ಕಿಲಿಮಂಜಾರೊ ಪರ್ವತವೇರಿ ಸಾಧನೆ ಮಾಡಿದ ಹರಿಯಾಣದ ಯುವತಿ
ನವದೆಹಲಿ, ಜುಲೈ 28: ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಕಿರಿಯ ಭಾರತೀಯ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿರುವ ಹರಿಯಾಣದ ಯುವತಿ ಶಿವಾಂಗಿ ಪಾಠಕ್, ಆಫ್ರಿಕಾದ ಅತ್ಯಂತ ಎತ್ತರ ಪರ್ವತ ಮೌಂಟ್ ಕಿಲಿಮಂಜಾರೊವನ್ನು ಏರಿದ್ದಾರೆ.
ಹರಿಯಾಣದ ಹಿಸಾರ್ ನಗರದ 17 ವರ್ಷದ ಶಿವಾಂಗಿ, ಮೂರು ದಿನಗಳಲ್ಲಿ ಕಿಲಿಮಂಜಾರೊವನ್ನು ಏರಿದ್ದಾರೆ. ಈ ಮೂಲಕ ಶಿವಾಂಗಿ ಇನ್ನೊಂದು ದಾಖಲೆಯನ್ನು ನಿರ್ಮಿಸಿರುವ ಸಾಧ್ಯತೆ ಇದೆ. ಇದಕ್ಕೆ ಇನ್ನೂ ಅಧಿಕೃತ ದೃಢೀಕರಣ ದೊರಕಬೇಕಿದೆ.
ಚಿಕ್ಕಂದಿನಿಂದಲೂ ತಮಗೆ ಅತಿ ಎತ್ತರದ ಪರ್ವತಗಳನ್ನು ಏರಬೇಕು ಎಂಬ ಆಸೆ ಇದ್ದಿದ್ದಾಗಿ ಶಿವಾಂಗಿ ಹೇಳಿಕೊಂಡಿದ್ದಾರೆ.

ಅರುಣಿಮಾ ಸ್ಫೂರ್ತಿ
'ಜನಜಂಗುಳಿಯಿಂದ ಹೊರಗಿರಲು ಮತ್ತು ವಿಭಿನ್ನವಾದುದ್ದನ್ನು ಸಾಧಿಸಲು ಯಾವಾಗಲೂ ಬಯಸುತ್ತಿದ್ದೆ. ಒಮ್ಮೆ ಅರುಣಿಮಾ ಸಿನ್ಹಾ ಅವರ ವಿಡಿಯೋವನ್ನು ನೋಡಿ ಸ್ಫೂರ್ತಿಗೊಂಡೆ.
ಅಲ್ಲಿಂದ ಪರ್ವತಾರೋಹಣದ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿದೆ. ಅಲ್ಲಿಂದ ಈ ಆಸಕ್ತಿಯನ್ನು ಗಂಭೀರವಾಗಿ ಪರಿಗಣಿಸಲು ನನಗೆ ಪ್ರೇರಣೆ ದೊರಕಿತು ಎಂದು ಹೇಳಿದ್ದಾರೆ.

ಸ್ಫೂರ್ತಿಯಾಗುವ ಬಯಕೆ
ಪೋಷಕರು ಮತ್ತು ಕುಟುಂಬದಿಂದ ಬೆಂಬಲ ಪಡೆದುಕೊಂಡಿರುವ ಶಿವಾಂಗಿ, ದೇಶದ ಎಲ್ಲ ಯುವತಿಯರಿಗೆ ತಮ್ಮ ಗುರಿಯನ್ನು ಈಡೇರಿಸಿಕೊಳ್ಳಲು ಸ್ಫೂರ್ತಿಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.
'ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಬಲ್ಲೆವು ಎಂದು ಯುವತಿಯರು ತಮ್ಮ ಪೋಷಕರ ಮನವೊಲಿಸಬೇಕು. ಅದೇ ರೀತಿ ಪೋಷಕರು ತಮ್ಮಿಂದ ಸಾಧ್ಯವಾದಷ್ಟೂ ರೀತಿಯಲ್ಲಿ ಮಕ್ಕಳಿಗೆ ಬೆಂಬಲ ನೀಡಬೇಕು. ಮಹಿಳೆ ಸಾಧಿಸಲಾರದ್ದು ಯಾವುದೇ ಇಲ್ಲ ಎಂದು ಶಿವಾಂಗಿ ಹೇಳಿದ್ದಾರೆ.
|
ಶಿವಾಂಗಿ ಸಾಹಸಕ್ಕೆ ಮೆಚ್ಚುಗೆ
ಹರಿಯಾಣದ ಹಿಸಾರ್ನ 17 ವರ್ಷದ ಶಿವಾಂಗಿ ಆಫ್ರಿಕಾದ 'ಮೌಂಟ್ ಎವರೆಸ್ಟ್' ಅನ್ನು ಏರಿದ ಭಾರತದ ಅತಿ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಪ್ರದೀಪ್ ದಾಸ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಮತ್ತೊಂದು ಮೈಲುಗಲ್ಲು
ಸಣ್ಣ ಪಟ್ಟಣ ಹಿಸಾರ್ನ 17 ವರ್ಷದ ಯುವತಿ ಶಿವಾಂಗಿ ಪಾಠಕ್ ಆಫ್ರಿಕಾದ ಅತಿ ಎತ್ತರದ ತುದಿ ಮೌಂಟ್ ಕಿಲಿಮಂಜಾರೊವನ್ನು ಯಶಸ್ವಿಯಾಗಿ ಏರುವ ಮೂಲಕ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. 5,895 ಎತ್ತರವಿರುವ ಇದು ಜಗತ್ತಿನ ಅತಿ ಎತ್ತರದ ಏಕಾಂಗಿ ಪರ್ವತ ಎಂದು ಅಕ್ಷಿತ್ ವೇದ್ಯನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಯುವತಿಯರಿಂದ ಹೆಮ್ಮೆ
ಕ್ರೀಡೆಯ ಯಾವುದೇ ವಿಭಾಗ ತೆಗೆದುಕೊಂಡರೂ, ಹರಿಯಾಣದ ಯುವತಿಯರು ರಾಜ್ಯ ಮತ್ತು ದೇಶಕ್ಕೆ ಹೆಮ್ಮೆ ಉಂಟುಮಾಡುತ್ತಿದ್ದಾರೆ ಎಂದು ಪ್ರದೀಪ್ ಪೋರಿಯಾ ಎಂಬುವವರು ಹೇಳಿದ್ದಾರೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications