ಕಳೆದ 24 ಗಂಟೆಗಳಲ್ಲಿನ ನಾನಾ ಸುದ್ದಿಗಳ ಚಿತ್ರ ಸಂಪುಟ
ಕಳೆದ 24 ಗಂಟೆಗಳಲ್ಲಿ ವಿಶ್ವದೆಲ್ಲೆಡೆ ಅಂದೆಥದ್ದೋ ಘಟನೆಗಳು ಜರುಗಿವೆ. ಎಲ್ಲೆಲ್ಲೋ ಏನೋನೋ ಆಗಿದೆ.
ಉದಾಹರಣೆಗೆ, ಟರ್ಕಿಯ ಎಡಿರ್ನಿಯಲ್ಲಿ ಶುಕ್ರವಾರ ಹಿಡೆರೆಲೆಜ್ ಎಂಬ ಸಾಂಪ್ರದಾಯಿಕ ಹಬ್ಬ, ಶನಿವಾರ ಬೆಳಗ್ಗೆ ದಕ್ಷಿಣ ದೆಹಲಿಯ ತುಘಲಕಾಬಾದ್ ಪ್ರಾಂತ್ಯದಲ್ಲಿರುವ ರೈಲ್ವೇ ಕಾಲೋನಿಯಲ್ಲಿರುವ ರಾಣಿ ಝಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದ ಮಕ್ಕಳು ವಿಷಾನಿಲ ಉಸಿರಾಟದಿಂದಾಗಿ ಅಸ್ವಸ್ಥರಾಗಿದ್ದು ಮುಂತಾದ ಘಟನೆಗಳು ನಡೆದಿವೆ.
ಇನ್ನು, ಅಹ್ಮದಾಬಾದ್ ನಲ್ಲಿ ಜೈನ ಧರ್ಮ ಸಂಸ್ಥಾಪಕರಾದ ಮಹಾವೀರನ ಸ್ವರ್ಣ ವರ್ಣದ 10 ಅಡಿ ಎತ್ತರದ ಮೂರ್ತಿಯನ್ನು ಮೆರವಣಿಗೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ, ತಿರುಪತಿಗೆ ಭೇಟಿ ನೀಡಿದರು. ತಿರುಮಲದಲ್ಲಿ ಬಾಲಾಜಿಯ ದರ್ಶನ ಪಡೆದಿದ್ದೂ ಇದರಲ್ಲಿ ಸೇರಿದೆ.
ಇಂಥವೇ ಕೆಲವಾರು ಘಟನೆಗಳ ಚಿತ್ರ ಸಂಪುಟ, ಸಂಕ್ಷಿಪ್ತ ವಿವರಗಳ ಸಹಿತ ಇಲ್ಲಿ ನಿಮಗಾಗಿ....

ಅಗ್ನಿ ನರ್ತನ
ಟರ್ಕಿಯ ಎಡಿರ್ನಿಯಲ್ಲಿ ಶುಕ್ರವಾರ ಹಿಡೆರೆಲೆಜ್ ಎಂಬ ಸಾಂಪ್ರದಾಯಿಕ ಹಬ್ಬವನ್ನು ಆಚರಿಸಲಾಯಿತು. ಪ್ರತಿ ಊರಿನಲ್ಲಿ ಸಾವಿರಾರು ಜನರು ಈ ಹಬ್ಬವನ್ನು ಆಚರಿಸುತ್ತಾರೆ. ಆಗ, ಬೆಂಕಿ ಹಾಕಿ ಅದರ ಸುತ್ತಲೂ ನೃತ್ಯ ಮಾಡುವ ಸಂಪ್ರದಾಯವಿದೆ. ಅಂಥದ್ದೇ ಒಂದು ಸಂಭ್ರಮದಲ್ಲಿ ಪಾಲ್ಗೊಂಡಿರುವ ಮಹಿಳೆ, ಹಿಡೆರೆಲೆಜ್ ನಲ್ಲಿ ಕ್ಯಾಮೆರಾ ಕಣ್ಣಿಗೆ ಹೀಗೆ ಕಂಡಳು.

ವಿಷಾನಿಲದ ಎಫೆಕ್ಟ್
ಶನಿವಾರ ಬೆಳಗ್ಗೆ ದಕ್ಷಿಣ ದೆಹಲಿಯ ತುಘಲಕಾಬಾದ್ ಪ್ರಾಂತ್ಯದಲ್ಲಿರುವ ರೈಲ್ವೇ ಕಾಲೋನಿಯಲ್ಲಿರುವ ರಾಣಿ ಝಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದ ಮಕ್ಕಳು ವಿಷಾನಿಲ ಉಸಿರಾಟದಿಂದಾಗಿ ಅಸ್ವಸ್ಥರಾಗಿದ್ದರು. ಹೀಗೆ ಅಸ್ವಸ್ಥರಾದ ಒಬ್ಬ ಬಾಲಕಿಯನ್ನು ಆರೈಕೆ ಮಾಡುತ್ತಿರುವ ವೈದ್ಯೆ.

ಭಕ್ತಿ ಭಾವದ ಮೆರವಣಿಗೆ
ಜೈನ ಧರ್ಮದ 2573ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ, ಅಹ್ಮದಾಬಾದ್ ನಲ್ಲಿ ಮಹಾಮೆರವಣಿಗೆಯನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಆ ವೇಳೆ, ಜೈನ ಧರ್ಮ ಸಂಸ್ಥಾಪಕರಾದ ಮಹಾವೀರನ ಸ್ವರ್ಣ ವರ್ಣದ 10 ಅಡಿ ಎತ್ತರದ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.

ಇಂದ್ರಪುರಿಯ ಮಹಲು ಧರೆಗೆ
ದೆಹಲಿಯ ಇಂದ್ರಪುರಿ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟವೊಂದು ಶನಿವಾರ ಕುಸಿದಿದೆ.

ನಟಿಯ ಸೆಲ್ಫಿ
ಶುಕ್ರವಾರ (ಮೇ 5) ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ನಂತರ ಪಂಜಾಬ್ ತಂಡದ ಸಹ ಮಾಲೀಕರಾದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಹಾಗೂ ಪಂಜಾಬ್ ತಂಡದ ಆಟಗಾರ ಸಂದೀಪ್ ಶರ್ಮಾ ಜತೆಗೆ ಸೆಲ್ಫೀ ಕ್ಲಿಕ್ಕಿಸಿಕೊಂಡರು.

ತಿಮ್ಮಪ್ಪನ ದರುಶನದಿಂದ ಧನ್ಯ
ಶುಕ್ರವಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ, ತಿರುಪತಿಗೆ ಭೇಟಿ ನೀಡಿದರು. ತಿರುಮಲದಲ್ಲಿ ಬಾಲಾಜಿಯ ದರ್ಶನ ಪಡೆದು ದೇಗುಲದಿಂದ ಹೊರಗಡೆ ಬಂದಾಗ ಕಂಡಿದ್ದು ಹೀಗೆ.

ಜನಸಾಗರದಲ್ಲಿ ನಿರ್ಭಯಾ ಪೋಷಕರು
ಶುಕ್ರವಾರ, ಸುಪ್ರೀಂ ಕೋರ್ಟ್ ನಲ್ಲಿ ನಿರ್ಭಯಾ ಪ್ರಕರಣದ ತೀರ್ಪು ಪ್ರಕಟಗೊಂಡಿತು. ಆನಂತರ, ಕೋರ್ಟ್ ನಿಂದ ಹೊರಟ ನಿರ್ಭಯಾ ತಾಯಿ ಆಶಾ ದೇವಿ ಕೋರ್ಟ್ ನಿಂದ ಹೊರಬಂದಾಗ ಕಂಡ ದೃಶ್ಯವಿದು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications