KFC: ಶ್ರಾವಣ ಮಾಸದಲ್ಲಿ ಕೆಎಫ್ಸಿ ಮಳಿಗೆಗಳು ಬಂದ್ ಆಗುತ್ತಾ?
ನಾನ್ವೆಜ್ ಪ್ರಿಯರ ನೆಚ್ಚಿನ ತಾಣಗಳಲ್ಲಿ ಕೆಎಫ್ಸಿ (KFC) ಕೂಡ ಒಂದು. ಅದರಲ್ಲೂ ಈಗಿನ ಕಾಲದ ಯುವಜನರು ಕೆಎಫ್ಸಿ ಮಳಿಗೆಗಳಲ್ಲಿ ಸದಾ ಬೀಡುಬಿಟ್ಟಿರುತ್ತಾರೆ. ಇನ್ನು ಯುವತಿಯರಿಗಂತೂ ಇಲ್ಲಿ ಸಿಗುವ ಬಗೆಬಗೆಯ ಚಿಕನ್ ಮೆನು ಅಂದ್ರೆ ಪಂಚಪ್ರಾಣ. ಮನೆಯಲ್ಲಿ ಮಾಮೂಲಿ ಚಿಕನ್ ಐಟಂಗಳನ್ನು ತಿಂದು ಸಾಕಾಗಿದೆ ಅಂತ, ಹತ್ತಿರ ಕೆಎಫ್ಸಿ ಮಳಿಗೆಗೆ ಹೋಗಿ ಕೂರುತ್ತಾರೆ. ಸದ್ಯ ಶ್ರಾವಣ ಮಾಸ ಕೂಡ ಶುರುವಾಗಿದೆ. ಇದೇ ಹೊತ್ತಿನಲ್ಲಿ ಕೆಎಫ್ಸಿ ಮಳಿಗೆಗಳು ಬಂದ್ ಆಗುವ ಸಾಧ್ಯತೆ ಇದೆ ಎಂಬ ಶಾಕಿಂಗ್ ವಿಚಾರ ಹೊರಬಿದ್ದಿದೆ.
ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಶ್ರಾವಣ ಮಾಸದ ಆಚರಣೆಯ ಭಾಗವಾಗಿ ಮಾಂಸಾಹಾರವನ್ನು ಒಂದು ತಿಂಗಳ ಕಾಲ ತಿನ್ನುವುದಿಲ್ಲ. ಅದನ್ನು ಮುಟ್ಟುವುದೂ ಇಲ್ಲ. ಹೀಗಾಗಿ ಮೊದಲಿನಿಂದಲೂ ಶ್ರಾವಣಕ್ಕೆ ಪವಿತ್ರ ಸ್ಥಾನವಿದೆ. ಹೆಚ್ಚಾಗಿ ಹಿಂದೂಗಳು ಶ್ರಾವಣಕ್ಕೆ ಹೆಚ್ಚಿನ ಸ್ಥಾನ ನೀಡುತ್ತಾರೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವ ಕಾರಣಕ್ಕೆ ಶ್ರಾವಣ ಮುಗಿಯುವವರೆಗೆ ಚಿಕನ್, ಮಟನ್, ಮೀನು ಸೇರಿ ಎಲ್ಲ ರೀತಿಯ ಮಾಂಸಾಹಾರವನ್ನು ತ್ಯಜಿಸುತ್ತಾರೆ. ಆದರೆ ಹೊರಗಡೆ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಶ್ರಾವಣವಿದ್ದರೂ ಮಾಂಸದ ಖಾದ್ಯಗಳು ಸಿಗುತ್ತವೆ. ಈ ಕಾರಣಕ್ಕೆ ಮನೆಯಲ್ಲಿ ಮಾಡದಿದ್ದರೂ ಕದ್ದುಮುಚ್ಚಿ ಹೊರಗಡೆ ಹೋಗಿ ನಾನ್ವೆಜ್ ತಿಂದು ಬರುವವರಿದ್ದಾರೆ. ಇದರಲ್ಲಿ ಕೆಎಫ್ಸಿ ಕೂಡ ಒಂದು.

ಸಾಮಾನ್ಯವಾಗಿ ಹಬ್ಬಹರಿದಿನಗಳಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಿಸುವ ನಿಯಮ ಕೆಲವೆಡೆ ಜಾರಿಯಲ್ಲಿದೆ. ಆದರೆ ಶ್ರಾವಣ ಮಾಸ ಬಂದಿರುವುದರಿಂದ ತಿಂಗಳಿಡೀ ಅಂಗಡಿಗಳನ್ನು ಮುಚ್ಚಬೇಕು, ಇಲ್ಲವೇ ಸಸ್ಯಾಹಾರ ಖಾದ್ಯಗಳನ್ನು ಮಾರಾಟ ಮಾಡುವಂತೆ ಹಿಂದೂ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಏಕಾಏಕಿ ಕೆಎಫ್ಸಿ ಮಳಿಗೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೆ, ಬಂದ್ ಮಾಡಿಸಿರುವ ಘಟನೆ ನಡೆದಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಶ್ರಾವಣ ಮಾಸ ಶುರುವಾಗಿರುವ ಹಿನ್ನೆಲೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮಾಂಸ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಕೆಎಫ್ಸಿಯ ಶಟರ್ ಅನ್ನು ಮುಚ್ಚುವಂತೆ ಒತ್ತಾಯಿಸಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಗಾಜಿಯಾಬಾದ್ನ ವಸುಂಧರಾ ಪ್ರದೇಶದಲ್ಲಿ, ಹಿಂದೂ ರಕ್ಷಾ ದಳದ ಸದಸ್ಯರು ಶ್ರಾವಣ ಸಮಯದಲ್ಲಿ ಕೆಎಫ್ಸಿ ಅಂಗಡಿಯನ್ನು ಬಲವಂತವಾಗಿ ಮುಚ್ಚಿಸಿ, ಸಿಬ್ಬಂದಿಗೆ ಬೆದರಿಕೆ ಹಾಕಿ ಉದ್ವಿಗ್ನತೆ ಸೃಷ್ಟಿಸಿದ್ದಾರೆ.
ಸಸ್ಯಾಹಾರ ತಿಂಡಿ ಮಾತ್ರ ಇರಲಿ
ಪವಿತ್ರವಾದ ಶ್ರಾವಣದಲ್ಲಿ ಮಾಂಸ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಸದಸ್ಯರು ಎರಡು ಪ್ರಸಿದ್ಧ ತಿನಿಸುಗಳಾದ ಕೆಎಫ್ಸಿ ಮಳಿಗೆಗಳನ್ನು ಬಲವಂತವಾಗಿ ಮುಚ್ಚಿಸಿದ್ದು, ಇದಕ್ಕೆ ಹೆದರಿ ಅವರು ಸಸ್ಯಾಹಾರ ತಿಂಡಿ ಮಾತ್ರ ಮಾರಾಟ ಮಾಡುವುದಾಗಿ ಬೋರ್ಡ್ ಕೂಡ ಹಾಕಿದ್ದಾರೆ. ಈ ಸಂಬಂಧ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.

ಈ ನಡೆಯನ್ನು ಹಲವರು ಖಂಡಿಸಿದ್ದಾರೆ. ನಿಮ್ಮ ಆಚರಣೆ ಏನೇ ಇದ್ದರೂ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಎಂದಿದ್ದಾರೆ. ಇದು 21ನೇ ಶತಮಾನದ ಭಾರತ. ಜನರು ಏನು ತಿನ್ನುತ್ತಾರೆ? ಎಲ್ಲಿ ತಿನ್ನುತ್ತಾರೆ? ಏನು ಮಾರಾಟ ಮಾಡುತ್ತಾರೆ? ಎಲ್ಲಿ ಮಾರಾಟ ಮಾಡುತ್ತಾರೆ? ಇದೆಲ್ಲವೂ ಬಹುಸಂಖ್ಯಾತ ಸಮುದಾಯದ ಭಾವನೆಗಳನ್ನು ಅವಲಂಬಿಸಿರುತ್ತದೆಯೇ ಹೊರತು, ಜನರು ಮತ್ತು ಕಾನೂನಿನ ಆಯ್ಕೆಯ ಮೇಲೆ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೇ ಎಲ್ಲ ಕಡೆ ಮಾಡಲು ಬಂದರೆ ತಕ್ಕ ಉತ್ತರ ನಾವೂ ಕೊಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications