Get Updates
Get notified of breaking news, exclusive insights, and must-see stories!

ಬಿಜೆಪಿ ಲೋಕಸಭಾ ಟಿಕೆಟ್ ನಿರಾಕರಿಸಿದ ಶಾಸಕಿ

ರಾಂಚಿ, ಮಾರ್ಚ್ 13: ಲೋಕಸಭಾ ಚುನಾವಣೆ 2024ಯ ಟಿಕೆಟ್‌ಗಾಗಿ ನಾನು, ತಾಮುಂದೆ ಎನ್ನುವ ಹೊತ್ತಿನಲ್ಲಿ ಇಲ್ಲೊಬ್ಬ ಶಾಸಕರು ಬಿಜೆಪಿಯ ಟಿಕೆಟ್ ಆಫರ್ ಅನ್ನು ನಿರಾಕರಿಸಿದ್ದಾರೆ. ತಮಗೆ ಬಿಜೆಪಿ ಟಿಕೆಟ್ ಕೊಡುವುದಾಗಿ ತಿಳಿಸಿದರೂ ಸಹಿತ ಯಾವ ಕಾರಣಕ್ಕೆ ನಾನು ತಿರಸ್ಕರಿಸಿದೆ ಎಂಬುದನ್ನು ಸ್ವತಃ ಅವರೇ ತಿಳಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಾರ್ಖಂಡ್ ರಾಜ್ಯದ ಬಾರ್ಕಗಾಂವ್ (Barkagaon) ವಿಧಾನಸಭಾ ಕ್ಷೇತ್ರದ ಶಾಸಕಿ ಅಂಬಾ ಪ್ರಸಾದ್ (Amba Prasad) ಅವರು ಬಿಜೆಪಿಯ ಟಿಕೆಟ್ ಅನ್ನು ಕಡೆಗಣಿಸಿದ್ದಾರೆ. ಬಿಜೆಪಿ ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಗೆ ಶಾಸಕಿಗೆ ಆಫರ್ ನೀಡಿತ್ತು.

Jharkhand Congress MLA rejected BJP Lok Sabha Ticket Offer who Face ED Probe

ಜಾರ್ಖಂಡ್ ಕಾಂಗ್ರೆಸ್ ಶಾಸಕ ಅಂಬಾ ಪ್ರಸಾದ್ ಅವರು ಮೇಲೆ ಜಾರಿ ನಿರ್ದೇಶನಾಲಯವು (ED) ದಾಳಿ ನಡೆಸಿತ್ತು.

ದಾಳಿ ವೇಳೆ ಅವರ ಮನೆಯನ್ನು ತಡಕಾಡಿದ್ದ ಅಧಿಕಾರಿಗಳು ವಿಚಾರಣೆಗೆ ಕರೆಸಿದ್ದರು. ವಿಚಾರಣೆ ವೇಳೆ ಬೆಳಗ್ಗೆಯಿಂದ ಸಂಜೆವರೆಗೆ ಕಾಯಿಸಿದ್ದಾರೆ. ಇಡೀ ದಿನ ಚಿತ್ರಹಿಂಸೆ ಕೊಟ್ಟಿದ್ದಲ್ಲದೇ, ನನ್ನನ್ನು ಗಂಟೆಗಟ್ಟಲೇ ನಿಲ್ಲುವಂತೆ ಮಾಡಿದ್ದರು ಎಂಬುದನ್ನು ಸ್ಮರಿಸಿದ್ದಾರೆ.

ಟಿಕೆಟ್ ಪಡೆಯುವಂತೆ ಒತ್ತಡ

ಈ ಕಾರಣದಿಂದ ಶಾಸಕಿ ಬಿಜೆಪಿ ಟಿಕೆಟ್ ಕಡೆಗಣಿಸಿದ್ದಾರೆ ಎನ್ನಲಾಗಿದೆ. ನನಗೆ ಬಿಜೆಪಿಯಿಂದ ಹಜಾರಿಬಾಗ್ ಲೋಕಸಭಾ ಟಿಕೆಟ್ ನೀಡಲಾಯಿತು, ಆ ಬಗ್ಗೆ ನಾನು ತಲೆಕೆಡಿಕೊಳ್ಳಲಿಲ್ಲ. ಈ ಸಂಬಂಧ ನನ್ನ ಮೇಲೆ ಒತ್ತಡ ಹೇರಲಾಯಿತು ಎಂದು ಪ್ರಸಾದ್ ಅವರು ಮಂಗಳವಾರ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

Jharkhand Congress MLA rejected BJP Lok Sabha Ticket Offer who Face ED Probe

ಗೆಲ್ಲುವ ಅಭ್ಯರ್ಥಿ ಮೇಲೆ ಒತ್ತಡ ಸಹಜ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ದಿಂದ ಬಂದವರು ಬಿಜೆಪಿಯ ಟಿಕೆಟ್ ಪಡೆದು ಕ್ಷೇತ್ರದಿಂದ ಸ್ಪರ್ಧಿಸುವಂತೆ ನನ್ನ ಮೇಲೆ ಒತ್ತಡ ಹೇರಿದ್ದರು. ನಾನು ಅದಕ್ಕೆ ಕಿವಿಗೊಡಲಿಲ್ಲ. ಒತ್ತಡಕ್ಕೆ ಮಣಿಯಲಿಲ್ಲ. ಬಿಜೆಪಿ ನನ್ನನ್ನು ಹಜಾರಿಬಾಗ್‌ನಲ್ಲಿ ಪ್ರಬಲ ಅಭ್ಯರ್ಥಿ ತಿಳಿದುಕೊಂಡಿದ್ದಾರೆ. ಕಾರಣ ನಾವು (ಕಾಂಗ್ರೆಸ್) ನಿರಂತರವಾಗಿ ಬಾರ್ಕಗಾಂವ್ (Barkagaon) ಸ್ಥಾನಗಳನ್ನು ಗೆಲ್ಲುತ್ತೇವೆ. ನಾವು ಕಾಂಗ್ರೆಸ್‌ನಿಂದ ಬಂದವರು, ಬಿಜೆಪಿಯಿಂದಲ್ಲ. ಹೀಗಾಗಿ ಅವರ ಕೆಂಗಣ್ಣಿಗೆ ನಾನು ಗುರಿಯಾಗುವುದು ಸುಲಭ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ಮುಂಜಾನೆ, ಭೂ ಮತ್ತು ವರ್ಗಾವಣೆ-ಪೋಸ್ಟಿಂಗ್ ಹಗರಣಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಾಂಗ್ರೆಸ್ ಶಾಸಕನಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ದಾಳಿ ನಡೆದಿದೆ. ಅಂಬಾ ಪ್ರಸಾದ್ ಅವರ ರಾಂಚಿಯಲ್ಲಿರುವ ಮನೆ ಹಾಗೂ ಹಜಾರಿಬಾಗ್‌ನಲ್ಲಿರುವ ಅವರ ಮನೆಗಳ ಮೇಲೆ ಇಡಿ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿದ್ದರು.

ದಿನಪೂರ್ತಿ ಶಾಸಕಿ ಮನೆ ಶೋಧ

ಎಎನ್‌ಐ ವರದಿಗಳ ಪ್ರಕಾರ, ಶಾಸಕಿ ಮನೆಗಳು ಮತ್ತು ಆಸ್ತಿ ಮೇಲೆ ನಡೆದ ದಾಳಿ ಬೆಳಗ್ಗೆಯಿಂದ ಆರಂಭವಾಗಿ ತಡರಾತ್ರಿವರೆಗೆ ನಡೆಯಿತು.

2023 ರಲ್ಲಿ ಆಕೆಯ ವಿರುದ್ಧ ಕೇಂದ್ರ ಸಂಸ್ಥೆಯ ರಾಂಚಿ ವಲಯ ಕಚೇರಿಯಲ್ಲಿ ಹಣ ವರ್ಗಾವಣೆಯ ದೂರಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ದಾಳಿಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ನಾಯಕಿ ಮೇಲೆ ಇಡಿ ದಾಳಿ ನಡೆಯುವುದು ಗೊತ್ತಾಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ನಾಯಕರು, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆ ಹೊತ್ತಿನಲ್ಲಿ ದುರುದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+