ಕುಲಭೂಷಣ್ ರನ್ನು ಇರಾನಿನಲ್ಲಿ ಅಪಹರಿಸಿ ಐಎಸ್ಐಗೆ ಮಾರಾಟ ಮಾಡಿದ್ದೇಗೆ?
ಇಸ್ಲಮಾಬಾದ್, ಜುಲೈ 20: ಕುಲಭೂಷಣ್ ಜಾಧವ್ ರನ್ನು ಉಗ್ರ ಸಂಘಟನೆ ಲಷ್ಕರ್ ಇ ಖೊರಸಾನ್ ಸೆರೆ ಹಿಡಿದಿತ್ತು. ನಂತರ ಪಾಕಿಸ್ತಾನ ಗುಪ್ತಚರ ಸಂಸ್ತೆ ಐಎಸ್ಐಗೆ ಮಾರಾಟ ಮಾಡಿತ್ತು ಎಂಬುದಾಗಿ ಬಲೂಚಿಸ್ತಾನದ ಸಾಮಾಜಿಕ ಕಾರ್ಯಕರ್ತ ಮೆಹ್ರಾವ್ ಸರ್ಜೋವ್ ಹೇಳಿದ್ದಾರೆ.
"ಜಾಧವ್ ಪಾಕಿಸ್ತಾನವನ್ನು ಅವರಾಗಿ ಪ್ರವೇಶವೇ ಮಾಡಿರಲಿಲ್ಲ. ಅವರನ್ನು ಐಎಸ್ಐಗೆ ಮಾರಾಟ ಮಾಡಲಾಗಿತ್ತು. ಜಾಧವ್ ಒಬ್ಬ ಗೂಢಚರ , ಭಯೋತ್ಪಾದನೆಯಲ್ಲಿ ತೊಡಗಿದ್ದ ಎಂಬುದೆಲ್ಲಾ ಸುಳ್ಳು. ಆತನನ್ನು ಇರಾನಿನಿಂದ ಅಪಹರಣ ಮಾಡಿ ಪಾಕಿಸ್ತಾನಕ್ಕೆ ಕರೆತರಲಾಗಿದೆ," ಎಂದು ಅವರು ಹೇಳಿದ್ದಾರೆ.

"ಜಾಧವ್ ಗೆ ಕೆಲವರು ಉದ್ಯಮದ ಆಫರ್ ನೀಡಿದ್ದರು. ನಂತರ ಜಾಧವ್ ಇರಾನಿನ ಸರವಣ್ ನಗರಕ್ಕೆ ಬಾಡಿಗೆ ಕಾರಿನಲ್ಲಿ ತೆರಳಿದ್ದರು. ಈ ಕಾರಿಕ್ಕೆ ಬಲೋಚಿಸ್ತಾನದ ಪ್ರತ್ಯೇಕತಾವಾದಿಯೊಬ್ಬ ಹತ್ತಿಕೊಂಡಿದ್ದ. ಹೀಗೆ ಸೆರೆಸಿಕ್ಕ ಜಾಧವ್ ಪಾಕಿಸ್ತಾನಕ್ಕೆ ಬಂದಿದ್ದರು," ಎಂದು ಸರ್ಜೋವ್ ಹೇಳಿದ್ದಾರೆ.
"ವಿದೇಶಿಯರ ಅಪಹರಣದಲ್ಲಿ ನಿಸ್ಸೀಮವಾಗಿರುವ ಲಷ್ಕರ್ ಇ ಖೊರಾಸಾನ್ ಈ ಕೃತ್ಯ ಎಸಗಿದೆ. ಅಪಹರಣ ನಡೆಸಿ ಜಾಧವ್ ರನ್ನು ಝಮಾರಣ್ ನಲ್ಲಿ ಮೂರುವಾರಗಳ ಕಾಲ ಇಡಲಾಗಿತ್ತು. ಕೊನೆಗೆ ಡೀಲ್ ಓಕೆ ಆದ ನಂತರ ಐಎಸ್ಐಗೆ ಮಾರಾಟ ಮಾಡಲಾಯಿತು," ಎಂದು ಅವರು ವಿವರ ನೀಡಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications