ಕೊರೊನಾ ವೈರಸ್ ಹರಡದಂತೆ ಪ್ರಯಾಗ್ರಾಜ್ನಲ್ಲಿ ಹೋಮ, ಹವನ
ಪ್ರಯಾಗ್ರಾಜ್, ಮಾರ್ಚ್ 6: ಕೊರೊನಾ ದೇಶಾದ್ಯಂತ ಹರಡದಂತೆ ತಡೆಗಟ್ಟಲು ಪ್ರಯಾಗ್ರಾಜ್ನಲ್ಲಿ ವಿಶೇಷ ಹೋಮ, ಹವನಗಳನ್ನು ಮಾಡಿಸುತ್ತಿದ್ದಾರೆ.
ಭಾರತದಲ್ಲಿ ವೈರಸ್ ಸ್ಫೋಟಗೊಳ್ಳದಂತೆ ತೀರ್ಥ ಪುರೋಹಿತ ಸಮಾಜವು ಹವನ ನೆರವೇರಿಸಿದೆ. ನಾನು ಚೀನಾದ ವಸ್ತುಗಳನ್ನು ಬಹಿಷ್ಕರಿಸುತ್ತೇನೆ . ಹಾಗೆಯೇ ಎಲ್ಲಾ ಭಾರತೀಯರು ಚೀನಾ ವಸ್ತುಗಳನ್ನು ವಿರೋಧಿಸಲು ಮನವಿ ಮಾಡಿಕೊಳ್ಳುತ್ತೇನೆಂದು ಸತ್ಯೇಂದರ್ ತಿವಾರಿ ತಿಳಿಸಿದ್ದಾರೆ.
ಕೊರೊನಾ ಭೀತಿ: ಭಾರತದಲ್ಲಿ ಮಾಸ್ಕ್ ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಚೀನಾದಲ್ಲಿ ಇದುವರೆಗೂ ಮೂರು ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಮಹಾಮಾರಿ ದೇಶಾದ್ಯಂತ ಹರಡುವುದನ್ನು ತಡೆಯಲು ಹೋಮ, ಹವನ ನಡೆಸುತ್ತಿದ್ದಾರೆ.
ತೀರ್ಥ ಪುರೋಹಿತ ಸಮಾಜದ ಯುವಕರು ಕೂಡ ಹವನವನ್ನು ನಡೆಸುತ್ತಿದ್ದಾರೆ. ಹವನ ಮಾಡುವುದರಿಂದ ಇಡೀ ಜಗತ್ತು ಕೂಡ ಶುಚಿಗೊಳ್ಳುತ್ತದೆ. ನಂತರ ಯಾವುದೇ ವೈರಸ್ನಿಂದ ತೊಂದರೆಯಾಗುವುದಿಲ್ಲ ಎಂಬುದನ್ನು ವಿಜ್ಞಾನಿಗಳು ಕೂಡ ನಂಬಿದ್ದಾರೆ ಎಂದು ಅಂಕುಶ್ ಶರ್ಮಾ ತಿಳಿಸಿದ್ದಾರೆ.
ಭಾರತೀಯರು ಚೀನಾ ವಸ್ತುಗಳನ್ನು ವಿರೋಧಿಸಲು ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.