‘ಗೌರಿ ಗತಿಯೇ ನಿಮಗೂ ಬರಲಿದೆ’ಎಂದಿದ್ದ ಹಿಂದು ನಾಯಕಿ ಮೇಲೆ ಕೇಸ್

Recommended Video

      gauri lankesh : Kerala Hindu Aikyavedi leader K P Sasikala gives controversy statement

      ಕೋಯಿಕ್ಕೋಡ್, ಸೆಪ್ಟೆಂಬರ್ 11: 'ಪತ್ರಕರ್ತೆ ಗೌರಿ ಲಂಕೇಶ್ ಅವರಿಗಾದ ಗತಿಯೇ ನಿಮಗೂ ಬರಲಿದೆ,' ಎಂದು ವಿವಾದಿತ ಹೇಳಿಕೆ ನೀಡಿದ್ದ ಹಿಂದು ಐಕ್ಯವೇದಿ ಸಂಘಟನೆಯ ಕೇರಳ ಅಧ್ಯಕ್ಷೆ ಕೆ.ಪಿ. ಶಶಿಕಲಾ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

      ಶನಿವಾರ ಕೋಯಿಕ್ಕೋಡ್ ನ ಪರವೂರ್ ನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ಅವರು, ಪತ್ರಕರ್ತೆ ಗೌರಿ ಲಂಕೇಶ್ ಅವರಿಗಾದ ಗತಿಯೇ ನಿಮಗೂ ಬರಲಿದೆ ಎಂದು ಪ್ರಗತಿಪರ ಹಾಗೂ ಜಾತ್ಯಾತೀತ ಪತ್ರಕರ್ತರು ಹಾಗೂ ಲೇಖಕರಿಗೆ ಎಚ್ಚರಿಕೆ ನೀಡಿದ್ದರು.

      'Gauri Lankesh’s fate awaits you': 2 complaint registered against Kerala Hindu leader KP Sasikala

      'ಅನಗತ್ಯವಾಗಿ ಮೃತ್ಯುವನ್ನು ಆಹ್ವಾನಿಸಿಕೊಳ್ಳಬೇಡಿ. ಸಾವಿನ ದವಡೆಯಿಂದ ಪಾರಾಗಲು ಮೃತ್ಯುಂಜಯ ಹೋಮ ಮಾಡಿ, ಪ್ರಾಣ ಉಳಿಸಿಕೊಳ್ಳಿ' ಎಂದು ಪ್ರಗತಿಪರರಿಗೆ ಬಿಟ್ಟಿ ಸಲಹೆ ಬೇರೆ ನೀಡಿದ್ದರು.

      ಪರವೂರ್ ಠಾಣೆಯಲ್ಲಿ ಶಶಿಕಲಾ ವಿರುದ್ಧ ಐಪಿಸಿ ಸೆಕ್ಷನ್ 153ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಶಾಸಕ ವಿಡಿ ಸತೀಶನ್ ಮತ್ತು ಡಿವೈಎಫ್ಐ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

      ಇದೇ ವೇಳೆ ಕೋಯಿಕ್ಕೋಡ್ ನ ಕಸಬಾ ಠಾಣೆಯಲ್ಲೂ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2006ರಲ್ಲಿ ಇದೇ ಕಸಬಾ ಠಾಣೆ ವ್ಯಾಪ್ತಿಯಲ್ಲಿ ಶಶಿಕಲಾ ವಿವಾದಿತ ಭಾಷಣ ಮಾಡಿದ್ದರು. ಈ ಭಾಷಣಕ್ಕೆ ಸಂಬಂಧಿಸಿದಂತೆ ಈಗ ಪ್ರಕರಣ ದಾಖಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+