ದೀಪಾವಳಿ ಸಂದೇಶದ ಮೂಲಕ ಬ್ಯಾಂಕ್ ವಿವರ ಕದಿಯುವವರಿಂದ ಸುರಕ್ಷತೆ ಹೇಗೆ?
ಬೆಂಗಳೂರು, ಅಕ್ಟೋಬರ್ 21: ದೀಪಾವಳಿ ಮತ್ತೆ ಬಂದಿದೆ. ಅದರೊಂದಿಗೆ ಉಡುಗೊರೆ ಹೊತ್ತ ಶುಭಾಶಯಗಳ ಸಂದೇಶವೂ ಸಾಮಾಜಿಕ ಜಾಲತಾಣ ವಾಟ್ಸಪ್ನಲ್ಲೂ ಹರಿದು ಬರುತ್ತದೆ. ಈ ಹಬ್ಬದ ಋತುವಿನ ಉತ್ತಮ ಪ್ರಯೋಜನವನ್ನು ಪಡೆಯಲು ವಂಚಕರು ನಕಲಿ ದೀಪಾವಳಿ ಕೊಡುಗೆಗಳು ಮತ್ತು ಸಂದೇಶಗಳ ಮೂಲಕ ಜನರನ್ನು ವಂಚಿಸಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಭಾರತ ಸರ್ಕಾರದ ಸೈಬರ್ ಸೆಕ್ಯುರಿಟಿ ತಂಡವು ನೀಡಿದ ಸಲಹೆಯ ಪ್ರಕಾರ, ಕೆಲವು ವೈರಲ್ ದೀಪಾವಳಿ ಶುಭಾಶಯ ಸಂದೇಶಗಳು ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳನ್ನು ಕದಿಯಲು ಬಳಕೆದಾರರನ್ನು ಗುರಿಯಾಗಿಸಿಕೊಂಡಿವೆ. ವೈರಲ್ ಸಂದೇಶಗಳಲ್ಲಿನ ಲಿಂಕ್ಗಳು .ಸಿಎನ್ ಡೊಮೇನ್ ವಿಸ್ತರಣೆಗಳನ್ನು ಬಳಸುವುದರಿಂದ ಈ ದೀಪಾವಳಿ ಸಂದೇಶಗಳು ಕೆಲವು ಚೀನೀ ವೆಬ್ಸೈಟ್ಗಳೊಂದಿಗೆ ಲಿಂಕ್ಗಳನ್ನು ಹೊಂದಿವೆ ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಬಹಿರಂಗಪಡಿಸಿದೆ. ಆದರೆ ಇತರರು .ಎಕ್ಸ್ವೈಝಡ್ ಮತ್ತು .ಟಿಒಪಿ ನಂತಹ ವಿಸ್ತರಣೆಗಳನ್ನು ಬಳಸುತ್ತಾರೆ.
ಇತ್ತಿಚೇಗೆ ಬಳಕೆದಾರರಿಂದ ಮಾಹಿತಿಯನ್ನು ಕದಿಯಬಹುದಾದ ಲಿಂಕ್ಗಳೊಂದಿಗೆ ಒಂದೆರಡು ವೈರಲ್ ಸಂದೇಶಗಳನ್ನು ಸಹ ಕೆಲವರು ಸ್ವೀಕರಿಸಿದ್ದಾರೆ. ಅಂತಹ ಸಂದೇಶಗಳಲ್ಲಿ ಒಂದನ್ನು ಜನಪ್ರಿಯ ಭಾರತೀಯ ಆಭರಣ ಬ್ರ್ಯಾಂಡ್ ತನಿಷ್ಕ್ನಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಕೇಂದ್ರ ಸರ್ಕಾರದ ತಂಡವು ಸಲಹೆಯಲ್ಲಿ ವಿವರಿಸಿದಂತೆ, ನಕಲಿ ಸಂದೇಶಗಳು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ (ವಾಟ್ಸಾಪ್, ಇನ್ಸ್ಟಾಗ್ರಾಮ್, ಟೆಲಿಗ್ರಾಮ್ ಇತ್ಯಾದಿ) ಚಲಾವಣೆಯಲ್ಲಿವೆ.

ಅದು ಹಬ್ಬದ ಕೊಡುಗೆಯನ್ನು ಬಳಕೆದಾರರಿಗೆ ಉಡುಗೊರೆ ಲಿಂಕ್ಗಳು ಮತ್ತು ಬಹುಮಾನಗಳ ಇವೆ ಎಂಬಂತೆ ಸಂದೇಶ ಕಳಿಸಿ ಆಮಿಷವೊಡ್ಡುತ್ತದೆ. ಈ ಸೋಗು ಹೆಚ್ಚಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಾಟ್ಸಾಪ್, ಟೆಲಿಗ್ರಾಮ್, ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಗೆಳೆಯರೊಂದಿಗೆ ಲಿಂಕ್ ಅನ್ನು ಹಂಚಿಕೊಳ್ಳಲು ಸಲಹೆ ನೀಡುತ್ತದೆ.
ದುರುದ್ದೇಶಪೂರಿತ ಈ ಲಿಂಕ್ ಹೊಂದಿರುವ ದೀಪಾವಳಿ ಶುಭಾಶಯ ಸಂದೇಶವನ್ನು ವ್ಯಕ್ತಿಯೊಬ್ಬರು ಸ್ವೀಕರಿಸಿ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಅವರನ್ನು ಜನಪ್ರಿಯ ಬ್ರಾಂಡ್ ಅನ್ನು ಅನುಸರಿಸುವ ನಕಲಿ ವೆಬ್ಸೈಟ್ನೊಂದಿಗೆ ಸ್ವಾಗತಿಸಲಾಗುತ್ತದೆ. ವಿಶೇಷ ಉಡುಗೊರೆಯನ್ನು ಪಡೆಯುವ ಸಲುವಾಗಿ ಕೆಲವು ವೈಯಕ್ತಿಕ ವಿವರಗಳನ್ನು ತುಂಬಲು ಮತ್ತು ಅವರ ಸಂಪರ್ಕ, ಸಂದೇಶ, ಕರೆ ದಾಖಲೆಗಳಿಗೆ ಅನುಮತಿಯನ್ನು ನೀಡುವಂತೆ ಸಂದೇಶ ಸ್ವೀಕರಿಸಿದ ವ್ಯಕ್ತಿಯನ್ನು ಆಮಿಷಕ್ಕೆ ಒಳಪಡಿಸಲಾಗುತ್ತದೆ.

ಮಾಹಿತಿಯನ್ನು ಸ್ವೀಕರಿಸಿದ ನಂತರ ವಿಶೇಷ ದೀಪಾವಳಿ ಉಡುಗೊರೆಯನ್ನು ಪಡೆಯಲು ನಿರ್ದಿಷ್ಟ ಸಂಖ್ಯೆಯ ಸ್ನೇಹಿತರು ಮತ್ತು ಅವರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳೊಂದಿಗೆ ಸಂದೇಶವನ್ನು ಹಂಚಿಕೊಳ್ಳಲು ಅವರನ್ನು ಕೇಳುತ್ತದೆ. ಅಂತಹ ವಂಚನೆಗಳಿಂದ ಸುರಕ್ಷಿತವಾಗಿರಲು ನೀವು ಎಂದಿಗೂ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ವಿಶೇಷವಾಗಿ ಆನ್ಲೈನ್ನಲ್ಲಿ ಪರಿಶೀಲಿಸದ ಮೂಲದಿಂದ ಲಿಂಕ್ ಅನ್ನು ಸ್ವೀಕರಿಸದೆ. ಯಾವುದೇ ವೆಬ್ಸೈಟ್ ತೆರೆಯುವ ಮೊದಲು, ನೀವು ಯುಆರ್ಎಲ್ ಅನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಅನುಮಾನಾಸ್ಪದ ವಿಸ್ತರಣೆಗಳನ್ನು ಸಹ ಗಮನಿಸಬೇಕು ಎಂದು ಸರ್ಕಾರ ಸಲಹೆ ನೀಡಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications