ಅಂಗವಿಕಲರ ಸಾಧನೆ ಪಟ್ಟಿ ಸೇರಿದ ಭಾರತೀಯ ಡಾ. ಸಾಯಿ ಕೌಸ್ತುವ್
ನವದೆಹಲಿ, ಜುಲೈ 29; ವಿಶಿಷ್ಟ ಸಾಧನೆಗಳನ್ನು ಮಾಡಿದ ಅಂಗವಿಕಲರ ಪಟ್ಟಿಯನ್ನು ಅಮೆರಿಕ ಬಿಡುಗಡೆ ಮಾಡುತ್ತದೆ. ಡಿ-3 ಅಂಗವಿಕಲರ ಪಟ್ಟಿ 2021ರಲ್ಲಿ ಭಾರತೀಯರಾದ ಡಾ. ಸಾಯಿ ಕೌಸ್ತುವ್ ದಾಸ್ಗುಪ್ತಾ ಸ್ಥಾನ ಪಡೆದಿದ್ದಾರೆ.
ಸಮುದಾಯದ ಸಹಕಾರದಿಂದ ಅಂಗವೈಕಲ್ಯವನ್ನು ಮರು ಹೆಸರಿಸುವ, ಅವರ ಸಾಧನೆಯನ್ನು ಜಗತ್ತಿಗೆ ತಿಳಿಸಲು ಎಡಿಎ 31ನೇ ವಾರ್ಷಿಕೋತ್ಸವ ಅಂಗವಾಗಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜಾಗತಿಕವಾಗಿ 30 ಅಂಗವೈಕಲ್ಯ ನಾಯಕರ ವಿಶಿಷ್ಟ ಸಾಧನೆಗಳನ್ನು ವಾರ್ಷಿಕೋತ್ಸವದ ಅಂಗವಾಗಿ ಗೌರವಿಸಲಾಗುತ್ತದೆ.
13 ದೇಶಗಳಲ್ಲಿನ 300 ನಾಮನಿರ್ದೇಶನಗಳಲ್ಲಿ ಭಾರತದಿಂದ ಡಾ. ಸಾಯಿ ಕೌಸ್ತುವ್ ದಾಸ್ಗುಪ್ತಾ ಅವರು ಡಿ -30 ಅಂಗವೈಕಲ್ಯ ಪರಿಣಾಮ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಜಾಗತಿಕವಾಗಿ ನಡೆದ ನಾಮ ನಿರ್ದೇಶನ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಭಾರತವನ್ನು ಡಾ. ಸಾಯಿ ಕೌಸ್ತು ಪ್ರತಿನಿಧಿಸುತ್ತಿದ್ದಾರೆ.

ಡಾ. ಸಾಯಿ ಕೌಸ್ತುವ್ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಅಂಗವಿಕಲತೆ ನಡೆವೆಯೂ ಅವರು ತಮ್ಮ ಉತ್ಸಾಹವನ್ನು ಕಳೆದುಕೊಂಡಿಲ್ಲ. ಜೀವನದಲ್ಲಿ ಉತ್ಸಾಹವಿದ್ದರೆ ಯಾವುದೇ ಸಾಧನೆ ಮಾಡುವುದು ಅಸಾಧ್ಯವಲ್ಲ ಎಂದು ಸಾಬೀತು ಮಾಡಿದ್ದಾರೆ.
ಅಪರೂಪವಾದ ಮೂಳೆ ಕಾಯಿಲೆ ಡಾ. ಸಾಯಿ ಕೌಸ್ತುವ್ ಅವರನ್ನು ಶೇ 90ರಷ್ಟು ಅಂಗವಿಕಲರನ್ನಾಗಿ ಮಾಡಿದೆ. ಆದರೆ ಅದನ್ನು ಮೆಟ್ಟಿನಿಂತು ಅವರು ಯಶಸ್ವಿ ಗ್ರಾಫಿಕ್ಸ್ ಡಿಸೈನರ್, ಗ್ಲೋಬಲ್ ಮೋಟಿವೇಷನಲ್ ಸ್ಪೀಕರ್, ಹ್ಯಾಪಿನೆಸ್ ಕೋಚ್ ಆಗಿದ್ದಾರೆ.
ಈಗಾಗಲೇ ಡಾ. ಸಾಯಿ ಕೌಸ್ತುವ್ ಲಿಮ್ಕಾ ಮತ್ತು 15 ವಿಶ್ವ ದಾಖಲೆಗಳ ಪಟ್ಟಿಗೆ ಸೇರಿದ್ದಾರೆ. ಅಂಗವೈಕಲ್ಯದ ನಡುವೆಯೋ ಜನರಿಗೆ ಅವರು ಭರವಸೆಯನ್ನು ತುಂಬುತ್ತಾರೆ. ಗಾಲಿಕುರ್ಚಿಯನ್ನೇ ಸ್ನೇಹಿತನನ್ನಾಗಿ ಮಾಡಿಕೊಂಡಿರುವ ಅವರು ಈಗ ಅಮೆರಿಕದ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ.
ಡಾ. ಸಾಯಿ ಕೌಸ್ತುವ್ ಹ್ಯಾಪಿನೆಸ್ ಕೋಚಿಂಗ್ ಮೂಲಕ ಲಕ್ಷಾಂತರ ಜನರನ್ನು ಭೇಟಿ ಮಾಡಿದ್ದಾರೆ. ಜಾಗತಿಕ ನಾಯಕರು, ವಿದ್ವಾಂಸರು, ವೈದ್ಯರು, ವಿದ್ಯಾರ್ಥಿಗಳು, ಉದ್ಯಮಿಗಳು, ತೃತೀಯ ಲಿಂಗಿಗಳು, ಕೊಳೆಗೇರಿ ಮಕ್ಕಳು, ಯುವ ಐಟಿ ವೃತ್ತಿಪರರನ್ನು ಭೇಟಿ ಮಾಡಿದ್ದಾರೆ, ಅವರನ್ನು ಸಹ ಪ್ರೇರೆಪಿಸಿದ್ದಾರೆ.
ವಿವಿಧ ಸಮುದಾಯದ ಜನರನ್ನು ಭೇಟಿ ಮಾಡಿ ತಮ್ಮ ವಿವಿಧ ಸೃಜನಶೀಲ ಕೌಶಲ್ಯ ಮತ್ತು ಜ್ಞಾನವನ್ನು ಹಂಚಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ, ಮಲೇಷ್ಯಾ, ಸಿಂಗಾಪುರ ಮುಂತಾದ ದೇಶಗಳ ಜನರೊಂದಿಗೆ ಸಹ ಸಂವಾದ ಮಾಡಿದ್ದಾರೆ.
ಜನರು ದುಃಖಪಡಲು ಒಂದು ಮಿಲಿಯನ್ ಕಾರಣಗಳು ಇರಬಹುದು. ಆದರೆ ಎಲ್ಲವನ್ನೂ ನಾವು ಸಮಾನವಾಗಿ ಸ್ವೀಕಾರ ಮಾಡಿದರೆ ಅವುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಬಹುದು ಎಂದು ಡಾ. ಸಾಯಿ ಕಸೌಸ್ತುವ್ ಹೇಳಿದ್ದಾರೆ.
ಡಿ -30 ಅಂಗವೈಕಲ್ಯ ಪರಿಣಾಮ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಡಾ. ಸಾಯಿ ಕೌಸ್ತುವ್ ವಿಶ್ವಸಂಸ್ಥೆಯು ಮುಂದಿಟ್ಟಿರುವ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (ಎಸ್ಡಿಜಿ) ಮತ್ತು ಇತರ ಜಾಗತಿಕ ಅಂಗವೈಕಲ್ಯ ನಾಯಕರೊಂದಿಗೆ ಒಟ್ಟಾಗಿ ಅಂಗವೈಕಲ್ಯ ಹೆಮ್ಮೆಯನ್ನು ಉದ್ದೇಶ ಹೊಂದಿದ್ದಾರೆ.
-
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು












Click it and Unblock the Notifications