Fact Check: App ಬಳಸಿ ಆನ್ಲೈನ್ ನಲ್ಲಿ ಸಿಬಿಎಸ್ ಇ ಪರೀಕ್ಷೆ?
ನವದೆಹಲಿ, ಜೂನ್ 2: ಕೊರೊನಾಸೋಂಕು ಹರಡದಂತೆ ಲಾಕ್ಡೌನ್ ಜಾರಿಯಲ್ಲಿರುವಾಗಲೇ ಜೂನ್ ತಿಂಗಳಿನಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ನಡುವೆ ಈ ಕುರಿತಂತೆ ಮಾರ್ಗಸೂಚಿ ಹೊರಡುವ ಮೊದಲೇ ನಕಲಿ ಸಂದೇಶಗಳು ಹಬ್ಬುತ್ತಿವೆ. ಸಿಬಿಎಸ್ ಇ ಪರೀಕ್ಷೆಗಳು ಆನ್ ಲೈನ್ ನಲ್ಲಿ ನಡೆಯಲಿದ್ದು, ಇದಕ್ಕಾಗಿ ಪ್ರತ್ಯೇಕ ಮೊಬೈಲ್ ಅಪ್ಲಿಕೇಷನ್ ಬಳಸಿ ಎಂಬ ಸುದ್ದಿ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
"ಆನ್ ಲೈನ್ ಪರೀಕ್ಷೆಗಳನ್ನು ನಡೆಸಲು ಶಾಲೆಗಳಿಗೆ ಸಿಬಿಎಸ್ ಇ ನಿರ್ದೇಶಿಸಿದೆ. ವಿಎಚ್ ಸಾಫ್ಟ್ ವೇರ್ ಸಂಸ್ಥೆ ಹೊರ ತಂದಿರುವ ಮೊಬೈಲ್ ಫೋನ್ ಅಪ್ಲಿಕೇಷನ್ ಎಲ್ಲರೂ ಡೌನ್ ಲೋಡ್ ಮಾಡಿಕೊಳ್ಳಬೇಕು, ಈ ಆಪ್ ಮೂಲಕ ಆನ್ ಲೈನ್ ಪರೀಕ್ಷೆ ನಡೆಸಲಾಗುತ್ತದೆ, ಪರೀಕ್ಷೆ ಮೇಲ್ವಿಚಾರಿಕೆಗಾಗಿ ಸಾಹಿಲ್ ಗೆಹ್ಲೋಟ್ ಅವರನ್ನು ಒಎಸ್ ಡಿಯಾಗಿ ನೇಮಿಸಲಾಗಿದೆ" ಎಂಬ ಸುದ್ದಿ ಹಬ್ಬಿದೆ.
ಸಂದೇಶದಲ್ಲಿ ಏನಿದೆ?: "ಹಲವು ರಾಜ್ಯಗಳಲ್ಲಿ ಆನ್ ಲೈನ್ ಪರೀಕ್ಷೆ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮಹಾರಾಷ್ಟ್ರದ ಪರಿಸ್ಥಿತಿ ಬಗ್ಗೆ ಬೋರ್ಡಿಗೆ ಅರಿವಿದೆ. ಆನ್ ಲೈನ್ ಪರೀಕ್ಷೆ ನಡೆಸುವುದು ಬಹಳ ಕಷ್ಟಕರ ಕೆಲಸ. ಇದಕ್ಕಾಗಿ ಆನ್ ಲೈನ್ ಪರೀಕ್ಷಾ ವಿಧಾನವಾದ ಇ-ಪರೀಕ್ಷಾ ವ್ಯವಸ್ಥೆ ತರಲಾಗಿದೆ. ಈ ಸಾಫ್ಟ್ ವೇರ್ ಮೂಲಕ ಯಾವುದೇ ವಂಚನೆ ಇಲ್ಲದೆ, ವಿದ್ಯಾರ್ಥಿಗಳ ಆಡಿಯೋ, ವಿಡಿಯೋ ಚಲನವಲನ ಮೇಲೆ ನಿಗಾವಹಿಸಬಹುದಾಗಿದೆ. ಈ ಅಪ್ಲಿಕೇಷನ್ ಎಲ್ಲರೂ ಬಳಸಿ'' ಎಂದು ಸುದ್ದಿ ಹಬ್ಬಿದೆ.

ಸತ್ಯಾಸತ್ಯತೆ: ಇದು ಸಂಪೂರ್ಣವಾಗಿ ಸುಳ್ಳು ಸುದ್ದಿಯಾಗಿದೆ. ಸಿಬಿಎಸ್ ಇ ಇಂಥ ಯಾವುದೇ ಅಪ್ಲಿಕೇಷನ್ ಬಳಸಲು ಸೂಚಿಸಿಲ್ಲ, ಆನ್ ಲೈನ್ ಪರೀಕ್ಷಾ ವಿಧಾನ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ವಿಎಚ್ ಸಾಫ್ಟ್ ವೇರ್ ಅಥವಾ ವಿಎಸ್ ಸ್ಟಡೀಸ್ ಸಂಸ್ಥೆಯಿಂದ ಹೊರ ಬಂದಿರುವ ಅಪ್ಲಿಕೇಷನ್ ಬಳಸುವಂತೆ ಸೂಚಿಸಿಲ್ಲ. ಈ ಬಗ್ಗೆ ಯಾವುದೇ ಸುದ್ದಿ ಬಂದರೂ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ನಂಬುವುದು ಬೇಡ ಎಂದು ಸಿಬಿಎಸ್ ಇ ಹೇಳಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications