ಅಬ್ಬಬ್ಬಾ ಇಸ್ರೋ, ಒಂದೇ ಬಾರಿಗೆ 22 ಉಪಗ್ರಹ ಉಡಾವಣೆ
ತಿರುವನಂತಪುರ, ಮಾರ್ಚ್, 29: ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ) ಪ್ರತಿ ದಿನ ಹೊಸ ಹೊಸ ಸಾಧನೆಗಳ ಗರಿಯನ್ನು ತನ್ನದಾಗಿಸಿಕೊಳ್ಳುತ್ತಿದೆ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಉಪಗ್ರಹ ಉಡಾವಣೆಗೆ ಭಾರತದ ಬಳಿ ಬರುತ್ತಿವೆ. ಮಂಗಳಯಾನದ ಯಶಸ್ಸಿನ ನಂತರ ಇಸ್ರೋ ಬಳಿ ನೆರವು ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಿದೆ.[ಮಂಗಳನ ಅಂಗಳದಲ್ಲಿ ಭಾರತ-ಅಮೆರಿಕ ಜುಗಲ್ ಬಂದಿ]
ಮೇ ತಿಂಗಳಲ್ಲಿ ಇಡೀ ಒಂದೇ ರಾಕೆಟ್ ಬಳಸಿ ಇಸ್ರೋ 22 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳಿಸಲಿದೆ. ಇವುಗಳಲ್ಲಿ ಮೈಕ್ರೋ ಹಾಗೂ ನ್ಯಾನೋ ಉಪಗ್ರಹಗಳು ಸೇರಿವೆ. ಅತಿ ಕಡಿಮೆ ವೆಚ್ಚದಲ್ಲಿ ಮಂಗಳನ ಅಂಗಳಕ್ಕೆ ಉಪಗ್ರಹ ಕಳಿಸಿದ ಸಾಧನೆ ಮೆರೆದ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಬಳಿ ರಷ್ಯಾ ಸೇರಿದಂತೆ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ನೆರವು ಕೇಳಿಕೊಂಡು ಬರುತ್ತಿವೆ. ತಿಂಗಳ ಹಿಂದೆ ರಷ್ಯಾದ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿ ಸೈ ಎನಿಸಿಕೊಂಡಿತ್ತು.

ಪಿಎಸ್ಎಲ್ವಿ ಸಿ34
ಭಾರತದ ರಿಮೋಟ್ ಸೆನ್ಸಿಂಗ್ ಕಾರ್ಟೊಸ್ಯಾಟ್ 2ಸಿ ಸೇರಿದಂತೆ ಅಮೆರಿಕ, ಕೆನಡಾ, ಇಂಡೋನೇಷ್ಯಾ ಮತ್ತು ಜರ್ಮನಿಗೆ ಸೇರಿದಂತೆ ಒಟ್ಟು 22 ಉಪಗ್ರಹಗಳನ್ನು ಪಿಎಸ್ಎಲ್ವಿ ಸಿ34 ಹೊತ್ತೊಯ್ಯಲಿದೆ.

ಉಪಗ್ರಹಗಳ ತೂಕ
22 ಉಪಗ್ರಹಗಳ ಪೈಕಿ 4ರಿಂದ 30 ಕೆ.ಜಿ ವಿಭಾಗಕ್ಕೆ ಸೇರಿದ 17 ನ್ಯಾನೋ ಹಾಗೂ 85ರಿಂದ 130ಕೆ.ಜಿ ವಿಭಾಗಕ್ಕೆ ಸೇರಿದ ನಾಲ್ಕು ಮೈಕ್ರೋ ಉಪಗ್ರಹಗಳು ಸೇರಿದಂತೆ ಭಾರತದ ಕಾರ್ಟೊಸ್ಯಾಟ್ ಇರಲಿದೆ.

ಹೊಸ ದಾಖಲೆ
ಇಸ್ರೋ 2008 ರಲ್ಲಿ ಒಂದೇ ಸಾರಿ 10 ಉಪಗ್ರಹಗಳನ್ನು ಉಡಾವಣೆ ಮಾಡಿರುವುದು ಇದುವರೆಗಿನ ದಾಖಲೆಯಾಗಿತ್ತು. ಈಗ ಹೊಸ ಸಾಧನೆ ಮಾಡಲು ವೇದಿಕೆ ಸಿದ್ಧವಾಗಿದೆ.

ಎಲ್ಲಿಂದ ಉಡಾವಣೆ
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆ ಮಾಡಲಾಗುತ್ತದೆ.

ನಾಸಾ ಏನು ಕಡಿಮೆ ಇಲ್ಲ
013ನೇ ಸಾಲಿನಲ್ಲಿ ನಾಸಾ ಏಕಕಾಲಕ್ಕೆ 29 ಉಪಗ್ರಹಗಳನ್ನು ಉಡಾವಣೆ ಮಾಡಿರುವುದು ಸದ್ಯದ ದಾಖಲೆ.

ಯಾವ ಉಪಗ್ರಹಗಳು
ಇಸ್ರೋ ಉಡಾವಣೆ ಮಾಡಲಿರುವ ಕೆಲವು ಮಹತ್ವದ ವಿದೇಶ ಉಪಗ್ರಹಗಳು: ಲ್ಯಾಪಾನ್ ಎ3 - ಇಂಡೋನೇಷ್ಯಾ, ಬೈರೊಸ್ - ಜರ್ಮನಿ, ಸ್ಕೈಸ್ಯಾಟ್ ಜೆನ್ 2-1 - ಅಮೆರಿಕ, ಎಂವಿವಿ - ಜರ್ಮನಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications