ಘೋಷಿತ ಅಪರಾಧಿ ಪಟ್ಟ, ಇಡಿ ಕೈಯಲ್ಲಿ ಮಲ್ಯ ಜುಟ್ಟ!
ಬೆಂಗಳೂರು, ಜೂನ್. 15: ಘೋಷಿತ ಅಪರಾಧಿ ವಿಜಯ್ ಮಲ್ಯ ಅವರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ತನ್ನ ಕಾನೂನು ಕುಣಿಕೆಯನ್ನು ಮತ್ತಷ್ಟು ಬಿಗಿ ಮಾಡಲು ಮುಂದಾಗಿದೆ. ಪ್ರಪಂಚದಾದ್ಯಂತ ಹೊಂದಿರುವ ಆಸ್ತಿಗಳನ್ನು ಮಲ್ಯ ಕಳೆದುಕೊಂಡರೂ ಆಶ್ಚರ್ಯವಿಲ್ಲ.
ಮಲ್ಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆರಂಭ ಮಾಡಿದರೆ ಇಂಗ್ಲೆಂಡಿನಿಂದ ಮಲ್ಯ ದೇಶಕ್ಕೆ ಹಿಂದಿರುಗುವ ಸಾಧ್ಯತೆಯೂ ಇದೆ. ಮಲ್ಯ ಒಂದು ವೇಳೆ ಹಿಂದಿರುಗುವ ಸೂಚನೆ ಸಿಕ್ಕರೆ ಅವರನ್ನು ವಶಕ್ಕೆ ಪಡೆದು ಪ್ರಶ್ನೆ ಮಾಡಲು ಸಿದ್ಧತೆ ನಡೆಯುತ್ತಿದೆ.[ಮದ್ಯದ ದೊರೆಗೆ ಇದೀಗ ಘೋಷಿತ ಅಪರಾಧಿ ಪಟ್ಟ]

ಜಾರಿ ನಿರ್ದೇಶನಾಲಯದ ಅಡಿ ಮಲ್ಯರ ಎಲ್ಲ ಆಸ್ತಿ
ಮಲ್ಯರ ಕೋಟೆ ಛಿದ್ರವಾಗಿದ್ದು ಅವರ ಎಲ್ಲ ಆಸ್ತಿಯ ಮೇಲೆ ಇದೀಗ ಜಾರಿ ನಿರ್ದೇಶನಾಲಯ ಹಕ್ಕು ಸ್ಥಾಪನೆ ಮಾಡಿದೆ.
ಇನ್ನು ಮಲ್ಯರನ್ನು ಬ್ರಿಟನ್ ನಿಂದ ಕರೆಸಿಕೊಳ್ಳುವ ಸಾದ್ಯತೆಗಳತ್ತವೂ ಇಡಿ ಗಮನ ಹರಿಸಿದೆ. ಮಲ್ಯರ ಆಸ್ತಿ ಮೇಲೆ ಹಕ್ಕು ಸಾಧಿಸಿದರೆ ಅವರಾಗಿಯೇ ಮನವಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಇಡಿಯ ಅಧಿಕಾರಿಯೊಬ್ಬರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಘೋಷಿತ ಅಪರಾಧಿ ಪದವನ್ನು ಹಿಡಿದುಕೊಂಡು ಇಡಿ ಬ್ರಿಟನ್ ಗೆ ತೆರಳುವಂತೆ ಇಲ್ಲ. ಇಡಿಯ ವ್ಯಾಪ್ತಿ ಭಾರತಕ್ಕೆ ಸೀಮಿತ. ಮಲ್ಯ ಬರಲಿ ಬಾರದಿರಲಿ ಬ್ಯಾಂಕುಗಳಿಗೆ ಹಣ ಪಾವತಿಯಾಗುವುದು ಮುಖ್ಯವಾದ ಅಂಶ. ಅವರ ಆಸ್ತಿ ಮಾರಾಟ ಮಾಡುವುದರಿಂದ ಹಣ ಸಂಗ್ರಹಣೆ ಆದರೆ ಗೊಂದಲ ಬಗೆಹರಿದಂತೆಯೇ.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]
ಮಲ್ಯರಿಗೆ 30 ದಿನದ ಅವಕಾಶ
ಮಲ್ಯರಿಗೆ ನ್ಯಾಯಾಲಯದ ಆದೇಶದ ದಿನದಿಂದ(ಜೂನ್ 14) ಮೂವತ್ತು ದಿನಗಳ ಕಾಲಾವಕಾಶ ಸಿಕ್ಕಿದೆ. ಹಾಗಾಗಿ ಇಡಿ ಸಹ ಒಂದು ತಿಂಗಳು ಕಾಯಲು ಮುಂದಾಗಿದೆ. [ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]
ಒಂದು ವೇಳೆ ಕಾಲಾವಕಾಶ ಮುಗಿದರೂ ಮಲ್ಯ ಹಾಜರಾಗದಿದ್ದರೆ ಇಡಿ ಕಠಿಣ ಕ್ರಮಕ್ಕೆ ಮುಂದಾಗುವುದು ನಿಶ್ಚಿತ. ಇಡಿಯ ಮೊದಲ ಗುರಿ ಮಲ್ಯರ ಎಲ್ಲ ಆಸ್ತಿಗಳ ದಾಖಲೆ ಸಂಗ್ರಹಿಸಿ ತನ್ನ ಸುಪರ್ದಿಗೆ ಪಡೆದುಕೊಳ್ಳುವುದು.(ಒನ್ ಇಂಡಿಯಾ ನ್ಯೂಸ್)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications