Maha Kumbh Mela 2025: ಕುಂಭಮೇಳದಲ್ಲಿ ಐಐಟಿಯನ್ ಬಾಬಾ ಭಾಗಿ: ಎಂಜಿನಿಯರಿಂಗ್ ಪ್ರತಿಭೆ ಆಧ್ಯಾತ್ಮಿಕ ಗುರು ಆಗಿದ್ದು ಹೇಗೆ?
ಲಕ್ನೋ ಜನವರಿ 15: ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ ಶುರುವಾಗಿದ್ದು ನಿತ್ಯ ಲಕ್ಷಾಂತರ ಸಾಧುಗಳು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಒಂದೇ ದಿನದಲ್ಲಿ ಸುಮಾರು 3.5 ಕೋಟಿ ಜನ ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ ಮಾಡಿದ ಮಾಹಿತಿ ಲಭ್ಯವಾಗಿದೆ. ಜನವರಿ 13ರಿಂದ ಫೆಬ್ರವರಿ 26ರವರೆಗೂ ಈ ಮಹಾ ಕುಂಭ ಮೇಳ ನಡೆಯಲಿದ್ದು ಕೋಟ್ಯಾಂತರ ಜನ ಆಗಮಿಸುವರು. ಈ ಮಹಾಕುಂಭ ಮೇಳ 12 ವರ್ಷಕ್ಕೆ ಒಮ್ಮೆ ನಡೆಯುವುದರಿಂದಾಗಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲಿದೆ. ಅಂದಹಾಗೆ ಈ ಮೇಳದಲ್ಲಿ ಸಾಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು. ಈ ಸಾಧುಗಳ ಇತಿಹಾಸ ತುಂಬಾ ವಿಚಿತ್ರಾ ಹಾಗೂ ಕುತೂಹಲಕಾರಿ. ಹೀಗೆ ಅಭಯ್ ಸಿಂಗ್ ಎನ್ನುವ ಯುವಕ ಸಾಧು ಆಗಿದ್ದು ಹೇಗೆ? ಎಂಜಿನಿಯರಿಂಗ್ ಪ್ರತಿಭೆಯಿಂದ ಆಧ್ಯಾತ್ಮಿಕ ಗುರುವಿನವರೆಗೆ ಏನಾಲ್ಲಾ ಆಯ್ತು ಎಂದು ತಿಳಿಯೋಣ.
ಅಭಯ್ ಸಿಂಗ್ ಎಂಜಿನಿಯರಿಂಗ್ ಮಾಡುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿ. ಐಐಟಿ ಬಾಂಬೆಯ ಏರೋಸ್ಪೇಸ್ ಎಂಜಿನಿಯರಿಂಗ್ ಪದವೀಧರನಾಗಿದ್ದ ಅಭಯ್ ಸಿಂಗ್, ಆಧ್ಯಾತ್ಮಿಕ ಋಷಿಯಾಗುವ ಪ್ರಯಾಣ ಲಕ್ಷಾಂತರ ಜನರ ಗಮನ ಸೆಳೆದಿದೆ. ಅಂದಹಾಗೆ ಅಭಯ್ ಸಿಂಗ್ ಅವರು ಮೂಲತ: ಹರಿಯಾಣದವರು. ಇವರು ಐಐಟಿ ಬಾಂಬೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಪದವಿ ಹಾಗೂ ವಿನ್ಯಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ. ಇವರು ಮಾಡಿದ ಶೈಕ್ಷಣಿಕ ಸಾಧನೆಗಳು ಅಪಾರ. ಸಾಕಷ್ಟು ಬುದ್ಧಿವಂತನಾಗಿದ್ದ ಅಭಯ್ ಸಿಂಗ್ ಚೆನ್ನಾಗಿ ಓದಿ ಉನ್ನತ ಮಟ್ಟದ ಹುದ್ದೆ ಪಡೆಯುವ ಗುರಿಯನ್ನು ಹೊಂದಿದ್ದರು.

ವಿಜ್ಞಾನದಲ್ಲಿ ಸಿಗದ ಉತ್ತರಕ್ಕಾಗಿ ಹುಡುಕಾಟ
ಶೈಕ್ಷಣಿಕವಾಗಿ ಸಾಕಷ್ಟು ಬುದ್ಧಿವಂತನಾಗಿದ್ದ ಅಭಯ್ ಸಿಂಗ್, ವಿಜ್ಞಾನ ಉತ್ತರಿಸಲು ಸಾಧ್ಯವಾಗದ ತಾತ್ವಿಕ ಪ್ರಶ್ನೆಗಳ ಕಡೆಗೆ ಆಕರ್ಷಿತರಾದರು. ಅಭಯ್ ಅವರ ಕಾಲೇಜು ದಿನಗಳಲ್ಲಿ ತತ್ವಶಾಸ್ತ್ರದ ಆಸಕ್ತಿ ಪ್ರಾರಂಭವಾಯಿತು. ಅಲ್ಲಿ ಅವರು ಸಾಕ್ರಟೀಸ್ ಮತ್ತು ಪ್ಲೇಟೋ ಅವರಂತಹ ಮಹಾನ್ ಚಿಂತಕರ ಕೃತಿಗಳನ್ನು ಅನ್ವೇಷಿಸಿದರು. ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ವೃತ್ತಿ ಜೀವನ ಆರಂಭಿಸಿದ ಅಭಯ್ ಹೊಸ ಛಾಯಾಗ್ರಹಣದಿಂದ ಪ್ರಪಂಚದ ಸೌಂದರ್ಯವನ್ನು ಸೆರೆಹಿಡಿಯಲು ಆರಂಭಿಸಿದರು. ಆದರೆ ಅದು ಅವರು ಬಯಸಿದ ಆಂತರಿಕ ಶಾಂತಿಯನ್ನು ತರಲಿಲ್ಲ.
ಎಂಜಿನಿಯರಿಂಗ್ ಪ್ರತಿಭೆಯಿಂದ ಆಧ್ಯಾತ್ಮಿಕ ಗುರುವಿನವರೆಗೆ
ಅವರ ಹೃದಯ ಆಳವಾದ ಜ್ಞಾನಕ್ಕಾಗಿ ಹಾತೊರೆಯುತ್ತಿತ್ತು. ಅಂತಿಮವಾಗಿ ಅವರು ಶಿವನ ಬೋಧನೆಗಳಲ್ಲಿ ಸಾಂತ್ವನವನ್ನು ಹುಡುಕುತ್ತಾ ಆಧ್ಯಾತ್ಮಿಕ ಮಾರ್ಗದ ಕಡೆಗೆ ತಿರುಗಿದರು. ಅವರ ಆಧ್ಯಾತ್ಮಿಕ ಪ್ರಯಾಣ ಆತ್ಮಾವಲೋಕನ ಮತ್ತು ಆತ್ಮಶೋಧನೆಯಾಗಿ ಬದಲಾಯಿತು. ಬಳಿಕ ಅಭಯ್ ತಮ್ಮ ವೃತ್ತಿ ಜೀವನ ತ್ಯಜಿಸಿ ಆತ್ಮಶೋಧನೆಯನ್ನೇ ರೂಢಿಸಿಕೊಂಡರು. ಇದರ ಬಗ್ಗೆ ಹೆಚ್ಚಿನ ಅಧ್ಯಾಯ ಮಾಡಿದರು. ಬಳಿಕ ಅವರು ತಮ್ಮ ಆಳವಾದ ತತ್ವಶಾಸ್ತ್ರವನ್ನು ಹಂಚಿಕೊಳ್ಳಲು ಆರಂಭಿಸಿದರು. ಇದು ಅವರನ್ನು ಸಾಧುವಿನ ಸ್ಥಿತಿಗೆ ತಂದು ನಿಲ್ಲಿಸಿದೆ. ಹೀಗಾಗಿ ಇವರನ್ನು 'ಐಐಟಿಯನ್ ಬಾಬಾ' ಎಂದು ಕರೆಯಲಾಗುತ್ತದೆ. ಪ್ರಸ್ತುತ ಆಧ್ಯಾತ್ಮದ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕಾರ್ಯದಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಮಹಾಕುಂಭದಲ್ಲಿ 'ಐಐಟಿಯನ್ ಬಾಬಾ'
ಪ್ರಸ್ತುತ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಅಭಯ್ ಸಿಂಗ್ ಅಲಿಯಾಸ್ 'ಐಐಟಿಯನ್ ಬಾಬಾ' ಉಪಸ್ಥಿತಿಯು ಸ್ಪೂರ್ತಿದಾಯಕವಾಗಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮದಲ್ಲಿ ಆಧ್ಯಾತ್ಮಿಕ ಸಾಂತ್ವನವನ್ನು ಬಯಸುವ ಯಾತ್ರಿಕರಿಂದ ತುಂಬಿದ ಸ್ಥಳದಲ್ಲಿ ಅಭಯ್ ಆಧ್ಯಾತ್ಮಿಕತೆಯ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತಿದ್ದಾರೆ.

