ಐಎಂ ಉಗ್ರರನ್ನು ಕಾಂಗ್ರೆಸ್ ನಾಯಕ ಸಮರ್ಥಿಸಿಕೊಂಡಿದ್ದು ಹೀಗೆ
ಇಂಡಿಯನ್ ಮುಜಾಹಿದ್ದೀನ್ ಅಂದರೇನೆಂದು ಮಕ್ಕಳನ್ನು ಕೇಳಿದರೂ ಅದೊಂದು ಉಗ್ರ ಸಂಘಟನೆ ಎನ್ನುವ ಉತ್ತರ ಬರುತ್ತೆ. ಆದರೆ ಶತಮಾನದ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್ ಮುಖಂಡರೊಬ್ಬರು ಈ ಬಗ್ಗೆ ಮಕ್ಕಳೂ ಹುಬ್ಬೇರಿಸುವಂತೆ ತನ್ನ ಸಾಮಾಜಿಕ ಜ್ಞಾನ ಪ್ರದರ್ಶಿಸಿದ್ದಾರೆ.
ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಂಘಟನೆಯ ಮುಖಂಡರು ನಾನ್ ಸೆನ್ಸ್ ಹೇಳಿಕೆ ನೀಡುತ್ತಿರಬಹುದು ಆದರೆ ಅದು ಉಗ್ರ ಸಂಘಟನೆಯೇ ಆಗಬೇಕೆಂದೇನೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಖುರ್ಷಿದ್ ಅಹಮದ್ ಸಯೀದ್ ಹೇಳಿದ್ದಾರೆ.
ಗೋವಾದ ರಾಜಧಾನಿ ಪಣಜಿಯಲ್ಲಿ (ಏ 8) ಮಾತನಾಡುತ್ತಿದ್ದ ಅಖಿಲ ಭಾರತ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿರುವ ಖುರ್ಷಿದ್, ಇಂಡಿಯನ್ ಮುಜಾಹಿದ್ದೀನ್ ಮತೀಯ ಸಂಘಟನೆಯಾಗಿರಬಹುದು, ಆದರೆ ಅದರ ಯಾವ ಸದಸ್ಯರೂ ಉಗ್ರರಲ್ಲ ಎಂದು ಸ್ವಯಂ ಸರ್ಟಿಫಿಕೇಟ್ ನೀಡಿದ್ದಾರೆ. (ಬಂಧಿತ ಶಂಕಿತರು ಅಮಾಯಕರು)
ಜಗತ್ತಿನ ಉಗ್ರ ಚಟುವಟಿಕೆಗಳಲ್ಲಿ ಮುಸ್ಲಿಮರ ಪಾರುಪತ್ಯವಿರಬಹುದು, ಆದರೆ ಹಿಂದೂಸ್ಥಾನ ಮೂಲದ ಯಾವುದೇ ಮುಸ್ಲಿಮರು ಭಯೋತ್ಪಾದನಾ ಕೃತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲ ಎಂದು ಖುರ್ಷಿದ್, ಘಂಟಾಘೋಷವಾಗಿ ಹೇಳಿದ್ದಾರೆ.
ಗುಜರಾತ್ ಮೂಲದ ಕಾಂಗ್ರೆಸ್ ಮುಖಂಡ ಖುರ್ಷಿದ್, ಭಾರತದ ಯಾವುದೇ ಮುಸ್ಲಿಮರು ಮೂಲಭೂತವಾದಿಗಳಲ್ಲ. ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದಿದ್ದಾರೆ.

ಭಾರತದ ಮುಸ್ಲಿಮರು ಭಾಗವಹಿಸಿಲ್ಲ
ಕೇಂದ್ರ ಸರಕಾರದ ಭೂಸ್ವಾಧೀನ ಯೋಜನೆಯ ವಿರುದ್ದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಖುರ್ಷಿದ್, ಭಾರತದಲ್ಲಿ ನಡೆದ ಉಗ್ರ ಕೃತ್ಯಗಳಲ್ಲಿ ಭಾರತದ ಮುಸ್ಲಿಮರು ಯಾರೂ ಭಾಗವಹಿಸಲಿಲ್ಲ, ಉಗ್ರರೆಲ್ಲಾ ವಿದೇಶಿಯರು ಎಂದು ಹೇಳಿದ್ದಾರೆ.

ನಾವೆಂದೂ ಅಡ್ಡಿಪಡಿಸಿಲ್ಲ
ದೇಶದಲ್ಲಿ ಮತೀಯ ಭಾವನೆಯನ್ನು ಕೆರಳಿಸುತ್ತಿರುವುದು ಬಿಜೆಪಿಯವರು ಹೊರತು ಕಾಂಗ್ರೆಸ್ಸಿನವರಲ್ಲ ಎಂದು ಟೀಕಿಸಿದ ಖುರ್ಷಿದ್, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯರ ವಿರುದ್ದ ಈ ಹಿಂದೆ ಕ್ರಮ ತೆಗೆದುಕೊಂಡಾಗ ನಾವು ಎಂದೂ ವಿರೋಧಿಸಿದವರಲ್ಲ - ಖುರ್ಷಿದ್

ನಮ್ಮ ಅವಧಿಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇವೆ
ಯುಪಿಎ ಸರಕಾರದ ಅವಧಿಯಲ್ಲಿ ಮೂಲಭೂತವಾದಿಗಳು ಮತ್ತು ಅಂತಹ ಸಂಘಟನೆಗಳ ವಿರುದ್ದ ಸರಿಯಾದ ಕ್ರಮ ತೆಗೆದುಕೊಂಡಿದ್ದೇವೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ - ಖುರ್ಷಿದ್.

ಐಎಂ ನಿಷೇಧಿಸಿದ್ದು ಯುಪಿಎ
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ನಿಷೇಧಿಸಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ. 2010ರಲ್ಲಿ ತೀವ್ರ ಒತ್ತಡದ ನಂತರ ಕೇಂದ್ರ ಸರಕಾರ ಈ ಸಂಘಟನೆಯನ್ನು ನಿಷೇಧಿಸಿತ್ತು. ನ್ಯೂಜಿಲ್ಯಾಂಡ್ ಕೂಡಾ 2010ರಲ್ಲಿ ಐಎಂ ಸಂಘಟನೆಯನ್ನು ನಿಷೇಧಿಸಿತ್ತು. ಇತ್ತೀಚೆಗೆ ಸೌದಿ ಅರೇಬಿಯಾ ಕೂಡಾ ಐಎಂ ಸಂಘಟನೆಯನ್ನು ನಿಷೇಧಿಸಿತ್ತು.

ಬಾಂಬ್ ದಾಳಿ
ಪುಣೆ (2010), ವಾರಣಾಸಿ (2010) ಮತ್ತು ಮುಂಬೈ ಸರಣಿ ಸ್ಪೋಟ (2011) ಸೇರಿದಂತೆ ಇದುವರೆಗೆ ಹತ್ತು ಉಗ್ರ ಕೃತ್ಯಗಳನ್ನು ಐಎಂ ಸಂಘಟನೆ ನಡೆಸಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications