'ಕೌನ್ ಬನೇಗಾ...' ವಿಡಿಯೋ ಹಂಚಿಕೊಂಡು ಖುಷಿಪಟ್ಟ ಗೀತಾ ಗೋಪಿನಾಥ್
ನವದೆಹಲಿ, ಜನವರಿ 22: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಟೆಲಿವಿಷನ್ ಕ್ವಿಜ್ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್ಪತಿ'ಯ ವಿಶೇಷ ವಿಡಿಯೋವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಜನಪ್ರಿಯ ಕಾರ್ಯಕ್ರಮ ನಡೆಸಿಕೊಡುವ ನಟ ಅಮಿತಾಬ್ ಬಚ್ಚನ್ ಸ್ಪರ್ಧೆಯ ಸಂದರ್ಭದಲ್ಲಿ ತಮ್ಮನ್ನು ಕೊಂಡಾಡಿರುವುದರಿಂದ ಅವರು ಪುಳಕಿತರಾಗಿದ್ದಾರೆ.
'ಈ ಚಿತ್ರದಲ್ಲಿ ಕಾಣಿಸುವ ಅರ್ಥಶಾಸ್ತ್ರಜ್ಞೆ 2019ರಿಂದ ಯಾವ ಸಂಘಟನೆಯ ಮುಖ್ಯ ಆರ್ಥಿಕ ತಜ್ಞೆಯಾಗಿದ್ದಾರೆ?' ಎಂದು ಪರದೆ ಮೇಲೆ ಗೀತಾ ಗೋಪಿನಾಥ್ ಅವರ ಚಿತ್ರ ಬಂದಾಗ ಸ್ಪರ್ಧಿಗೆ ಅಮಿತಾಬ್ ಪ್ರಶ್ನಿಸಿದ್ದಾರೆ. 'ಆಕೆಯ ಮುಖ ಎಷ್ಟು ಸುಂದರವಾಗಿದೆಯೆಂದರೆ, ಯಾರೊಬ್ಬರೂ ಆಕೆಯನ್ನು ಆರ್ಥಿಕತೆಯೊಂದಿಗೆ ಸಂಬಂಧಿಸಿ ನೋಡುವುದಿಲ್ಲ' ಎಂದು ಅಮಿತಾಬ್, ಗೀತಾ ಅವರ ಗುಣಗಾನ ಮಾಡಿದ್ದಾರೆ.

ಈ ಸಣ್ಣ ವಿಡಿಯೋ ತುಣಕನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಗೀತಾ ಗೋಪಿನಾಥ್, ತಾವು ಅಮಿತಾಬ್ ಬಚ್ಚನ್ ಅವರ ದೊಡ್ಡ ಅಭಿಮಾನಿಯಾಗಿರುವುದರಿಂದ ಈ ವಿಡಿಯೋ ತಮ್ಮ ಪಾಲಿಗೆ ಬಹಳ ವಿಶೇಷವಾಗಿದೆ ಎಂದಿದ್ದಾರೆ. ಅಮಿತಾಬ್ ಬಚ್ಚನ್ ಅವರು ಸಾರ್ವಕಾಲಿಕ ಶ್ರೇಷ್ಠ. ಇದಕ್ಕಿಂತ ಮಿಗಿಲಾಗಿರುವುದು ತಮಗೆ ಸಿಗುತ್ತದೆ ಎಂದೆನಿಸದು ಎಂದು ಅವರು ಹೇಳಿದ್ದಾರೆ.
Ok, I don't think I will ever get over this. As a HUGE fan of Big B @SrBachchan, the Greatest of All Time, this is special! pic.twitter.com/bXAeijceHE
— Gita Gopinath (@GitaGopinath) January 22, 2021
ಗೀತಾ ಅವರ ವಿಡಿಯೋಕ್ಕೆ ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ. 'ಧನ್ಯವಾದ ಗೀತಾ ಗೋಪಿನಾಥ್. ನಿಮ್ಮ ಕುರಿತು ಕಾರ್ಯಕ್ರಮದಲ್ಲಿ ಆಡಿದ ಪ್ರತಿ ಪದವೂ ಅತ್ಯಂತ ಶ್ರದ್ಧಾಪೂರ್ವಕವಾಗಿದೆ' ಎಂದು ಹೇಳಿದ್ದಾರೆ. ಭಾರತ ಮೂಲದ ಗೀತಾ ಗೋಪನಾಥ್, ಅಮೆರಿಕದ ಸಂಜಾತೆಯಾಗಿದ್ದಾರೆ.
ಆದರೆ ಅಮಿತಾಬ್ ಅವರು ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆ 'ಸೆಕ್ಸಿಸ್ಟ್' ಆಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇಷ್ಟು ಸುಂದರ ಮುಖ ಅಥವಾ ಆರ್ಥಿಕತೆ ಎಂಬ ಪದಗಳನ್ನು ಅಮಿತಾಬ್ ಬಳಸಿದ್ದಾರೆ. ಆರ್ಥಿಕತೆಗೂ ಸುಂದರವಾಗಿರುವುದಕ್ಕೂ ಸಂಬಂಧವೇನಿದೆ? ಗೀತಾ ಅವರ ಸಾಧನೆಯನ್ನು ಮಾತ್ರ ಇಲ್ಲಿ ಪರಿಗಣಿಸಬೇಕಿರುವುದು. ಇಂತಹ ಪದ ಬಳಕೆ ಸಮಂಜಸವಲ್ಲ ಎಂದು ಟೀಕಿಸಿದ್ದಾರೆ.
-
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್








Click it and Unblock the Notifications