'ಬಿಜೆಪಿ ಮತ್ತೆ ರೈತ ವಿರೋಧಿ ಮುಖ ತೋರಿಸಿದೆ': ಸೂರ್ಯಕಾಂತಿ ರೈತರ ಮೇಲೆ ಲಾಠಿ ಚಾರ್ಜ್ಗೆ ಕಾಂಗ್ರೆಸ್ ಕಿಡಿ
ಚಂಡೀಗಢ, ಜೂನ್. 07: ಹರಿಯಣದ ಕುರುಕ್ಷೇತ್ರದಲ್ಲಿ ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಒತ್ತಾಯಿಸುತ್ತಿದ್ದ ಸೂರ್ಯಕಾಂತಿ ರೈತರ ಮೇಲೆ ಬಿಜೆಪಿ ಸರ್ಕಾರ ಮಂಗಳವಾರ ಲಾಠಿ ಚಾರ್ಜ್ ಮಾಡಲು ಆದೇಶಿಸಿದೆ. ಹಲವು ರೈತರು ಗಾಯಗೊಂಡಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಬಿಜೆಪಿ ಮತ್ತೆ ರೈತ ವಿರೋಧಿ ಮುಖ ತೋರಿಸಿದೆ ಎಂದಿದೆ.
ಮಂಗಳವಾರ ಕುರುಕ್ಷೇತ್ರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹಲ್ಲೆ ನಡೆಸುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ಮತ್ತೊಮ್ಮೆ ತನ್ನ ರೈತ ವಿರೋಧಿ ಮುಖವನ್ನು ಪ್ರದರ್ಶಿಸಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ. ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಮತ್ತು ಸಂಸದ ದೀಪೇಂದರ್ ಸಿಂಗ್ ಹೂಡಾ, ಮಂಗಳವಾರ 10 ರೈತರು ಗಾಯಗೊಂಡಿದ್ದಾರೆ ಮತ್ತು ಹಲವಾರು ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

"ಲಾಠಿ ಚಾರ್ಜ್ ಅನ್ನು ಬಳಸಲು ಸರ್ಕಾರದ ಹಿಂಸಾತ್ಮಕ ಆಜ್ಞೆಯು ಬ್ರಿಟಿಷ್ ಆಳ್ವಿಕೆಯ ಕ್ರೌರ್ಯಕ್ಕೆ ಅನುಗುಣವಾಗಿತ್ತು. ಈ ಸರ್ಕಾರವು ರೈತರ, ಕುಸ್ತಿಪಟುಗಳು ಅಥವಾ ಸಶಸ್ತ್ರ ಪಡೆಗಳದ್ದಲ್ಲ, ಆದರೆ ಶ್ರೀಮಂತರದ್ದು ಎಂಬುದು ಸ್ಪಷ್ಟವಾಗಿದೆ. ಸ್ವಾಮಿನಾಥನ್ ವರದಿಯನ್ನು ಇನ್ನೂ ಕಾರ್ಯರೂಪಕ್ಕೆ ತಂದಿಲ್ಲ. ಮೂರು ಕೃಷಿ ಶಾಸನಗಳ ವಿರುದ್ಧ ರೈತರು ವರ್ಷವಿಡೀ ನಡೆಸಿದ ಪ್ರತಿಭಟನೆಯಲ್ಲಿ 750 ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅದರ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆದಿದ್ದಾರೆ. 1.5 ವರ್ಷಗಳ ನಂತರ ಎಂಎಸ್ಪಿಯನ್ನು ಇನ್ನೂ ಜಾರಿಗೆ ತಂದಿಲ್ಲ" ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ಸೂರ್ಯಕಾಂತಿ ಬೀಜಗಳನ್ನು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಖರೀದಿಸದ ಹರ್ಯಾಣ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ರೈತರು ಮಂಗಳವಾರ ಕುರುಕ್ಷೇತ್ರ ಜಿಲ್ಲೆಯ ಶಹಬಾದ್ ಬಳಿ ರಾಷ್ಟ್ರೀಯ ಹೆದ್ದಾರಿ 44 ಅನ್ನು ತಡೆದು ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು ಲಾಠಿ ಚಾರ್ಜ್ ಮತ್ತು ಜಲ ಫಿರಂಗಿ ಬ:ಸಿ ರೈತರನ್ನು ಸ್ಥಳದಿಂದ ಹೋಗುವಂತೆ ಮಾಡಿದ್ದಾರೆ.
ಕುರುಕ್ಷೇತ್ರದ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸುರೀಂದರ್ ಸಿಂಗ್ ಭೋರಿಯಾ ಮಾತನಾಡಿ, "ರಸ್ತೆ ತೆರಯನ್ನು ತೆಗೆದುಹಾಕುವಂತೆ ರೈತರಿಗೆ ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ರೈತರನ್ನು ಓಡಿಸಬೇಕಾಯಿತು. ಬಂಧಿತ ರೈತರಲ್ಲಿ ಹೆಚ್ಚಿನವರನ್ನು ನಂತರ ಬಿಡುಗಡೆ ಮಾಡಲಾಯಿತು. ರೈತ ಮುಖಂಡ ಗುರ್ನಾಮ್ ಸಿಂಗ್ ಚಾರುಣಿ ಸೇರಿದಂತೆ ಎಂಟು ರೈತ ಮುಖಂಡರು ಮಾತ್ರ ಪೊಲೀಸರ ವಶದಲ್ಲಿದ್ದಾರೆ" ಎಂದು ಹೇಳಿದ್ದಾರೆ.

ಮೇ 30 ರಂದು, ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರವು ಭವಂತರ್ ಭರ್ಪೈ ಯೋಜನೆ (ಬಿಬಿವೈ) ಅಡಿಯಲ್ಲಿ ಒಳಗೊಂಡಿರುವ ಬೆಳೆಗಳ ಪಟ್ಟಿಯಲ್ಲಿ ಸೂರ್ಯಕಾಂತಿ ಬೀಜಗಳು ಮತ್ತು ಬಾಜ್ರಾವನ್ನು ಸೇರಿಸಲಾಗಿದೆ ಎಂದು ಘೋಷಿಸುವ ಸೂಚನೆಯನ್ನು ನೀಡಿತು. ಇದರ ಅಡಿಯಲ್ಲಿ ರೈತರು ಖಾಸಗಿಯವರಿಗೆ ಮಾರಾಟ ಮಾಡಲು ಕ್ವಿಂಟಲ್ಗೆ 1,000 ನೀಡಲಾಗುತ್ತದೆ. ಆದರೆ, ರೈತರು ಪ್ರತಿ ಕ್ವಿಂಟಾಲ್ಗೆ ಎಂಎಸ್ಪಿ 6,400 ರೂ. ಇದ್ದರು, ಖಾಸಗಿ ಖರೀದಿದಾರರಿಗೆ 4,000 ರೂನಂತೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.












Click it and Unblock the Notifications