UPI: ಫೋನ್ಪೇ, ಗೂಗಲ್ಪೇ ಬಳಕೆದಾರರಿಗೆ ಗುಡ್ನ್ಯೂಸ್: ಹಣ ವರ್ಗಾವಣೆ ಮಿತಿ ಹೆಚ್ಚಳ, ಎಷ್ಟು?
UPI Transaction: ಡಿಜಿಟಲ್ ಇಂಡಿಯಾ ಯುಗದಲ್ಲಿ ಸಾಗುತ್ತಿರುವ ಭಾರತದಲ್ಲಿ ಹಣ ಪಾವತಿ, ವರ್ಗಾವಣೆಗೆ ಯುಪಿಐ ಬಳಸುವವರ ಸಂಖ್ಯೆ ಅಧಿಕವಾಗಿದೆ. ಇದೀಗ ಫೋನ್ ಪೇ, ಗೂಗಲ್ ಪೇ ಸೇರಿದಂತೆ ಯುಪಿಐ ಬಳಕೆದಾರರಿಗೆ ಗುಡ್ನ್ಯೂಸ್ವೊಂದು ಹೊರಬಿದ್ದಿದೆ. ಸದ್ಯ ಯುಪಿಐ ವಹಿವಾಟಿಗೆ ಮಿತಿ ನಿಗದಿ ಮಾಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಖಾತೆಯಲ್ಲಿ ಹಣವಿದ್ದರೂ ನಮ್ಮ ಕೈಸೇರದ ಪರಿಸ್ಥಿತಿ ಇದೆ. ಆದರೆ ಇನ್ನು ಮುಂದೆ ಯುಪಿಐ ಮೂಲಕ ಹಣ ವರ್ಗಾವಣೆ ಮತ್ತಷ್ಟು ಸುಲಭವಾಗಲಿದ್ದು, ಸೆಪ್ಟೆಂಬರ್ 15ರಿಂದ ಹೊಸ ನಿಯಮ ಜಾರಿಯಾಗಲಿದೆ.
ಡಿಜಿಟಲ್ ಪಾವತಿಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ಸಿಪಿಐ) ಯುಪಿಐ ಪಾವತಿ ಮಿತಿಯನ್ನು ಹೆಚ್ಚಳ ಮಾಡಿದೆ. ಸೆಪ್ಟೆಂಬರ್ 15ರಿಂದ ಜಾರಿಯಾಗಲಿರುವ ಹೊಸ ನಿಯಮಗಳ ಅನ್ವಯ ಗ್ರಾಹಕರು ಕೆಲವೊಂದು ವಿಶೇಷ ವರ್ಗಗಳಿಗೆ ಏಕಕಾಲಕ್ಕೆ ₹5 ಲಕ್ಷದವರೆಗೆ ಹಾಗೂ 24 ಗಂಟೆಗಳಲ್ಲಿ ಒಟ್ಟು ₹10 ಲಕ್ಷವರೆಗೆ ಯುಪಿಐ ಮೂಲಕ ಪಾವತಿ ಮಾಡಬಹುದಾಗಿದೆ.

ಯಾರಿಗೆಲ್ಲ ಅನುಕೂಲ?
ಇದು ತೆರಿಗೆ, ವಿಮೆ ಕಂತು, ಬಂಡವಾಳ ಮಾರುಕಟ್ಟೆ ಹೂಡಿಕೆ, ಬ್ಯಾಂಕ್ ಸಾಲದ ಇಎಂಐ ಮುಂತಾದ 12 ನಿರ್ದಿಷ್ಟ ವ್ಯವಹಾರಗಳಿಗೆ ಮಾತ್ರ ಈ ಹೆಚ್ಚುವರಿ ಮಿತಿ ಅನ್ವಯವಾಗಲಿದೆ. ಪರ್ಸನ್-ಟು-ಪರ್ಸನ್ ಪಾವತಿ ಮಿತಿ ದಿನಕ್ಕೆ ₹1 ಲಕ್ಷವಿರುತ್ತದೆ. ಐಪಿಒ ಹೂಡಿಕೆಗಳ ಪಾವತಿ ಮಿತಿಯೂ ₹5 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಕ್ರೆಡಿಟ್ ಕಾರ್ಡ್ ಪಾವತಿಯು ಒಂದು ವರ್ಗಾವಣೆಗೆ ₹5 ಲಕ್ಷ ಮತ್ತು ಒಂದೇ ದಿನಕ್ಕೆ ₹6 ಲಕ್ಷಕ್ಕೆ ಸೀಮಿತವಾಗಿದೆ.
ಅದರಂತೆ ಸೆಪ್ಟೆಂಬರ್ 15ರಿಂದ ಬಳಕೆದಾರರು ತೆರಿಗೆ ಪಾವತಿಗಳು, ವಿಮಾ ಕಂತುಗಳು, ಇಎಂಐ ಮತ್ತು ಬಂಡವಾಳ ಮಾರುಕಟ್ಟೆ ಹೂಡಿಕೆಗಳಂತಹ ನಿರ್ದಿಷ್ಟ ವರ್ಗಗಳಿಗೆ 24 ಗಂಟೆಗಳ ಅವಧಿಯಲ್ಲಿ ₹10 ಲಕ್ಷದವರೆಗೆ ಹಣ ವರ್ಗಾಯಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಮೌಲ್ಯದ ಡಿಜಿಟಲ್ ವಹಿವಾಟುಗಳನ್ನು ಸರಳಗೊಳಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಈ ಹೊಸ ವ್ಯವಸ್ಥೆ ಕಲ್ಪಿಸಿದೆ.
ಎಲ್ಲ ಬ್ಯಾಂಕ್ ಹಾಗೂ ಯುಪಿಐ ಆ್ಯಪ್ಗಳಿಗೆ ಈ ನಿಯಮ ಜಾರಿಗೆ ಸೂಚನೆ ನೀಡಲಾಗಿದೆ. ಯುಪಿಐ ಮೂಲಕ ಉದ್ಯಮಿಗಳು, ಹೂಡಿಕೆದಾರರು ಹೆಚ್ಚಿನ ಮೊತ್ತದ ಪಾವತಿಯನ್ನು ಇನ್ನು ಸುಲಭವಾಗಿ ಮಾಡಬಹುದು. ಈಗ ಪ್ರತಿ ವಹಿವಾಟಿಗೆ ₹5 ಲಕ್ಷದವರೆಗೆ ಅವಕಾಶವಿದ್ದು, ಯುಪಿಐ ಮೂಲಕ ದಿನಕ್ಕೆ ₹10 ಲಕ್ಷದವರೆಗೆ ಮಿತಿ ನಿಗದಿಪಡಿಸಲಾಗಿದೆ. ಈ ಹಿಂದೆ ಇದ್ದ ₹2 ಲಕ್ಷ ಮಿತಿಯಿಂದ ಪ್ರತಿ ವಹಿವಾಟಿಗೆ ₹5 ಲಕ್ಷಕ್ಕೆ ಮತ್ತು 24 ಗಂಟೆಗಳಲ್ಲಿ ₹10 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಸೆಪ್ಟೆಂಬರ್ 15ರಿಂದ ಈ ಮಿತಿಗಳನ್ನು ಜಾರಿಗೊಳಿಸಲು ಎಲ್ಲ ಬ್ಯಾಂಕ್ಗಳು ಹಾಗೂ ಯುಪಿಐ ಅಪ್ಲಿಕೇಶನ್ಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಬ್ಯಾಂಕುಗಳು ತಮ್ಮದೇ ಆದ ಆಂತರಿಕ ಮಿತಿಗಳನ್ನು ಹೊಂದಿಸಲು ಅವಕಾಶವೂ ನೀಡಿದೆ. ಆದರೆ ಬ್ಯಾಂಕ್ ಅಥವಾ ಯುಪಿಐ ಈ ಹೊಸ ಮಿತಿಗಳನ್ನು ಜಾರಿಗೆ ತರುವ ನಿರೀಕ್ಷೆಯಿದ್ದು, ಸ್ವಲ್ಪ ಬದಲಾವಣೆಯಾಗಬಹುದು.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್












Click it and Unblock the Notifications