GST: ಆಹಾರೋತ್ಪನ್ನಗಳಿಗಿಲ್ಲ ಕರ, ಐಷಾರಾಮಿ ವಾಹನಗಳಿಗೆ ಸೆಸ್ ಬರೆ
“ಯಾವುದೇ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿಲ್ಲ. ಹೆಚ್ಚಿನ ಉತ್ಪನ್ನಗಳ ಮೇಲೆ ತೆರಿಗೆ ಕಡಿತಗೊಳಿಲಾಗಿದೆ. ಒಟ್ಟಾರೆ ತೆರಿಗೆ ಕಡಿತಗೊಳಿಸಲಾಗಿದೆ," ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ನವದೆಹಲಿ, ಮೇ 18: ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಹಾರೋತ್ಪನ್ನಗಳನ್ನು ಜಿಎಸ್ಟಿಯಿಂದ ಹೊರಗಿಡುವ ಜಂಟಿ ತೀರ್ಮಾನಕ್ಕೆ ಬಂದಿವೆ. ಜತೆಗೆ ದಿನ ಬಳಕೆಯ ವಸ್ತುಗಳಿಗೆ ಕಡಿಮೆ ಟ್ಯಾಕ್ಸ್ ನಿಗದಿ ಮಾಡಲು ನಿರ್ಧರಿಸಿವೆ. ಇದರಿಂದ ಮುಂದಿನ ದಿನಗಳಲ್ಲಿ ದಿನಗಳಲ್ಲಿ ದಿನ ಬಳಕೆ ವಸ್ತುಗಳ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ.
ಇಂದು ನಡೆದ ಸಭೆಯಲ್ಲಿ ಆಹಾರ ಉತ್ಪನ್ನಗಳು ಹಾಗೂ ಬೆಲ್ಲವನ್ನೂ ಪೂರ್ತಿಯಾಗಿ ಲೆವಿಯಿಂದ ಹೊರಗಿಡಲು ಎರಡೂ ಸರಕಾರಗಳು ಒಪ್ಪಿವೆ. ಜತೆಗೆ ಮಿಠಾಯಿ ತಿಂಡಿಗಳು, ಅಡುಗೆ ಎಣ್ಣೆ, ಸಕ್ಕರೆ, ಟೀ, ಕಾಫೀ ಮತ್ತು ಕಲ್ಲಿದ್ದಲಿನ ಮೇಲೆ ಕೇವಲ ಶೇಕಡಾ 5ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ.[ಜೂನ್ 5ರಿಂದ 16, ಜಿಎಸ್ಟಿಗಾಗಿ ಮುಂದುವರಿದ ಬಜೆಟ್ ಅಧಿವೇಶನ]

ಇನ್ನು ಕೂದಲೆಣ್ಣೆ, ಹಲ್ಲುಜ್ಜುವ ಪೇಸ್ಟ್ ಮತ್ತು ಸೋಪ್ ಗಳು ಶೇಕಡಾ 18 ತೆರಿಗೆ ವಿಭಾಗದಲ್ಲಿ ಬರುತ್ತವೆ. ಇನ್ನು ಸಣ್ಣ ಕಾರುಗಳ ಮೇಲೆ ಶೇಕಡಾ 28 ತೆರಿಗೆ ಹೊರೆ ಬೀಳಲಿದೆ. ಜತೆಗೆ ಸ್ವಲ್ಪ ಸೆಸ್ ಕೂಡಾ ಬೀಳಲಿದೆ. ಇನ್ನು ಐಶಾರಾಮಿ ಕಾರುಗಳು ಶೇಕಡಾ 15 ಸೆಸ್ ಎದುರಿಸಲಿವೆ. ಇದೇ ರೀತಿ ಏರ್ ಕಂಡೀಷನ್, ಫ್ರಿಡ್ಜ್ ಗಳು ಕೂಡಾ ಶೇಕಡಾ 28ರ ತೆರಿಗೆ ವ್ಯಾಪ್ತಿಯೊಳಕ್ಕೆ ಬರುತ್ತವೆ. ಸದ್ಯ ಇವುಗಳಿಗೆ 30-31 ರಷ್ಟು ತೆರಿಗೆ ಇರುವುದರಿಂದ ಜಿಎಸ್ಟಿ ಬಂದರೆ ಕಡಿಮೆ ತೆರಿಗೆ ಬೀಳಲಿದೆ.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]
"ಯಾವುದೇ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿಲ್ಲ. ಹೆಚ್ಚಿನ ಉತ್ಪನ್ನಗಳ ಮೇಲೆ ತೆರಿಗೆ ಕಡಿತಗೊಳಿಲಾಗಿದೆ. ಒಟ್ಟಾರೆ ತೆರಿಗೆ ಕಡಿತಗೊಳಿಸಲಾಗಿದೆ. ಒಂದೇ ಏನೆಂದರೆ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಇವನ್ನೆಲ್ಲಾ ಮಾಡಲಾಗಿದೆ," ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ಇನ್ನು ವರದಿಗಾರರಿಗೆ ಉತ್ತರಿಸಿದ ಕಂದಾಯ ಇಲಾಖೆ ಕಾರ್ಯದರ್ಶಿ ಹಶ್ಮುಖ್ ಅಧಿಯಾ, 1211 ವಸ್ತುಗಳಲ್ಲಿ ಶೇಕಡಾ 7 ವಸ್ತುಗಳನ್ನು ತೆರಿಗೆಯಿಂದ ಹೊರಗಿಡಲಾಗಿದೆ. ಇನ್ನು ಶೇಕಡಾ 14 ವಸ್ತುಗಳು ಶೇಕಡಾ 5 ತೆರಿಗೆ ವರ್ಗಕ್ಕೆ ಬರುತ್ತವೆ. ಶೇ. 17 ವಸ್ತುಗಳು ಶೇ. 12 ತೆರಿಗೆ ವ್ಯಾಪ್ತಿಯಲ್ಲಿವೆ. ಶೇಕಡಾ 43 ವಸ್ತುಗಳು ಶೇಕಡಾ 18 ತೆರಿಗೆ ಅಡಿಯಲ್ಲಿ ಬರುತ್ತವೆ. ಶೇಕಡಾ 19 ವಸ್ತುಗಳು ಶೇಕಡಾ 28 ತೆರಿಗೆ ವ್ಯಾಪ್ತಿಯಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications