Get Updates
Get notified of breaking news, exclusive insights, and must-see stories!

ಕೇರಳ ನರಬಲಿ: ಗೋಡೆಗಳ ಮೇಲೆ ಚಿಮ್ಮಿದ ರಕ್ತ: ದೇಹದ ಭಾಗಗಳನ್ನು ಬೇಯಿಸಿ ತಿಂದ ದಂಪತಿ

ತಿರುವನಂತಪುರಂ ಅಕ್ಟೋಬರ್ 12: ಸಂಪತ್ತು ಮತ್ತು ಸಮೃದ್ಧಿ ಪಡೆಯಲು ದಂಪತಿ ಸೇರಿದಂತೆ ಮೂವರು ಕೇರಳದ ದೂರದ ಹಳ್ಳಿಯೊಂದರಲ್ಲಿ ಧಾರ್ಮಿಕ ಕ್ರಿಯೆಯ ಭಾಗವಾಗಿ ಇಬ್ಬರು ಮಹಿಳೆಯರನ್ನು ಬಲಿ ನೀಡಿದ್ದಾರೆ ಎನ್ನಲಾಗಿದೆ. ಬಲಿಯಾದ ಪದ್ಮಾ ಮತ್ತು ರೋಸ್ಲಿನ್ ಅವರ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಿ ಹಿತ್ತಲಿನಲ್ಲಿ ಹೂಳಲಾಗಿರುವುದು ಬಯಲಾಗಿದೆ. ಮಾಂತ್ರಿಕ ಆಚರಣೆಯ ಭಾಗವಾಗಿ ಗೋಡೆಗಳು ಮತ್ತು ನೆಲದ ಮೇಲೆ ರಕ್ತ ಚೆಲ್ಲಲಾಗಿರುವುದು ಬೆಳಕಿಗೆ ಬಂದಿದೆ.

ಬೀದಿಗಳಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡಿ ದಿನನಿತ್ಯದ ಜೀವನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಆರೋಪಿಗಳು ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರ ಜೀವನದಲ್ಲಿ ಸಮೃದ್ಧಿಯನ್ನು ತರಲು ಬಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯಗಳು ಇದಕ್ಕೆ ಸಾಕ್ಷಿಯಾಗಿವೆ.

ಮಂಗಳವಾರ ಪತ್ತನಂತಿಟ್ಟದ ಎಳಂತೂರು ಗ್ರಾಮದ ದಂಪತಿಗಳ ಮನೆಯ ಆವರಣದಿಂದ ಮೃತರ ಕತ್ತರಿಸಿದ ದೇಹದ ಭಾಗಗಳನ್ನು ಹೊರತೆಗೆಯಲಾಗಿದೆ. ಎಳಂಥೂರಿನಲ್ಲಿ ಎರಡು ಸ್ಥಳಗಳಲ್ಲಿ ಹೂಳುವ ಮೊದಲು ಬಲಿಪಶುಗಳ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಲಾಗಿದೆ. ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳನ್ನು ಬುಧವಾರ ಎರ್ನಾಕುಲಂ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮಾನವ ಬಲಿಯ ಕಥೆ

ಮಾನವ ಬಲಿಯ ಕಥೆ

ತನ್ನ ಸಂಗಾತಿಯೊಂದಿಗೆ ವಾಸಿಸುತ್ತಿದ್ದ ಕಾಲಡಿ ಮೂಲದ ರೋಸ್ಲಿನ್ ಜೂನ್‌ನಲ್ಲಿ ನಾಪತ್ತೆಯಾಗಿದ್ದು, ಅವರ ಮಗಳು ಕಾಣೆಯಾದ ದೂರನ್ನು ತಂದೆ ದಾಖಲಿಸಿದ್ದರು. ಇನ್ನೂ ಪದ್ಮಾ ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೋನ್ ವಿವರಗಳು ಮತ್ತು ಟವರ್ ಸ್ಥಳಗಳನ್ನು ಆಧರಿಸಿ ಅವರನ್ನು ಪತ್ತೆ ಮಾಡಲಾಗಿದೆ. ಇದು ನರಬಲಿ ಕಥೆಯನ್ನು ಬಿಚ್ಚಿಟ್ಟಿದೆ.

"ಇಬ್ಬರು ಮಹಿಳೆಯರನ್ನು ಕೊಂದು [ದಂಪತಿಗಳ] ಮನೆ ಬಳಿ ಹೂಳಲಾಗಿದೆ. ಕೊಲೆ ಶಾಸ್ತ್ರೋಕ್ತ ನರಬಲಿ ಭಾಗವಾಗಿದೆ. ಇನ್ನೂ ಒಂದು ಪ್ರಕರಣ ವರದಿಯಾಗಿರುವ ಬಗ್ಗೆ ನಮಗೆ ಮಾಹಿತಿ ಇದೆ. ನಾವು ಸಂಪೂರ್ಣ ಪ್ರಕರಣವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ" ಎಂದು ಕೊಚ್ಚಿ ನಗರ ಪೊಲೀಸ್ ಕಮಿಷನರ್ ನಾಗರಾಜು ಚಕಿಲಂ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಬಲಿಗಾಗಿ ಮಹಿಳೆಯರನ್ನು ಕರೆತಂದ ಏಜೆಂಟ್ ಅರೆಸ್ಟ್

ಬಲಿಗಾಗಿ ಮಹಿಳೆಯರನ್ನು ಕರೆತಂದ ಏಜೆಂಟ್ ಅರೆಸ್ಟ್

ಬಂಧಿತರನ್ನು ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಎಂದು ಗುರುತಿಸಲಾಗಿದೆ. ಅವರಿಬ್ಬರೂ ತಿರುವಲ್ಲಾ ಮೂಲದವರಾಗಿದ್ದರು. ಅಲ್ಲದೆ, ದಂಪತಿಯ ಮನೆಗೆ ಇಬ್ಬರು ಮಹಿಳೆಯರನ್ನು ಕರೆತರಲು ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದ ಪೆರುಂಬವೂರು ಮೂಲದ ಮಹಮ್ಮಂದ್ ಶಾಫಿ ಎಂಬಾತನನ್ನೂ ಬಂಧಿಸಲಾಗಿದೆ.

"ನಾನು ಅವರನ್ನು [ಭಗವಲ್] ವರ್ಷಗಳಿಂದ ಬಲ್ಲೆ. ಅವರು ನನ್ನ ಬಾಲ್ಯದ ಗೆಳೆಯ. ಅವರ ತಂದೆ ಮಸಾಜ್ ಥೆರಪಿಸ್ಟ್. ಅವರ ತಂದೆಯ ಮರಣದ ನಂತರ ಅವರು ಆ ಕೆಲಸ ಮಾಡಿದರು. ಇದ್ದಕ್ಕಿದ್ದಂತೆ, ಸುದ್ದಿ ಕೇಳಿ, ನಾವು ಆಘಾತಕ್ಕೊಳಗಾಗಿದ್ದೇವೆ. ನಮಗೆ ಇದು ಹೇಗೆ ಸಾಧ್ಯ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇದರ ಹಿಂದಿನ ಕಾರಣ ಏನು ಎಂದು ತಿಳಿದಿಲ್ಲ" ಎಂದು ಅವರ ನೆರೆಯ ಬಾಹುಲೇಯನ್ ಇಂಡಿಯಾ ಟುಡೇಗೆ ತಿಳಿಸಿದರು.

ಗೋಡೆಗಳ ಮೇಲೆ ರಕ್ತ ಚೆಲ್ಲಿದ ಆರೋಪಿಗಳು

ಗೋಡೆಗಳ ಮೇಲೆ ರಕ್ತ ಚೆಲ್ಲಿದ ಆರೋಪಿಗಳು

ಫೇಸ್‌ಬುಕ್ ಮೂಲಕ ದಂಪತಿ ಶಾಫಿಯನ್ನು ಭೇಟಿಯಾಗಿದ್ದರು. ಸಂಪತ್ತು ಗಳಿಸಲು ದಂಪತಿಗೆ ನರಬಲಿ ಆಚರಣೆ ಮಾಡುವಂತೆ ಶಾಫಿ ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಫಿಯ ಆಜ್ಞೆಯ ಮೇರೆಗೆ ರೋಸ್ಲಿನ್ ಳನ್ನು ಕೊಂದು ಅವಳ ದೇಹವನ್ನು ಹಿತ್ತಲಿನಲ್ಲಿ ಹೂಳಲಾಯಿತು. ಮಹಿಳೆಯನ್ನು ಹಾಸಿಗೆಗೆ ಕಟ್ಟಿ ಹಾಕಿ ಆಕೆಯ ತಲೆಯನ್ನು ಒಡೆದಿದ್ದಾರೆ. ನಂತರ ದಂಪತಿಗಳು ಅವಳ ಕತ್ತು ಸೀಳಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ದೇಹವನ್ನು ತುಂಡುಗಳಾಗಿ ಕತ್ತರಿಸಲಾಗಿದೆ. ಧಾರ್ಮಿಕ ಕ್ರಿಯೆಯ ಭಾಗವಾಗಿ ಮನೆಯಾದ್ಯಂತ ರಕ್ತವನ್ನು ಚಿಮುಕಿಸಲಾಗಿದೆ.

ದೇಹದ ಕೆಲವು ಭಾಗಗಳನ್ನು ಬೇಯಿಸಿ ತಿಂದ ದಂಪತಿ

ದೇಹದ ಕೆಲವು ಭಾಗಗಳನ್ನು ಬೇಯಿಸಿ ತಿಂದ ದಂಪತಿ

ಆದರೆ "ಆಚರಣೆ" ಆರ್ಥಿಕ ಸಮೃದ್ಧಿಗೆ ಕಾರಣವಾಗದ ಕಾರಣ, ದಂಪತಿಗಳು ಮತ್ತೆ ಶಾಫಿಯನ್ನು ಸಂಪರ್ಕಿಸಿದರು. ಅವರು ಇನ್ನೂ ಒಂದು ನರಬಲಿ ಕಾರ್ಯವನ್ನು ಮಾಡಲು ನಿರ್ದೇಶಿಸಿದರು. ಸೆಪ್ಟೆಂಬರ್‌ನಲ್ಲಿ ಪದ್ಮಾಳನ್ನು ಇದೇ ರೀತಿ ಕೊಂದು ಹೂತು ಹಾಕಲಾಗಿತ್ತು. ದಂಪತಿಯ ಮನೆಯ ಹಿಂದೆ ಅಗೆದಿದ್ದ ನಾಲ್ಕು ಹೊಂಡಗಳಲ್ಲಿ ಇಬ್ಬರು ಮಹಿಳೆಯರ ದೇಹದ ಭಾಗಗಳನ್ನು ಹೂಳಲಾಗಿತ್ತು.

ಶಾಫಿಯ ಸೂಚನೆಯಂತೆ ಸಂತ್ರಸ್ತರ ದೇಹದ ಕೆಲವು ಭಾಗಗಳನ್ನು ಬೇಯಿಸಿ ತಿಂದಿದ್ದೇವೆ ಎಂದು ಆರೋಪಿ ಲೈಲಾ ಪೊಲೀಸರಿಗೆ ತಿಳಿಸಿದ್ದಾರೆ. ದಂಪತಿಗಳು ತಮ್ಮ ಧಾರ್ಮಿಕ ಕ್ರಿಯೆಯಲ್ಲಿ ಮಾಟಮಂತ್ರ ಮತ್ತು ವಾಮಾಚಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಪೊಲೀಸರ ತಂಡವು ಆರೋಪಿಗಳನ್ನು ಎಳಂತೂರಿನ ಶಂಕಿತ ಅಪರಾಧ ಸ್ಥಳಕ್ಕೆ ಅವರ ಮುಖವನ್ನು ಮುಚ್ಚಿಕೊಂಡು ಸಾಕ್ಷ್ಯ ಸಂಗ್ರಹಿಸಲು ಕರೆತಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+