ಭಾರತದ 2 ಸಾವಿರ ರು. ನೋಟು ಪಾಕಿಸ್ತಾನದಿಂದ 30 ರುಪಾಯಿಗೆ ಮಾರಾಟ
ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ ಐ ಭಾರತದ ನೋಟುಗಳನ್ನು ನಕಲು ಮಾಡುವುದಕ್ಕೆ ಅಂತಲೇ ಎರಡು ಕಾರ್ಖಾನೆ ಆರಂಭಿಸಿದ ಸುದ್ದಿ ಹೊರಬಂದ ಬೆನ್ನಲ್ಲೇ ದೆಹಲಿ ಪೊಲೀಸರು ಅಂತರರಾಷ್ಟ್ರೀಯ ಮಟ್ಟದ ನಕಲಿ ನೋಟು ಜಾಲವನ್ನು ಭೇದಿಸಿದ್ದಾರೆ.
ಪಶ್ಚಿಮ ಬಂಗಾಲದ ಮಾಲ್ಡಾ ನಿವಾಸಿ ಕಶೀದ್ ಎಂಬಾತನನ್ನು ಎರಡು ಸಾವಿರ ರುಪಾಯಿ ನಕಲಿ ನೋಟುಗಳೊಂದಿಗೆ ಪೊಲೀಸರು ಬಂಧಿಸಿದ್ದು, ಹದಿನೈದು ವರ್ಷಗಳಿಂದ ಆತ ಅದೇ ದಂಧೆಯಲ್ಲಿ ತೊಡಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಆತನ ವಿಚಾರಣೆ ವೇಳೆಯಲ್ಲಿ ಬೆಚ್ಚಿ ಬೀಳುವಂಥ ಸಂಗತಿಗಳನ್ನು ತಿಳಿಸಿದ್ದಾನೆ.
ಆತ ಎರಡು ಸಾವಿರ ರುಪಾಯಿಯ ನಕಲಿ ನೋಟುಗಳನ್ನು ಮೂವತ್ತು ರುಪಾಯಿ ಕೊಟ್ಟು ಪಾಕಿಸ್ತಾನದಿಂದ ಖರೀದಿಸುತ್ತಿದ್ದನಂತೆ. ಗಡಿ ದಾಟಿ ಅವುಗಳು ಬರುತ್ತಿದ್ದವು ಅಂತ ಒಪ್ಪಿಕೊಂಡಿದ್ದಾನೆ. ಆ ನಕಲಿ ನೋಟುಗಳನ್ನು ಭಾರತದಲ್ಲಿ ಒಂಬೈನೂರು ರುಪಾಯಿಗೆ ಮಾರಲಾಗುತ್ತಿತ್ತು ಅಂತಲೂ ಹೇಳಿದ್ದಾನೆ.

ಈ ಮಧ್ಯೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ನಕಲಿ ನೋಟು ಮುದ್ರಣದ ಮೂರು ಕಾರ್ಖಾನೆ ಮೇಲೆ ಭಾರತದ ಗುಪ್ತಚರ ಇಲಾಖೆಯು ನಿಗಾ ಇಟ್ಟಿದೆ. ಅಲ್ಲಿ ಭಾರತದ ಐನೂರು ಹಾಗೂ ಎರಡು ಸಾವಿರ ರುಪಾಯಿಗಳ ನೋಟುಗಲ ನಕಲು ತಯಾರಿಸಲಾಗುತ್ತಿದೆಯಂತೆ.
ಕನಿಷ್ಠ ಮೂರು ಕಾರ್ಖಾನೆ ಆರಂಭಿಸಲಾಗಿದೆ. ಇದಿನ್ನೂ ಆರಂಭ. ಈಗಾಗಲೇ ನೋಟಿನ ಸುರಕ್ಷತೆಯ ಎಲ್ಲ ಲಕ್ಷಣಗಳನ್ನು ನಕಲು ಮಾಡಲಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ನಕಲು ಮಾಡಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ನಕಲು ನೋಟುಗಳನ್ನು ಭಾರತದೊಳಕ್ಕೆ ತಳ್ಳಲು ಕಾಶ್ಮೀರ ಹಾಗೂ ಬಾಂಗ್ಲಾದೇಶದ ದಾರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪಿಒಕೆಯಲ್ಲಿರುವ ಕಾರ್ಖಾನೆಯಲ್ಲಿ ಉನ್ನತ ದರ್ಜೆಯ ಮಶೀನ್, ಶಾಯಿ ಹಾಗೂ ಕಾಗದಗಳನ್ನು ಬಳಸಲಾಗುತ್ತಿದೆ. ತನಿಖಾ ಸಂಸ್ಥೆಗಳಿಂದಲೂ ನಕಲಿ ನೋಟುಗಳನ್ನು ಗುರುತಿಸಲು ಕಷ್ಟವಾಗುತ್ತದೆ ಎನ್ನಲಾಗಿದೆ.
ಐನೂರು ರುಪಾಯಿ ನೋಟಿಗಿಂತಲೂ ಎರಡು ಸಾವಿರದ ನಕಲಿ ನೋಟು ಗುರುತಿಸಲು ಕಷ್ಟವಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಗುಪ್ತಚರ ಇಲಾಖೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮುದ್ರಣವಾಗುವ ಈ ನಕಲಿ ನೋಟುಗಳು ಮೊದಲಿಗೆ ಬಾಂಗ್ಲಾದೇಶಕ್ಕೆ ಬರುತ್ತವೆ. ಅಲ್ಲಿಂದ ಪಶ್ಚಿಮ ಬಂಗಾಲವನ್ನು ಪ್ರವೇಶಿಸುತ್ತವೆ. ಆ ನಂತರ ವಿವಿಧ ಜಾಲದ ಮೂಲಕ ರಸ್ತೆ ಮಾರ್ಗದಲ್ಲಿ ಕಾಶ್ಮೀರಕ್ಕೆ ಸಾಗಾಟವಾಗುತ್ತಿವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications