Get Updates
Get notified of breaking news, exclusive insights, and must-see stories!

ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರದಿದ್ದರೆ ಅರೆಸ್ಟ್‌ ಅಗ್ತಿದ್ರು: ಆದಿತ್ಯ ಠಾಕ್ರೆ

ಮುಂಬೈ, ಏಪ್ರಿಲ್‌ 14: ಕಳೆದ ವರ್ಷ ಜೂನ್‌ನಲ್ಲಿ ಶಿವಸೇನೆಯಲ್ಲಿನ ಬಂಡಾಯಕ್ಕೂ ಮುನ್ನ ಏಕನಾಥ್ ಶಿಂಧೆ ಅವರು ಠಾಕ್ರೆ ನಿವಾಸಕ್ಕೆ ಭೇಟಿ ನೀಡಿ ಅಳಲು ತೋಡಿಕೊಂಡು ಅವರು ಬಿಜೆಪಿಯವರೊಂದಿಗೆ ಸೇರದಿದ್ದರೆ ಅವರನ್ನು ಕೇಂದ್ರ ತನಿಖಾ ಸಂಸ್ಥೆಗಳು ಬಂಧಿಸುತ್ತವೆ ಎಂದು ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಹೇಳಿದರು.

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 40 ಜನರು ತಮ್ಮ ಸ್ವಂತ ಸ್ಥಾನ ಮತ್ತು ಹಣಕ್ಕಾಗಿ ಬಿಜೆಪಿಯೊಂದಿಗೆ ಹೋಗಿದ್ದಾರೆ. ಅವರಿಗೆ ಅಲ್ಲಿಗೆ ಹೋಗಲು ಬೇರೆ ಯಾವುದೇ ಕಾರಣವಿಲ್ಲ. ಶಿವಸೇನಾ ಯುಬಿಟಿ ಕ್ಯಾಂಪ್‌ನ ಆರ್‌ಎಸ್ ಸಂಸದ ಸಂಜಯ್ ರಾವುತ್ ಅವರು ಆದಿತ್ಯ ಅವರ ಹೇಳಿಕೆ ಸರಿಯಾಗಿದೆ ಎಂದು ಹೇಳಿದರೆ, ಸಿಎಂ ಏಕನಾಥ್‌ ಶಿಂಧೆ ಅವರನ್ನು ಈ ಬಗ್ಗೆ ಕೇಳಿದಾಗ, ಆದಿತ್ಯ ಇನ್ನೂ ಚಿಕ್ಕವರಾಗಿದ್ದಾರೆ ಎಂದು ಮುಂದೆ ಪ್ರತಿಕ್ರಿಯಿಸಲು ನಿರಾಕರಿಸಿದರು.

If Eknath Shinde does not join BJP, he will be arrested: Aditya Thackeray

ಗುರುವಾರ ಮುಂಬೈನಲ್ಲಿ ಅವರು ಹಿಂದಿನ ವರ್ಷ ಮೇ 20ರಂದು ಸಿಎಂ ಅವರ ಅಧಿಕೃತ ನಿವಾಸ ವರ್ಷಕ್ಕೆ ಶಿಂಧೆ ಭೇಟಿಯನ್ನು ಉಲ್ಲೇಖಿಸಿ ಬಿಜೆಪಿಯೊಂದಿಗೆ ಹೋಗೋಣ ಇಲ್ಲದಿದ್ದರೆ ನನ್ನನ್ನು ಬಂಧಿಸಲಾಗುವುದು ಎಂದು ಶಿಂಧೆ ಆ ಸಮಯದಲ್ಲಿ ಹೇಳಿದ್ದರು. ಇದೆಲ್ಲ ನಡೆಯುತ್ತಿದ್ದಾಗ ಉದ್ಧವ್ ಠಾಕ್ರೆ ಮೇ 20 ರಂದು ದೇಶದ್ರೋಹಿಗಳ ಗ್ಯಾಂಗ್ ಲೀಡರ್ ಏಕನಾಥ್ ಶಿಂಧೆ ಎಂದು ಕರೆದಿದ್ದರು ಎಂದು ತಿಳಿಸಿದರು.

ಬಿಜೆಪಿ ಜೊತೆ ಸರ್ಕಾರ ರಚಿಸುವ ಮುನ್ನ ಪಕ್ಷಾಂತರದ ಬಗ್ಗೆ ಎಲ್ಲಾ ವದಂತಿಗಳು ನಿಜವೇ ಎಂದು ಶಿಂಧೆಯನ್ನು ಕೇಳಿದಾಗ ಅವರು ಅಳಲು ತೋಡಿಕೊಂಡು, ನನಗೆ ಸಾಕಷ್ಟು ಒತ್ತಡವಿದೆ. ಇಲ್ಲದಿದ್ದರೆ ಬಂಧನ ಮಾಡಬಹುದು. ಆದರೆ ಇವು ಕೇವಲ ಬೆದರಿಕೆಗಳಾಗಿದ್ದವು. ಆದರೆ ಪಕ್ಷ ಬಿಡುವುದಿಲ್ಲ ಎಂದು ನಮಗೆ ಸುಳ್ಳು ಹೇಳಿ ಹೊರಟು ಹೋದರು. ಅವರು ನಮಗೆ ಮಾಡಿದ್ದನ್ನೇ ಬಿಜೆಪಿಗೂ ಮಾಡಬಹುದು. ಒಮ್ಮೆ ಸುಳ್ಳು ಹೇಳಿದವರು ಮತ್ತೆ ಮತ್ತೆ ಹಾಗೆ ಮಾಡಬಹುದು ಎಂದು ಆದಿತ್ಯ ಆರೋಪಿಸಿದರು.

ಈ ಬಗ್ಗೆ ಏಕನಾಥ್ ಶಿಂಧೆ ಕೂಡ ನನ್ನ ಬಳಿ ಬಂದ ನಂತರ ಈ ಮಾತನ್ನು ಹೇಳಿದ್ದರು. ನಾನು ಅವರಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದೆ. ಆದರೆ ಜೈಲಿನ ಭಯ ಅವರ ಮನಸ್ಸು ಮತ್ತು ಹೃದಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಆದಿತ್ಯ ಹೇಳಿದ್ದು ಸರಿ ಎಂದು ರಾವತ್ ಟ್ವೀಟ್ ಮಾಡಿದ್ದಾರೆ.

If Eknath Shinde does not join BJP, he will be arrested: Aditya Thackeray

ಗುರುವಾರ ನಡೆದ ಮತ್ತೊಂದು ಸಮಾರಂಭದಲ್ಲಿ ಮಾತನಾಡಿದ ಆದಿತ್ಯ, "ಎಲ್ಲವೂ" ಕೊಟ್ಟವರು ಹೋಗಿದ್ದಾರೆ ಮತ್ತು ಏನೂ ಸಿಗದವರು ಉಳಿದುಕೊಂಡಿದ್ದಾರೆ. ನಾವು ಯಾರನ್ನು ಕುಟುಂಬ ಎಂದು ಪರಿಗಣಿಸುತ್ತಿದ್ದೇವೋ, ಅಷ್ಟೊಂದು ನಂಬಿಕೆ ಇಟ್ಟ ನಂತರವೂ ಆ ಜನರು ಹೊರಟುಹೋದರು. ಒಂಬತ್ತು ತಿಂಗಳ ಹಿಂದೆ ನಡೆದ ಘಟನೆಯ ನಂತರ ನಮಗೆ ಯೋಚಿಸಲು ಸಮಯವಿಲ್ಲ, ನಾನು ಒಬ್ಬಂಟಿಯಾಗಿರುವಾಗ ಇದನ್ನು ಯೋಚಿಸಿದಾಗ ನನಗೆ ದುಃಖವಾಗುತ್ತದೆ ಎಂದರು.

ಆಗ ಇನ್ನೊಂದು ವಿಷಯ ನೆನಪಿಗೆ ಬರುತ್ತದೆ. ಈ ಬಗ್ಗೆ ನನ್ನ ತಂದೆ ಎಷ್ಟು ಭಾವನೆ ಹೊಂದಿದ್ದಿರಬಹುದು? ಏಕೆಂದರೆ ನಿಮಗೆ ಎಲ್ಲವನ್ನೂ ನೀಡಿದ ಮನುಷ್ಯನನ್ನು ನೀವು ಇರಿದು ಹಾಕುತ್ತೀರಿ. ಪಕ್ಷ ಬಿಡುವುದು ಬೇರೆ ವಿಚಾರ. ಎಷ್ಟೋ ಜನ ಪಕ್ಷ ಬಿಟ್ಟರೂ ಪಕ್ಷ ಬಿಡದೆ ಪಕ್ಷವನ್ನೇ ಕದ್ದಿದ್ದಾರೆ. ಹೆಸರು ಕದ್ದು, ಸಿಂಬಲ್ ಕದ್ದು, ಅವರಿಗಾಗಿ ಮಾಡಿದ್ದನ್ನು ಮರೆತು ನಮ್ಮನ್ನು ಶಪಿಸೋದು ಎಷ್ಟು ನ್ಯಾಯ? ಇದು ಮಾನವೀಯತೆಯ ಮೇಲಿನ ನಂಬಿಕೆಯನ್ನು ಅಲುಗಾಡಿಸುವ ಸಂಗತಿಯಾಗಿದೆ ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+