ಭಾರತದ ಮೊದಲ ಮಹಿಳಾ ಫೊಟೊಗ್ರಾಫರ್ ಗೆ ಗೂಗಲ್ ಗೌರವ
ಬೆಂಗಳೂರು, ಡಿಸೆಂಬರ್ 09: ಭಾರತದ ಮೊದಲ ಮಹಿಳಾ ಪೊಟೊಗ್ರಾಫರ್ ಹೋಮೈ ವ್ಯಾರವಲ್ಲಾ ಅವರ 104ನೇ ಜನುಮದಿನದಂದು (ಡಿಸೆಂಬರ್ 09) ಗೂಗಲ್ ತನ್ನ ಮುಖ ಮುಟದಲ್ಲಿ ಹೋಮೈ ಅವರ ಸ್ಮರಣಾರ್ಥ ಡೂಡಲ್ ಪ್ರಕಟಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ.
ಭಾರತ ಸ್ವಾತಂತ್ರ ಚಳುವಳಿ, ಪಾಕಿಸ್ತಾನ ವಿಭಜನೆ, ಮಹಾತ್ಮಾ ಗಾಂಧಿ ಅಂತಿಮ ಯಾತ್ರೆಯಂತಹಾ ಹತ್ತು ಹಲವು ಅನೇಕ ಪ್ರಮುಖ ಘಟನೆಗಳನ್ನು ತಮ್ಮ ಕೆಮೆರಾದಲ್ಲಿ ಸೆರೆ ಮಾಡಿದ ಹೆಗ್ಗಳಿಗೆ ಹೋಮೈ ಅವರದು.
1930ರಲ್ಲಿ ಮೊದಲ ಬಾರಿಗೆ ಕ್ಯಾಮೆರಾ ಹಿಡಿದ ಅವರು ಮೊದಲು ಕೆಲಸ ಮಾಡಿದ್ದ ದಿ ಇಲ್ಲಸ್ಟ್ರೇಡ್ ವೀಕ್ಲಿ ಆಫ್ ಇಂಡಿಯಾ ಪತ್ರಿಕೆಗೆ, ವಿಶೇಷವೆಂದರೆ ಅಲ್ಲಿ ಅವರ ಚಿತ್ರಗಳು ಪ್ರಕಟವಾಗುತ್ತಿದಿದ್ದು ಅವರ ಪತಿಯ ಹೆಸರಿನಲ್ಲಿ. 12 ವರ್ಷಗಳ ಕಾಲ ತಮ್ಮದಲ್ಲದ ಗುರುತಿನಿಂದಲೇ ಚಿತ್ರ ಪ್ರಕಟಿಸಿದ ಅವರು ನಂತರ 1942ರಲ್ಲಿ ದೆಹಲಿಗೆ ಕಾರ್ಯಸ್ಥಾನ ಬದಲಿಸಿ ಬ್ರಿಟೀಶ್ ಇನ್ಟರ್ಮೇಶನ್ ಸರ್ವಿಸ್ ಸೇರಿಕೊಂಡರು.

ಅಲ್ಲೇ ಕೆಲಸ ಮಾಡುತ್ತಾ, ಭಾರತದ ಮಹಾನ್ ನಾಯಕರುಗಳೆನಿಸಿಕೊಂಡ ಮಹಾತ್ಮಾ ಗಾಂಧಿ, ಜವಹಾರ್ ಲಾಲ್ ನೆಹರು, ಮೊಹಮದ್ ಅಲಿ ಜಿನ್ನಾ, ಇಂದಿರಾಗಾಂಧಿ ಅವರ ಚಿತ್ರಗಳನ್ನೆಲ್ಲಾ ತೆಗೆದರು. ಸ್ವಾತಂತ್ರ್ಯ ಬಂದ ನಂತರ ಮೊದಲ ತ್ರಿವರ್ಣ ಧ್ವಜ ಹಾರಿಸಿದ ಚಿತ್ರ ತೆಗೆದದ್ದು ಇದೇ ಹೋಮೈ ವ್ಯಾರವಲ್ಲಾ ಅವರು.
ಮೊದಲ ಪ್ರಧಾನಿ ನೆಹರು ಅವರು ಬಾಯಲ್ಲಿ ಸಿಗರೇಟು ಇಟ್ಟುಕೊಂಡು ಬ್ರಿಟಿಶ್ ಮಹಿಳೆ ಶ್ರೀಮತಿ ಸಿಮೋನ್ ಗೆ ಸಿಗರೇಟು ಹೊತ್ತಿಸುತ್ತಿರುವ ಚಿತ್ರ ತೆಗೆದದ್ದು ಇದೇ ಹೋಮೈ ಅವರು. ಪಾಕಿಸ್ತಾನ ವಿಭಜನೆ, ಮಹಾತ್ಮಾ ಗಾಂಧಿ ಅವರ ಅಂತಿಮ ಯಾತ್ರೆಯ ಚಿತ್ರಗಳನ್ನು ತೆಗೆದದ್ದು ಹೋಮೈ ಅವರ ಅವಿಸ್ಮರಣೀಯ ಕ್ಷಣ ಎಂದು ಅವರೇ ಹೇಳಿಕೊಂಡಿದ್ದರು. ನೆಹರು-ಗಾಂಧಿ ಕುಟಕುಂಬದ ಬಹುತೇಕ ಚಿತ್ರಗಳನ್ನು ಹೋಮೈ ಅವರು ತೆಗೆದಿದ್ದಾರೆ.
1970ರಲ್ಲಿ ಅವರ ಪತಿ ಕಾಲವಾದ ನಂತರ ಅವರು ಕೆಲಸಕ್ಕೆ ರಾಜಿನಾಮೆ ನೀಡಿ ಛಾಯಾಗ್ರಹಣಕ್ಕೆ ಸಲಾಮ ಹೊಡೆದುಬಿಟ್ಟರು. ತಮ್ಮ ವೃತ್ತಿಬದುಕಿನ ಉತ್ತುಂಗದಲ್ಲಿದ್ದಾಗಲೇ ಅವರು ಛಾಯಾಗ್ರಹಣ ಬಿಟ್ಟುಬಿಟ್ಟರು.
ತಮ್ಮ ಕೊನೆಯ ದಿನಗಳನ್ನು ಹುಟ್ಟೂರಾದ ಗುಜರಾತ್ ನ ವಡೋದರಾದಲ್ಲಿ ಕಳೆದ ಅವರು 2012ರ ಜನವರಿ 15ರಂದು ಇಹಲೋಕ ತ್ಯಜಿಸಿದರು. ಸಾಯುವುದಕ್ಕೆ ಕೆಲವು ವರ್ಷಗಳ ಮುಂದೆ ತಮ್ಮ ಅಸಂಖ್ಯ ಅತ್ಯಮೂಲ್ಯ ಚಿತ್ರಗಳನ್ನು ದೆಹಲಿಯ ಅಲ್ಕಜಿ ಫೌಂಡೇಶನ್ ಗೆ ನೀಡಿದ್ದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications