ಕುಲಭೂಷಣ್ ಪರ ತೀರ್ಪಿಗೆ ದೇಶಾದ್ಯಂತ ಪ್ರಾರ್ಥನೆ
ಸರಕಾರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹರೀಶ್ ಸಾಳ್ವೆ ಮೇಲೆ ಎಲ್ಲಾ ಭಾರ ಹಾಕಿ ತೀರ್ಪಿಗಾಗಿ ಕಾದು ಕುಳಿತುಕೊಂಡಿದೆ. ಇನ್ನೊಂದು ಕಡೆ ದೇಶದ ಜನ ದೇವರ ಮೇಲೆ ಭಾರ ಹಾಕಿ ಶಿಕ್ಷೆಗಾಗಿ ಕಾದು ಕುಳಿತಿದ್ದಾರೆ.
ನವದೆಹಲಿ, ಮೇ 18: ಹೇಗ್ ನಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯ ಇಂದು ಮಧ್ಯಾಹ್ನ 3.30ಕ್ಕೆ ಕುಲಭೂಷಣ್ ಜಾಧವ್ ಮರಣ ದಂಡನೆಗೆ ಸಂಬಂಧಿಸಿದಂತೆ ತನ್ನ ತೀರ್ಪು ನೀಡಲಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ತೀರ್ಪು ಹೊರ ಬೀಳಲಿದೆ.
ಇದೇ ವೇಳೆ ಕುಲಭೂಷಣ್ ಜಾಧವ್ ಶಿಕ್ಷೆ ರದ್ದಾಗಲಿ ಎಂದು ಕೋರಿ ದೇಶಾದ್ಯಂತ ಪ್ರಾರ್ಥನೆ ನಡೆಸಲಾಗುತ್ತಿದೆ.
Kanpur: People hold prayers for release of #KulbhushanJadhav , ahead of India's arguments before International Court of Justice, today pic.twitter.com/OenYs03943
— ANI UP (@ANINewsUP) May 15, 2017
ಮುಂಬೈನ ಹನುಮಾನ್ ಜಯಂತಿ ಉತ್ಸವ ಸಮಿತಿ ಸದಸ್ಯರು ಕುಲಭೂಷಣ್ ಜಾಧವ್ ಶಿಕ್ಷೆ ರದ್ದಿಗೆ ಕೋರಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಕಾನ್ಪುರದಲ್ಲಿ ಈ ಹಿಂದೆ ಮೇ 15ರಂದು ವಿಚಾರಣೆ ಆರಂಭವಾದಾಗಲೇ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು.
ಇನ್ನು ಮೊರಾದಾಬಾದ್ ನ ಶಾಲಾ ಮಕ್ಕಳು ಕೂಡಾ ಇಂದು ಕುಲಭೂಷಣ್ ಪರ ತೀರ್ಪು ಬರಲಿ ಎಂದು ಹಾರೈಸಿದ್ದಾರೆ.
ಸರಕಾರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹರೀಶ್ ಸಾಳ್ವೆ ಮೇಲೆ ಎಲ್ಲಾ ಭಾರ ಹಾಕಿ ಕುಳಿತುಕೊಂಡಿದೆ. ಅವರು ಮೇ 15ರಂದು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಪರ ವಾದ ಮಂಡಿಸಿದ್ದರು. ಇನ್ನೊಂದು ಕಡೆ ದೇಶದ ಜನ ದೇವರ ಮೇಲೆ ಭಾರ ಹಾಕಿ ಶಿಕ್ಷೆಗಾಗಿ ಕಾದು ಕುಳಿತಿದ್ದಾರೆ.
Students of a school in Moradabad hold special ceremony in support of #KulbhushanJadhav pic.twitter.com/VkywuTRoNT
— ANI UP (@ANINewsUP) May 18, 2017
ಕುಲಭೂಷಣ್ ಯಾದವ್ ಬಿಡುಗಡೆಯಾಗಲಿ ಎಂದು ಹಲವಾರು ಜನ ತಮ್ಮ ತಮ್ಮಲ್ಲೇ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ಬಾಲಿವುಡ್ ನ ಖ್ಯಾತ ಚಿತ್ರಕಥೆಗಾರ ಸಲೀಮ್ ಖಾನ್ ಕೂಡಾ ಕುಲಭೂಷಣ್ ಜಾಧವ್ ಬೇಗ ಬಿಡುಗಡೆಯಾಗಿ ಬರಲಿ ಎಂದು ಹಾರೈಸಿದ್ದಾರೆ.
ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಗಲ್ಲು ಶಿಕ್ಷೆ ನೀಡಿದೆ. ಅವರೀಗ ಗಲ್ಲು ಶಿಕ್ಷೆ ಎದುರಿಸುತ್ತಿದ್ದಾರೆ. ಅವರ ಭವಿಷ್ಯವನ್ನು ಅಂತರಾಷ್ಟ್ರೀಯ ನ್ಯಾಯಾಲಯ ನಿರ್ಧರಿಸಲಿದೆ.