ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಂಧನ ಆದೇಶದ ವಿರುದ್ಧ ಸುಪ್ರೀಂಗೆ ನ್ಯಾ. ಕರ್ಣನ್ ಮೇಲ್ಮನವಿ
ಈಗಾಗಲೇ ಕೊಲ್ಕೊತ್ತಾ ಪೊಲೀಸರ ತಂಡಗಳು ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ನ್ಯಾಯಮೂರ್ತಿ ಸಿಎಸ್ ಕರ್ಣನ್ ಗಾಗಿ ಹುಡುಕಾಡುತ್ತಿವೆ. ಅವರಿನ್ನೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿಲ್ಲ.
ನವದೆಹಲಿ, ಮೇ 11: ಇಂದು ಕೊಲ್ಕೊತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿಎಸ್ ಕರ್ಣನ್ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲಿದ್ದಾರೆ. 6 ತಿಂಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಿದ ಆದೇಶವನ್ನು ಮರು ಪರಿಶೀಲನೆ ಕೋರಿ ಕರ್ಣನ್ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ.
ನನ್ನ ಮೇಲೆ ಆರೋಪಗಳನ್ನೇ ಪಟ್ಟಿ ಮಾಡದೆ ಅಪರಾಧಿ ಮಾಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಮೂರ್ತಿ ಕರ್ಣನ್ ತಮ್ಮ ಮೇಲ್ಮನವಿಯಲ್ಲಿ ತಮಗೆ ನೀಡಿರುವ ಶಿಕ್ಷೆಯನ್ನು ಮರುಪರಿಶೀಲನೆ ಮಾಡುವಂತೆ ಕೇಳಿಕೊಂಡಿದ್ದಾರೆ.
ಇದೇ ವೇಳೆ ಕರ್ಣನ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಅವರಿಗಾಗಿ ಕೊಲ್ಕೊತ್ತಾ ಪೊಲೀಸರು ಹುಡುಕಾಡುತ್ತಿದ್ದಾರೆ.
ಈಗಾಗಲೇ ಕೊಲ್ಕೊತ್ತಾ ಪೊಲೀಸರ ತಂಡಗಳು ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ನ್ಯಾಯಮೂರ್ತಿಗಾಗಿ ಹುಡುಕಾಡುತ್ತಿವೆ. ನ್ಯಾಯಮೂರ್ತಿ ಕರ್ಣನ್ ರನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳ ತಂಡವೊಂದು ಬುಧವಾರ ಚೆನ್ನೈಗೆ ಬಂದಿಳಿದಿತ್ತು.
Comments
English summary
Justice C S Karnan will move the Supreme Court today seeking recall of the order that sentenced him to six months in jail. Justice Karnan in his application says that the SC has erred by convicting him.
Story first published: Thursday, May 11, 2017, 9:28 [IST]