ಅಮೆರಿಕದೊಳಗೆ ಭಾರತೀಯ ವಲಸಿಗರು ಅಕ್ರಮವಾಗಿ ಪ್ರವೇಶಿಸುವುದು ಹೇಗೆ ಗೊತ್ತೇ?
ನವದೆಹಲಿ, ಜೂನ್ 19: ಅಮೆರಿಕಕ್ಕೆ ತೆರಳಿ ಅಲ್ಲಿನ ಪೌರತ್ವ ಪಡೆದು ಅಲ್ಲಿಯೇ ಕಾಯಂ ಆಗಿ ನೆಲೆಸಿರುವ ಭಾರತೀಯರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ವಿವಿಧ ವೀಸಾದಡಿ ಅಲ್ಲಿ ನೆಲೆಸಿರುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದರ ನಡುವೆ ಲಕ್ಷಾಂತರ ಮಂದಿ ಭಾರತೀಯರು ಅಮೆರಿಕದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ.
2016ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ಪ್ರಚಾರದ ವೇಳೆ ದೇಶದಲ್ಲಿನ 'ಲಕ್ಷಾಂತರ ಅಕ್ರಮ ಏಲಿಯನ್'ಗಳನ್ನು ಹೊರಹಾಕಲು ನೀಡಿದ್ದ ಭರವಸೆಯನ್ನು ಈಡೇರಿಸುವ ಸಲುವಾಗಿ ಅಕ್ರಮ ವಲಸಿಗರನ್ನು ಮುಂದಿನ ವಾರದಿಂದ ಗಡಿಪಾರು ಮಾಡಲು ಆರಂಭಿಸುವುದಾಗಿ ಹೇಳಿದ್ದರು.
ಅನಧಿಕೃತ ನಿವಾಸಿಗಳನ್ನು ಅಮೆರಿಕದಿಂದ ಹೊರಹಾಕಲು ನಿರ್ಧರಿಸಿರುವ ಟ್ರಂಪ್ ಆಡಳಿತ ನಡೆಯಿಂದ ಭಾರತದಿಂದ ಅಕ್ರಮವಾಗಿ ಬಂದು ನೆಲೆಸಿರುವ ಲಕ್ಷಾಂತರ ಭಾರತೀಯರು ತೊಂದರೆಗೆ ಸಿಲುಕಲಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮೆಕ್ಸಿಕೋ ಮೂಲಕ ಅರಿಜೋನಾ ಮರಳುಗಾಡಿಗೆ ಬಂದು ಅಲ್ಲಿಂದ ಅಮೆರಿಕ ಪ್ರವೇಶಿಸಲು ತೆರಳಿದ್ದ ಕುಟುಂಬವೊಂದರ ಆರು ವರ್ಷದ ಮಗು ಗುರುಪ್ರೀತ್ ಕೌರ್ ಬಿಸಿಲ ತಾಪ ತಾಳಲಾರದೆ ಮೃತಪಟ್ಟಿದ್ದು ಸುದ್ದಿಯಾಗಿತ್ತು.

ಭಾರತೀಯ ವಲಸಿಗರ ಸಂಖ್ಯೆ ಹೆಚ್ಚಳ
ಪ್ಯೂ ಸಂಶೋಧನಾ ಕೇಂದ್ರದ ಅಧ್ಯಯನದ ಪ್ರಕಾರ ಅಮೆರಿಕದಲ್ಲಿ 2017ರ ವೇಳೆಗೆ ಒಂದು ಕೋಟಿ ಅನಧಿಕೃತ ವಲಸಿಗರು ಇದ್ದರು. ಅವರಲ್ಲಿ ಸುಮಾರು 15 ಲಕ್ಷ ಏಷ್ಯನ್ನರಿದ್ದಾರೆ.
ಅಮೆರಿಕ ಮೂಲದ ಮತ್ತೊಂದು ಸಂಸ್ಥೆಯ ಅಧ್ಯಯನದ ಪ್ರಕಾರ 2010ರಿಂದ ಅಕ್ರಮ ವಲಸಿಗ ಭಾರತೀಯರ ಸಂಖ್ಯೆ ಶೇ 72ರಷ್ಟು ಹೆಚ್ಚಾಗಿದ್ದು, 6.3 ಲಕ್ಷದಷ್ಟು ಭಾರತೀಯರಿದ್ದಾರೆ.
2018ರಲ್ಲಿ ಸುಮಾರು 9 ಸಾವಿರ ಭಾರತೀಯ ರಾಷ್ಟ್ರೀಯರನ್ನು ಅಮರಿಕ-ಮೆಕ್ಸಿಕೋ ಗಡಿಯಲ್ಲಿ ಅಕ್ರಮ ಪ್ರವೇಶದ ವೇಳೆ ಬಂಧಿಸಲಾಗಿದೆ. 2007ರಲ್ಲಿ ಈ ಸಂಖ್ಯೆ 76ರಷ್ಟಿದ್ದರೆ, 2017ರಲ್ಲಿ 3,000 ಇತ್ತು.

ವಲಸಿಗರಿಗೆ ನೆರವಾಗುವ ಸಂಸ್ಥೆಗಳೇ ಇವೆ
'ಡಾಂಕಿ ಫ್ಲೈಟ್' (ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳುವುದಕ್ಕೆ ಇರುವ ಪಂಜಾಬ್ ನಾಣ್ಣುಡಿ) ಮೂಲಕ ಭಾರತೀಯರು ಅಮೆರಿಕ ಹಾಗೂ ಯುರೋಪ್ಗಳಿಗೂ ತಲೆಮರೆಸಿಕೊಂಡು ಪ್ರವೇಶಿಸುವ ಮಾರ್ಗಗಳನ್ನು ಕಂಡುಕೊಂಡಿರುತ್ತಾರೆ. ತಾವು ಅಕ್ರಮವಾಗಿ ವಲಸೆ ಹೋಗಬೇಕಿರುವ ದೇಶದ ಪಕ್ಕದ ದೇಶಕ್ಕೆ ಪ್ರವಾಸಿ ವೀಸಾ ಪಡೆದುಕೊಳ್ಳಲು ಭಾರಿ ಮೊತ್ತದ ಹಣವನ್ನು ವೀಸಾ ಸಂಸ್ಥೆಗೆ ನೀಡುತ್ತಾರೆ. ಅಲ್ಲಿಂದ ಅವರ ಉದ್ದೇಶಿತ ಪ್ರಯಾಣ ಆರಂಭವಾಗುತ್ತದೆ.
ಈ ಸಂಸ್ಥೆಗಳು ಗಡಿಯ ಮೂಲಕ ದೇಶದೊಳಗೆ ಪ್ರವೇಶಿಸಲು ನೆರವಾಗುವ ಮಾನವ ಕಳ್ಳಸಾಗಣೆದಾರರು, ತಮ್ಮ ಗಡಿಪಾರಿನಿಂದ ತಪ್ಪಿಸಿಕೊಳ್ಳಲು ನೆರವಾಗುವ ಕಾನೂನಿನ ಲೋಪಗಳ ಕುರಿತಾದ ಸಲಹೆಗಳು ಮುಂತಾದ ಸೇವೆಗಳನ್ನೂ ನೀಡುತ್ತವೆ.

ದಟ್ಟಾರಣ್ಯದ ಅಪಾಯಕಾರಿ ದಾರಿ
ಭಾರತೀಯರು ಹಾಗೂ ಸುಮಾರು 180 ದೇಶಗಳಿಗೆ ಉಚಿತವಾಗಿ ವೀಸಾ ಒದಗಿಸುವ ಈಕ್ವೆಡಾರ್ ದೇಶವು ಅಕ್ರಮ ವಲಸಿಗರ ಸಾಮಾನ್ಯ ಮಾರ್ಗವಾಗಿದೆ. ದಕ್ಷಿಣ ಅಮೆರಿಕದ ದೇಶದಿಂದ ವಲಸಿಗರು ಸಾವಿರಾರು ಕಿಮೀ ಸಾಗಬೇಕು. ಪನಾಮಾ ಮತ್ತು ಕೊಲಂಬಿಯಾ ನಡುವೆ ಇರುವ ಸುಮಾರು 100 ಕಿಮೀ ಉದ್ದದ ದಟ್ಟಾರಣ್ಯದ ನಡುವೆ ಸಾಗಬೇಕು. ಅಲ್ಲಿ ರಸ್ತೆಯೂ ಇಲ್ಲ, ಸರ್ಕಾರದ ಅಸ್ತಿತ್ವವೂ ಇಲ್ಲ.
ಇದನ್ನು ಜಗತ್ತಿನ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿದೆ. ಇದನ್ನು ಮಾದಕ ದ್ರವ್ಯ ಕಳ್ಳಸಾಗಣೆದಾರರು, ಗೆರಿಲ್ಲಾ ದಾಳಿಕೋರರು ಹೆಚ್ಚು ಬಳಸುತ್ತಾರೆ. ಅಪಹರಣ ಮತ್ತು ಹಲ್ಲೆ ಈ ಪ್ರದೇಶದಲ್ಲಿ ಸರ್ವೇ ಸಾಮಾನ್ಯ. ಅದರ ಜತೆಗೆ ಇಲ್ಲಿನ ಭೌಗೋಳಿಕ ಪರಿಸರ ಮತ್ತು ಕಾಡುಪ್ರಾಣಿಗಳ ಅಸ್ತಿತ್ವವೂ ಅಪಾಯ ತಂದೊಡ್ಡುತ್ತವೆ.
ಈ ಎಲ್ಲ ಸಂಕಷ್ಟಗಳನ್ನು ದಾಟಿ ಹೆಚ್ಚಿನ ವಲಸಿಗರು ತಮ್ಮ ಅಂತಿಮ ಗುರಿಯನ್ನು ತಲುಪುವುದೇ ಇಲ್ಲ. ಅಥವಾ ಹಾಗೆ ಮಾಡಿದರೂ ಗಡಿಪಾರಾಗುತ್ತಾರೆ. ಜತೆಗೆ ಈ ಹೋರಾಟದಲ್ಲಿ ತಮ್ಮ ಜೀವನದ ಎಲ್ಲ ಸಂಪಾದನೆಯನ್ನು ಕಳೆದುಕೊಳ್ಳುತ್ತಾರೆ.

ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಳ
ಹೆಚ್ಚಿನ ವಲಸಿಗರು ಮೆಕ್ಸಿಕೋ-ಅಮೆರಿಕ ಗಡಿ ಮೂಲಕ ಪ್ರವೇಶಿಸುವಾಗ ಸಿಕ್ಕಿಬೀಳುತ್ತಾರೆ. ಸೆಂಟ್ರಲ್ ಅಮೆರಿಕದ ರಾಜಕೀಯ ಅಸ್ಥಿರತೆ ಮತ್ತು ಪ್ರಾದೇಶಿಕ ಹಿಂಸಾಚಾರವಿರುವ ಗ್ವಾಟೆಮಾಲ, ಹೊಂಡುರಸ್ ಮತ್ತು ಎಲ್ ಸಾಲ್ವಡೋರ್ ಮೂಲಕ ಒಳನುಗ್ಗುತ್ತಾರೆ.
ಇತರೆ ಖಂಡಗಳಿಂದ ಗಡಿ ಮೂಲಕ ಬಂದು ಬಂಧಿತರಾಗುವ ವಲಸಿಗರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಪುರುಷರ ಬದಲು ಮಕ್ಕಳು ಮತ್ತು ಮಹಿಳೆಯರನ್ನು ಒಳಗೊಂಡ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications