Breaking: ದೆಹಲಿ ಬಳಿ ಕಾರು ಅಪಘಾತದಲ್ಲಿ ನಟ ದೀಪ್ ಸಿಧು ಸಾವು
ನವದೆಹಲಿ, ಫೆಬ್ರವರಿ 15: ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದ ನಟ ಹಾಗೂ ರೈತಪರ ಹೋರಾಟಗಾರ ದೀಪ್ ಸಿಧು ದೆಹಲಿಯ ಬಳಿ ಸೋನಿಪತ್ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಗಣರಾಜ್ಯೋತ್ಸವ ಹಿಂಸಾಚಾರ: ನಟ ದೀಪ್ ಸಿಧುಗೆ 14 ದಿನಗಳ ನ್ಯಾಯಾಂಗ ಬಂಧನ
ದೆಹಲಿಯ ಗಡಿಯಲ್ಲಿ ನಡೆದ ರೈತರ ಚಳವಳಿಯಲ್ಲಿ ಭಾಗವಹಿಸಿದ್ದ ದೀಪ್ ಸಿಧು ವಿರುದ್ಧ ಕೆಂಪು ಕೋಟೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಿತೂರಿ ಆರೋಪ ಹೊರಿಸಲಾಗಿತ್ತು. ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ನವೆಂಬರ್ 26ರಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದರು. ದೀಪ್ ಸಿಧು ರೈತರನ್ನು ಪ್ರಚೋದಿಸಿ ಕೆಂಪು ಕೋಟೆಗೆ ತೆರಳಲು ಪ್ರಚೋದನೆ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಕಳೆದ ಜನವರಿ 26ರ 72ನೇ ಗಣರಾಜ್ಯೋತ್ಸವದ ದಿನ ಹಿಂಸಾಚಾರಕ್ಕೆ ತಿರುಗಿತ್ತು. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಒಂದು ಗುಂಪು ಓಡಾಡುತ್ತಿದ್ದರೆ, ಮತ್ತೊಂದು ತಂಡವು ಕೆಂಪುಕೋಟೆಗೆ ನುಗ್ಗಿ, ತ್ರಿವರ್ಣ ಧ್ವಜ ಎದುರಿನಲ್ಲಿ ಸಿಖ್ ಧ್ವಜವನ್ನು ಹಾರಿಸಿತ್ತು.
ದೆಹಲಿ
ಹಿಂಸಾಚಾರದಲ್ಲಿ
500ಕ್ಕೂ
ಹೆಚ್ಚು
ಪೊಲೀಸರಿಗೆ
ಗಾಯ:
ಕಳೆದ
2021ರ
ಜನವರಿ
26ರಂದು
ನಡೆದ
ಹಿಂಸಾಚಾರದಲ್ಲಿ
ಸುಮಾರು
500ಕ್ಕೂ
ಹೆಚ್ಚು
ಪೊಲೀಸರು
ಗಾಯಗೊಂಡಿದ್ದರು.
ಸಾರ್ವಜನಿಕ
ಸಾರಿಗೆ,
ಪೊಲೀಸ್
ವಾಹನಗಳು
ಜಖಂಗೊಂಡಿತ್ತು.
ಫೆ.9
ರಂದು
ದೀಪ್
ಸಿಧುರನ್ನು
ಪಂಜಾಬ್ನ
ಜೀಕರ್ಪುರದಲ್ಲಿ
ದೆಹಲಿ
ಪೊಲೀಸರು
ಬಂಧಿಸಿದ್ದರು,
ಬಳಿಕ
ಮೆಟ್ರೊಪೊಲಿಟನ್
ಮ್ಯಾಜಿಸ್ಟ್ರೇಟ್
ಮುಂದೆ
ಹಾಜರುಪಡಿಸಲಾಗಿತ್ತು.
ಈ
ವೇಳೆ
ನ್ಯಾಯಾಲಯ
7
ದಿನದ
ಮಟ್ಟಿಗೆ
ಪೊಲೀಸ್
ಕಸ್ಟಡಿಗೆ
ನೀಡಿದ್ದು,
ತದನಂತರದಲ್ಲಿ
14
ದಿನದ
ನ್ಯಾಯಾಂಗ
ಬಂಧನಕ್ಕೆ
ಕೋರ್ಟ್
ಸೂಚಿಸಿತ್ತು.
ಕೆಂಪುಕೋಟೆಗೆ
ತೆರಳಲು
ನಾನು
ಕರೆ
ನೀಡಿರಲಿಲ್ಲ:
ಕಳೆದ
ಜನವರಿ
26ರಂದು
ದೆಹಲಿಯ
ಕೆಂಪುಕೋಟೆಯಲ್ಲಿ
ನಡೆದ
ಹಿಂಸಾಚಾರಕ್ಕೆ
ಸಂಬಂಧಿಸಿದಂತೆ
ದೀಪ್
ಸಿಧುರನ್ನು
ಪ್ರಮುಖ
ಆರೋಪಿ
ಎಂದು
ಗುರುತಿಸಲಾಗಿತ್ತು.
ಆದರೆ
ಕೆಂಪುಕೋಟೆಗೆ
ತೆರಳುವಂತೆ
ಪ್ರತಿಭಟನಾನಿರತ
ರೈತರಿಗೆ
ತಾವು
ಯಾವುದೇ
ಕರೆ
ನೀಡಿರಲಿಲ್ಲ
ಎಂದು
ವಿಚಾರಣೆ
ವೇಳೆ
ದೀಪ್
ಸಿಧು
ನ್ಯಾಯಾಲಯಕ್ಕೆ
ಹೇಳಿಕೆ
ನೀಡಿದ್ದರು.
ತಾವು
ಯಾವುದೇ
ರೈತ
ಸಂಘಟನೆಯ
ಸದಸ್ಯರಲ್ಲ
ಎಂದು
ಸ್ಪಷ್ಟನೆ
ನೀಡಿದ್ದರು.