500, 1000 ರುಪಾಯಿ ನೋಟು ರದ್ದು ನಿರ್ಧಾರದ ಹಿಂದಿರುವ ವ್ಯಕ್ತಿ ಯಾರು?
ತಮ್ಮ ವಾದವನ್ನು ಮಂಡಿಸುವುದಕ್ಕೆ ಬೊಕಿಲ್ ಗೆ ಸಿಕ್ಕಿದ್ದು ಒಂಬತ್ತು ನಿಮಿಷದ ಸಮಯ. ಆದರೆ ಅವರ ಎಲ್ಲ ಅಂಶಗಳು ಪ್ರಧಾನಿ ಅವರಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದವು. ಆ ನಂತರ ಎಲ್ಲ ವಿಚಾರಗಳನ್ನು ಹೇಳಿಕೊಳ್ಳುವುದಕ್ಕೆ ಎರಡು ಗಂಟೆ ಸಮಯ ನೀಡಿದರು.
ಪುಣೆ, ನವೆಂಬರ್ 10: ಪ್ರಧಾನಿ ನರೇಂದ್ರ ಮೋದಿ 500, 1000 ರುಪಾಯಿ ನೋಟುಗಳನ್ನು ದಿಢೀರ್ ರದ್ದು ಮಾಡಿ, ಇಡೀ ದೇಶ ಹಾಗೂ ಜನರು ಈ ಹಿಂದೆ ಎಂದೂ ಕಾಣದಂಥ ರೀತಿಯಲ್ಲಿ ನಗದಿಗಾಗಿ ಮುಗಿ ಬೀಳುವಂತೆ ಮಾಡಿದ್ದಾರೆ. ಆದರೆ ಈ ಘೋಷಣೆ ಹಿಂದೊಂದು ಕಥೆ ಇದೆ. ಒಬ್ಬ ವ್ಯಕ್ತಿಯ ಕೇವಲ ಒಂಬತ್ತು ನಿಮಿಷದ ಮಾತು ಕಪ್ಪು ಹಣದ ಮೇಲೆ ಭಾರೀ ದಾಳಿಯಾಗುವಂತೆ ಮಾಡಿದೆ ಅಂದರೆ ನೀವು ನಂಬ್ತೀರಾ?
ಅರ್ಥ ಕ್ರಾಂತಿ ಎಂಬ ಪುಣೆ ಮೂಲದ ಸಂಸ್ಥೆಯೊಂದರ ಅನಿಲ್ ಬೊಕಿಲ್ ಕಪ್ಪು ಹಣ ನಿಯಂತ್ರಣಕ್ಕೆ ದೊಡ್ಡ ನೋಟುಗಳನ್ನು ರದ್ದು ಮಾಡುವುದು ಹೇಗೆ ಸಹಕಾರಿ ಎಂಬುದನ್ನು ವಿವರಿಸಿದ್ದರು. ಅಷ್ಟೇ ಅಲ್ಲ, ಇನ್ನೂ ಕೆಲ ಸಲಹೆಗಳನ್ನು ಬೊಕಿಲ್ ನೀಡಿದ್ದರು. ವರದಿಗಳ ಪ್ರಕಾರ, ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಆರ್ಥಿಕ ಸುಧಾರಣೆ ಬಗ್ಗೆ, ಕಪ್ಪು ಹಣ ನಿಯಂತ್ರಣ ಕ್ರಮಗಳ ಬಗ್ಗೆ ವಿವರಿಸಿದ್ದರು. [500, 1000 ನೋಟು ಬದಲಾವಣೆಗೆ ಹೊರಟ್ರಾ, ಈ ಅಂಶ ಗಮನಿಸಿ]

ತಮ್ಮ ವಾದವನ್ನು ಮಂಡಿಸುವುದಕ್ಕೆ ಬೊಕಿಲ್ ಗೆ ಸಿಕ್ಕಿದ್ದು ಒಂಬತ್ತು ನಿಮಿಷದ ಸಮಯ. ಆದರೆ ಅವರ ಎಲ್ಲ ಅಂಶಗಳು ಪ್ರಧಾನಿ ಅವರಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದವು. ಆ ನಂತರ ಎಲ್ಲ ವಿಚಾರಗಳನ್ನು ಹೇಳಿಕೊಳ್ಳುವುದಕ್ಕೆ ಎರಡು ಗಂಟೆ ಸಮಯ ನೀಡಿದರು.
ಬೊಕಿಲ್ ನ ಪ್ರಮುಖ ಶಿಫಾರಸುಗಳು ಹೀಗಿವೆ:
1. ಆಮದು ಸುಂಕ ಒಂದನ್ನು ಹೊರತುಪಡಿಸಿ ಸದ್ಯಕ್ಕೆ ಹಣ ಸಂಗ್ರಹಿಸುತ್ತಿರುವ 56 ವಿವಿಧ ತೆರಿಗೆಗಳನ್ನು ನಿಲ್ಲಿಸಿ.
2. ದೊಡ್ಡ ಮೊತ್ತದ ನೋಟುಗಳಾದ 500, 1000 ಹಾಗೂ 100 ಅನ್ನು ರದ್ದುಪಡಿಸಿ. [ಅಮೆರಿಕ ಚುನಾವಣೆ ಹೈಜಾಕ್ ಮಾಡಿದ ಮೋದಿ ಸ್ಟ್ರೋಕ್]
3. ಎಲ್ಲ ವ್ಯವಹಾರಗಳನ್ನು ಬ್ಯಾಂಕ್ ಮೂಲಕವೇ ಮಾಡಬೇಕು. ಅದು ಚೆಕ್, ಡಿಮ್ಯಾಂಡ್ ಡ್ರಾಫ್ಟ್ ಹಾಗೂ ಆನ್ ಲೈನ್ ಮೂಲಕ.
4.ಆದಾಯ ಸಂಗ್ರಹವನ್ನು ಒಂದೇ ಬ್ಯಾಂಕ್ ಮೂಲಕ ಮಾಡಬೇಕು.
ಬೊಕಿಲ್ ಈ ಸಲಹೆಗಳಿಗೆ ಕೊಟ್ಟ ಕಾರಣಗಳೇನು ಗೊತ್ತಾ?
1. ಭಾರತದಲ್ಲಿ ದಿನವೊಂದಕ್ಕೆ ಸರಾಸರಿ 2.7 ಲಕ್ಷ ಕೋಟಿ ರುಪಾಯಿಯಷ್ಟು ವ್ಯವಹಾರವಾಗುತ್ತದೆ. ಅಂದರೆ ವರ್ಷಕ್ಕೆ 800 ಲಕ್ಷ ಕೋಟಿ ರುಪಾಯಿ. ಆದರೆ ಅದರಲ್ಲಿ ಶೇ 20ರಷ್ಟು ವ್ಯವಹಾರ ಮಾತ್ರ ಬ್ಯಾಂಕ್ ಮೂಲಕ ಆಗುತ್ತದೆ. ಇನ್ನೆಲ್ಲವೂ ನಗದು ವ್ಯವಹಾರಗಳು. ಅವುಗಳನ್ನು ಪತ್ತೆ ಹಚ್ಚೋದು ಕಷ್ಟವಾಗಿದೆ.
2. ದೇಶದ ಜನಸಂಖ್ಯೆಯ ಶೇ 78ರಷ್ಟು ಮಂದಿ ದಿನಕ್ಕೆ 20 ರುಪಾಯಿ ಮಾತ್ರ ಖರ್ಚು ಮಾಡ್ತಾರೆ. ಆದ್ದರಿಂದ ನಮಗೆ ದೊಡ್ದ ಮುಖಬೆಲೆಯ ನೋಟಿನ ಅಗತ್ಯ ಇಲ್ಲ.
-
ಅಪ್ಪನ ಸಕ್ಕರೆ ಚಟ ಬಿಡಿಸಲು ಮೋದಿ ಮೊರೆ ಹೋದ ಯುವಕ: ವಿಡಿಯೋ Viral, ಪ್ರಧಾನಿಯಿಂದ ಬಂತು ಅಚ್ಚರಿಯ ರಿಪ್ಲೈ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ?












Click it and Unblock the Notifications