ಒಳ್ಳೆ ಸುದ್ದಿ: ಹಳ್ಳಿಯಿಂದ ಆಸ್ಪತ್ರೆಗೆ ಡ್ರೋಣ್ ಮೂಲಕ ಬಂದ ರಕ್ತ
ಡೆಹ್ರಾಡೂನ್, ಜೂನ್ 8: ಮೊದಲ ಬಾರಿಗೆ ಡ್ರೋಣ್ ಮೂಲಕ ಒಂದು ಹಳ್ಳಿಯಿಂದ ಜಿಲ್ಲಾಸ್ಪತ್ರೆಗೆ ರಕ್ತವನ್ನು ಕಳುಹಿಸುವ ಪ್ರಯೋಗ ಯಶಸ್ವಿಯಾಗಿದೆ.
ದೊಡ್ಡ ದೊಡ್ಡ ನಗರಗಳಲ್ಲಿರುವ ಆಸ್ಪತ್ರೆಗಳಲ್ಲಿ ಎಲ್ಲಾ ಗುಂಪಿನ ರಕ್ತ ಸ್ಟಾಕ್ ಇರುತ್ತದೆ. ಆದರೆ ಜಿಲ್ಲಾಸ್ಪತ್ರೆಗಳು ಏನು ಮಾಡಬೇಕು ಎನ್ನುವುದೇ ಚಿಂತೆಯ ವಿಷಯವಾಗಿತ್ತು.
ತುರ್ತು ಸಮಯದಲ್ಲಿ ರಕ್ತ ಬೇಕು ಎಂದರೆ ಎಲ್ಲಿಂದ ತರುವುದು ಎನ್ನುವುದು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ರೋಗಿಯ ಕಡೆಯವರಿಗೂ ದೊಡ್ಡ ಚಿಂತೆಯಾಗಿತ್ತು.

ಆಪರೇಷನ್ ಇದೆ ಎಂದರೆ ಒಂದು ವಾರ ಮುಂಚೆಯೇ ರಕ್ತವನ್ನು ಶೇಖರಿಸಿಟ್ಟುಕೊಳ್ಳಬೇಕಿತ್ತು. ಇದೀಗ ಒಂದು ಹಳ್ಳಿಯಿಂದ ಡ್ರೋನ್ ಮೂಲಕ ಆಸ್ಪತ್ರೆಗೆ ರಕ್ತವನ್ನು ಕಳುಹಿಸಬಹುದು ಎಂದು ಸಾಬೀತಾಗಿದೆ.
ಹಾಗಾದರೆ ಆಸ್ಪತ್ರೆಯಿಂದಲೂ ರಕ್ತವನ್ನು ಹಳ್ಳಿಗೆ ರವಾನಿಸುವ ಸಾಧ್ಯತೆಯೂ ಇದೆ ಎಂಬುದು ಕೂಡ ಇದರಿಂದ ತಿಳಿದುಬರುತ್ತದೆ. ಈ ಪ್ರಯೋಗ ದೇಶದ ವಿವಿಧ ರಾಜ್ಯ, ಜಿಲ್ಲೆಗಳಲ್ಲೂ ನಡೆದರೆ ಎಷ್ಟೋ ಪ್ರಾಣವನ್ನು ರಕ್ಷಿಸಬಹುದಾಗಿದೆ.
ನಂದಗಾವ್ನಿಂದ ಬೂರಿ ಆಸ್ಪತ್ರೆಗೆ 36 ಕಿಮೀ ವ್ಯಾಪ್ತಿಯನ್ನು 18 ನಿಮಿಷದಲ್ಲಿ ಕ್ರಮಿಸಿದೆ. ರಸ್ತೆಯಿಂದ ಚಲಿಸಿದರೆ 100 ನಿಮಿಷಗಳು ಕನಿಷ್ಠ ಬೇಕಾಗುತ್ತದೆ.
ಒಂದೊಮ್ಮೆ ರಸ್ತೆಯ ಮೂಲಕ ತೆರಳಿದರೆ ವಾಹನ ದಟ್ಟಣೆ ಉಂಟಾಗಬಹುದು, ಅಥವಾ ಅಪಘಾತವೇ ನಡೆಯಬಹುದು ಅಥವಾ ಇನ್ಯಾವುದೇ ತೊಂದರೆ ಉಂಟಾಗಬಹುದು. ಆದರೆ ಡ್ರೋಣ್ ಮೂಲಕ ಕಳುಹಿಸುವುದರಿಂದ ಯಾವುದೇ ಅಡೆತಡೆಗಳು ಇರುವುದಿಲ್ಲ ಹಾಗೂ ಸಮಯ ಕೂಡ ಉಳಿತಾಯವಾಗುತ್ತದೆ.
ಸಾಕಷ್ಟು ಗ್ರಾಮಗಳಲ್ಲಿ ಸಂಚಾರಕ್ಕೆ ವಾಹನಗಳೇ ಇಲ್ಲ, ಆಸ್ಪತ್ರೆಗೆ ತೆರಳಬೇಕೆಂದರೂ ಎಷ್ಟೋ ಕಿಲೋಮೀಟರ್ ನಡೆದು ವಾಹನಗಳಲ್ಲಿ ಹೋಗಬೇಕಾದ ಪರಿಸ್ಥಿತಿ ಇದೆ. ಟೆಲಿ ಮೆಡಿಸಿನ್ ಯೋಜನೆ ಅಂಗವಾಗಿ ಈ ನೂತನ ಪ್ರಯೋಗವನ್ನು ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications