ಸೋಮವಾರದ ಕಾರ್ಯಕ್ರಮಗಳು; ಜೆಎನ್ಯುನತ್ತ ಎಲ್ಲರ ಚಿತ್ತ
ಬೆಂಗಳೂರು, ಜನವರಿ 06 : ಕರ್ನಾಟಕ, ಬೆಂಗಳೂರು ಮತ್ತು ಭಾರತದಲ್ಲಿ ಸೋಮವಾರ ಹಲವು ಕಾರ್ಯಕ್ರಮಗಳಿವೆ. ರಾಜ್ಯ ಮತ್ತು ದೇಶದಲ್ಲಿ ಜನವರಿ 6ರಂದು ನಡೆಯಲಿರುವ ಪ್ರಮುಖ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.
ಇಡೀ ದೇಶದ ಗಮನ ಇಂದು ದೆಹಲಿಯ ಜೆಎನ್ ವಿಶ್ವವಿದ್ಯಾಲಯದ ಮೇಲೆ ಇರಲಿದೆ. ಭಾನುವಾರ ರಾತ್ರಿ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕೈಯಲ್ಲಿ ರಾಡ್ ಹಿಡಿದಿದ್ದ ದೊಡ್ಡ ಗುಂಪು ಜೆಎನ್ಯು ಹಾಸ್ಟೆಲ್ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿತ್ತು.
JNU, ಕ್ಯಾಂಪಸಿನಲ್ಲಿ ನಡೆದಿದ್ದೇನು?
ಹಲ್ಲೆಯಿಂದಾಗಿ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷ್ ಘೋಷ್ ಸೇರಿದಂತೆ ಇತರ ವಿದ್ಯಾರ್ಥಿಗಳು ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಬಿಬಿಪಿ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ದೇಶಾದ್ಯಂತ ಈ ಹಲ್ಲೆಗೆ ಖಂಡನೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ. ಸೋಮವಾರ ಈ ಹಲ್ಲೆ ಪ್ರಕರಣ ಮತ್ತಷ್ಟು ಕಾವು ಪಡೆದುಕೊಳ್ಳುವ ಸಾಧ್ಯತೆ ಇದೆ.
* ಇಂದು ವೈಕುಂಠ ಏಕಾದಶಿ. ವಿವಿಧ ದೇವಾಲಯಗಳ ಮುಂದೆ ಜನರು ಮುಂಜಾನೆಯಿಂದಲೇ ದೇವರ ದರ್ಶನಕ್ಕಾಗಿ ಕಾದು ನಿಂತಿದ್ದಾರೆ.
* ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸುವ ಮನೆ-ಮನೆ ಅಭಿಯಾನಕ್ಕೆ ಕರ್ನಾಟಕ ಬಿಜೆಪಿ ಚಾಲನೆ ನೀಡಿದೆ. ಇಂದು ಸಹ ಅಭಿಯಾವ ವಿವಿಧ ಜಿಲ್ಲೆಗಳಲ್ಲಿ ನಡೆಯಲಿದೆ.
* ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಕರ್ನಾಟಕ ಕಾಂಗ್ರೆಸ್ನಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ. ಶನಿವಾರ ಕಾಂಗ್ರೆಸ್ ಹಿರಿಯ ನಾಯಕರು ಸಭೆ ನಡೆಸಿದ್ದಾರೆ. ಇಂದು ಸಹ ಈ ಕುರಿತ ಬೆಳವಣಿಗೆ ನಡೆಯಲಿದೆ.