ಚೀನಾ ಯುವತಿಯರನ್ನು ಬಳಸಿ ಐಎಸ್ಐನಿಂದ ಭಾರತೀಯರ ಹನಿ ಟ್ರ್ಯಾಪ್
ನವದೆಹಲಿ, ಅಕ್ಟೋಬರ್ 12: ಬ್ರಹ್ಮೋಸ್ ಕ್ಷಿಪಣಿ ರಹಸ್ಯದ ಹಸ್ತಾಂತರ ಪ್ರಕರಣ ಆಘಾತ ಸೃಷ್ಟಿಸಿದ ಬೆನ್ನಲ್ಲೇ, ಗುಪ್ತಚರ ಇಲಾಖೆಯು 'ಹನಿ ಟ್ರ್ಯಾಪ್'ಗಳ ಕುರಿತು ಎಚ್ಚರಿಕೆ ಹೊರಡಿಸಿದೆ.
ಭಾರತದಲ್ಲಿನ ಮಹತ್ವದ ಮತ್ತು ರಹಸ್ಯ ಮಾಹಿತಿಗಳನ್ನು ಪಡೆದುಕೊಳ್ಳಲು ಅವುಗಳನ್ನು ಬಲ್ಲ ಉನ್ನತ ಶ್ರೇಯಾಂಕದ ಅಧಿಕಾರಿಗಳನ್ನು ಹನಿ ಟ್ರ್ಯಾಪ್ನಲ್ಲಿ ಸಿಲುಕಿಸುವ ಸಲುವಾಗಿ ಪಾಕಿಸ್ತಾನ ಮತ್ತು ಚೀನಾದ ಸುಂದರ ಯುವತಿಯರನ್ನು ಪಾಕಿಸ್ತಾನದ ಐಎಸ್ಐ ಬಳಸಿಕೊಳ್ಳುತ್ತಿದೆ ಎಂದು ಈ ಎಚ್ಚರಿಕೆ ತಿಳಿಸಿದೆ.
ಭಾರತದ ಪ್ರಮುಖ ಕ್ಷಿಪಣಿ "ಬ್ರಹ್ಮೋಸ್ " ಕುರಿತ ತಾಂತ್ರಿಕ ಮಾಹಿತಿಗಳನ್ನು ಐಎಸ್ಐ ಉಗ್ರರಿಗೆ ಮತ್ತು ಅಮೆರಿಕದ ಗುಪ್ತಚರ ಏಜೆನ್ಸಿಗಳಿಗೆ ನೀಡುತ್ತಿದ್ದ ಎಂದು ಮಾಹಿತಿ ಮೇರೆಗೆ ಬಲೆ ಬೀಸಿ ನಿಶಾಂತ್ ಅಗರವಾಲ್ ಎಂಬಾತನನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿತ್ತು.
ನಾಗ್ಪುರದ ಡಿಆರ್ ಡಿಒ ಬ್ರಹ್ಮೋಸ್ ಘಟಕದಲ್ಲಿ ಜ್ಯೂನಿಯರ್ ಸೈಂಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಿಶಾಂತ್ ಅಗರವಾಲ್ ಪಾಕಿಸ್ತಾನದ ಐಎಸ್ಐ ಜತೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ.

