ಕಲ್ಲು ತೂರಾಟಕ್ಕೆ ವಾಟ್ಸಾಪ್ ಗ್ರೂಪ್ ಗಳಿಂದ ನಿರ್ದೇಶನ!
ಪ್ರತಿಯೊಂದು ವಾಟ್ಸಾಪ್ ಗ್ರೂಪ್ ನ ಸದಸ್ಯರ ಸಂಖ್ಯೆ ಸರಾಸರಿ 250ರಷ್ಟಿದ್ದು, ಈ ಅಡ್ಮಿನ್ ಗಳ ವಿಚಾರಣೆ ನಡೆಸಿರುವ ಸೇನಾಧಿಕಾರಿಗಳು.
ಶ್ರೀನಗರ, ಏಪ್ರಿಲ್ 25: ಕಾಶ್ಮೀರ ಗಲಭೆಗಳಲ್ಲಿ ಕಲ್ಲು ತೂರಾಟ ನಡೆಸುವ ಯುವಕರಿಗೆ ಜನಪ್ರಿಯ ಸಂವಹನ ಅಪ್ಲಿಕೇಷನ್ ಆಗಿರುವ ವಾಟ್ಸಾಪ್ ನ ಗುಂಪುಗಳಿಂದ ನಿರ್ದೇಶನಗಳು ರವಾನೆಯಾಗುತ್ತಿವೆ ಎಂದು ಕಾಶ್ಮೀರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.[ಭಾರತದ ಮೂವರು RAW ಅಧಿಕಾರಿಗಳ ಬಂಧನ:ಪಾಕ್ ಹೇಳಿಕೆ]
ಹಾಗಾಗಿಯೇ, ಆ ವಾಟ್ಸಾಪ್ ಗ್ರೂಪ್ ಗಳನ್ನು ಪತ್ತೆ ಹಚ್ಚಿ ಶೇ. 90ರಷ್ಟು ಈವರೆಗೆ ನಿಷೇಧಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.[ಕಾಶ್ಮೀರ ಮರು ಮತದಾನ ಶೇ. 2 ! ಕಣಿವೆ ರಾಜ್ಯದ ಇತಿಹಾಸದಲ್ಲೇ ಅತಿ ಕಳಪೆ]

ತನಿಖೆಯಲ್ಲಿ, ಪ್ರತಿಯೊಂದು ವಾಟ್ಸಾಪ್ ಗ್ರೂಪ್ ನ ಸದಸ್ಯರ ಸಂಖ್ಯೆ ಸರಾಸರಿ 250ರಷ್ಟಿದೆ. ಇಂಥ ವಾಟ್ಸಾಪ್ ಗ್ರೂಪ್ ಗಳ ಅಡ್ಮಿನ್ ಗಳನ್ನು ಕರೆಸಿ ವಿಚಾರಣೆ ಮಾಡಿದ್ದೇವೆ. ತಕ್ಷಣವೇ ಅಂಥ ಗ್ರೂಪ್ ಗಳನ್ನು ನಿಷೇಧಿಸಲಾಗಿದೆ. ಇದರಿಂದ ಗಲಭೆಯ ತೀವ್ರತೆಯೂ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications