ಐಎನ್ಎಸ್ ವಿರಾಟ್ ಪರಿವರ್ತನೆ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್ ತಡೆ
ನವದೆಹಲಿ, ಫೆಬ್ರವರಿ.10: ಭಾರತದ ಐಎನ್ಎಸ್ ವಿರಾಟ್ ವಿಮಾನವಾಹಕ ನೌಕೆಯನ್ನು ಕಿತ್ತುಹಾಕುವ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಹಡಗನ್ನು ವಸ್ತುಸಂಗ್ರಹಾಲಯ ವನ್ನಾಗಿ ಬದಲಾಯಿಸಲು ಕೋರಿ ಸಂಸ್ಥೆಯು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಹೊರಡಿಸಿದೆ.
ದೇಶದಲ್ಲಿ ನಿಷ್ಕ್ರಿಯಗೊಳಿಸಿದ ಐಎನ್ಎಸ್ ವಿರಾಟ್ ವಿಮಾನವಾಹನ ನೌಕೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವುದಕ್ಕೆ ಎನ್ ವಿಟೆಕ್ ಮರಿನಾ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಪ್ರಸ್ತಾವನೆ ಸಲ್ಲಿಸಿತ್ತು. ಸಂಸ್ಥೆಯ ಪ್ರಸ್ತಾವನೆಯನ್ನು ಕೇಂದ್ರ ರಕ್ಷಣಾ ಸಚಿವಾಲಯವು ತಿರಸ್ಕರಿಸಿದ ಹಿನ್ನೆಲೆ ಸಂಸ್ಥೆಯು ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
ಕಳೆದ ನವೆಂಬರ್.27ರಂದು ಮೂರು ಪುಟಗಳ ಪತ್ರದಲ್ಲಿ, ರಕ್ಷಣಾ ಸಚಿವಾಲಯವು "ಹಡಗಿನ ಸುರಕ್ಷತೆ ಮತ್ತು ವಸ್ತು ಸ್ಥಿತಿಗೆ ಸಂಬಂಧಿಸಿದ ಇತರ ಸಂಗತಿಗಳ ನಡುವೆ ವಾಸ್ತವಿಕ ಮತ್ತು ನೀತಿ ಅಂಶಗಳನ್ನು ತೆಗೆದುಕೊಳ್ಳುವುದು. ಸಂಸ್ಥೆಯ ವಿನಂತಿಯನ್ನು ಪರಿಗಣಿಸಿ ವಿರಾಟ್ನ ಸ್ಥಿತಿಯನ್ನು ಪರಿವರ್ತಿಸಲು ಎನ್ಒಸಿ (ಆಕ್ಷೇಪಣೆ ಪ್ರಮಾಣಪತ್ರವಿಲ್ಲ) ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಉಲ್ಲೇಖಿಸಿತ್ತು.
ಈ ಹಿಂದೆಯೂ ವಿರಾಟ್ ಪರಿವರ್ತನೆ ಪ್ರಯತ್ನ ವಿಫಲ:
ಮೊದಲೂ ಸಹ ಐಎನ್ಎಸ್ ವಿರಾಟ್ ನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಹಲವಾರು ಪ್ರಯತ್ನಗಳು ವಿಫಲವಾಗಿದ್ದವು. ತದನಂತರ ಸೆಪ್ಟೆಂಬರ್ 28ರಂದು ಕೇಂದ್ರ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ನೌಕಾಪಡೆಯ ಅಧಿಕಾರಿಗಳು ಭಾಗವಹಿಸಿದ ಔಪಚಾರಿಕ ಸಮಾರಂಭದಲ್ಲಿ ಐಎನ್ಎಸ್ ವಿರಾಟ್ಗೆ ಅಲಾಂಗ್ನಲ್ಲಿ ಬೀಚ್ ನೀಡಲಾಯಿತು. 1959 ರಲ್ಲಿ ಬ್ರಿಟಿಷ್ ನೌಕಾಪಡೆಯಲ್ಲಿ ಎಚ್ಎಂಎಸ್ ಹರ್ಮ್ಸ್ ಆಗಿ ನಿಯೋಜಿಸಲ್ಪಟ್ಟ ಐಎನ್ಎಸ್ ವಿರಾಟ್ ನ್ನು 1986-87ರಲ್ಲಿ ಭಾರತೀಯ ನೌಕಾಪಡೆಗೆ ಸೇರಿಸಲಾಯಿತು.
ಖಾಸಗಿ ಕಂಪನಿ ಆಗಿರುವ ಎನ್ವಿಟೆಕ್ ಮೆರೈನ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್, ಶ್ರೀ ರಾಮ್ ಗ್ರೂಪ್ನಿಂದ ಐಎನ್ಎಸ್ ವಿರಾಟ್ ಖರೀದಿಸಿ ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಮುಂದಾಯಿತು. ಆದಾಗ್ಯೂ, ಕಂಪನಿಯು ಕೇಂದ್ರದಿಂದ ಯಾವುದೇ ಆಕ್ಷೇಪಣೆ ಪ್ರಮಾಣಪತ್ರವನ್ನು ಪಡೆಯಲು ಅಥವಾ ಹಡಗು ಮುರಿಯುವವರೊಂದಿಗೆ ಔಪಚಾರಿಕ ಒಪ್ಪಂದ ಮಾಡಿಕೊಂಡಿರಲಿಲ್ಲ.