Get Updates
Get notified of breaking news, exclusive insights, and must-see stories!

ಪ್ರವಾದಿ ಮೊಹಮ್ಮದ್ ವಿವಾದ: ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡಿತಾ ಬಿಜೆಪಿ?

ನವದೆಹಲಿ, ಜೂನ್ 7: ಸುಮ್ಮನೆ ಇರಲಾರದೇ ಇರುವೆ ಬಿಟ್ಟುಕೊಳ್ಳುವುದು ಅಂತಾರಲ್ವಾ. ದೇಶದಲ್ಲಿ ಭಾರತೀಯ ಜನತಾ ಪಕ್ಷದ್ದು ಈಗ ಥೇಟ್ ಅದೇ ಕಥೆಯಾಗಿದೆ. ಅನಗತ್ಯ ದ್ವೇಷದ ಭಾಷಣವನ್ನು ಮಾಡುತ್ತಿದ್ದ ಕೇಸರಿ ನಾಯಕರಿಗೆ ಜಾಗತಿಕ ಮಟ್ಟದಿಂದ ಕಠಿಣ ಸಂದೇಶವೊಂದು ರವಾನೆಯಾಗಿದೆ.

ಜಾಗತಿಕ ಮಟ್ಟದಲ್ಲಿ ಇಡೀ ದೇಶವನ್ನೇ ತಲೆ ತಗ್ಗಿಸುವಂತೆ ಮಾಡಿರುವ ಬಿಜೆಪಿ ನಾಯಕರ ಹುಚ್ಚು ಹೇಳಿಕೆಗಳಿಂದ ಈಗಲಾದರೂ ಪಕ್ಷ ಪಾಠ ಕಲಿಯಬೇಕಿದೆ. ತಮ್ಮ ನಾಯಕರ ಹುಚ್ಚಾಟ ಮತ್ತು ಅನಗತ್ಯ ವಿವಾದಾತ್ಮಕ ಹಾಗೂ ದ್ವೇಷ ಹುಟ್ಟಿಸುವ ಹೇಳಿಕೆಗಳಿಗೆ ಕಡಿವಾಣ ಮತ್ತು ಮಿತಿಯನ್ನು ಹೇರುವ ಕಾಲ ಸನ್ನಿಹಿತವಾಗಿದೆ.

ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ವಕ್ತಾರೆ ನೂಪುರ್ ಶರ್ಮಾ ರನ್ನು ಅಮಾನತುಗೊಳಿಸಲಾಗಿದ್ದು, ಮತ್ತೊಬ್ಬ ನಾಯಕ ನವೀನ್ ಕುಮಾರ್ ಜಿಂದಾಲ್ ಅನ್ನು ಉಚ್ಚಾಟನೆ ಮಾಡಲಾಗಿದೆ. ಆ ಮೂಲಕ ಸಾರ್ವಜನಿಕ ನಡವಳಿಕೆ, ಸಹಿಷ್ಣುತೆ ಮತ್ತು ಇತರರ ಮೇಲಿನ ಹೇಳಿಕೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ನಾಯಕರಿಗೆ ನೇರ ಸಂದೇಶವನ್ನು ರವಾನಿಸಲಾಗಿದೆ.

ಮುಸ್ಲಿಂ ರಾಷ್ಟ್ರಗಳಿಂದ ಶೇಮ್ ಆನ್ ಇಂಡಿಯಾ ಅಭಿಯಾನ

ಮುಸ್ಲಿಂ ರಾಷ್ಟ್ರಗಳಿಂದ ಶೇಮ್ ಆನ್ ಇಂಡಿಯಾ ಅಭಿಯಾನ

ಪ್ರವಾದಿ ಮೊಹಮ್ಮದ್ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಭಾರತಕ್ಕೆ ಹತ್ತಿರವಾಗಿದ್ದ ಮುಸ್ಲಿಂ ರಾಷ್ಟ್ರಗಳೇ ಕೆರಳಿವೆ. ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕತಾರ್, ಕುವೈತ್ ಮತ್ತು ಇರಾನ್ ರಾಷ್ಟ್ರಗಳು ಭಾರತೀಯ ರಾಯಭಾರಿಗಳನ್ನು ಕರೆಸಿ ಹೇಳಿಕೆಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದವು. ಇಸ್ಲಾಮಿಕ್ ದೇಶಗಳ ಸಂಘಟನೆಯ ವಿವಾದಾತ್ಮಕ ಟೀಕೆಗಳನ್ನು ಟೀಕಿಸಿದೆ. ಸೌದಿ ಅರೇಬಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಭಾರತೀಯ ವಸ್ತುಗಳನ್ನು ಬಹಿಷ್ಕರಿಸುವ ಚಳವಳಿ ನಡೆಸುವಂತೆ ಕರೆ ನೀಡಿವೆ. ಇದರ ಮಧ್ಯೆ ಕತಾರ್‌ದ ಕ್ರಮವು ವಿಶೇಷವಾಗಿ ಗಮನಾರ್ಹವಾಗಿದೆ, ಏಕೆಂದರೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಲ್ಲಿಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದ್ದು, ಭಾರತಕ್ಕೆ ರಾಜತಾಂತ್ರಿಕ ಹಿನ್ನಡೆಯಾಗಿದೆ.

ಅಲ್ಪಸಂಖ್ಯಾತರನ್ನು ಟೀಕಿಸುವುದೇ ಪ್ರಾಬಲ್ಯ?

ಅಲ್ಪಸಂಖ್ಯಾತರನ್ನು ಟೀಕಿಸುವುದೇ ಪ್ರಾಬಲ್ಯ?

ಇಸ್ಲಾಂ ಧರ್ಮ ಮತ್ತು ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡುವುದನ್ನೇ ತಮ್ಮ ಗೌರವ ಹೆಚ್ಚಲಿದೆ ಎಂದು ಕೆಲವು ಕೇಸರಿ ನಾಯಕರು ಅಂದುಕೊಂಡಂತೆ ತೋರುತ್ತಿದೆ. ಇದರ ಮಧ್ಯೆ ಆಕ್ಷೇಪಾರ್ಹ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದಲೇ ಕಾನ್ಪುರದಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಕಾರಣವಾದಾಗಲೂ ಬಿಜೆಪಿಗರು ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಬದಲಿಗೆ ಅಲ್ಪಸಂಖ್ಯಾತ ಸಮುದಾಯಗಳ, ಅದರಲ್ಲೂ ಇಸ್ಲಾಂ ಧರ್ಮದ ಟೀಕೆ ಮತ್ತು ಅವಹೇಳನವನ್ನು ಅನೇಕ ಬಿಜೆಪಿ ಮತ್ತು ಹಿಂದುತ್ವದ ನಾಯಕರು ಗೌರವದ ಬ್ಯಾಡ್ಜ್ ಎಂದು ಪರಿಗಣಿಸಿದರು.

ಭಾರತದ ಮೇಲಾಗುವ ಪರಿಣಾಮ ಮರೆತ ಬಿಜೆಪಿ

ಭಾರತದ ಮೇಲಾಗುವ ಪರಿಣಾಮ ಮರೆತ ಬಿಜೆಪಿ

ಬಹುಸಂಖ್ಯಾತ ಸಮುದಾಯದ ಪ್ರಾಬಲ್ಯ ಮತ್ತು ಅಲ್ಪಸಂಖ್ಯಾತರ ಅಧೀನತೆಯನ್ನು ಪ್ರತಿಪಾದಿಸುವ ಹಠಕ್ಕೆ ಬಿದ್ದ ಕೆಲವು ನಾಯಕರು ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುವುದಕ್ಕೆ ಶುರು ಮಾಡಿದರು. ಅವರ ಹೇಳಿಕೆಗಳು ಒಂದು ಸಮುದಾಯವನ್ನು ಹೊರತಾಗಿ ಜಾಗತಿಕ ಮಟ್ಟದಲ್ಲಿ ಅಥವಾ ದೇಶದ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದನ್ನೇ ಮರೆತು ವರ್ತಿಸಿದರು.

ನಾಯಕರ ದ್ವೇಷದ ಭಾಷಣಕ್ಕೆ ಪ್ರಚೋದಿಸುವ ನಡೆ

ನಾಯಕರ ದ್ವೇಷದ ಭಾಷಣಕ್ಕೆ ಪ್ರಚೋದಿಸುವ ನಡೆ

ಇತರ ಧರ್ಮಗಳ ಅವಹೇಳನವನ್ನು ಟೀಕಿಸಿದ ಮತ್ತು ಸಹಿಷ್ಣುತೆ ಮತ್ತು ವಿವೇಕಕ್ಕಾಗಿ ಕರೆ ನೀಡಿದವರನ್ನು 'ಸೆಕ್ಯುಲರ್ ಲಿಬ್ಟಾರ್ಡ್ಸ್' ಮತ್ತು ಇತರ ಅಮಾನುಷ ವಿಶೇಷಣಗಳು ಎಂದು ಹೆಸರಿಸಲಾಗಿದೆ ಮತ್ತು ಅವಮಾನಿಸಲಾಗಿದೆ. ವಾಕ್ ಸ್ವಾತಂತ್ರ್ಯದ ಹಕ್ಕಿನ ಆಯ್ದ ಪ್ರಚೋದನೆಯೂ ಇದೆ. ಇತರ ಧರ್ಮಗಳ ದೂಷಣೆಯನ್ನು ರಕ್ಷಿಸಲು ಚಾರ್ಲಿ ಹೆಬ್ಡೋ ಘಟನೆಯಂತಹ ಪ್ರಕರಣಗಳನ್ನು ಉಲ್ಲೇಖಿಸುತ್ತದೆ. ಇತರ ಧರ್ಮಗಳ ಅವಹೇಳನ ಮತ್ತು ದ್ವೇಷದ ಭಾಷಣಗಳು ತಪ್ಪಾಗುತ್ತದೆ ಅಲ್ಲದೇ ಯಾವುದೇ ವ್ಯಕ್ತಿಯಿಂದ ಯಾವುದೇ ರೂಪದಲ್ಲಿ ಒಪ್ಪಿಕೊಳ್ಳುವುದಕ್ಕೆ ಆಗುವುದಿಲ್ಲ.

ಬಿಜೆಪಿ ವಕ್ತಾರು ಇಂಥ ಹೇಳಿಕೆಗಳಿಂದ ದೂರವಿರುವಂತೆ ಪಕ್ಷವು ಈಗಾಗಲೇ ಕಠಿಣ ಕ್ರಮ ತೆಗೆದುಕೊಂಡಿದೆ. ಸರ್ಕಾರವು ಅಂತಹ ವಿಷಯಗಳಲ್ಲಿ ತನ್ನದೇ ಆದ ಸಂಶಯಾಸ್ಪದ ಸ್ಥಾನವನ್ನು ಒತ್ತಿ ಹೇಳಿದೆ. ಆದರೆ ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧವನ್ನು ಎದುರಿಸುವುದಕ್ಕೂ ಪೂರ್ವದಲ್ಲಿ ಬಿಜೆಪಿಗರು ಈ ವಕ್ತಾರರ ಹೇಳಿಕೆಗಳ ಬಗ್ಗೆ ಯಾವುದೇ ರೀತಿ ಖಂಡನೆಯನ್ನು ವ್ಯಕ್ತಪಡಿಸಿರಲಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+