Get Updates
Get notified of breaking news, exclusive insights, and must-see stories!

ಹಿಂದಿ ಮಾತನಾಡುವಾಗ ನನಗೆ ನಡುಕ ಉಂಟಾಗುತ್ತೆ: ನಿರ್ಮಲ ಸೀತಾರಾಮನ್‌

ನವದೆಹಲಿ, ಸೆಪ್ಟೆಂಬರ್‌ 16: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಸಭಿಕರನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡುವಾಗ ನನಗೆ ನಡುಕ ಉಂಟಾಗುತ್ತದೆ ಮತ್ತು ನಾನು ಹಿಂಜರಿಕೆಯಿಂದ ಹಿಂದಿ ಭಾಷೆಯನ್ನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಹಿಂದಿ ವಿವೇಕ್ ಮ್ಯಾಗಜೀನ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೀತಾರಾಮನ್, ಹಿಂದಿಯಲ್ಲಿ ಭಾಷಣ ಮಾಡುವುದಾಗಿ ಹಿಂದಿನ ಸ್ಪೀಕರ್ ಮಾಡಿದ ಘೋಷಣೆಯನ್ನು ಉಲ್ಲೇಖಿಸಿದರು. ಹಿಂದಿಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವುದು ನನಗೆ ನಡುಕ ಹುಟ್ಟಿಸುತ್ತದೆ ಎಂದು ಹೇಳಿದರು. ಅವರು ಈ ಸ್ಥಿತಿಗೆ ಕಾರಣವಾದ ಸಂದರ್ಭಗಳನ್ನು ವಿವರಿಸಿದರು.

ಶ್ರೀಮತಿ ಸೀತಾರಾಮನ್ ಅವರು ತಮಿಳುನಾಡಿನಲ್ಲಿ ಹುಟ್ಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಅದು ಹಿಂದಿ ವಿರುದ್ಧದ ಆಂದೋಲನದ ಕಾಲವಾಗಿತ್ತು. ಹಿಂದಿ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು ಎಂದ ಅವರು, ಹಿಂದಿ ಅಥವಾ ಸಂಸ್ಕೃತವನ್ನು ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು, ಮೆರಿಟ್ ಲಿಸ್ಟ್‌ಗಳಲ್ಲಿ ಇರುವವರೂ ಸಹ ತಮ್ಮ ಭಾಷೆಗಳ ಆಯ್ಕೆಯಿಂದಾಗಿ ರಾಜ್ಯ ಸರ್ಕಾರ ನೀಡುವ ವಿದ್ಯಾರ್ಥಿ ವೇತನವನ್ನು ಪಡೆದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ವಯಸ್ಕರಾದ ನಂತರ ಒಬ್ಬ ವ್ಯಕ್ತಿಗೆ ಹೊಸ ಭಾಷೆಯನ್ನು ಕಲಿಯಲು ಕಷ್ಟವಾಗಿತ್ತದೆ. ತಾನು ತನ್ನ ಗಂಡನ ಮಾತೃಭಾಷೆ ತೆಲುಗು ಆಯ್ಕೆ ಮಾಡಿಕೊಂಡೆ. ಆದರೆ ಹಿಂದಿಯನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಸಾಕಷ್ಟು ಸಂಕೋಚದಿಂದ ಹಿಂದಿ ಮಾತನಾಡುತ್ತೇನೆ ಇದು ತಾನು ಮಾತನಾಡುವ ನಿರರ್ಗಳತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಸಮಾಜವಾದದ ತತ್ವದಿಂದ ಹಿನ್ನಡೆ

ಸಮಾಜವಾದದ ತತ್ವದಿಂದ ಹಿನ್ನಡೆ

ಆದಾಗ್ಯೂ, ಹಿಂದಿಯಲ್ಲಿ ತಮ್ಮ ಭಾಷಣವನ್ನು ಮುಂದುವರೆಸಿದರು. 35 ನಿಮಿಷಗಳ ಕಾಲ ಸಂಪೂರ್ಣವಾಗಿ ಭಾಷಣವನ್ನು ಹಿಂದಿಯಲ್ಲಿ ಮುಗಿಸಿದರು. ಭಾರತವು ಈ ಹಿಂದೆಯೇ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನವನ್ನು ಸಾಧಿಸಬಹುದಿತ್ತು. ಆದರೆ ಕೇಂದ್ರೀಕೃತ ಯೋಜನೆಯನ್ನು ಅವಲಂಬಿಸಿರುವ ಸಮಾಜವಾದದ ತತ್ವವನ್ನು ಆಮದು ಮಾಡಿಕೊಂಡಿದ್ದಕ್ಕಾಗಿ ಹಿನ್ನಡೆಯಾಯಿತು ಎಂದು ಹೇಳಿದರು.

ವಾಜಪೇಯಿ ಬರುವವರೆಗೂ ಯಾವುದೇ ಪ್ರಗತಿ ಆಗಲಿಲ್ಲ

ವಾಜಪೇಯಿ ಬರುವವರೆಗೂ ಯಾವುದೇ ಪ್ರಗತಿ ಆಗಲಿಲ್ಲ

ಅವರು 1991ರ ಕಾಂಗ್ರೆಸ್ ಸರ್ಕಾರವು ಕೈಗೊಂಡ ಆರ್ಥಿಕ ಸುಧಾರಣೆಗಳನ್ನು "ಅಧೆ-ಅಧುರೆ ಸುಧಾರಣೆಗಳು" (ಅರ್ಧ-ಬೇಯಿಸಿದ ಸುಧಾರಣೆಗಳು) ಎಂದು ಕರೆದರು. ಐಎಂಎಫ್‌ ವಿಧಿಸಿದ ಕಟ್ಟುನಿಟ್ಟಿನ ಪ್ರಕಾರ ಆರ್ಥಿಕತೆಯು ಸರಿಯಾದ ರೀತಿಯಲ್ಲಿ ಬೆಳೆದಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೂ ಯಾವುದೇ ಪ್ರಗತಿ ಆಗಲಿಲ್ಲ. ಅವರಿಂದ ಮೂಲಭೂತ ಸೌಕರ್ಯಗಳ ನಿರ್ಮಾಣ, ರಸ್ತೆಗಳು ಮತ್ತು ಮೊಬೈಲ್ ದೂರವಾಣಿಯ ಮೇಲೆ ಅವರ ಗಮನವು ನಮಗೆ ಸಾಕಷ್ಟು ಸಹಾಯ ಮಾಡಿತು ಎಂದರು.

ನರೇಂದ್ರ ಮೋದಿ ಸುಧಾರಣೆ

ನರೇಂದ್ರ ಮೋದಿ ಸುಧಾರಣೆ

ಭ್ರಷ್ಟ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇನ್ನೂ ಹತ್ತು ವರ್ಷಗಳು ಕಳೆದುಹೋಗಿವೆ. ಅಲ್ಲಿ ವೈಯಕ್ತಿಕ ಲಾಭಗಳನ್ನು ಕೇಂದ್ರೀಕರಿಸಿಕೊಳ್ಳಲಾಗಿತ್ತು. ದೇಶದ ಹಿತಾಸಕ್ತಿಗಳನ್ನು ನಿರಾಕರಿಸಲಾಯಿತು. ಪ್ರಧಾನ ಮಂತ್ರಿ ಹುದ್ದೆಗೆ ಏರಿದ ನಂತರ ನರೇಂದ್ರ ಮೋದಿ ಅವರು ಕೆಲವು ಸುಧಾರಣೆಗಳನ್ನು ಪ್ರಾರಂಭಿಸಿದರು. ಇದರಲ್ಲಿ ನೇರ ಲಾಭ ವರ್ಗಾವಣೆ ಯೋಜನೆಯೂ ಸೇರಿದೆ. ಇದು ಸೋರಿಕೆಯಿಲ್ಲದೆ ಸಾರ್ವಜನಿಕ ವಿತರಣೆಯಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸಿದೆ ಎಂದು ಅವರು ಹೇಳಿದರು.

ವ್ಯವಹಾರಗಳಿಂದ ದೂರವಿರಲು ನಿರ್ಧಾರ

ವ್ಯವಹಾರಗಳಿಂದ ದೂರವಿರಲು ನಿರ್ಧಾರ

ಆರ್ಥಿಕತೆಯ ಸಾಲದ ಅಗತ್ಯಗಳನ್ನು ತ್ವರಿತವಾಗಿ ಪೂರೈಸಬಲ್ಲ ಎಸ್‌ಬಿಐನಂತಹ ದೊಡ್ಡ ಸಾಲದಾತನ ಹೊರಹೊಮ್ಮುವಿಕೆಗೆ ನೀತಿ ನಿರ್ಧಾರಗಳು ಅಡಿಪಾಯ ಹಾಕಿವೆ. ಮೋದಿ ಆಡಳಿತವು ಸರ್ಕಾರ ಮಾಡಬಾರದ ವ್ಯವಹಾರಗಳಿಂದ ದೂರವಿರಲು ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಏರ್ ಇಂಡಿಯಾ ಖಾಸಗೀಕರಣಗೊಳ್ಳುವವರೆಗೆ ದಿನಕ್ಕೆ ₹ 20 ಕೋಟಿ ನಷ್ಟವನ್ನು ಎದುರಿಸುತ್ತಿತ್ತು ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+