"ವಿಜ್ಞಾನವು ಜ್ಞಾನವನ್ನು ಒದಗಿಸುತ್ತದೆ, ಆದರೆ ಅದು ಆಳವಾದ ಅಸ್ತಿತ್ವದ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ನೀವು ಜ್ಞಾನವನ್ನು ಅನುಸರಿಸುತ್ತಿದ್ದರೆ, ನೀವು ಎಲ್ಲಿಗೆ ತಲುಪುತ್ತೀರಿ? ನೀವು ತಲುಪುವ ಸ್ಥಳ ಇದು - ಆಧ್ಯಾತ್ಮಿಕತೆ" ಎಂದು ಅಭಯ್ ಅವರು ಒಮ್ಮೆ ಸಂದರ್ಶನದಲ್ಲಿ ಹೇಳಿದ್ದರು.
He is Abhey Singh. An iitian and aerospace engineer who recently became viral due to his spiritual take at Kumbh
— Hindutva Knight (@HPhobiaWatch) January 14, 2025
He regularly posts his spiritual journey videos on his insta(Abhey_singh) pic.twitter.com/888TVunOnQ
ಅವರ ಜೀವನ ಮೇಳದ ಸಾರವನ್ನು ಸಾಕಾರಗೊಳಿಸುತ್ತಿದೆ. ಇದು ಅವರಿಗೆ ಆಂತರಿಕ ಶಾಂತಿಯನ್ನು ಹುಡುಕಲು ಭೌತಿಕತೆಯನ್ನು ಮೀರಿದ ಪ್ರಯಾಣವಾಗಿದೆ. ಪವಿತ್ರ ನೀರಿನಲ್ಲಿ ಸ್ನಾನ ಮಾಡಲು ಲಕ್ಷಾಂತರ ಜನರು ಒಟ್ಟುಗೂಡಿದಾಗ, ಅಭಯ್ ರೂಪಾಂತರದ ದಾರಿದೀಪವಾಗಿ ನಿಂತಿದ್ದಾರೆ. ಅವರ ಕಥೆಯು ಶೈಕ್ಷಣಿಕ ಮತ್ತು ವೃತ್ತಿಪರ ಸಾಧನೆಗಳನ್ನು ಮೀರಿದ ಬೆಳವಣಿಗೆಯನ್ನು ಜನರಿಗೆ ನೆನಪಿಸುತ್ತಿದೆ.
ಕುಂಭದಲ್ಲಿ ಅನೇಕರಿಗೆ, ಅಭಯ್ ಬೌದ್ಧಿಕ ಅನ್ವೇಷಣೆಗಳಿಂದ ಆಧ್ಯಾತ್ಮಿಕ ಜಾಗೃತಿ ಹೇಗೆ ಹೊರಹೊಮ್ಮಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ. ಸತ್ಯ ಮತ್ತು ಜ್ಞಾನೋದಯಕ್ಕಾಗಿ ಶಾಶ್ವತ ಅನ್ವೇಷಣೆಯ ಕುರಿತು ಹೊಸ ದೃಷ್ಟಿಕೋನವನ್ನು ನೀಡುತ್ತಿದ್ದಾರೆ.
ಸಂಪತ್ತು ಮತ್ತು ಯಶಸ್ಸನ್ನು ಹೆಚ್ಚಾಗಿ ಗೌರವಿಸುವ ಜಗತ್ತಿನಲ್ಲಿ ಅಭಯ್ ಅವರ ಕಥೆಯು ಆಧ್ಯಾತ್ಮಿಕತೆಯ ನಿರಂತರ ಶಕ್ತಿಯನ್ನು ನೆನಪಿಸುತ್ತದೆ. ಅಭಯ್ ಸಿಂಗ್ ಅಸಂಖ್ಯಾತ ವ್ಯಕ್ತಿಗಳನ್ನು ತಮ್ಮದೇ ಆದ ಸ್ವಯಂ-ಅನ್ವೇಷಣೆಯ ಹಾದಿಯಲ್ಲಿ ಸಾಗಲು ಪ್ರೇರೇಪಿಸುತ್ತಲೇ ಇದ್ದಾರೆ, ಇದು 2025ರ ಮಹಾ ಕುಂಭಮೇಳದಿಂದ ಹೊರಹೊಮ್ಮಿದ ಅತ್ಯಂತ ಪ್ರಭಾವಶಾಲಿ ಕತೆಗಳಲ್ಲಿ ಒಂದಾಗಿದೆ.












Click it and Unblock the Notifications