ಕೆನಡಾದಿಂದ ಆಫರ್
ಕೆನಡಾ ಮೂಲದ ಸೆಜಲ್ ಕಪೂರ್ ಎಂಬ ಮಹಿಳೆ ಜತೆ ನಿಶಾಂತ್ ಗೆ ಗೆಳೆತನ ಉಂಟಾಗಿತ್ತು. ಲಿಂಕ್ಡಿನ್ ಮೂಲಕ ಮೊದಲಿಗೆ ನಿಶಾಂತ್ ಗೆ ಆಕೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ನಂತರ ಫೇಸ್ ಬುಕ್ ನಲ್ಲಿ ಇಬ್ಬರ ಚಾಟಿಂಗ್ ನಿರಂತರವಾಗಿ ಸಾಗಿತ್ತು. ನಿಶಾಂತ್ ಗೆ ಕೆನಡಾದಲ್ಲಿ ಉದ್ಯೋಗ, ಸರಿ ಸುಮಾರು 30,000 ಡಾಲರ್ ಪ್ರತಿ ತಿಂಗಳು ಸಂಬಳದ ಆಫರ್ ಬಂದಿತ್ತು.
ಸೆಜಲ್ ಕಪೂರ್ ಅಲ್ಲದೆ ಮತ್ತೊಬ್ಬ ಮಹಿಳೆ ಜತೆ ನಿಶಾಂತ್, ಫೇಸ್ ಬುಕ್ ನಲ್ಲಿ ಚಾಟಿಂಗ್ ನಡೆಸಿದ್ದ. ಆಕೆ ಹೆಸರು ನೇಹಾ ಶರ್ಮ ಎಂದಿದ್ದು, ಪಾಕಿಸ್ತಾನದಲ್ಲಿ ಐಪಿ ಅಡ್ರೆಸ್ ಪತ್ತೆ ಆಗಿದೆ.
ನಿಶಾಂತ್ನನ್ನು ಹನಿ ಟ್ರ್ಯಾಪ್ನಲ್ಲಿ ಸಿಲುಕಿಸಿ ಆತನಿಂದ ರಹಸ್ಯ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಚ್ಚರಿಕೆ ರವಾನೆ
ಇಂತಹ ಅನೇಕ ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ಗುಪ್ತಚರ ಸಂಸ್ಥೆಯು ಎಲ್ಲ ಸರ್ಕಾರಿ ಇಲಾಖೆಗಳಿಗೆ ಎಚ್ಚರಿಕೆ ರವಾನಿಸಿದೆ. ಮುಖ್ಯವಾಗಿ ರಕ್ಷಣಾ ದಳಕ್ಕೆ ಸಂಬಂಧಿಸಿದ ಇಲಾಖೆಗಳಲ್ಲಿ ಇಂತಹ 'ಉರುಳಿ'ನ ಬಗ್ಗೆ ತೀವ್ರ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಮತ್ತು ಅಧಿಕಾರಿಗಳಲ್ಲಿ ಇದರ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಅಂತರ್ಜಾಲದಲ್ಲಿ ತಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಗಮನಿಸುವಂತೆ ಹೇಳಬೇಕು ಎಂದು ಐಬಿ ಹೇಳಿದೆ.

ಚೀನಾ ಯುವತಿಯರ ಬಳಕೆ
'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು, ಇಂತಹ ಜಾಲಗಳನ್ನು ನಿರ್ಮಿಸಲು ಪಾಕಿಸ್ತಾನವು, ಚೀನಾದ ಸುಂದರ ಯುವತಿಯರನ್ನು ಬಳಸಿಕೊಳ್ಳುತ್ತಿದೆ. ಈ ಮಹಿಳೆಯರು ಭಾರತದ ಅಧಿಕಾರಿಗಳನ್ನು ಪತ್ತೆಹಚ್ಚಿ ಅವರೊಂದಿಗೆ ಅಂತರ್ಜಾಲದಲ್ಲಿ ನಂಟು ಬೆಸೆಯುತ್ತಾರೆ ಎಂದು ತಿಳಿಸಿದರು.
ಪ್ರೊಫೈಲ್ ಪುಟಗಳಲ್ಲಿ ಚೀನಾ ಮತ್ತು ಪಾಕಿಸ್ತಾನಿ ಮಹಿಳೆಯರ ಫೋಟೊಗಳನ್ನು ಬಳಸುವ ಐಎಸ್ಐ, ಅಧಿಕಾರಿಗಳನ್ನು ಸಿಲುಕಿಸಲು ಇಂಗ್ಲಿಷ್ ಹಾಗೂ ಉರ್ದು ಮಾತನಾಡುವ ಮಹಿಳೆಯರನ್ನು ನೇಮಿಸಿಕೊಳ್ಳುತ್ತಿದೆ.
ಮಹಿಳೆಯ ಪ್ರೊಫೈಲ್ ಸೃಷ್ಟಿಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಗೆಳೆತನದ ರಿಕ್ವೆಸ್ಟ್ ಕಳುಹಿಸಲಾಗುತ್ತದೆ. ಬಳಿಕ ಆ ಖಾತೆಯನ್ನು ನಿಭಾಯಿಸುವವರು ಚಾಟಿಂಗ್ಗೆ ಎಳೆಯುತ್ತಾರೆ.

ಅರುಣ್ ಮರ್ವಾಹ ಘಟನೆ
ಈ ಹಿಂದೆ ಐಎಎಫ್ ಅಧಿಕಾರಿ ಅರುಣ್ ಮರ್ವಾಹ ಅವರನ್ನು ಹನಿ ಟ್ರ್ಯಾಪ್ನಲ್ಲಿ ಸಿಲುಕಿಸುವಾಗಲೂ ಇದೇ ತಂತ್ರ ಅನುಸರಿಸಲಾಗಿತ್ತು. ಅವರೊಂದಿಗೆ ಅಶ್ಲೀಲ ಮಾತುಗಳನ್ನು ಆಡುವ ಮೂಲಕ ಮೊದಲು ಅವರನ್ನು ಸಿಲುಕಿಸಲಾಗಿತ್ತು. ಬಳಿಕ ಮಾಹಿತಿ ಒದಗಿಸದೆ ಇದ್ದರೆ ಚಾಟ್ನ ವಿವರಗಳನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದರು.

ಅಪ್ಲಿಕಷೇನ್ ಬಳಕೆ
ಹೂಕ್ಅಪ್ ಎಂಬ ಚಾಟಿಂಗ್ ಆಪ್ ಬಳಸುತ್ತಿದ್ದ ಅರುಣ್, ಆ ಅಪ್ಲಿಕೇಷನ್ ಮೂಲಕ ಸೂಕ್ಷ್ಮವಾದ ಮಾಹಿತಿಗಳನ್ನು ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ. ಆದರೆ, ವ್ಯಕ್ತಿಯು ಒಮ್ಮೆ ಲಾಗೌಟ್ ಆದಾಗ ಆತ ನಡೆಸಿದ ಎಲ್ಲ ಸಂಭಾಷಣೆಗಳನ್ನೂ ಅಪ್ಲಿಕೇಷನ್ ಅಳಿಸಿಹಾಕುತ್ತದೆ. ಹೀಗಾಗಿ ಈ ಮಾಹಿತಿಗಳು ಅಧಿಕಾರಿಗಳಿಗೆ ದೊರೆತಿರಲಿಲ್ಲ.

ಇಸ್ಲಾಮಾಬಾದ್ನಿಂದ ನಿರ್ವಹಣೆ
ಇಂತಹ ಕುಣಿಕೆಗಳನ್ನು ಒಡ್ಡಲು ಆನ್ಲೈನ್ನಲ್ಲಿ ಸೃಷ್ಟಿಸಿದ ವಿವಿಧ ಪ್ರೊಫೈಲ್ಗಳನ್ನು ಪರಿಶೀಲಿಸಿದ ತನಿಖಾಧಿಕಾರಿಗಳು ಚೀನೀ ಮಹಿಳೆಯರ ಅಪಾರ ಸಂಖ್ಯೆಯ ಫೋಟೊಗಳನ್ನು ಪತ್ತೆಹಚ್ಚಿದೆ. ಈ ಎಲ್ಲಾ ವಿಳಾಸಗಳೂ ಐಎಸ್ಐನ ಕೇಂದ್ರ ಚಟುವಟಿಕೆ ನಡೆಯುತ್ತಿರುವ ಇಸ್ಲಾಮಾಬಾದ್ನಿಂದ ನಿರ್ವಹಣೆಯಾಗುತ್ತಿವೆ. ಅಲ್ಲಿಯೇ ಹನಿ ಟ್ರ್ಯಾಪ್ನ ಸಂಚು ರೂಪುಗೊಳ್ಳುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಐಎಸ್ಐಗೆ ಬೇಹುಗಾರಿಕೆ ಮಾಡುತ್ತಿದ್ದ ಆರೋಪದಲ್ಲಿ ದೇಶದ 13 ಸೇವೆಯಲ್ಲಿರುವ ಮತ್ತು ನಿವೃತ್ತ ರಕ್ಷಣಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications