ಭಾರತದ ದಿಟ್ಟ ಹೆಜ್ಜೆ: ಚಂದ್ರಯಾನ-2ಗೆ ಇಸ್ರೋ ಸಿದ್ಧತೆ
ಬೆಂಗಳೂರು/ಮಂಗಳೂರು, ಮಾರ್ಚ್, 01: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ಚಂದ್ರಯಾನ-2ಕ್ಕೆ ದೇಶ ಸಿದ್ಧವಾಗಿದೆ ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದರು.
ಮಂಗಳೂರಿನ ಕಾರ್ಯಕ್ರಮವೊಂದರರಲ್ಲಿ ಮಾತನಾಡಿದ ಕಿರಣ್ ಕುಮಾರ್ ಮಂಗಳಯಾನದ ಯಶಸ್ಸು ನಮ್ಮಲ್ಲಿ ಹೊಸ ಉತ್ಸಾಹ ತಂದಿದೆ. ಇದನ್ನು ಆಧಾರವಾಗಿಟ್ಟುಕೊಂಡು ಚಂದ್ರಯಾನ ಕೈಗೊಳ್ಳಲಾಗುವುದು ಎಂದು ಹೇಳಿದರು.[ಅಂತರ್ಜಲ ಪತ್ತೆಗೆ ಇಸ್ರೋ ಮೊರೆಹೋದ ಸರ್ಕಾರ]
ಬೆಂಗಳೂರಲ್ಲಿ
'ಉಪಗ್ರಹದ
ಪರಿವೀಕ್ಷಣಾ
ಸಾಮರ್ಥ್ಯ
ಕೇಂದ್ರ'
ವಿದ್ಯಾರ್ಥಿ
ಹಾಗೂ
ಸಂಶೋಧಕರಿಗೆ
ಅನುಕೂಲವಾಗುವ
ರೀತಿಯಲ್ಲಿ
ಮುಂದಿನ
ವರ್ಷ
'ಉಪಗ್ರಹದ
ಪರಿವೀಕ್ಷಣಾ
ಸಾಮರ್ಥ್ಯ
ಕೇಂದ್ರ'
ಆರಂಭಿಸಲಾಗುವುದು.
ಈ
ಬೆಗ್ಗೆ
ಬೆಂಗಳೂರಿನ
ಕೇಂದ್ರದಲ್ಲಿ
ಸಕಲ
ಸಿದ್ಧತೆ
ಮಾಡಿಕೊಳ್ಳಲಾಗಿದೆ
ಎಂದು
ಕಿರಣ್
ಕುಮಾರ್
ತಿಳಿಸಿದ್ದಾರೆ.
ಇದು
ದೇಶೀಯ
ಸಂಶೋಧಕರು
ನಕ್ಷತ್ರ
ಸಮೂಹಗಳ
ಕುರಿತು
ಮಾಡುವ
ಸಂಶೋಧನೆಗೆ
ನೆರವಾಗಲಿದೆ
ಎಂದು
ತಿಳಿಸಿದರು.[ಉಪಗ್ರಹ
ಉಡಾವಣೆ:
ದೊಡ್ಡೋರೆಲ್ಲ
ಇಸ್ರೋ
ಬಳಿ
ಬರೋದು
ಯಾಕೆ?]
ಇಸ್ರೋ ಈವರೆಗೆ 51 ರಾಕೆಟ್ಗಳನ್ನು ಉಡಾವಣೆ ಮಾಡಿದೆ. ಉಪಗ್ರಹ ಉಡಾವಣೆಗೆ ಬೇಕಿರುವ ಉಪಕರಣಗಳನ್ನು ದೇಶೀಯ ಸಂಸ್ಥೆಗಳಲ್ಲಿಯೇ ಉತ್ಪಾದನೆ ಮಾಡಿಕೊಳ್ಳಲಾಗುತ್ತಿದೆ. ವಿಜ್ಞಾನ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಾಟಾ ಸಂಸ್ಥೆ, ಐಐಎಸ್ಸಿ, ರಾಮನ್ ಇನ್ಸ್ಟಿಟ್ಯೂಟ್ ತಯಾರಿಸಿದ ಉಪಕರಣಗಳನ್ನೇ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.