ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತ ವಿಧಾನಸಭಾ ಚುನಾವಣೆ ಸೆಪ್ಟೆಂಬರ್ 18ರಂದು ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಇಂದು ಎರಡನೇ ಹಂತದ ಚುನಾವಣೆ ಕೂಡ ಶಾಂತಿಯುತವಾಗಿ ಮುಕ್ತಾಯವಾಗಿದೆ, 56% ಮತದಾನವಾಗಿದೆ. 26 ಕ್ಷೇತ್ರಗಳಲ್ಲಿ ಮತದಾನ ಮುಗಿದಿದ್ದು, ಇದೀಗ ಕೊನೆಯ ಹಂತದ ಚುನಾವಣೆಯತ್ತ ಪಕ್ಷಗಳು ಗಮನ ಹರಿಸಿವೆ. ಅಕ್ಟೋಬರ್ 01ರಂದು ಮೂರನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ದಿನಾಂಕಗಳಲ್ಲಿ ಚುನಾವಣಾ ಆಯೋಗವು ಕೆಲವು ಬದಲಾವಣೆಗಳನ್ನು ಮಾಡಿದೆ. ಚುನಾವಣಾ ಫಲಿತಾಂಶವನ್ನು ಅಕ್ಟೋಬರ್ 4 ರ ಬದಲು ಅಕ್ಟೋಬರ್ 8 ರಂದು ಪ್ರಕಟಿಸಲಾಗುವುದು. 10 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಎರಡನೇ ಹಂತದ ಚುನಾವಣೆಗೆ ಮುಂಜಾಗ್ರತಾ ಕ್ರಮವಾಗಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
Sep 25, 2024, 9:19 pm IST
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ 2ನೇ ಹಂತದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. 56% ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಜಮ್ಮು ಭಾಗದಲ್ಲಿ ಶ್ರೀ ಮಾತಾ ವೈಷ್ಣೋ ದೇವಿ ಕ್ಷೇತ್ರದಲ್ಲಿ 75.29% ರಷ್ಟು ಮತದಾನವಾಗಿದೆ. ಕಾಶ್ಮೀರ ಭಾಗದಲ್ಲಿ ಖಾನ್ಸಾಹಿಬ್ ಕ್ಷೇತ್ರದಲ್ಲಿ 67.70% ರಷ್ಟು ಮತದಾನ ನಡೆದಿದೆ.
Sep 25, 2024, 6:58 pm IST
ಜಮ್ಮು ಕಾಶ್ಮೀರದಲ್ಲಿ ಶೇಕಡಾ 54 ರಷ್ಟು ಮತದಾನ
ಜಮ್ಮು ಮತ್ತು ಕಾಶ್ಮೀರವು ಇಂದು ಎರಡನೇ ಹಂತ ಮತದಾನಕ್ಕೆ ಸಾಕ್ಷಿಯಾಗಿದೆ. ಸಂಜೆ 5 ಗಂಟೆ ಹೊತ್ತಿಗೆ ಶೇಕಡಾ 54% ಮತದಾನ ಆಗಿದೆ. ಸದ್ಯ ಆರು ಜಿಲ್ಲೆಗಳ 26 ವಿಧಾನಸಭಾ ಕ್ಷೇತ್ರಗಳಲ್ಲಿ ಸುಸೂತ್ರ ಮತದಾನ ನಡೆದಿದೆ. ಕಳೆದ ಭಾರಿ ಮೊದಲ ಹಂತದ ಮತದಾನದಲ್ಲಿ 64ರಷ್ಟು ಮತದಾನ ನಡೆದಿತ್ತು. ಮೂರನೇ ಹಂತದ ಮತದಾನವು ಬಾಕಿ ಇದೆ.
Sep 25, 2024, 5:49 pm IST
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯನ್ನು ವಿದೇಶಿ ರಾಜತಾಂತ್ರಿಕರ ತಂಡ ಪರಿಶೀಲನೆ ಮಾಡಿರುವುದು ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು, 15 ಜನರ ತಂಡ ಪರಿಶೀಲನೆ ಮಾಡಿದೆ. ಈ ನಿಯೋಗವು ರಾಜ್ಯದ ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿದೆ
Sep 25, 2024, 5:49 pm IST
ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಮೊದಲು ರಾಜ್ಯತ್ವವನ್ನು ಮರುಸ್ಥಾಪಿಸಬೇಕೆಂಬ ಆಶಯ ಇತ್ತು.ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಜನರು ರಾಜ್ಯತ್ವವನ್ನು ಮರುಸ್ಥಾಪಿಸಿದ ನಂತರ ಚುನಾವಣೆ ನಡೆಯಬೇಕೆಂದು ಬಯಸಿದ್ದರು. ಇದು ಆಗಲಿಲ್ಲ. ಚುನಾವಣೆ ಬಳಿಕ ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸಬೇಕೆಂದು ಅವರು ಆಗ್ರಹಿಸಿದರು. ಈ ಕುರಿತು ನಾವು ಪ್ರಧಾನಿ ಮೋದಿಯವರ ಮೇಲೆ ಒತ್ತಡ ಹೇರುತ್ತೇವೆ ಎಂದು ರಾಹುಲ್ ಗಾಂಧಿ ಅವರು ಸಾರ್ವಜನಿ ಸಭೆಯಲ್ಲಿ ಹೇಳಿದರು.
Sep 25, 2024, 5:48 pm IST
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಎರಡನೇ ಹಂತದ ಚುನಾವಣೆಯಲ್ಲಿ ಶ್ರೀನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗಿಂತ ಕಡಿಮೆ ಮತದಾನವಾಗಿದೆ ಎಂದು ಶ್ರೀನಗರ ಮಾಜಿ ಮೇಯರ್ ಜುನೈದ್ ಅಜೀಮ್ ಮಟ್ಟು ಹೇಳಿದ್ದಾರೆ. ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಲೋಕಸಭಾ ಚುನಾವಣೆಯಲ್ಲೇ ಹೆಚ್ಚಿನ ಮತದಾನವಾಗಿತ್ತು ಎಂದು ಹೇಳಿದ್ದಾರೆ.
Sep 25, 2024, 4:37 pm IST
ಮಧ್ಯಾಹ್ನ 3 ಗಂಟೆಯವರೆಗೆ ಶೇ.46.12ರಷ್ಟು ಮತದಾನ..
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಯವರೆಗೆ ಶೇ.46.12ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗ ಈ ಮಾಹಿತಿ ನೀಡಿದೆ. ಮತದಾನ ಕೇಂದ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಜಮ್ಮುವಿನ ಗುಲಾಬ್ಗಢ (ಮೀಸಲಾತಿ) ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇಕಡಾ 65.57) ಮತದಾನವಾಗಿದೆ ಮತ್ತು ಪೂಂಚ್ ಹವೇಲಿಯಲ್ಲಿ 62.91 ಶೇಕಡಾ ಮತದಾನವಾಗಿದೆ
Sep 25, 2024, 3:30 pm IST
ಜಮ್ಮು ಕಾಶ್ಮೀರದಲ್ಲಿ 2.5 ಮಿಲಿಯನ್ ಮತದಾರರು
ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಆರು ಜಿಲ್ಲೆಗಳಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಇಂದು 2.5 ಮಿಲಿಯನ್ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಈ ಆರು ಜಿಲ್ಲೆಗಳ ಪೈಕಿ ಮೂರು ಜಿಲ್ಲೆಗಲ ಜನರು ಕಾಶ್ಮೀರ ಕಣಿವೆಯಲ್ಲಿ ಮತದಾನ ಮಾಡಿದರೆ, ಉಳಿದ ಮೂರು ಜಿಲ್ಲೆಗಳು ಜಮ್ಮು ವ್ಯಾಪ್ತಿಗೆ ಬರಲಿದ್ದು, ಆಯಾ ಮತದಾನ ಕೇಂದ್ರಗಳಲ್ಲಿ ಅವರು ಮತ ಚಲಾಯಿಸಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು ಶೇ.61ರಷ್ಟು ಮತದಾನ ನಡೆದಿತ್ತು.
Sep 25, 2024, 3:21 pm IST
ಬಿಜೆಪಿಯ ಗಿಮಿಕ್ಗಳನ್ನು ಜನರು ನಂಬುವುದಿಲ್ಲ: ಸುಪ್ರಿಯಾ
ಕಳೆದ 10 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣ ದುರಾಡಳಿತ ಮತ್ತು ನಿರುದ್ಯೋಗವಿದೆ. ಜನರು ಬಿಜೆಪಿಯ ಗಿಮಿಕ್ಗಳನ್ನು ಇನ್ನು ಮುಂದೆ ನಂಬುವುದಿಲ್ಲ ಮತ್ತು ಅವರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಹೇಳಿದರು.
#WATCH | Chandigarh: On J&K elections, Congress leader Supriya Shrinate says, "Breakthrough elections are going on in Jammu and Kashmir. J&K is electing for its future. There has been complete mismanagement and unemployment in Jammu and Kashmir for the last 10 years... Their… pic.twitter.com/iViWhyF1i9
ಜಮ್ಮು ಮತ್ತು ಕಾಶ್ಮೀರದ ಎರಡನೇ ಹಂತದ ಚುನಾವಣೆಯಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆಯವರೆಗೆ ಶೇ.36.93ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಬಿಗಿ ಭದ್ರತೆಯ ನಡುವೆ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಮಧ್ಯಾಹ್ನ 1 ಗಂಟೆಯವರೆಗೆ ಜಮ್ಮು ಪ್ರದೇಶದ ಗುಲಾಬ್ಗಢ (ಎಸ್ಟಿ) ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇಕಡಾ 53.94) ಮತದಾನವಾಗಿದ್ದರೆ, ಪೂಂಚ್ ಹವೇಲಿಯಲ್ಲಿ ಶೇ.51.57 ಮತದಾನವಾಗಿದೆ.
Sep 25, 2024, 2:05 pm IST
ಕಾಂಗ್ರೆಸ್ ಜಮ್ಮುವಿನತ್ತ ಗಮನ ಹರಿಸಬೇಕು ಮತ್ತು ರಾಹುಲ್ ಗಾಂಧಿ ಜಮ್ಮುವಿನಲ್ಲಿ ಚುನಾವಣಾ ಪ್ರಚಾರ ನಡೆಸಬೇಕು ಎಂದು ಒಮರ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಕೆಎನ್ಸಿ ಪಕ್ಷದ ನಾಯಕ ಒಮರ್ ಅಬ್ದುಲ್ಲಾ, ಕಾಶ್ಮೀರದಲ್ಲಿ ಪ್ರಚಾರ ಮುಗಿಸಿದ ಬಳಿಕ ರಾಹುಲ್ ಗಾಂಧಿ ಜಮ್ಮುವಿನತ್ತ ಗಮನ ಹರಿಸುತ್ತಾರೆ ಎಂದುಕೊಂಡಿದ್ದೇನೆ. ಕಾಶ್ಮೀರದಲ್ಲಿ ಕಾಂಗ್ರೆಸ್ ಏನು ಮಾಡುತ್ತದೆ ಎನ್ನುವುದು ಮುಖ್ತವಲ್ಲ, ಜಮ್ಮುವಿನಲ್ಲಿ ಏನು ಮಾಡುತ್ತದೇ ಎನ್ನುವುದೇ ಮುಖ್ಯ ಎಂದರು. ಜಮ್ಮುವಿನಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಪ್ರಚಾರವನ್ನು ಕಾಂಗ್ರೆಸ್ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Sep 25, 2024, 1:26 pm IST
ಕಾಂಗ್ರೆಸ್ ಜಮ್ಮುವಿನತ್ತ ಗಮನ ಹರಿಸಬೇಕು ಮತ್ತು ರಾಹುಲ್ ಗಾಂಧಿ ಜಮ್ಮುವಿನಲ್ಲಿ ಚುನಾವಣಾ ಪ್ರಚಾರ ನಡೆಸಬೇಕು ಎಂದು ಒಮರ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಕೆಎನ್ಸಿ ಪಕ್ಷದ ನಾಯಕ ಒಮರ್ ಅಬ್ದುಲ್ಲಾ, ಕಾಶ್ಮೀರದಲ್ಲಿ ಪ್ರಚಾರ ಮುಗಿಸಿದ ಬಳಿಕ ರಾಹುಲ್ ಗಾಂಧಿ ಜಮ್ಮುವಿನತ್ತ ಗಮನ ಹರಿಸುತ್ತಾರೆ ಎಂದುಕೊಂಡಿದ್ದೇನೆ. ಕಾಶ್ಮೀರದಲ್ಲಿ ಕಾಂಗ್ರೆಸ್ ಏನು ಮಾಡುತ್ತದೆ ಎನ್ನುವುದು ಮುಖ್ತವಲ್ಲ, ಜಮ್ಮುವಿನಲ್ಲಿ ಏನು ಮಾಡುತ್ತದೇ ಎನ್ನುವುದೇ ಮುಖ್ಯ ಎಂದರು. ಜಮ್ಮುವಿನಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಪ್ರಚಾರವನ್ನು ಕಾಂಗ್ರೆಸ್ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Sep 25, 2024, 1:16 pm IST
ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ಮತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಆಗಮಿಸುತ್ತಿದ್ದಾರೆ. ಇದು ಹೊಸ ಇತಿಹಾಸ ನಿರ್ಮಾಣ ಮಾಡಲಿದೆ. ಉತ್ಸಾಹದಿಂದಲೇ ರಾಜ್ಯದಲ್ಲಿ ಮತದಾನವಾಗುತ್ತಿರುವುದು ಸಂತಸ ತಂದಿದೆ. ಹಲವು ಕಡೆ ಮತದಾನ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಆದರೆ ಅಂತಹ ಪ್ರದೇಶದಲ್ಲಿಯೂ ಜನರು ಮತದಾನ ಮಾಡಲು ಆಗಮಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೇಗೆ ಶಾಂತಿಯುತವಾಗಿ ಮತದಾನವಾಗುತ್ತಿದೆ ಎಂದು ವಿಶ್ವವೇ ನೋಡುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
Sep 25, 2024, 12:46 pm IST
ಜಮ್ಮು ಕಾಶ್ಮೀರದಲ್ಲಿ ಚುನಾವಣೆಯ ಹಿನ್ನೆಲೆ ಇಂದು ವಿದೇಶಿ ನಿಯೋಗವು ಹಲವು ಮತಗಟ್ಟೆಗಳನ್ನು ವೀಕ್ಷಿಸಿದೆ. ಜಮ್ಮು ಕಾಶ್ಮೀರದ ಲಾಲ್ ಚೌಕ್ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಮೀರ ಕಡಲ್ ಮತ್ತು ಚಿನಾರ್ ಬಾಗ್ನಲ್ಲಿರುವ ಎಸ್ಪಿ ಕಾಲೇಜಿನ ಮತಗಟ್ಟೆಗಳಿಗೆ ಭೇಟಿ ನೀಡಿದೆ. ಅಲ್ಲಿದ್ದ ವಿಶಿಷ್ಟವಾದ ಪಿಂಕ್ ಮತಗಟ್ಟೆಗೆ ಭೇಟಿ ನೀಡಿ, ಅದನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿರುವುದನ್ನು ಕಂಡು ಮೆಚ್ಚುಗೆ ಕೂಡ ವ್ಯಕ್ತಪಡಿಸಿದೆ.
Sep 25, 2024, 12:15 pm IST
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಮತದಾನವನ್ನು ವೀಕ್ಷಿಸಲು ವಿದೇಶಿ ರಾಜತಾಂತ್ರಿಕರನ್ನು ಆಹ್ವಾನಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮತ್ತು ಜೆಕೆಎನ್ಸಿ ಅಭ್ಯರ್ಥಿ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ. ಹೊರಗಿನವರು ಜಮ್ಮು ಮತ್ತು ಕಾಶ್ಮೀರ ಬಗ್ಗೆ ಮಾತನಾಡಿದಾಗ ಇದು ನಮ್ಮ ಆಂತರಿಕ ವಿಷಯ ಎನ್ನುವ ಕೇಂದ್ರ ಸರ್ಕಾರ, ಇದೀಗ ವಿದೇಶಿಯರನ್ನು ಕರೆಸುವ ಅಗತ್ಯವೇನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
Sep 25, 2024, 11:56 am IST
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಕುರಿತು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಪ್ರತಿಕ್ರಿಯೆ ನೀಡಿದ್ದು, "ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಯಲ್ಲಿ ಗೊಂದಲವಿದೆ. ಗುರಿ ಮತ್ತು ದೂರದೃಷ್ಟಿ ಎರಡೂ ಸಹ ಇಲ್ಲ. ಜನರು ಪ್ರತಿವಾದಿ, ಪಾಕಿಸ್ತಾನ ಪರ ಪಕ್ಷಗಳಿಗೆ ಪಾಠ ಕಲಿಸುತ್ತಾರೆ. ಒಮರ್ ಅಬ್ದುಲ್ಲಾ ಎರಡು ಸೀಟುಗಳಲ್ಲಿ ಕಣಕ್ಕಿಳಿದಿದ್ದಾರೆ ಮತ್ತು ಕಾಂಗ್ರೆಸ್ ರಾಜ್ಯಕ್ಕೆ ಏನೂ ಮಾಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
Sep 25, 2024, 11:28 am IST
ಮತದಾರರೊಬ್ಬರ ಶಾಕಿಂಗ್ ಹೇಳಿಕೆ
#WATCH | Jammu and Kashmir: Returning Officer 27-Budgam, Afroza says, "A voter had come to cast his vote but he said that his vote has already been cast. I checked the marked electoral copy and it was not the case. He did not have a voter slip and the PO will definitely ask. He… pic.twitter.com/PEXcbFEKRs
ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು ಹಲವು ಪ್ರದೇಶಗಳು ಸೂಕ್ಷ್ಮವಾಗಿವೆ. ಕಾಶ್ಮೀರದ ಬಹುತೇಕ ಸ್ಥಾನಗಳಲ್ಲಿ ಪ್ರತ್ಯೇಕತಾವಾದಿಗಳ ಪ್ರಭಾವ ಕಂಡುಬಂದಿದೆ. ಇವುಗಳಲ್ಲಿ ಲಾಲ್ ಚೌಕ್, ಈದ್ಗಾ, ಖನ್ಯಾರ್, ಜಡಿಬಾಲ್, ಹಜರತ್ಬಾಲ್ ಇತ್ಯಾದಿಗಳು ಸೇರಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಇತರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
Sep 25, 2024, 11:21 am IST
ಹತ್ತು ವರ್ಷಗಳಿಂದ ಜನರು ಚುನಾವಣೆಗಾಗಿ ಕಾಯುತ್ತಿದ್ದರು
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಎರಡನೇ ಹಂತದ ಚುನಾವಣೆಯಲ್ಲಿ ಚರಾರಿ ಶರೀಫ್ ಅಸೆಂಬ್ಲಿ ಕ್ಷೇತ್ರದ PDP ಅಭ್ಯರ್ಥಿ ಗುಲಾಂ ನಬಿ ಲೋನ್ ಹಂಜುರಾ ಅವರು ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕಳೆದ ಹತ್ತು ವರ್ಷಗಳಿಂದ ಜನರು ಚುನಾವಣೆಗಾಗಿ ಕಾಯುತ್ತಿದ್ದರು ಹಾಗೂ ಮತದಾರರು ತುಂಬಾ ಉತ್ಸಾಹದಿಂದ ಇದ್ದಾರೆ ಎಂದು ಹೇಳಿದರು.
#WATCH | Budgam, J&K: PDP candidate from Charari Sharief Assembly constituency Ghulam Nabi Lone Hanjura casts his vote at a polling booth, in the second phase of J&K Assembly elections.
He says, "There is a good atmosphere here, the people have been waiting for elections for the… pic.twitter.com/qiVNCbS5eM
ಬುಧವಾರ ಜಮ್ಮು ಮತ್ತು ಕಾಶ್ಮೀರದ 26 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 26 ಕ್ಷೇತ್ರಗಳಲ್ಲಿ 15 ಕ್ಷೇತ್ರ ಕಾಶ್ಮೀರ, 11 ಜಮ್ಮು ವಿಭಾಗದಲ್ಲಿವೆ. 2014ರ ಚುನಾವಣೆಯಲ್ಲಿ ಈ 26 ಕ್ಷೇತ್ರಗಳಲ್ಲಿ ಪಿಡಿಪಿ)ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪ್ರಬಲ ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಪಿಡಿಪಿ 10, ನ್ಯಾಷನಲ್ ಕಾನ್ಫರೆನ್ಸ್ 8 ಸೀಟುಗಳಲ್ಲಿ ಗೆದ್ದಿದ್ದವು.
Sep 25, 2024, 10:05 am IST
9 ಗಂಟೆ ವೇಳೆಗೆ 10.22% ಮತದಾನ
ಜಮ್ಮು ಮತ್ತು ಕಾಶ್ಮೀರದ 26 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ 10.22ರಷ್ಟು ಮತದಾನವಾಗಿದೆ. ಪೂಂಚ್ನಲ್ಲಿ 14.41% ರಷ್ಟು ಮತದಾನವಾಗಿದ್ದು, ರಿಯಾಸಿ 13.37%, ರಜೌರಿ 12.71%, ಗಂದರ್ ಬಾಲ್ 12.61% ಮತ್ತು ಬುದ್ಗಾಮ್ನಲ್ಲಿ 10.91% ರಷ್ಟು ಮತದಾನವಾಗಿದೆ. ಶ್ರೀನಗರದಲ್ಲಿ ಈವರೆಗೂ ಕೇವಲ 4.70% ಯಷ್ಟು ಮಾತ್ರ ಮತದಾನವಾಗಿದೆ.
Sep 25, 2024, 9:58 am IST
ನಿಮ್ಮ ಹಕ್ಕು, ಸಂತೋಷ ಮತ್ತು ಸಮೃದ್ಧಿಗಾಗಿ ಮತ ಚಲಾಯಿಸಿ: ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ ನನ್ನ ಸಹೋದರ ಸಹೋದರಿಯರೇ, ಇಂದು ಎರಡನೇ ಹಂತದ ಮತದಾನ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಿಮ್ಮ ಹಕ್ಕು ಚಲಾಯಿಸಿ. ಸಮೃದ್ಧಿ ಮತ್ತು ಆಶೀರ್ವಾದಕ್ಕಾಗಿ ಮತ ಚಲಾಯಿಸಿ, ಭಾರತಕ್ಕಾಗಿ ಮತ ಚಲಾಯಿಸಿ ಎಂದು ಬರೆದಿದ್ದಾರೆ.
Sep 25, 2024, 9:49 am IST
ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ಮತ್ತು ರಜೋರಿ ಜಿಲ್ಲೆಯ ನೌಶೇರಾ ಕ್ಷೇತ್ರದ ಅಭ್ಯರ್ಥಿ ರವೀಂದರ್ ರೈನಾ ಮತದಾನ ಮಾಡಿದ ಬಳಿಕ ತಾಯಿಯ ಆಶೀರ್ವಾದವನ್ನು ಪಡೆದರು. ರಾಜ್ಯದ 26 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ 90 ವಿಧಾನಸಭಾ ಕ್ಷೇತ್ರಗಳಿದ್ದು ಮೂರು ಹಂತದಲ್ಲಿ ಮತದಾನ ನಡೆಯುತ್ತಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
Sep 25, 2024, 9:40 am IST
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದ ರಾಕೇಶ್ ಕುಮಾರ್ ಅವರು, ಜಮ್ಮು & ಕಾಶ್ಮೀರ ಚುನಾವಣೆಯಲ್ಲಿ ಮತದಾನ ಮಾಡಿದರು.
#WATCH | J&K Assembly Elections | Bronze medal-winning Paralympian archer Rakesh Kumar casts his vote at a polling booth in Katra. pic.twitter.com/QatGro9slQ
ಗಂದೇರ್ಬಾಲ್ ವಿಧಾನಸಭಾ ಕ್ಷೇತ್ರದ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಅಭ್ಯರ್ಥಿ ಕೈಸರ್ ಸುಲ್ತಾನ್ ಗನೈ ಅವರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಮತ ಚಲಾಯಿಸಿದರು. ಬಳಿಕ ಅವರು ಶಾಹಿ ಹಚ್ಚಿದ ಬೆರಳನ್ನು ಬೆರಳನ್ನು ತೋರಿಸುವ ಮೂಲಕ ಗಮನ ಸೆಳೆದರು.
#WATCH | Ganderbal, J&K: Democratic Progressive Azad Party candidate from the Ganderbal Assembly constituency, Qaiser Sultan Ganaie shows his inked finger after casting his vote for the Jammu and Kashmir Assembly Elections. pic.twitter.com/p87YNZVROi
ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿಯ ಉಪಾಧ್ಯಕ್ಷ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ ಚುನಾವಣಾ ಕಣದಲ್ಲಿ. ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ. ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಹಾಗೂ ಬುದ್ಗಾಮ್ ಕ್ಷೇತ್ರದಿಂದ ಸ್ಪರ್ಧೆ.
Sep 25, 2024, 9:10 am IST
ಚರಾರ್-ಇ-ಶರೀಫ್ ವಿಧಾನಸಭಾ ಕ್ಷೇತ್ರದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್ಸಿ) ಪಕ್ಷದ ಅಭ್ಯರ್ಥಿ ಅಬ್ದುಲ್ ರಹೀಮ್ ರಾಥರ್ ಅವರು ಮತ ಚಲಾಯಿಸಿದರು. ಜಮ್ಮು ಕಾಶ್ಮೀರದ ಸಾರ್ವಜನಿಕರು 10 ವರ್ಷಗಳ ನಂತರ ಮತದಾನ ಮಾಡುತ್ತಿರುವುದು ಸಂತೋಷದ ವಿಷಯ. ಕಳೆದ 10 ವರ್ಷಗಳಿಂದ ಸಾರ್ವಜನಿಕರು ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.
Sep 25, 2024, 9:02 am IST
ಜಮ್ಮು & ಕಾಶ್ಮೀರ ಚುನಾವಣೆಯಲ್ಲಿ ಮತದಾನ ಮಾಡಿದ 102 ವರ್ಷದ ಹಿರಿಯ ವ್ಯಕ್ತಿ ಹೇಳಿದ್ದೇನು?
#WATCH | J&K: Hagi Karam Din Bhat, who says he is 102 years old, casts his vote for the second phase of Assembly elections at a polling centre in Reasi.
He says, "If a good government is formed a lot of work will be done...The youth should get a good education, businesses… pic.twitter.com/pWfZ1aRxGN
ಜಮ್ಮು ಮತ್ತು ಕಾಶ್ಮೀರದ ಪೂಂಚ್ನ ಮೆಂದಾರ್ ಕ್ಷೇತ್ರದಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಜೆಕೆಎನ್ಸಿ ಅಭ್ಯರ್ಥಿ ಜಾವೇದ್ ರಾಣಾ, "ಬಹಳ ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪನೆಯಾಗಿದೆ. ಮತದಾರರು ಜೆಕೆಎನ್ಸಿ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡುತ್ತೇನೆ. 2019ರ ಆಗಸ್ಟ್ 5ರಂದು ತೆಗೆದುಕೊಂಡ ತೀರ್ಮಾನ ತಪ್ಪು ಎಂದು ನಾವು ಈಗ ತಿಳಿಸಬೇಕಿದೆ" ಎಂದು ಹೇಳಿದರು.
Sep 25, 2024, 8:30 am IST
102 ವರ್ಷದ ಹಗಿ ಕರಮ್ ದಿನ್ ಭಟ್ ಅವರು ಜಮ್ಮುಕಾಶ್ಮೀರದ ಎರಡನೇ ಹಂತದ ವಿಧಾನಸಭೆ ಚುನಾವಣೆಗೆ ರಿಯಾಸಿಯ ಮತದಾನ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಒಳ್ಳೆಯ ಸರ್ಕಾರ ರಚನೆಯಾದರೆ ಸಾಕಷ್ಟು ಕೆಲಸಗಳು ನಡೆಯಲಿವೆ. ಇಲ್ಲಿನ ಯುವಕರು ಉತ್ತಮ ಶಿಕ್ಷಣ ಪಡೆಯಬೇಕು. ಉದ್ದಿಮೆಗಳು ಹೆಚ್ಚಾಗಿ ನಡೆಯಬೇಕು. ಈ ಕಾರಣಕ್ಕಾಗಿ ಎಲ್ಲರೂ ಬಂದು ಮತ ಚಲಾಯಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
Sep 25, 2024, 8:24 am IST
ಮತದಾನ ಮಾಡಿದ ಬಳಿಕ ಸಸಿ ನೆಟ್ಟ ಮತದಾರರು
#WATCH | J&K Assembly elections: First three voters at a polling station in Bagoo Rampora of Ganderbal constituency, plant saplings after casting their vote.
JKNC vice president Omar Abdullah is contesting from here where he is facing a contest from PDP's Bashir Ahmad Mir. pic.twitter.com/69S7MYpyS1
26 ಕ್ಷೇತ್ರಗಳಲ್ಲಿ ಮತದಾನ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಜೌರಿ ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.
6:19 AM, 25 Sep
ಮೊದಲ ಹಂತದ ಮತದಾನದಲ್ಲಿ 61.38% ಮತದಾನ
ಮೊದಲ ಹಂತದ ಚುನಾವಣೆಯಲ್ಲಿ ಶೇಕಡಾ 61.38 ರಷ್ಟು ಮತದಾನವಾಗಿದ್ದು, ಎರಡನೇ ಹಂತದ ಮತದಾನದಲ್ಲಿ ಇದೇ ರೀತಿಯ ಮತದಾನ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಅಕ್ಟೋಬರ್ 1 ರಂದು ಮೂರನೇ ಹಂತದ ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.
6:24 AM, 25 Sep
ಜಮ್ಮು- ಕಾಶ್ಮೀರದ ಅರ್ಧದಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳು
ದಶಕದ ನಂತರ ನಡೆಯುತ್ತಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅರ್ಧದಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ.
6:38 AM, 25 Sep
ಪೂಂಚ್ನ ಮತಗಟ್ಟೆಯಲ್ಲಿ ಮತದಾನಕ್ಕೆ ಸಿದ್ಧತೆ
ಇಂದು ನಡೆಯಲಿರುವ ಎರಡನೇ ಹಂತದ ಮತದಾನಕ್ಕೂ ಮುನ್ನ ಪೂಂಚ್ನ ಮತಗಟ್ಟೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕೇಂದ್ರಾಡಳಿತ ಪ್ರದೇಶದಲ್ಲಿ ಎರಡನೇ ಹಂತದ ಮತದಾನ ಇಂದು 6 ಜಿಲ್ಲೆಗಳ 26 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದ್ದು, 25.78 ಲಕ್ಷ ಅರ್ಹ ಮತದಾರರಿದ್ದಾರೆ.
7:14 AM, 25 Sep
ಎರಡನೇ ಹಂತದ ಚುನಾವಣೆಗೆ ಮತದಾನ ಆರಂಭ
#WATCH | J&K Assembly elections: People queue up outside a polling station in Balhama, Srinagar to vote as polling for the second phase of elections begins.
ಮುಕ್ತವಾಗಿ ಮತ್ತು ಭಯವಿಲ್ಲದೆ ಮತ ಚಲಾಯಿಸಿ: ರವೀಂದರ್ ರೈನಾ
ಇಂದು ಎರಡನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಉತ್ತಮ ಮತದಾನ ಮತ್ತು ಮತದಾನದ ಹೊಸ ದಾಖಲೆಗಳು ಸ್ಥಾಪನೆಯಾಗಲಿ ಎಂದು ನಾನು ಭಾವಿಸುತ್ತೇನೆ. ಇದು ಪ್ರಜಾಪ್ರಭುತ್ವಕ್ಕೆ ಸಂತೋಷದ ವಿಷಯವಾಗಿದೆ. ನಾನು ಜಮ್ಮು ಮತ್ತು ಕಾಶ್ಮೀರ ಜನರಿಗೆ ಮನವಿ ಮಾಡುತ್ತೇನೆ. ಮುಕ್ತವಾಗಿ ಮತ್ತು ಭಯವಿಲ್ಲದೆ ಮತ ಚಲಾಯಿಸಿ ಎಂದು ರವೀಂದರ್ ರೈನಾ ಹೇಳಿದರು.
#WATCH | Ravinder Raina says, "Today, voting for the second phase of elections will take place. I hope that there will be good voting and new records of voting will be set. This is a matter of joy for democracy. I urge the people of J&K to vote freely and without fear. Vote for… https://t.co/duHBxFAr4tpic.twitter.com/kohTbnrZNC
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಗೆ ಇಂದು ಎರಡನೇ ಹಂತದ ಮತದಾನ ನಡೆಯಲಿದೆ. ಎಲ್ಲಾ ಮತದಾರರು ತಮ್ಮ ಮತ ಚಲಾಯಿಸಿ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ತಮ್ಮ ಪ್ರಮುಖ ಪಾತ್ರವನ್ನು ವಹಿಸುವಂತೆ ನಾನು ಮನವಿ ಮಾಡುತ್ತೇನೆ. ಈ ಸಂದರ್ಭದಲ್ಲಿ ಮೊದಲ ಬಾರಿಗೆ ಮತ ಹಾಕಲು ಹೊರಟಿರುವ ಎಲ್ಲಾ ಯುವಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಜಮ್ಮು-ಕಾಶ್ಮೀರದ ರಿಯಾಸಿ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ದೀಕ್ಷಾ ಕಲುರಿಯಾ ಮತ ಚಲಾಯಿಸಿದರು. ನಾನು ಮೊದಲ ಬಾರಿಗೆ ನನ್ನ ಮತವನ್ನು ನನಗೇ ಚಲಾಯಿಸಿದ್ದೇನೆ. ʼನಾನು ತುಂಬಾ ಉತ್ಸಾಹ ಮತ್ತು ಸಂತೋಷದಿಂದ ಇದ್ದೇನೆ. ನಾನು ಮುಂದೆ ಸಾಗಲು ಮತ್ತು ಜನರಿಗಾಗಿ ಕೆಲಸ ಮಾಡಲು ಬಯಸುತ್ತೇನೆʼ ಎಂದು ದೀಕ್ಷಾ ಹೇಳಿದ್ದಾರೆ.
8:10 AM, 25 Sep
ನಾನು ಮತ ಹಾಕಿದ್ದೇನೆ. ಇಲ್ಲಿ ಹಲವಾರು ಸಮಸ್ಯೆಗಳಿವೆ. ಆ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ನಾನು ಮತ ಹಾಕಿದ್ದೇನೆ ... 10 ವರ್ಷಗಳ ನಂತರ ಚುನಾವಣೆ ನಡೆಯುತ್ತಿರುವುದು ನಮಗೆ ಸಂತೋಷವಾಗಿದೆ ಎಂದು ಮತದಾರ ಗುಲಾಮ್ ಹಸನ್ ಸಫಿ ಹೇಳಿದ್ದಾರೆ.
#WATCH | J&K Assembly elections: A voter, Gulam Hasan Safi says, "I have voted. There are several issues here. I have voted for the resolution of all those issues...We are happy that the elections are being held after 10 years. This should have happened earlier. It is good that… https://t.co/fB3GjtJYLqpic.twitter.com/kas6gVzK1r
#WATCH | J&K Assembly elections: First three voters at a polling station in Bagoo Rampora of Ganderbal constituency, plant saplings after casting their vote.
JKNC vice president Omar Abdullah is contesting from here where he is facing a contest from PDP's Bashir Ahmad Mir. pic.twitter.com/69S7MYpyS1
102 ವರ್ಷದ ಹಗಿ ಕರಮ್ ದಿನ್ ಭಟ್ ಅವರು ಜಮ್ಮುಕಾಶ್ಮೀರದ ಎರಡನೇ ಹಂತದ ವಿಧಾನಸಭೆ ಚುನಾವಣೆಗೆ ರಿಯಾಸಿಯ ಮತದಾನ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಒಳ್ಳೆಯ ಸರ್ಕಾರ ರಚನೆಯಾದರೆ ಸಾಕಷ್ಟು ಕೆಲಸಗಳು ನಡೆಯಲಿವೆ. ಇಲ್ಲಿನ ಯುವಕರು ಉತ್ತಮ ಶಿಕ್ಷಣ ಪಡೆಯಬೇಕು. ಉದ್ದಿಮೆಗಳು ಹೆಚ್ಚಾಗಿ ನಡೆಯಬೇಕು. ಈ ಕಾರಣಕ್ಕಾಗಿ ಎಲ್ಲರೂ ಬಂದು ಮತ ಚಲಾಯಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
8:44 AM, 25 Sep
ಜಮ್ಮು ಮತ್ತು ಕಾಶ್ಮೀರದ ಪೂಂಚ್ನ ಮೆಂದಾರ್ ಕ್ಷೇತ್ರದಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಜೆಕೆಎನ್ಸಿ ಅಭ್ಯರ್ಥಿ ಜಾವೇದ್ ರಾಣಾ, "ಬಹಳ ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪನೆಯಾಗಿದೆ. ಮತದಾರರು ಜೆಕೆಎನ್ಸಿ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡುತ್ತೇನೆ. 2019ರ ಆಗಸ್ಟ್ 5ರಂದು ತೆಗೆದುಕೊಂಡ ತೀರ್ಮಾನ ತಪ್ಪು ಎಂದು ನಾವು ಈಗ ತಿಳಿಸಬೇಕಿದೆ" ಎಂದು ಹೇಳಿದರು.
9:02 AM, 25 Sep
ಜಮ್ಮು & ಕಾಶ್ಮೀರ ಚುನಾವಣೆಯಲ್ಲಿ ಮತದಾನ ಮಾಡಿದ 102 ವರ್ಷದ ಹಿರಿಯ ವ್ಯಕ್ತಿ ಹೇಳಿದ್ದೇನು?
#WATCH | J&K: Hagi Karam Din Bhat, who says he is 102 years old, casts his vote for the second phase of Assembly elections at a polling centre in Reasi.
He says, "If a good government is formed a lot of work will be done...The youth should get a good education, businesses… pic.twitter.com/pWfZ1aRxGN
ಚರಾರ್-ಇ-ಶರೀಫ್ ವಿಧಾನಸಭಾ ಕ್ಷೇತ್ರದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್ಸಿ) ಪಕ್ಷದ ಅಭ್ಯರ್ಥಿ ಅಬ್ದುಲ್ ರಹೀಮ್ ರಾಥರ್ ಅವರು ಮತ ಚಲಾಯಿಸಿದರು. ಜಮ್ಮು ಕಾಶ್ಮೀರದ ಸಾರ್ವಜನಿಕರು 10 ವರ್ಷಗಳ ನಂತರ ಮತದಾನ ಮಾಡುತ್ತಿರುವುದು ಸಂತೋಷದ ವಿಷಯ. ಕಳೆದ 10 ವರ್ಷಗಳಿಂದ ಸಾರ್ವಜನಿಕರು ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.
9:24 AM, 25 Sep
ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿಯ ಉಪಾಧ್ಯಕ್ಷ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ ಚುನಾವಣಾ ಕಣದಲ್ಲಿ. ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ. ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಹಾಗೂ ಬುದ್ಗಾಮ್ ಕ್ಷೇತ್ರದಿಂದ ಸ್ಪರ್ಧೆ.
9:34 AM, 25 Sep
ಗಂದೇರ್ಬಾಲ್ ವಿಧಾನಸಭಾ ಕ್ಷೇತ್ರದ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಅಭ್ಯರ್ಥಿ ಕೈಸರ್ ಸುಲ್ತಾನ್ ಗನೈ ಅವರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಮತ ಚಲಾಯಿಸಿದರು. ಬಳಿಕ ಅವರು ಶಾಹಿ ಹಚ್ಚಿದ ಬೆರಳನ್ನು ಬೆರಳನ್ನು ತೋರಿಸುವ ಮೂಲಕ ಗಮನ ಸೆಳೆದರು.
#WATCH | Ganderbal, J&K: Democratic Progressive Azad Party candidate from the Ganderbal Assembly constituency, Qaiser Sultan Ganaie shows his inked finger after casting his vote for the Jammu and Kashmir Assembly Elections. pic.twitter.com/p87YNZVROi
ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ಮತ್ತು ರಜೋರಿ ಜಿಲ್ಲೆಯ ನೌಶೇರಾ ಕ್ಷೇತ್ರದ ಅಭ್ಯರ್ಥಿ ರವೀಂದರ್ ರೈನಾ ಮತದಾನ ಮಾಡಿದ ಬಳಿಕ ತಾಯಿಯ ಆಶೀರ್ವಾದವನ್ನು ಪಡೆದರು. ರಾಜ್ಯದ 26 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ 90 ವಿಧಾನಸಭಾ ಕ್ಷೇತ್ರಗಳಿದ್ದು ಮೂರು ಹಂತದಲ್ಲಿ ಮತದಾನ ನಡೆಯುತ್ತಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
9:58 AM, 25 Sep
ನಿಮ್ಮ ಹಕ್ಕು, ಸಂತೋಷ ಮತ್ತು ಸಮೃದ್ಧಿಗಾಗಿ ಮತ ಚಲಾಯಿಸಿ: ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ ನನ್ನ ಸಹೋದರ ಸಹೋದರಿಯರೇ, ಇಂದು ಎರಡನೇ ಹಂತದ ಮತದಾನ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಿಮ್ಮ ಹಕ್ಕು ಚಲಾಯಿಸಿ. ಸಮೃದ್ಧಿ ಮತ್ತು ಆಶೀರ್ವಾದಕ್ಕಾಗಿ ಮತ ಚಲಾಯಿಸಿ, ಭಾರತಕ್ಕಾಗಿ ಮತ ಚಲಾಯಿಸಿ ಎಂದು ಬರೆದಿದ್ದಾರೆ.
10:05 AM, 25 Sep
9 ಗಂಟೆ ವೇಳೆಗೆ 10.22% ಮತದಾನ
ಜಮ್ಮು ಮತ್ತು ಕಾಶ್ಮೀರದ 26 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ 10.22ರಷ್ಟು ಮತದಾನವಾಗಿದೆ. ಪೂಂಚ್ನಲ್ಲಿ 14.41% ರಷ್ಟು ಮತದಾನವಾಗಿದ್ದು, ರಿಯಾಸಿ 13.37%, ರಜೌರಿ 12.71%, ಗಂದರ್ ಬಾಲ್ 12.61% ಮತ್ತು ಬುದ್ಗಾಮ್ನಲ್ಲಿ 10.91% ರಷ್ಟು ಮತದಾನವಾಗಿದೆ. ಶ್ರೀನಗರದಲ್ಲಿ ಈವರೆಗೂ ಕೇವಲ 4.70% ಯಷ್ಟು ಮಾತ್ರ ಮತದಾನವಾಗಿದೆ.
10:46 AM, 25 Sep
ಬುಧವಾರ ಜಮ್ಮು ಮತ್ತು ಕಾಶ್ಮೀರದ 26 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 26 ಕ್ಷೇತ್ರಗಳಲ್ಲಿ 15 ಕ್ಷೇತ್ರ ಕಾಶ್ಮೀರ, 11 ಜಮ್ಮು ವಿಭಾಗದಲ್ಲಿವೆ. 2014ರ ಚುನಾವಣೆಯಲ್ಲಿ ಈ 26 ಕ್ಷೇತ್ರಗಳಲ್ಲಿ ಪಿಡಿಪಿ)ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪ್ರಬಲ ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಪಿಡಿಪಿ 10, ನ್ಯಾಷನಲ್ ಕಾನ್ಫರೆನ್ಸ್ 8 ಸೀಟುಗಳಲ್ಲಿ ಗೆದ್ದಿದ್ದವು.
11:21 AM, 25 Sep
ಹತ್ತು ವರ್ಷಗಳಿಂದ ಜನರು ಚುನಾವಣೆಗಾಗಿ ಕಾಯುತ್ತಿದ್ದರು
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಎರಡನೇ ಹಂತದ ಚುನಾವಣೆಯಲ್ಲಿ ಚರಾರಿ ಶರೀಫ್ ಅಸೆಂಬ್ಲಿ ಕ್ಷೇತ್ರದ PDP ಅಭ್ಯರ್ಥಿ ಗುಲಾಂ ನಬಿ ಲೋನ್ ಹಂಜುರಾ ಅವರು ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕಳೆದ ಹತ್ತು ವರ್ಷಗಳಿಂದ ಜನರು ಚುನಾವಣೆಗಾಗಿ ಕಾಯುತ್ತಿದ್ದರು ಹಾಗೂ ಮತದಾರರು ತುಂಬಾ ಉತ್ಸಾಹದಿಂದ ಇದ್ದಾರೆ ಎಂದು ಹೇಳಿದರು.
#WATCH | Budgam, J&K: PDP candidate from Charari Sharief Assembly constituency Ghulam Nabi Lone Hanjura casts his vote at a polling booth, in the second phase of J&K Assembly elections.
He says, "There is a good atmosphere here, the people have been waiting for elections for the… pic.twitter.com/qiVNCbS5eM
ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು ಹಲವು ಪ್ರದೇಶಗಳು ಸೂಕ್ಷ್ಮವಾಗಿವೆ. ಕಾಶ್ಮೀರದ ಬಹುತೇಕ ಸ್ಥಾನಗಳಲ್ಲಿ ಪ್ರತ್ಯೇಕತಾವಾದಿಗಳ ಪ್ರಭಾವ ಕಂಡುಬಂದಿದೆ. ಇವುಗಳಲ್ಲಿ ಲಾಲ್ ಚೌಕ್, ಈದ್ಗಾ, ಖನ್ಯಾರ್, ಜಡಿಬಾಲ್, ಹಜರತ್ಬಾಲ್ ಇತ್ಯಾದಿಗಳು ಸೇರಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಇತರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
11:28 AM, 25 Sep
ಮತದಾರರೊಬ್ಬರ ಶಾಕಿಂಗ್ ಹೇಳಿಕೆ
#WATCH | Jammu and Kashmir: Returning Officer 27-Budgam, Afroza says, "A voter had come to cast his vote but he said that his vote has already been cast. I checked the marked electoral copy and it was not the case. He did not have a voter slip and the PO will definitely ask. He… pic.twitter.com/PEXcbFEKRs
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಕುರಿತು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಪ್ರತಿಕ್ರಿಯೆ ನೀಡಿದ್ದು, "ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಯಲ್ಲಿ ಗೊಂದಲವಿದೆ. ಗುರಿ ಮತ್ತು ದೂರದೃಷ್ಟಿ ಎರಡೂ ಸಹ ಇಲ್ಲ. ಜನರು ಪ್ರತಿವಾದಿ, ಪಾಕಿಸ್ತಾನ ಪರ ಪಕ್ಷಗಳಿಗೆ ಪಾಠ ಕಲಿಸುತ್ತಾರೆ. ಒಮರ್ ಅಬ್ದುಲ್ಲಾ ಎರಡು ಸೀಟುಗಳಲ್ಲಿ ಕಣಕ್ಕಿಳಿದಿದ್ದಾರೆ ಮತ್ತು ಕಾಂಗ್ರೆಸ್ ರಾಜ್ಯಕ್ಕೆ ಏನೂ ಮಾಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
12:15 PM, 25 Sep
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಮತದಾನವನ್ನು ವೀಕ್ಷಿಸಲು ವಿದೇಶಿ ರಾಜತಾಂತ್ರಿಕರನ್ನು ಆಹ್ವಾನಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮತ್ತು ಜೆಕೆಎನ್ಸಿ ಅಭ್ಯರ್ಥಿ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ. ಹೊರಗಿನವರು ಜಮ್ಮು ಮತ್ತು ಕಾಶ್ಮೀರ ಬಗ್ಗೆ ಮಾತನಾಡಿದಾಗ ಇದು ನಮ್ಮ ಆಂತರಿಕ ವಿಷಯ ಎನ್ನುವ ಕೇಂದ್ರ ಸರ್ಕಾರ, ಇದೀಗ ವಿದೇಶಿಯರನ್ನು ಕರೆಸುವ ಅಗತ್ಯವೇನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
12:46 PM, 25 Sep
ಜಮ್ಮು ಕಾಶ್ಮೀರದಲ್ಲಿ ಚುನಾವಣೆಯ ಹಿನ್ನೆಲೆ ಇಂದು ವಿದೇಶಿ ನಿಯೋಗವು ಹಲವು ಮತಗಟ್ಟೆಗಳನ್ನು ವೀಕ್ಷಿಸಿದೆ. ಜಮ್ಮು ಕಾಶ್ಮೀರದ ಲಾಲ್ ಚೌಕ್ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಮೀರ ಕಡಲ್ ಮತ್ತು ಚಿನಾರ್ ಬಾಗ್ನಲ್ಲಿರುವ ಎಸ್ಪಿ ಕಾಲೇಜಿನ ಮತಗಟ್ಟೆಗಳಿಗೆ ಭೇಟಿ ನೀಡಿದೆ. ಅಲ್ಲಿದ್ದ ವಿಶಿಷ್ಟವಾದ ಪಿಂಕ್ ಮತಗಟ್ಟೆಗೆ ಭೇಟಿ ನೀಡಿ, ಅದನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿರುವುದನ್ನು ಕಂಡು ಮೆಚ್ಚುಗೆ ಕೂಡ ವ್ಯಕ್ತಪಡಿಸಿದೆ.
1:16 PM, 25 Sep
ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ಮತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಆಗಮಿಸುತ್ತಿದ್ದಾರೆ. ಇದು ಹೊಸ ಇತಿಹಾಸ ನಿರ್ಮಾಣ ಮಾಡಲಿದೆ. ಉತ್ಸಾಹದಿಂದಲೇ ರಾಜ್ಯದಲ್ಲಿ ಮತದಾನವಾಗುತ್ತಿರುವುದು ಸಂತಸ ತಂದಿದೆ. ಹಲವು ಕಡೆ ಮತದಾನ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಆದರೆ ಅಂತಹ ಪ್ರದೇಶದಲ್ಲಿಯೂ ಜನರು ಮತದಾನ ಮಾಡಲು ಆಗಮಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೇಗೆ ಶಾಂತಿಯುತವಾಗಿ ಮತದಾನವಾಗುತ್ತಿದೆ ಎಂದು ವಿಶ್ವವೇ ನೋಡುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
1:26 PM, 25 Sep
ಕಾಂಗ್ರೆಸ್ ಜಮ್ಮುವಿನತ್ತ ಗಮನ ಹರಿಸಬೇಕು ಮತ್ತು ರಾಹುಲ್ ಗಾಂಧಿ ಜಮ್ಮುವಿನಲ್ಲಿ ಚುನಾವಣಾ ಪ್ರಚಾರ ನಡೆಸಬೇಕು ಎಂದು ಒಮರ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಕೆಎನ್ಸಿ ಪಕ್ಷದ ನಾಯಕ ಒಮರ್ ಅಬ್ದುಲ್ಲಾ, ಕಾಶ್ಮೀರದಲ್ಲಿ ಪ್ರಚಾರ ಮುಗಿಸಿದ ಬಳಿಕ ರಾಹುಲ್ ಗಾಂಧಿ ಜಮ್ಮುವಿನತ್ತ ಗಮನ ಹರಿಸುತ್ತಾರೆ ಎಂದುಕೊಂಡಿದ್ದೇನೆ. ಕಾಶ್ಮೀರದಲ್ಲಿ ಕಾಂಗ್ರೆಸ್ ಏನು ಮಾಡುತ್ತದೆ ಎನ್ನುವುದು ಮುಖ್ತವಲ್ಲ, ಜಮ್ಮುವಿನಲ್ಲಿ ಏನು ಮಾಡುತ್ತದೇ ಎನ್ನುವುದೇ ಮುಖ್ಯ ಎಂದರು. ಜಮ್ಮುವಿನಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಪ್ರಚಾರವನ್ನು ಕಾಂಗ್ರೆಸ್ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2:05 PM, 25 Sep
ಕಾಂಗ್ರೆಸ್ ಜಮ್ಮುವಿನತ್ತ ಗಮನ ಹರಿಸಬೇಕು ಮತ್ತು ರಾಹುಲ್ ಗಾಂಧಿ ಜಮ್ಮುವಿನಲ್ಲಿ ಚುನಾವಣಾ ಪ್ರಚಾರ ನಡೆಸಬೇಕು ಎಂದು ಒಮರ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಕೆಎನ್ಸಿ ಪಕ್ಷದ ನಾಯಕ ಒಮರ್ ಅಬ್ದುಲ್ಲಾ, ಕಾಶ್ಮೀರದಲ್ಲಿ ಪ್ರಚಾರ ಮುಗಿಸಿದ ಬಳಿಕ ರಾಹುಲ್ ಗಾಂಧಿ ಜಮ್ಮುವಿನತ್ತ ಗಮನ ಹರಿಸುತ್ತಾರೆ ಎಂದುಕೊಂಡಿದ್ದೇನೆ. ಕಾಶ್ಮೀರದಲ್ಲಿ ಕಾಂಗ್ರೆಸ್ ಏನು ಮಾಡುತ್ತದೆ ಎನ್ನುವುದು ಮುಖ್ತವಲ್ಲ, ಜಮ್ಮುವಿನಲ್ಲಿ ಏನು ಮಾಡುತ್ತದೇ ಎನ್ನುವುದೇ ಮುಖ್ಯ ಎಂದರು. ಜಮ್ಮುವಿನಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಪ್ರಚಾರವನ್ನು ಕಾಂಗ್ರೆಸ್ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.