Jharkhand Election 2024: ನವೆಂಬರ್ 10ರಂದು ಜಾರ್ಖಂಡ್ನಲ್ಲಿ ಮೋದಿ ರೋಡ್ಶೋ, ರ್ಯಾಲಿ
ರಾಂಚಿ ನವೆಂಬರ್ 9: ಜಾರ್ಖಂಡ್ನಲ್ಲಿ ಮತದಾರರನ್ನು ಸೆಳೆಯಲು ಚುನಾವಣಾ ಪ್ರಚಾರಕ್ಕಾಗಿ ಕೇಂದ್ರದ ಪ್ರಬಲ ನಾಯಕರು ಆಗಮಿಸಲಿದ್ದಾರೆ. ನವೆಂಬರ್ 10 ರಂದು ಪ್ರಧಾನಿ ನರೇಂದ್ರ ಮೋದಿ ಕೂಡ ಜಾರ್ಖಂಡ್ನಲ್ಲಿ ರೋಡ್ಶೋ ಮತ್ತು ರ್ಯಾಲಿಗಳನ್ನು ನಡೆಸಲಿದ್ದಾರೆ. ಮೋದಿ ಅವರು ನವೆಂಬರ್ 10ರಂದು ಬೊಕಾರೊ ಮತ್ತು ಗುಮ್ಲಾದ ಚಾಂದಂಕಿಯಾರಿಯಲ್ಲಿ ಸುಮಾರು ಐದು ಕಿಮೀ ಮೆಗಾ ರೋಡ್ಶೋ ನಡೆಸಲಿದ್ದಾರೆ.
ಇದು ಜಾರ್ಖಂಡ್ಗೆ ಅವರ ಎರಡನೇ ಭೇಟಿಯಾಗಿದೆ. ಮೋದಿ ರೋಡ್ಶೋ ಮೂಲಕ ರಾಜ್ಯದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಜಾರ್ಖಂಡ್ನಲ್ಲಿ ನವೆಂಬರ್ 13 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ನವೆಂಬರ್ 20 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ನವೆಂಬರ್ 23 ರಂದು ಮತ ಎಣಿಕೆ ಮಾಡಲಾಗುತ್ತದೆ.

ಮೋದಿಯವರ ರೋಡ್ ಶೋ ಓಟಿಸಿ (OTC) ಗ್ರೌಂಡ್ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ರೋಡ್ಶೋ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾದ ರಾಂಚಿಯ ನ್ಯೂ ಮಾರ್ಕೆಟ್ ಚೌಕ್ವರೆಗೆ ಸಾಗಲಿದೆ. ಅಲ್ಲದೆ ಈ ಸ್ಥಳ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದೆ. ಕೇಂದ್ರ ರಕ್ಷಣಾ ರಾಜ್ಯ ಸಚಿವ ಮತ್ತು ರಾಂಚಿ ಸಂಸದ ಸಂಜಯ್ ಸೇಠ್ ಮತ್ತು ಆರು ಬಾರಿ ರಾಂಚಿ ಶಾಸಕರಾದ ಸಿಪಿ ಸಿಂಗ್ ಅವರ ಕ್ಷೇತ್ರವಾಗಿದೆ. ಮೋದಿ ಆಗಮಿಸುವುದರಿಂದ ರ್ಯಾಲಿಯ ಮಾರ್ಗದ ಉದ್ದಕ್ಕೂ ಎಲ್ಲಾ ಮಹತ್ವದ ಸ್ಥಳಗಳು ಮತ್ತು ಬಹುಮಹಡಿ ಕಟ್ಟಡಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಬಿಜೆಪಿ ಅಭ್ಯರ್ಥಿ ಮತ್ತು ಜಾರ್ಖಂಡ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಮರ್ ಕುಮಾರ್ ಬೌರಿಗೆ ಮೋದಿ ಬೆಂಬಲವನ್ನು ನೀಡಲಿದ್ದಾರೆ. ಇನ್ನೂ ಚಂದಂಕಿಯರಿಗೆ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ. ಚಂದಂಕಿಯಾರಿಯು ಬಿಜೆಪಿ ಮತ್ತು ಅದರ ಹಿಂದಿನ ಮಿತ್ರ ಪಕ್ಷವಾದ ಎಜೆಎಸ್ಯು ಪಕ್ಷದ ನಡುವಿನ ಘರ್ಷಣೆಗೆ ಸಾಕ್ಷಿಯಾಗಿ ದೀರ್ಘಕಾಲ ಸ್ಪರ್ಧಿಸುವ ಸ್ಥಾನವಾಗಿದೆ.
ಮರುವಿಂಗಡಣೆಯ ನಂತರ ಬಿಜೆಪಿ ಸ್ಥಾನವನ್ನು ಉಳಿಸಿಕೊಂಡಿದೆ. ಮಾಜಿ ಚಂದಂಕಿಯಾರಿ ಶಾಸಕ ಮತ್ತು ಮಾಜಿ ಸಚಿವ ಉಮಾಕಾಂತ್ ರಜಾಕ್ ಅವರು ಎಜೆಎಸ್ಯುನಿಂದ ಜಾರ್ಖಂಡ್ ಮುಕ್ತಿ ಮೋರ್ಚಾಕ್ಕೆ ಇತ್ತೀಚೆಗೆ ಪಕ್ಷಾಂತರಗೊಂಡಿರುವುದು ಈ ಪ್ರದೇಶದ ರಾಜಕೀಯ ಡೈನಾಮಿಕ್ಸ್ ಅನ್ನು ಮತ್ತಷ್ಟು ಪುನರ್ರಚಿಸಿದೆ.
ಮತ್ತೊಂದೆಡೆ, ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಸುದರ್ಶನ್ ಭಗತ್ ಸ್ಪರ್ಧಿಸುತ್ತಿರುವ ಗುಮ್ಲಾ ನಿರ್ಣಾಯಕ ಕ್ಷೇತ್ರವಾಗಿದೆ. 2019ರ ಚುನಾವಣೆಯಲ್ಲಿ ಜೆಎಂಎಂ ಗುಮ್ಲಾ ಮತ್ತು ಇತರ ಹತ್ತಿರದ ಕ್ಷೇತ್ರಗಳನ್ನು ಪಡೆದುಕೊಂಡಿತು. ಬುಡಕಟ್ಟು ಪ್ರದೇಶಗಳಲ್ಲಿ ತನ್ನ ಕಾರ್ಯತಂತ್ರವನ್ನು ಪುನರ್ವಿಮರ್ಶಿಸಲು ಬಿಜೆಪಿಗೆ ಸಾಧ್ಯವಾಯಿತು.
ಮೋದಿ ಭೇಟಿಗೂ ಮುನ್ನ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವೆಂಬರ್ 9ರಂದು ಜಾರ್ಖಂಡ್ಗೆ ಭೇಟಿ ನೀಡಲಿದ್ದಾರೆ. ಛತ್ತರ್ಪುರ, ಹಜಾರಿಬಾಗ್ ಮತ್ತು ಪೊಟ್ಕಾದಲ್ಲಿ ಮೂರು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇತ್ತ ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ರಾಹುಲ್ ಗಾಂಧಿ ಅವರು ಮೊದಲ ಬಾರಿಗೆ ಜಾರ್ಖಂಡ್ಗೆ ಭೇಟಿ ನೀಡಲಿದ್ದಾರೆ. ಅವರು ನವೆಂಬರ್ 8 ಮತ್ತು 9 ರಂದು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಜ್ಯ ಚುನಾವಣೆಯನ್ನು ಬಹಿಷ್ಕರಿಸಿ- ಪಿಎಲ್ಎಫ್ಐ
ಬಹಳ ಸಮಯದ ನಂತರ ಜಾರ್ಖಂಡ್ನಲ್ಲಿ ತಮ್ಮ ಅಸ್ತಿತ್ವವನ್ನು ನೋಂದಾಯಿಸಿರುವ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ಎಫ್ಐ), ಸಿಪಿಐ (ಮಾವೋವಾದಿ) ನ ಒಂದು ಶಾಖೆ, ಜಾರ್ಖಂಡ್ನಲ್ಲಿ ಅಸೆಂಬ್ಲಿ ಚುನಾವಣೆಯನ್ನು ಬಹಿಷ್ಕರಿಸುವಂತೆ ರಾಂಚಿ ಮತ್ತು ಖುಂಟಿ ಬಳಿ ಪೋಸ್ಟರ್ಗಳನ್ನು ಹಾಕಿದೆ. ಪೊಲೀಸರು ಮತ್ತು ಆಡಳಿತಕ್ಕೆ ಸವಾಲು ಹಾಕಿ ಪಿಎಲ್ಎಫ್ಐ ಪೋಸ್ಟರ್ಗಳನ್ನು ಹಾಕಿದೆ. ಪಿಎಲ್ಎಫ್ಐನ ಕೇಂದ್ರೀಯ ಸಮಿತಿಯು ಸರ್ಕಾರ ಜನರಿಗೆ ಸೇವೆ ಸಲ್ಲಿಸಲು ವಿಫಲವಾಗಿದೆ ಎಂದು ಹೇಳಿದೆ.
-
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications