ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರದಿದ್ದರೆ ಅರೆಸ್ಟ್ ಅಗ್ತಿದ್ರು: ಆದಿತ್ಯ ಠಾಕ್ರೆ
ಮುಂಬೈ, ಏಪ್ರಿಲ್ 14: ಕಳೆದ ವರ್ಷ ಜೂನ್ನಲ್ಲಿ ಶಿವಸೇನೆಯಲ್ಲಿನ ಬಂಡಾಯಕ್ಕೂ ಮುನ್ನ ಏಕನಾಥ್ ಶಿಂಧೆ ಅವರು ಠಾಕ್ರೆ ನಿವಾಸಕ್ಕೆ ಭೇಟಿ ನೀಡಿ ಅಳಲು ತೋಡಿಕೊಂಡು ಅವರು ಬಿಜೆಪಿಯವರೊಂದಿಗೆ ಸೇರದಿದ್ದರೆ ಅವರನ್ನು ಕೇಂದ್ರ ತನಿಖಾ ಸಂಸ್ಥೆಗಳು ಬಂಧಿಸುತ್ತವೆ ಎಂದು ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಹೇಳಿದರು.
ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 40 ಜನರು ತಮ್ಮ ಸ್ವಂತ ಸ್ಥಾನ ಮತ್ತು ಹಣಕ್ಕಾಗಿ ಬಿಜೆಪಿಯೊಂದಿಗೆ ಹೋಗಿದ್ದಾರೆ. ಅವರಿಗೆ ಅಲ್ಲಿಗೆ ಹೋಗಲು ಬೇರೆ ಯಾವುದೇ ಕಾರಣವಿಲ್ಲ. ಶಿವಸೇನಾ ಯುಬಿಟಿ ಕ್ಯಾಂಪ್ನ ಆರ್ಎಸ್ ಸಂಸದ ಸಂಜಯ್ ರಾವುತ್ ಅವರು ಆದಿತ್ಯ ಅವರ ಹೇಳಿಕೆ ಸರಿಯಾಗಿದೆ ಎಂದು ಹೇಳಿದರೆ, ಸಿಎಂ ಏಕನಾಥ್ ಶಿಂಧೆ ಅವರನ್ನು ಈ ಬಗ್ಗೆ ಕೇಳಿದಾಗ, ಆದಿತ್ಯ ಇನ್ನೂ ಚಿಕ್ಕವರಾಗಿದ್ದಾರೆ ಎಂದು ಮುಂದೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಗುರುವಾರ ಮುಂಬೈನಲ್ಲಿ ಅವರು ಹಿಂದಿನ ವರ್ಷ ಮೇ 20ರಂದು ಸಿಎಂ ಅವರ ಅಧಿಕೃತ ನಿವಾಸ ವರ್ಷಕ್ಕೆ ಶಿಂಧೆ ಭೇಟಿಯನ್ನು ಉಲ್ಲೇಖಿಸಿ ಬಿಜೆಪಿಯೊಂದಿಗೆ ಹೋಗೋಣ ಇಲ್ಲದಿದ್ದರೆ ನನ್ನನ್ನು ಬಂಧಿಸಲಾಗುವುದು ಎಂದು ಶಿಂಧೆ ಆ ಸಮಯದಲ್ಲಿ ಹೇಳಿದ್ದರು. ಇದೆಲ್ಲ ನಡೆಯುತ್ತಿದ್ದಾಗ ಉದ್ಧವ್ ಠಾಕ್ರೆ ಮೇ 20 ರಂದು ದೇಶದ್ರೋಹಿಗಳ ಗ್ಯಾಂಗ್ ಲೀಡರ್ ಏಕನಾಥ್ ಶಿಂಧೆ ಎಂದು ಕರೆದಿದ್ದರು ಎಂದು ತಿಳಿಸಿದರು.
ಬಿಜೆಪಿ ಜೊತೆ ಸರ್ಕಾರ ರಚಿಸುವ ಮುನ್ನ ಪಕ್ಷಾಂತರದ ಬಗ್ಗೆ ಎಲ್ಲಾ ವದಂತಿಗಳು ನಿಜವೇ ಎಂದು ಶಿಂಧೆಯನ್ನು ಕೇಳಿದಾಗ ಅವರು ಅಳಲು ತೋಡಿಕೊಂಡು, ನನಗೆ ಸಾಕಷ್ಟು ಒತ್ತಡವಿದೆ. ಇಲ್ಲದಿದ್ದರೆ ಬಂಧನ ಮಾಡಬಹುದು. ಆದರೆ ಇವು ಕೇವಲ ಬೆದರಿಕೆಗಳಾಗಿದ್ದವು. ಆದರೆ ಪಕ್ಷ ಬಿಡುವುದಿಲ್ಲ ಎಂದು ನಮಗೆ ಸುಳ್ಳು ಹೇಳಿ ಹೊರಟು ಹೋದರು. ಅವರು ನಮಗೆ ಮಾಡಿದ್ದನ್ನೇ ಬಿಜೆಪಿಗೂ ಮಾಡಬಹುದು. ಒಮ್ಮೆ ಸುಳ್ಳು ಹೇಳಿದವರು ಮತ್ತೆ ಮತ್ತೆ ಹಾಗೆ ಮಾಡಬಹುದು ಎಂದು ಆದಿತ್ಯ ಆರೋಪಿಸಿದರು.
ಈ ಬಗ್ಗೆ ಏಕನಾಥ್ ಶಿಂಧೆ ಕೂಡ ನನ್ನ ಬಳಿ ಬಂದ ನಂತರ ಈ ಮಾತನ್ನು ಹೇಳಿದ್ದರು. ನಾನು ಅವರಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದೆ. ಆದರೆ ಜೈಲಿನ ಭಯ ಅವರ ಮನಸ್ಸು ಮತ್ತು ಹೃದಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಆದಿತ್ಯ ಹೇಳಿದ್ದು ಸರಿ ಎಂದು ರಾವತ್ ಟ್ವೀಟ್ ಮಾಡಿದ್ದಾರೆ.

ಗುರುವಾರ ನಡೆದ ಮತ್ತೊಂದು ಸಮಾರಂಭದಲ್ಲಿ ಮಾತನಾಡಿದ ಆದಿತ್ಯ, "ಎಲ್ಲವೂ" ಕೊಟ್ಟವರು ಹೋಗಿದ್ದಾರೆ ಮತ್ತು ಏನೂ ಸಿಗದವರು ಉಳಿದುಕೊಂಡಿದ್ದಾರೆ. ನಾವು ಯಾರನ್ನು ಕುಟುಂಬ ಎಂದು ಪರಿಗಣಿಸುತ್ತಿದ್ದೇವೋ, ಅಷ್ಟೊಂದು ನಂಬಿಕೆ ಇಟ್ಟ ನಂತರವೂ ಆ ಜನರು ಹೊರಟುಹೋದರು. ಒಂಬತ್ತು ತಿಂಗಳ ಹಿಂದೆ ನಡೆದ ಘಟನೆಯ ನಂತರ ನಮಗೆ ಯೋಚಿಸಲು ಸಮಯವಿಲ್ಲ, ನಾನು ಒಬ್ಬಂಟಿಯಾಗಿರುವಾಗ ಇದನ್ನು ಯೋಚಿಸಿದಾಗ ನನಗೆ ದುಃಖವಾಗುತ್ತದೆ ಎಂದರು.
ಆಗ ಇನ್ನೊಂದು ವಿಷಯ ನೆನಪಿಗೆ ಬರುತ್ತದೆ. ಈ ಬಗ್ಗೆ ನನ್ನ ತಂದೆ ಎಷ್ಟು ಭಾವನೆ ಹೊಂದಿದ್ದಿರಬಹುದು? ಏಕೆಂದರೆ ನಿಮಗೆ ಎಲ್ಲವನ್ನೂ ನೀಡಿದ ಮನುಷ್ಯನನ್ನು ನೀವು ಇರಿದು ಹಾಕುತ್ತೀರಿ. ಪಕ್ಷ ಬಿಡುವುದು ಬೇರೆ ವಿಚಾರ. ಎಷ್ಟೋ ಜನ ಪಕ್ಷ ಬಿಟ್ಟರೂ ಪಕ್ಷ ಬಿಡದೆ ಪಕ್ಷವನ್ನೇ ಕದ್ದಿದ್ದಾರೆ. ಹೆಸರು ಕದ್ದು, ಸಿಂಬಲ್ ಕದ್ದು, ಅವರಿಗಾಗಿ ಮಾಡಿದ್ದನ್ನು ಮರೆತು ನಮ್ಮನ್ನು ಶಪಿಸೋದು ಎಷ್ಟು ನ್ಯಾಯ? ಇದು ಮಾನವೀಯತೆಯ ಮೇಲಿನ ನಂಬಿಕೆಯನ್ನು ಅಲುಗಾಡಿಸುವ ಸಂಗತಿಯಾಗಿದೆ ಎಂದು ಅವರು ಹೇಳಿದರು.
-
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ












Click it and Unblock the Notifications