ್ಮ ಜೀವನ ನಡೆಸಲು ಹೆಣಗಾಡುತ್ತಾರೆ, ಆದರೆ ಈ ಲಾಟರಿ ಅವರ ಜೀವನವನ್ನು ಬದಲಾಯಿಸಲಿದೆ.
ಹರಿತ ಕರ್ಮ ಸೇನೆಯು ಮನೆಗಳು ಮತ್ತು ಸಂಸ್ಥೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ತ್ಯಾಜ್ಯವನ್ನು ಮರುಬಳಕೆ ಪ್ರಕ್ರಿಯೆಗೆ ಅನುಕೂಲವಾಗುವಂತೆ ಘಟಕಗಳಿಗೆ ಕಳುಹಿಸಲಾಗುತ್ತದೆ.
ಹರಿತ ಕರ್ಮ ಸೇನೆಯ ಅಧ್ಯಕ್ಷೆ ಶೀಜಾ ಮಾತನಾಡಿ, ಶ್ರಮಜೀವಿ ಮಹಿಳೆಯರು ಬಹುಮಾನವನ್ನು ಗೆಲ್ಲಲು ಅರ್ಹರಾಗಿದ್ದಾರೆ. ಅವರಲ್ಲಿ ಅನೇಕ ಮಹಿಳೆಯರು ಸಾಲ ಮಾಡಿಕೊಂಡಿದ್ದಾರೆ, ಮದುವೆ ವಯಸ್ಸಿನ ಹೆಣ್ಣು ಮಕ್ಕಳಿದ್ದಾರೆ, ಸಂಬಂಧಿಕರ ಚಿಕಿತ್ಸೆ ವೆಚ್ಚ ಭರಿಸಬೇಕಾಗಿದೆ, ಹಳೆಯ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಪಿಟಿಐಗೆ ತಿಳಿಸಿದರು.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications