Get Updates
Get notified of breaking news, exclusive insights, and must-see stories!

ಶಾರುಖ್ ಅಸಹಿಷ್ಣುತೆ ಬಗ್ಗೆ ಯಾರು ಏನು ಹೇಳಿದರು?

ನವದೆಹಲಿ, ನ.06: ಕಿಂಗ್ ಖಾನ್ ಶಾರುಖ್ ಖಾನ್ ಅವರ ಅಸಹಿಷ್ಣುತೆ ಹೇಳಿಕೆ ಪರ-ವಿರೋಧ ಪ್ರತಿಕ್ರಿಯೆಗಳು ಬರುತ್ತಲೇ ಇವೆ. ಜನ ಸಾಮಾನ್ಯರು, ಗಣ್ಯರು, ಸಿನಿಮಾ ಮಂದಿ ಜೊತೆಗೆ ಉಗ್ರ ಸಂಘಟನೆಯ ಮುಖ್ಯಸ್ಥರು ಕೂಡಾ ಶಾರುಖ್ ಹೇಳಿಕೆ ಬಗ್ಗೆ ಅನಿಸಿಕೆ, ಅಭಿಪ್ರಾಯ, ವಾದ ಮಂಡಿಸಿದ್ದಾರೆ. ಕೆಲ ಪ್ರಮುಖ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ...

ಶಾರುಖ್ ಖಾನ್ ಅವರು ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದೇ ತಡ, ಬಿಜೆಪಿ ಮುಖಂಡರು ಒಬ್ಬರಾದ ಮೇಲೆ ಒಬ್ಬರು ಶಾರುಖ್ ವಿರುದ್ಧ ಹರಿಹಾಯ್ದಿದ್ದಾರೆ. ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಗೂ ಶಾರುಖ್ ಖಾನ್ ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದರು. ಇದಾದ ಬಳಿಕ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿ ಹಫೀಜ್ ಮಹಮದ್ ಸಯೀದ್, ಖಾನ್‌ರನ್ನು ಪಾಕಿಸ್ಥಾನಕ್ಕೆ ಬರುವಂತೆ ಆಹ್ವಾನಿಸಿ ಟ್ವೀಟ್ ಮಾಡಿದ್ದರು.

ದೇಶದಲ್ಲಿ ಹೆಚ್ಚಾಗುತ್ತಿರುವ ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿದ್ದ ಬಾಲಿವುಡ್​ ಬಾದ್​ ಶಾ ಶಾರುಕ್ ಖಾನ್​ ವಿರುದ್ಧ ಯೋಗ ಗುರು ಬಾಬಾ ರಾಮ್​ದೇವ್​ ತಿರುಗಿ ಬಿದ್ದಿದ್ದರು. ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗಿಯಾ ಅವರು ಶಾರುಖ್ ಖಾನ್ ಅವರ ವಿರುದ್ಧ ಕಿಡಿಕಾರಿ ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಬಿಜೆಪಿ ಹಿರಿಯ ಮುಖಂಡರು ಈ ಬಗ್ಗೆ ನಮಗೇನು ಗೊತ್ತಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ.

ಶಾರುಖ್ ಅವರು ಮುಸ್ಲಿಮ್ ಆಗಿರುವುದಕ್ಕೆ ಅವರ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ. ಶಾರುಖ್ ಅವರದ್ದು ಸ್ವಾತಂತ್ರ್ಯ ಹೋರಾಟಗಾರರ ವಂಶ ಎಂದು ಕಾಂಗ್ರೆಸ್ ಹೇಳಿದೆ.

ಬಾಬಾ ರಾಮದೇವ್

ಬಾಬಾ ರಾಮದೇವ್

ಶಾರುಖ್ ​ ಖಾನ್ ಅವರ​ದು ಕೇವಲ ಕೆಲಸಕ್ಕೆ ಬಾರದ ಮಾತುಗಳಷ್ಟೇ. ಅವರಿಗೆ ನಿಜವಾಗಿಯೂ ಧಾರ್ಮಿಕ ಅಸಹಿಷ್ಣುತೆಯೆ ಬಗ್ಗೆ ಕಾಳಜಿ ಇದ್ದರೆ ಅವರಿಗೆ ಸಿಕ್ಕಿರುವ ಪ್ರಶಸ್ತಿಗಳನೆಲ್ಲಾ ವಾಪಸ್​ ಮಾಡಲಿ.

ಶಾರುಕ್ ಅವರಿಗೆ ಲಭಿಸಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್​ ನೀಡಲು ಚಿಂತಿಸಿದರೆ ಅವರಿಗೆ ಪದ್ಮಶ್ರೀ ಸಿಕ್ಕಿದ ಬಳಿಕ ಅವರು ಸಂಪಾದಿಸಿದ ಹಣವನ್ನೆಲ್ಲಾ ಪ್ರಧಾನ ಮಂತ್ರಿ ನಿಧಿಗೆ ವಾಪಸ್​ ನೀಡಲಿ.

ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್

ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್

"Mujhe lagta hai Shah Rukh Khan ki bhasha mein aur Hafiz Saeed ki bhaasha mein koi antar nahi hai" ಇಬ್ಬರ ಭಾಷೆ ಪ್ರಯೋಗದಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದಿದ್ದಾರೆ.

ಬಿಜೆಪಿ ಮುಖಂಡ ಕೈಲಾಸ್ ವಿಜಯ್ ವರ್ಗಿಯಾ

ಬಿಜೆಪಿ ಮುಖಂಡ ಕೈಲಾಸ್ ವಿಜಯ್ ವರ್ಗಿಯಾ

ಶಾರುಖ್ ಖಾನ್ ಅವರು ಭಾರತದಲ್ಲಿ ನೆಲೆಸಿದ್ದಾರೆ. ಆದರೆ, ಅವರ ಆತ್ಮ ಪಾಕಿಸ್ತಾನದಲ್ಲಿದೆ. ಆತನ ಸಿನಿಮಾಗಳು ಇಲ್ಲಿ ಕೋಟಿಗಟ್ಟಲೇ ಗಳಿಸುತ್ತವೆ ಅದರೆ, ಭಾರತದಲ್ಲಿ ಅಸಹಿಷ್ಣುತೆ ಎದ್ದು ಕಾಣುತ್ತಿದೆಯಂತೆ ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಮುಖಂಡ ವಿಜಯ್ ವರ್ಗಿಯಾ ಕಿಡಿಕಾರಿದ್ದರು.

ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ

ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ

ಶಾರುಖ್ ರನ್ನು ಪಾಕಿಸ್ತಾನಿ ಐಎಸ್ ಐ ಏಜೆಂಟ್ ಎಂದು ಕರೆದಿದ್ದರು. ಶಾರುಖ್ ಖಾನ್ ಗೆ ನೀಡಿದ ಪ್ರಶಸ್ತಿಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದರು.

ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ

ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ

ಜಾರಿ ನಿರ್ದೇಶನಾಲಯದಿಂದ ಶಾರುಖ್ ಖಾನ್ ಅವರ ಕ್ರಿಕೆಟ್ ತಂಡಕ್ಕೆ ನೋಟಿಸ್ ಜಾರಿಯಾದ ಮೇಲೆ(ಅಕ್ಟೋಬರ್ 26), ಶಾರುಖ್ ಅವರಿಗೆ ಅಸಹಿಷ್ಣುತೆ ಕಾಣುತ್ತಿದೆ. ನವೆಂಬರ್ 1 ಹಾಗೂ 2 ರಂದು ಈ ರೀತಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದ್ದ ಅಸಹಿಷ್ಣುತೆ ಬಗ್ಗೆ ಮೊದಲು ಅರಿವು ಬೆಳೆಸಿಕೊಳ್ಳಲಿ.

ನಟ ಅನುಪಮ್ ಖೇರ್

ನಟ ಅನುಪಮ್ ಖೇರ್

ದಿಲ್ವಾಲೆ ದುಲ್ಹಾನಿಯಾ ಲೇ ಜಾಯಂಗೇ ಸಹ ನಟ ಅನುಪಮ್ ಖೇರ್ ಅವರು ಮಾತನಾಡಿ, ಶಾರುಖ್ ಅವರು ನಿಜವಾದ ಭಾರತೀಯ. ಯೋಗಿ ಆದಿತ್ಯಾನಾಥ್ ಅವರು ಬಿಜೆಪಿಯ ದಿಗ್ವಿಜಯ್ ಸಿಂಗ್ ಎಂದು ಹೋಲಿಕೆ ಮಾಡಿದ್ದಾರೆ.

ಎಲ್ಲರಿಗೂ ಮುಕ್ತ ಸ್ವಾಗತವಿದೆ

ಎಲ್ಲರಿಗೂ ಮುಕ್ತ ಸ್ವಾಗತವಿದೆ

ಭಾರತದಲ್ಲಿರುವ ಮುಸ್ಲಿಮರು ಕ್ರೀಡೆ, ಶೈಕ್ಷಣಿಕ, ಕಲೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ, ಸೂಕ್ತ ಬೆಲೆ ಸಿಗದ ಕಾರಣ ಮೂಲೆಗುಂಪಾಗುತ್ತಿದ್ದಾರೆ. ಕಷ್ಟದ ಪರಿಸ್ಥಿತಿ ಎದುರಿಸಿ ವ್ಯಕ್ತಿತ್ವ ಕಳೆದುಕೊಳ್ಳುವುದಕ್ಕಿಂತ ಪಾಕಿಸ್ತಾನಕ್ಕೆ ಬನ್ನಿ ಎಂದ ಉಗ್ರ ಸಂಘಟನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+