ಸಮೀಕ್ಷೆ : ಕಾಂಗ್ರೆಸ್ ಹಾಕಿದ ಬಲೆಗೆ ಬಿದ್ದ ಹಾರ್ದಿಕ್ ಪಟೇಲ್
ಅಹ್ಮದಾಬಾದ್, ಡಿಸೆಂಬರ್ 06 : ಪಾಟಿದಾರ್ ಜಾತಿಯ ಜನರಿಗೆ ಮೀಸಲಾತಿ ನೀಡಬೇಕೆಂದು ರಾಜ್ಯಾದ್ಯಂತ ಚಳವಳಿ ಆರಂಭಿಸಿರುವ ಯುವ ನಾಯಕ ಹಾರ್ದಿಕ್ ಪಟೇಲ್ ಹೋರಾಟ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಠುಸ್ ಆಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.
ಇಂಡಿಯಾ ಟಿವಿ - ವಿಎಂಆರ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯ ವಿವರಗಳು ಹೊರಬರುತ್ತಿದ್ದು, ಕಾಂಗ್ರೆಸ್ ಪಕ್ಷದ ಜೊತೆ ಹಾರ್ದಿಕ್ ಪಟೇಲ್ ಮಾಡಿಕೊಂಡಿರುವ ಹೊಂದಾಣಿಯ ಒಪ್ಪಂದ, ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಿರುವ ಅವರ ವಿಡಿಯೋಗಳು ಜನರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ಬದಲಾಗಿ, ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ಬೀಸಿರುವ ಬಲೆಯಲ್ಲಿ ಬಿದ್ದಿದ್ದಾರೆ ಎಂದು ಶೇಕಡಾ 26ರಷ್ಟು ಜನರು ಅಭಿಪ್ರಾಯ ಪಟ್ಟಿದ್ದಾರೆ. ಹಾರ್ದಿಕ್ ಅವರು ಕಾಂಗ್ರೆಸ್ ಜೊತೆ ಶಾಮೀಲಾಗಿದ್ದಾರೆ ಎಂದು ಶೇ.22ರಷ್ಟು ಜನರು ಹೇಳಿದ್ದರೆ, ಹಾರ್ದಿಕ್ ಅವರು ಡಬಲ್ ಗೇಮ್ ಆಡಿದ್ದಾರೆ ಎಂದು ಶೇ.13ರಷ್ಟು ಗುಜರಾತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿರುವ ಪಾಟಿದಾರ್ ಸಮುದಾಯದವರು ಹಾರ್ದಿಕ್ ಪಟೇಲ್ ವಿರುದ್ಧ ಕ್ರೋಧಿತರಾಗಿದ್ದಾರೆ ಎನ್ನುತ್ತದೆ ಸಮೀಕ್ಷೆ. ಶೇ.24ರಷ್ಟು ಜನರು ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ಜೊತೆ ಕೈಜೋಡಿಸಿ ಚಳವಳಿಯ ದಾರಿ ತಪ್ಪಿಸಿದ್ದಾರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.
ಆದರೆ, ಬಿಜೆಪಿ ವಿರುದ್ಧ ದಂಗೆಯೆದ್ದಿರುವ ಪಾಟಿದಾರ್, ದಲಿತ ಮತ್ತು ಇತರ ಹಿಂದುಳಿದ ವರ್ಗದವರು ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತಾರಾ ಎಂಬ ಪ್ರಶ್ನೆಗೆ, ಶೇ.47ರಷ್ಟು ಜನರು ಬೆಂಬಲ ನೀಡುತ್ತೇವೆ ಎಂದಿದ್ದಾರೆ. ಶೇ.34 ಜನರು ಬಿಜೆಪಿ ಇನ್ನೂ ಬಲಿಷ್ಠವಾಗಿದ್ದು, ಜಾತಿ ರಾಜಕಾರಣ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಮೂರು ಜಾತಿಯವರು ಒಗ್ಗಟ್ಟಾಗಿ ಚುನಾವಣೆಯಲ್ಲಿ ಮತ ಹಾಕುವುದಿಲ್ಲ ಎಂದು ಶೇ.9ರಷ್ಟು ಜನ ಅಭಿಪ್ರಾಯ ಮಂಡಿಸಿದ್ದಾರೆ.












Click it and Unblock the Notifications